<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>ಬೇಳೂರು ಸುದರ್ಶನ</title>
	<atom:link href="http://beluru.wordpress.com/feed/" rel="self" type="application/rss+xml" />
	<link>http://beluru.wordpress.com</link>
	<description>www.mitramaadhyama.co.in</description>
	<lastBuildDate>Fri, 30 Sep 2011 19:14:26 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.com/</generator>
<cloud domain='beluru.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://1.gravatar.com/blavatar/96dfe36a95887ae532bac825c806cbaf?s=96&#038;d=http%3A%2F%2Fs2.wp.com%2Fi%2Fbuttonw-com.png</url>
		<title>ಬೇಳೂರು ಸುದರ್ಶನ</title>
		<link>http://beluru.wordpress.com</link>
	</image>
	<atom:link rel="search" type="application/opensearchdescription+xml" href="http://beluru.wordpress.com/osd.xml" title="ಬೇಳೂರು ಸುದರ್ಶನ" />
	<atom:link rel='hub' href='http://beluru.wordpress.com/?pushpress=hub'/>
		<item>
		<title>ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ</title>
		<link>http://beluru.wordpress.com/2011/02/05/%e0%b2%ac%e0%b2%a8%e0%b3%8d%e0%b2%a8%e0%b2%bf-%e0%b2%b8%e0%b2%be%e0%b2%b2%e0%b3%81%e0%b2%ae%e0%b2%b0%e0%b2%a6-%e0%b2%a4%e0%b2%bf%e0%b2%ae%e0%b3%8d%e0%b2%ae%e0%b2%95%e0%b3%8d%e0%b2%95%e0%b2%82/</link>
		<comments>http://beluru.wordpress.com/2011/02/05/%e0%b2%ac%e0%b2%a8%e0%b3%8d%e0%b2%a8%e0%b2%bf-%e0%b2%b8%e0%b2%be%e0%b2%b2%e0%b3%81%e0%b2%ae%e0%b2%b0%e0%b2%a6-%e0%b2%a4%e0%b2%bf%e0%b2%ae%e0%b3%8d%e0%b2%ae%e0%b2%95%e0%b3%8d%e0%b2%95%e0%b2%82/#comments</comments>
		<pubDate>Sat, 05 Feb 2011 03:34:25 +0000</pubDate>
		<dc:creator>beluru</dc:creator>
				<category><![CDATA[News Flashes]]></category>

		<guid isPermaLink="false">http://beluru.wordpress.com/?p=1664</guid>
		<description><![CDATA[ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ. ಇತ್ತೀಚೆಗೆ ಬೆಂಗಳೂರಿಗೆ ಬಂದು ಗಾಂಧಿ ಪ್ರತಿಮೆಯೆದುರು ಈ ವಿಷಯವಾಗಿ ಧರಣಿ ನಡೆಸಿದ ತಿಮ್ಮಕ್ಕ ಅಲ್ಲಲ್ಲಿ ಸುದ್ದಿಯಾದರು. ಈಗಷ್ಟೇ ಕರ್ನಾಟಕ ಸರ್ಕಾರವು ಒಂದು ಲಕ್ಷ ರೂ. ನೆರವು ಘೋಷಿಸಿದೆ. ಸಾಕೆ? ತಿಮ್ಮಕ್ಕ ಬರೀ ಮರ ನೆಟ್ಟವರಲ್ಲ. ನಮ್ಮ ಪ್ರಜ್ಞೆಯನ್ನೇ ನೆಟ್ಟಗಾಗಿಸಿದವರು. ಪರಿಸರ ಪ್ರೀತಿಯ ನೂರಾರು ಒಣ ಘೋಷಣೆಗಳಿಗಿಂತ ನೀರೆರೆದು [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1664&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<div>
<p>ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ.<span id="more-1664"></span></p>
<p>ಇತ್ತೀಚೆಗೆ ಬೆಂಗಳೂರಿಗೆ ಬಂದು ಗಾಂಧಿ ಪ್ರತಿಮೆಯೆದುರು ಈ ವಿಷಯವಾಗಿ ಧರಣಿ ನಡೆಸಿದ ತಿಮ್ಮಕ್ಕ ಅಲ್ಲಲ್ಲಿ ಸುದ್ದಿಯಾದರು. ಈಗಷ್ಟೇ ಕರ್ನಾಟಕ ಸರ್ಕಾರವು ಒಂದು ಲಕ್ಷ ರೂ. ನೆರವು ಘೋಷಿಸಿದೆ. ಸಾಕೆ?</p>
<p>ತಿಮ್ಮಕ್ಕ ಬರೀ ಮರ ನೆಟ್ಟವರಲ್ಲ. ನಮ್ಮ ಪ್ರಜ್ಞೆಯನ್ನೇ ನೆಟ್ಟಗಾಗಿಸಿದವರು. ಪರಿಸರ ಪ್ರೀತಿಯ ನೂರಾರು ಒಣ ಘೋಷಣೆಗಳಿಗಿಂತ ನೀರೆರೆದು ಬೆಳೆಸಿದ ಹಸಿ ಮರಗಳೇ ಮೇಲು ಎಂದು ಬಲವಾಗಿ ನಂಬಿದವರು. ಅವರನ್ನು ಅವರದೇ ಕಾಲಘಟ್ಟದಲ್ಲಿ ನೋಡುತ್ತಿರುವ ನಾವಾದರೂ ಕೊಂಚ ಹೆಚ್ಚು ಪ್ರೀತಿಸಬೇಕಲ್ಲವೆ?</p>
<p>ಬನ್ನಿ, ಸಾಲುಮರದ ತಿಮ್ಮಕ್ಕಂಗೆ ಸಾಲು ಸಾಲಾಗಿ ನೆರವಾಗಿ:</p>
<ul>
<li><strong>ಅವರ ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹುಲಿಕಲ್ ಶಾಖೆ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ</strong></li>
<li><strong>ಖಾತೆ ನಂ: ಚಿಕ್ಕತಿಮ್ಮಕ್ಕ, ಉಳಿತಾಯ ಖಾತೆ (ಎಸ್ ಬಿ) ನಂ: ೫೪೦೫೫೦೨೩೯೬೫ (54055023965)</strong></li>
<li><strong>(ಖಾತೆಯಲ್ಲಿ ಅವರ ಹೆಸರು ಚಿಕ್ಕತಿಮ್ಮಕ್ಕ ಎಂದಿದೆ ಗಮನಿಸಿ)</strong></li>
</ul>
<p>ಅಥವಾ ಅವರಿಗೆ ನೇರವಾಗಿ ಹಣ ಕಳಿಸಬೇಕೆಂದರೆ ತಿಮ್ಮಕ್ಕನ ಹೆಸರಿನಲ್ಲಿ ಮನಿಯಾರ್ಡರ್ ಮಾಡಿ.</p>
<p>ನಿಮ್ಮ ಮಕ್ಕಳ ಜನ್ಮದಿನದ ಸಂದರ್ಭದಲ್ಲೋ, ನಿಮ್ಮ ಇಷ್ಟಮಿತ್ರರ ಮದುವೆಯ ವಾರ್ಷಿಕೋತ್ಸವದ ದಿನದಲ್ಲೋ, ನಿಮ್ಮ ಮನೆಯ ಯಾವುದೋ ಶುಭಗಳಿಗೆಯಲ್ಲೋ, ಸಾಲುಮರದ ತಿಮ್ಮಕ್ಕ ನೆನಪಾಗಲಿ. ಅವರು ನಾಡಿಗೆ ಕೊಟ್ಟ ಸಂದೇಶ ನಮ್ಮನ್ನು ಕಾಡಲಿ.</p>
<p>ಅವಸರದ ಸಾಹಿತ್ಯ, ಅವಸರದ ಬದುಕಿನಲ್ಲಿ ದಿನದಿನವೂ ಕೋಶಕೋಶ ಹಬ್ಬಿ ಬೆಳೆವ ಮರಗಳನ್ನು ಅವಿರತವಾಗಿ ಬೆಳೆಸಿದ ತಿಮ್ಮಕ್ಕನ ಜೀವ ಇನ್ನುಮುಂದಾದರೂ ಚಡಪಡಿಸದಿರಲಿ.</p>
</div>
<p>&nbsp;</p>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1664/"><img alt="" border="0" src="http://feeds.wordpress.com/1.0/comments/beluru.wordpress.com/1664/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1664/"><img alt="" border="0" src="http://feeds.wordpress.com/1.0/delicious/beluru.wordpress.com/1664/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1664/"><img alt="" border="0" src="http://feeds.wordpress.com/1.0/facebook/beluru.wordpress.com/1664/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1664/"><img alt="" border="0" src="http://feeds.wordpress.com/1.0/twitter/beluru.wordpress.com/1664/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1664/"><img alt="" border="0" src="http://feeds.wordpress.com/1.0/stumble/beluru.wordpress.com/1664/" /></a> <a rel="nofollow" href="http://feeds.wordpress.com/1.0/godigg/beluru.wordpress.com/1664/"><img alt="" border="0" src="http://feeds.wordpress.com/1.0/digg/beluru.wordpress.com/1664/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1664/"><img alt="" border="0" src="http://feeds.wordpress.com/1.0/reddit/beluru.wordpress.com/1664/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1664&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2011/02/05/%e0%b2%ac%e0%b2%a8%e0%b3%8d%e0%b2%a8%e0%b2%bf-%e0%b2%b8%e0%b2%be%e0%b2%b2%e0%b3%81%e0%b2%ae%e0%b2%b0%e0%b2%a6-%e0%b2%a4%e0%b2%bf%e0%b2%ae%e0%b3%8d%e0%b2%ae%e0%b2%95%e0%b3%8d%e0%b2%95%e0%b2%82/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>
	</item>
		<item>
		<title>ನಾಗೇಶ್‌ ಹೆಗಡೆ :  ಬಿಳಿ ಮುಖಕ್ಕೆ, ಚಿರಯೌವನಕ್ಕೆ ಮಾಯಾ ಮುಲಾಮು</title>
		<link>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ac%e0%b2%bf%e0%b2%b3%e0%b2%bf-%e0%b2%ae%e0%b3%81%e0%b2%96%e0%b2%95%e0%b3%8d/</link>
		<comments>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ac%e0%b2%bf%e0%b2%b3%e0%b2%bf-%e0%b2%ae%e0%b3%81%e0%b2%96%e0%b2%95%e0%b3%8d/#comments</comments>
		<pubDate>Sat, 18 Dec 2010 10:16:06 +0000</pubDate>
		<dc:creator>beluru</dc:creator>
				<category><![CDATA[ನಾಗೇಶ ಹೆಗಡೆ ಕಾಲಂ]]></category>

		<guid isPermaLink="false">http://beluru.wordpress.com/?p=1661</guid>
		<description><![CDATA[ಇದರಲ್ಲೇನೋ ವ್ಯಂಗ್ಯದ ವಾಸನೆ ಹೊಡೆಯಿತೆ? ಹೌದು, ನಮ್ಮ ದೇಶದ ಜನರ ಬದುಕಿನಲ್ಲಿ ಸಾವಿರ ಸಾವಿರ ಸಮಸ್ಯೆಗಳಿರುವಾಗ ರಾಷ್ಟ್ರೀಯ ಸಂಸ್ಥೆಯೊಂದು ಇಂತಹ ಸೌಂದರ್ಯ ಪ್ರಸಾಧನಕ್ಕೆ ಆದ್ಯತೆ ಕೊಡುವುದು ಈ ಕಾಲದ ವ್ಯಂಗ್ಯವೇ ಹೌದು. ನೀವು ಬೆಳ್ಳಗಿಲ್ಲವೆ? ನಿಮ್ಮ ಮುಖವೂ ಪ್ರಿಯಾಂಕಾ ಚೋಪ್ರಾ ಥರಾ ಬೆಳ್ಳಗೆ, ನಿಷ್ಕಳಂಕವಾಗಿರಬೇಕೆ? ಕೊಂಚ ತಡೆಯಿರಿ, ಹೊಸದೊಂದು ಮಾಯಾ ಮುಲಾಮು ನಿಮಗಾಗಿ ಸಿದ್ಧವಾಗುವ ಸಂಭವವಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಂಥ ಮುಲಾಮನ್ನು ತಯಾರಿಸಬಲ್ಲವರಿಗೆ ಒಂದು ಸ್ಪರ್ಧೆಯನ್ನು ಏರ್ಪಡಿಸಿದೆ. ಅಮೆರಿಕನ್ ಮೂಲದ ‘ಪ್ರಾಕ್ಟರ್ [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1661&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:justify;">ಇದರಲ್ಲೇನೋ ವ್ಯಂಗ್ಯದ ವಾಸನೆ ಹೊಡೆಯಿತೆ? ಹೌದು, ನಮ್ಮ ದೇಶದ ಜನರ ಬದುಕಿನಲ್ಲಿ ಸಾವಿರ ಸಾವಿರ ಸಮಸ್ಯೆಗಳಿರುವಾಗ ರಾಷ್ಟ್ರೀಯ ಸಂಸ್ಥೆಯೊಂದು ಇಂತಹ ಸೌಂದರ್ಯ ಪ್ರಸಾಧನಕ್ಕೆ ಆದ್ಯತೆ ಕೊಡುವುದು ಈ ಕಾಲದ ವ್ಯಂಗ್ಯವೇ ಹೌದು.<span id="more-1661"></span><img title="More..." src="http://mitramaadhyama.co.in/wp-includes/js/tinymce/plugins/wordpress/img/trans.gif" alt="" /></p>
<p><img class="alignleft" title="NH-column-artwork" src="http://mitramaadhyama.co.in/wp-content/uploads/2009/09/NH-column-artwork.jpg" alt="" width="228" height="228" /></p>
<p style="text-align:justify;">ನೀವು ಬೆಳ್ಳಗಿಲ್ಲವೆ? ನಿಮ್ಮ ಮುಖವೂ ಪ್ರಿಯಾಂಕಾ ಚೋಪ್ರಾ ಥರಾ ಬೆಳ್ಳಗೆ, ನಿಷ್ಕಳಂಕವಾಗಿರಬೇಕೆ? ಕೊಂಚ ತಡೆಯಿರಿ, ಹೊಸದೊಂದು ಮಾಯಾ ಮುಲಾಮು ನಿಮಗಾಗಿ ಸಿದ್ಧವಾಗುವ ಸಂಭವವಿದೆ.</p>
<p style="text-align:justify;">ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಂಥ ಮುಲಾಮನ್ನು ತಯಾರಿಸಬಲ್ಲವರಿಗೆ ಒಂದು ಸ್ಪರ್ಧೆಯನ್ನು ಏರ್ಪಡಿಸಿದೆ. ಅಮೆರಿಕನ್ ಮೂಲದ ‘ಪ್ರಾಕ್ಟರ್ ಅಂಡ್ ಗಾಂಬಲ್’ ಹೆಸರಿನ ಬಹುರಾಷ್ಟ್ರೀಯ ಕಂಪೆನಿಯ ಜತೆ ಸೇರಿ, ಅದು ಏರ್ಪಡಿಸಿರುವ ಸ್ಪರ್ಧೆಯಲ್ಲಿ ಯಾವುದೇ ವಿಜ್ಞಾನಿ ಭಾಗವಹಿಸಬಹುದು. ವಿಜ್ಞಾನಿಯೇ ಆಗಬೇಕೆಂದೇನಿಲ್ಲ. ಯಾರಾದರೂ ಪಾಲ್ಗೊಂಡು ಸಾವಿರ ಡಾಲರ್ ಬಹುಮಾನವನ್ನು ಗೆಲ್ಲಬಹುದು. ನಂತರ ಆ ಅಮೆರಿಕನ್ ಕಂಪೆನಿ ದೊಡ್ಡ ಪ್ರಮಾಣದಲ್ಲಿ ಕ್ರೀಮನ್ನು ಉತ್ಪಾದಿಸಿ ಎಲ್ಲೆಡೆ ಮಾರುಕಟ್ಟೆಗೆ ತರಬಹುದು. ಹಳ್ಳಿಮೂಲೆಯ ಗೂಡಂಗಡಿಯಲ್ಲೂ ಅದು ಸ್ಯಾಶೆಯಲ್ಲಿ ಸಿಗಬಹುದು. </p>
<p style="text-align:justify;">ಇದರಲ್ಲೇನೋ ವ್ಯಂಗ್ಯದ ವಾಸನೆ ಹೊಡೆಯಿತೆ? ಹೌದು, ನಮ್ಮ ದೇಶದ ಜನರ ಬದುಕಿನಲ್ಲಿ ಸಾವಿರ ಸಾವಿರ ಸಮಸ್ಯೆಗಳಿರುವಾಗ ರಾಷ್ಟ್ರೀಯ ಸಂಸ್ಥೆಯೊಂದು ಇಂತಹ ಸೌಂದರ್ಯ ಪ್ರಸಾಧನಕ್ಕೆ ಆದ್ಯತೆ ಕೊಡುವುದು ಈ ಕಾಲದ ವ್ಯಂಗ್ಯವೇ ಹೌದು. ಹಾಗೆಂದು ಇದು ಕಲ್ಪಿತ ಕಥೆಯಂತೂ ಅಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಪ್ರತಿ ತಿಂಗಳೂ ಒಂದೊಂದು ಸಂಶೋಧನ ಸ್ಪರ್ಧೆಯನ್ನು ಏರ್ಪಡಿಸುತ್ತದೆ.</p>
<p style="text-align:justify;">‘ಜಗತ್ತಿನ ತೀರ ಸಂಕೀರ್ಣ ಮತ್ತು ವಾಸ್ತವದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಸವಾಲು ನಿಮ್ಮೆದುರು ಇದೆ; ಜನರ ಬದುಕನ್ನು ಸುಧಾರಿಸಬಲ್ಲ ಐಡಿಯಾ ನಿಮ್ಮಲ್ಲಿದ್ದರೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ’ ಎಂಬ ಘೋಷಣೆ ಅದಕ್ಕಿದೆ. ಈ ತಿಂಗಳ ಸ್ಪರ್ಧೆ ಏನೆಂದರೆ, ತ್ವಚೆಯನ್ನು ಬೆಳ್ಳಗೆ ಮಾಡುವ ಔಷಧವನ್ನು ಬೆಳಕಿಗೆ ತರುವುದು.</p>
<p style="text-align:justify;">ಏಕೆಂದರೆ ಈಗ ಬಳಕೆಯಲ್ಲಿರುವ  ‘ಹೈಡ್ರೊಕ್ವಿನೋನ್’ ಎಂಬ ರಸಾಯನವನ್ನು ಮುಖಕ್ಕೆ ಲೇಪಿಸಿಕೊಂಡರೆ ಅದು ತುಸುಮಟ್ಟಿಗೆ ಉರಿಯುತ್ತದೆ. ಕೆಲವರಲ್ಲಿ ಅದು ಅಲ್ಲಲ್ಲಿ ಬಿಳಿಕಲೆ ಉಂಟುಮಾಡುತ್ತದೆ. ಇಂಥ ಅಡ್ಡ ಪರಿಣಾಮಗಳಿಂದಾಗಿ ಅನೇಕ ದೇಶಗಳಲ್ಲಿ ಇದಕ್ಕೆ ನಿಷೇಧ ಹಾಕಲಾಗಿದೆ. ಇದಕ್ಕಿಂತ ಉತ್ತಮ ರಸದ್ರವ್ಯ. ಗೊತ್ತಿದ್ದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ.</p>
<p style="text-align:justify;">ಈ ಸ್ಪರ್ಧೆ ಹಾಸ್ಯಾಸ್ಪದವಷ್ಟೇ ಅಲ್ಲ, ತುಸು ಆಳಕ್ಕಿಳಿದರೆ ಇದರ ಹಿಂದಿನ ಉದ್ದೇಶ ನಮಗೆ ಅರ್ಥವಾಗುತ್ತದೆ. ಇಂದು ಕಪ್ಪು ಬಣ್ಣದ ತ್ವಚೆಯನ್ನು ಬಿಳಿಯದನ್ನಾಗಿ ಮಾಡುವ ಮುಲಾಮುಗಳದ್ದು ಶತಕೋಟಿ ಡಾಲರ್‌ಗಳ ವಹಿವಾಟು.</p>
<p style="text-align:justify;">ಏಕೆಂದರೆ ಟಿವಿ ಧಾರಾವಾಹಿಗಳಲ್ಲಿ ಎಲ್ಲೆಲ್ಲೂ ಬಿಳಿಮುಖಗಳೇ ಕಾಣುತ್ತವೆ. ವಂಚಕರು, ದುಷ್ಟರು ಮತ್ತು ಮಂಥರೆಯಂಥ ಕುಟಿಲರು ಮಾತ್ರ ಕಂದುಬಣ್ಣದವರಾಗಿರುತ್ತಾರೆ. ಲವ್ ಮಾಡುವವರಿಗಂತೂ ಬಿಳಿ ಹುಡುಗಿಯೇ ಬೇಕು.ಹಾಗಾಗಿ ಕಪ್ಪು ಮುಖವನ್ನು ಬಿಳಿ ಮಾಡುವ ಸಾಧನಕ್ಕೆ ಬೇಡಿಕೆ ಎಂದೆಂದೂ ಎಲ್ಲೆಲ್ಲೂ ಇದ್ದೇ ಇರುತ್ತದೆ.</p>
<p style="text-align:justify;">ಸಾವಿರಾರು ವರ್ಷಗಳ ನಮ್ಮ ಆಯುರ್ವೇದ ಪರಂಪರೆಯಲ್ಲಿ ತ್ವಚೆಯನ್ನು ಶುಭ್ರಗೊಳಿಸುವ ರಹಸ್ಯಗಳು ಇದ್ದಿರಲೂ ಸಾಕು. ಯಾವುದೋ ಹಳ್ಳಿಯ ದೇಸೀವೈದ್ಯರ ಕುಟುಂಬಕ್ಕೆ ಅದು ಗೊತ್ತಿರಬಹುದು. ಅಥವಾ ತಾಳೆಗರಿಗಳಲ್ಲಿ ಶ್ಲೋಕರೂಪದಲ್ಲಿ ಅದು ಅವಿತಿರಬಹುದು. ಅಂಥ ಜ್ಞಾನಸೂತ್ರವನ್ನು, ಮೂಲಿಕೆಗಳನ್ನು, ರಸದ್ರವ್ಯಗಳನ್ನು ಎತ್ತಲೆಂದು, ಎತ್ತಿ ಪೇಟೆಂಟ್ ಪಡೆಯಲೆಂದು ನಾನಾ ಬಗೆಯ ಯತ್ನಗಳು ನಡೆಯುತ್ತಲೇ ಇವೆ. </p>
<p style="text-align:justify;">ಈಗಿನ ಸ್ಪರ್ಧೆಯ ವಿಶೇಷವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಬಹುಕೋಟಿ ವಹಿವಾಟಿನ ಬಹುರಾಷ್ಟ್ರೀಯ ಕಂಪೆನಿಯೊಂದು ಭಾರತದ ಸರ್ಕಾರಿ ಸಂಸ್ಥೆಯನ್ನೇ ತನ್ನ ಸಹಭಾಗಿಯನ್ನಾಗಿ ಮಾಡಿ, ಜುಜುಬಿ ಸಾವಿರ ಡಾಲರ್‌ಗಳ ಆಮಿಷವೊಡ್ಡಿ ನಮ್ಮ ಪಾರಂಪರಿಕ ಜ್ಞಾನದ ಗಣಿಗಾರಿಕೆಗೆ ಹೊರಟಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೇವಲ ಒಂದು ತಿಂಗಳು ಅವಧಿಯಿದೆ. ಹೊಸದೇನನ್ನೂ ತಯಾರಿಸಿ ಪರೀಕ್ಷಿಸುವಷ್ಟು ವ್ಯವಧಾನ ಇಲ್ಲ. ಹಿರಿಯರ ಕಾಲದಿಂದ ಬಂದ ಜ್ಞಾನವೇನಾದರೂ ಇದ್ದರೆ, ಅದನ್ನು ಮಾತ್ರ ಒಪ್ಪಿಸಬಹುದು.</p>
<p style="text-align:justify;">ನಶಿಸಿ ಹೋಗುತ್ತಿರುವ ಜ್ಞಾನವನ್ನು ಆಧುನಿಕ ವಿಜ್ಞಾನದ ನಿಕಷಕ್ಕೆ ಒಡ್ಡಿ ಅದನ್ನು ಸಾರ್ವತ್ರಿಕ ಬಳಕೆಗೆ ತಂದರೆ ತಪ್ಪೇನೂ ಇಲ್ಲ. ಅದು ಮಾಡಬೇಕಾದ ಕೆಲಸವೇ ಹೌದು. ಆದರೆ ಆ ಕೆಲಸಕ್ಕೆ ವಿದೇಶೀ ಮೂಲದ ಲಾಭಾತುರ ಕಂಪೆನಿಯ ಸಹಭಾಗಿತ್ವ ಅಗತ್ಯವಿದೆಯೆ? ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ತಾನೊಬ್ಬನೇ ಮಾಡಬಹುದಿತ್ತಲ್ಲವೇ? ಸಾವಿರಾರು ಕೋಟಿ ರೂಪಾಯಿಗಳನ್ನು ಸಂಶೋಧನೆಗೆಂದು ವ್ಯಯಿಸುವ ಈ ಇಲಾಖೆ ಬರೀ ಅರ್ಧ ಲಕ್ಷ ರೂಪಾಯಿಗಳ ಖಾಸಗಿ ನೆರವು ಪಡೆದು ದೇಶದ ಪರಂಪರಾಗತ ಜ್ಞಾನವನ್ನು ಪರಭಾರೆ ಮಾಡುವುದೆ? ನಿನ್ನೆ ಹಠಾತ್ ನಿಧನರಾದ ಸ್ವದೇಶೀ ಆಂದೋಲನದ ಹರಿಕಾರ ರಾಜೀವ್ ದೀಕ್ಷಿತ್ ಇಂಥ ನೂರಾರು ಉದಾಹರಣೆಗಳನ್ನು ಕೊಡುತ್ತ ನಮ್ಮನ್ನು ಚಿಂತನೆಗೆ ಹಚ್ಚುತ್ತಿದ್ದರು. ಅವರು ತೆರವು ಮಾಡಿದ ಸ್ಥಾನವನ್ನು ತುಂಬಲು ಬಯಸುವವರು ಈ ಸ್ಪರ್ಧೆಯ ಉತ್ತರೋತ್ತರ ವಿದ್ಯಮಾನಗಳ ಮೇಲೆ ಕಣ್ಣಿಡಬಹುದು.</p>
<p style="text-align:justify;">ಆಕರ್ಷಕ ಬಹುಮಾನ ಘೋಷಿಸಿ, ಹೊಸ ಸಂಶೋಧನೆಗಳಿಗೆ ಪ್ರೇರಣೆ ನೀಡುವ ವಿಧಾನ ಈಚೆಗೆ ತುಂಬಾ ಉತ್ತಮ ಫಲ ನೀಡುತ್ತಿದೆ. ಬಿಲ್ ಗೇಟ್ಸ್, ವಾರೆನ್ ಬಫೆಟ್‌ನಿಂದ ಹಿಡಿದು ಗೂಗಲ್‌ವರೆಗೆ ಇಂದು ನಾನಾ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಭಾರೀ ಮೊತ್ತದ ಬಹುಮಾನ ಘೋಷಿಸಿ ವಿಜ್ಞಾನದ ಮುನ್ನಡೆಗೆ ಮತ್ತು ಸಾರ್ವತ್ರಿಕ ಕಲ್ಯಾಣಕ್ಕೆ ಹೊಸ ದಾರಿಯನ್ನು ತೋರುತ್ತಿವೆ. ನಮ್ಮ ದೇಶದಲ್ಲಿ ಶತಕೋಟ್ಯಧೀಶರ ಸಂಖ್ಯೆ ವರ್ಷವರ್ಷಕ್ಕೆ ಹೆಚ್ಚುತ್ತಿದೆಯಾದರೂ ಯಾರೂ ವಿಜ್ಞಾನ- ತಂತ್ರಜ್ಞಾನದ ಮುನ್ನಡೆಗೆ ಬಹುಮಾನವನ್ನು ಘೋಷಿಸಿಲ್ಲ.</p>
<p style="text-align:justify;">ಭಾರತ ಸರ್ಕಾರವೇನೊ ಸಂಶೋಧಕರಿಗೆ ಕೆಲವು ಲಕ್ಷ ರೂಪಾಯಿಗಳನ್ನು ಬಹುಮಾನ ರೂಪದಲ್ಲಿ ಹಂಚುತ್ತಿದೆಯಾದರೂ ಅದನ್ನು ಪಡೆಯಲು ಸರ್ಕಾರಿ ವಿಜ್ಞಾನಿಯೇ ಆಗಿರಬೇಕು, ಡಾಕ್ಟರೇಟ್ ಮಾಡಿರಬೇಕು ಇತ್ಯಾದಿ ನಿಯಮಗಳಿವೆ. ಸ್ವತಂತ್ರ ಸಂಶೋಧಕರನ್ನು ದೂರವಿಡುವ ಹೇರಳ ತಡೆಗೋಡೆಗಳು ಅಲ್ಲಿವೆ. ಇದಕ್ಕೆ ಅಪವಾದವೆಂಬಂತೆ, ಅಹಮದಾಬಾದ್‌ನ ಐಐಎಮ್‌ನ ಪ್ರೊಫೆಸರ್ ಅನಿಲ್ ಗುಪ್ತಾ  ‘ರಾಷ್ಟ್ರೀಯ ಹೊಸ ಸಾಧನಾ ನಿಧಿ’ಯನ್ನು (ನ್ಯಾಶನಲ್ ಇನ್ನೊವೇಶನ್ ಫೌಂಡೇಶನ್) ಇದೇ ಡಿಎಸ್‌ಟಿ ನೆರವಿನಿಂದ ಸ್ಥಾಪಿಸಿದ್ದಾರೆ; ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಬಲ್ಲ ಶೋಧಗಳಿಗೆ ಬಹುಮಾನ ಘೋಷಿಸುತ್ತಾರೆ. ವಿದ್ಯಾರ್ಹತೆ ಇಲ್ಲದವರೂ ತಮ್ಮ ಸಂಶೋಧನೆಯನ್ನು ಅಲ್ಲಿ ಸ್ಪರ್ಧೆಗೆ ಒಡ್ಡಬಹುದು (ವಿವರಗಳಿಗೆ: www.nif.org.in).</p>
<p style="text-align:justify;">ಗಾಂಧೀಜಿ 1929ರಲ್ಲಿ ಅಂಥದ್ದೊಂದು ಸವಾಲನ್ನು ಒಡ್ಡಿದ್ದರೆಂದು ಅನಿಲ್ ಗುಪ್ತಾ ನೆನಪಿಸಿಕೊಳ್ಳುತ್ತಾರೆ. ನೂಲು ತೆಗೆಯುವ ಚರಖಾವನ್ನು ಸುಧಾರಿಸುವವರಿಗೆ ಒಂದು ಲಕ್ಷ (ಇಂದಿನ ಮೌಲ್ಯದ ಪ್ರಕಾರ 20 ಕೋಟಿ) ರೂಪಾಯಿ ಬಹುಮಾನವನ್ನು ಘೋಷಿಸಿದ್ದರು. ಮ್ಯಾಂಚೆಸ್ಟರ್‌ನ ಗಿರಣಿಗಳಿಂದ ಬರುವ ನೂಲಿಗೆ ಪೈಪೋಟಿ ಒಡ್ಡಿ ಅದನ್ನು ಹಿಮ್ಮೆಟ್ಟಿಸಬೇಕೆಂದರೆ ನಮ್ಮ ಚರಖಾ ಸುಧಾರಿಸಬೇಕೆಂದು ಅವರು ಬಯಸಿದ್ದರು.</p>
<p style="text-align:justify;">ಇಂದು ಖಾಸಗಿ ಕಂಪೆನಿ­ಗಳ ಲಾಭಾಂಶವನ್ನು ಹೆಚ್ಚಿಸಬಲ್ಲ ಉತ್ಪಾ­ದನೆಗಳಲ್ಲಿ ನಿತ್ಯವೂ ಕ್ರಾಂತಿಕಾರಿ ಸುಧಾರಣೆಗಳನ್ನು ನಾವು ಕಾಣುತ್ತೇವೆ ವಿನಾ ಜನರ ಅಸಲೀ ಸಂಕಷ್ಟಗಳನ್ನು ಅಥವಾ ರಾಷ್ಟ್ರದ ಬುನಾದಿ ಸಮಸ್ಯೆಗಳನ್ನು ಪರಿಹರಿಸಬಲ್ಲ ನಿಟ್ಟಿನಲ್ಲಿ ಸಂಶೋಧನೆಗಳು ತೀರಾ ಕಡಿಮೆ. ಸರ್ಕಾರ ತಾನಾಗಿ ಆ ಹೊಣೆಯನ್ನು ತನ್ನ ಊಳಿಗದಲ್ಲಿರುವ ವಿಜ್ಞಾನಿಗಳ ಮೇಲೆ ಹೊರಿಸಬೇಕಿತ್ತು; ಇಲ್ಲವೇ ದೊಡ್ಡ ದೊಡ್ಡ ಬಹುಮಾನಗಳನ್ನು ಘೋಷಿಸಿ ಖಾಸಗಿ ಪ್ರತಿಭೆಗೆ ಅವಕಾಶ ಮಾಡಿಕೊಡಬೇಕಿತ್ತು. ಸಮಸ್ಯೆಗಳೇನು ಸಾವಿರ ಇವೆ.</p>
<p style="text-align:justify;">ಸವುಳು ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸಬಲ್ಲ ಸರಳ ಉಪಾಯ ಇದೆಯೆ? ಹಳ್ಳಿಯ ಹೆಣ್ಣುಕೂಲಿಗಳು ಬೆನ್ನು ಬಾಗಿಸದೆ ನಾಟಿ ಮಾಡಬಲ್ಲ ಸರಳ ವಿಧಾನ ಇದೆಯೆ? ಸಾಮೆ, ನವಣೆಯಂಥ ಪೌಷ್ಟಿಕ ಕಿರುಧಾನ್ಯಗಳನ್ನು ತಮ್ಮೂರಲ್ಲೇ  ಸಂಸ್ಕರಿಸಬಲ್ಲ ಪುಟ್ಟ ಯಂತ್ರವೊಂದು ಸಾಧ್ಯವೆ?</p>
<p style="text-align:justify;">ಮಣ್ಣಿನ ಮಕ್ಕಳ ಹಳೆಯ ಸಮಸ್ಯೆಗಳಿಗಂತೂ ಪರಿಹಾರ ಇಲ್ಲ; ಅಭಿವೃದ್ಧಿಯ ಹೆಸರಿನಲ್ಲಿ ಹುಟ್ಟುವ ಹೊಸ ಸಮಸ್ಯೆಗಳಿಗಾದರೂ ಪರಿಹಾರ ಹುಡುಕಲು ಸಾಧ್ಯವೆ? ಕೆಡವಿ ಬೀಳಿಸಿದ ಹಳೆ ಮನೆಗಳ ಕಚಡಾಗಳನ್ನು ಕಂಡಕಂಡಲ್ಲಿ ಸುರಿಯುವ ಬದಲು, ಅವುಗಳಿಂದಲೇ ಹೊಸ ಇಟ್ಟಿಗೆ ತಯಾರಿಸಲು ಸಾಧ್ಯವೆ? ಅಡುಗೆ ಬೇಯಿಸಲು ತುಣುಕು ಕಟ್ಟಿಗೆಗಾಗಿ ಉರಿ ಬಿಸಿಲಲ್ಲಿ ಅಲೆಯುವ ಬಳ್ಳಾರಿಯ ಯಲ್ಲಮ್ಮನಿಗೆಂದು ಅಲ್ಪವೆಚ್ಚದ ಒಂದು ಸೌರ ಒಲೆಯನ್ನು ನಿರ್ಮಿಸಲು ಸಾಧ್ಯವೆ? ಕಾಡು- ಕೆರೆಗಳನ್ನೆಲ್ಲ ಕಬಳಿಸುತ್ತ ವಿಸ್ತರಿಸುವ ಲಂಟಾನಾ, ಐಪೋಮಿಯಾ, ಯುಪಟೋರಿಯಂ ಕಳೆಸಸ್ಯಗಳನ್ನೇ ಒಣಗಿಸಿ, ಒತ್ತಿ, ಗಟ್ಟಿ ಹಲಗೆಗಳನ್ನು, ಶೋಕೇಸ್‌ಗಳನ್ನು ಮಾಡಲು ಸಾಧ್ಯವೆ? ವಿಸ್ತರಿಸುತ್ತಿರುವ ಮರುಭೂಮಿಯಲ್ಲಿ ಮತ್ತೆ ಸುಲಭವಾಗಿ ಗಿಡಮರ ಬೆಳೆಸಲು ಸಾಧ್ಯವೆ?</p>
<p style="text-align:justify;">ಈ ಕೊನೆಯ ಪ್ರಶ್ನೆಗೆ ಹೆಚ್ಚು ತಲೆ ಬಿಸಿ ಅಗತ್ಯವಿಲ್ಲ. ಅದಕ್ಕೆ ಆಗಲೇ ಉತ್ತರ ಸಿಕ್ಕಿದೆ: ಅಮೆರಿಕದ  ‘ಪಾಪ್ಯುಲರ್ ಸೈನ್ಸ್’ ಪತ್ರಿಕೆ ಏರ್ಪಡಿಸಿದ್ದ ಸಂಶೋಧನಾ ಸ್ಪರ್ಧೆಯಲ್ಲಿ ‘ಗಿಡ ಬೆಳೆಸುವ ಬುಟ್ಟಿ’ಗೆ ಮೊದಲ ಬಹುಮಾನ ಸಿಕ್ಕಿದೆ. ಪೀಯ್ಟರ್ ಹೊಫ್ ಎಂಬಾತನ ಈ ತೂತುಬುಟ್ಟಿಯನ್ನು ಎಂಥ ಬೆಂಗಾಡಿನಲ್ಲಾದರೂ ಇಟ್ಟು ಅದರ ತೂತಿನಲ್ಲಿ ಬೀಜ ಹಾಕಿಡಿ; ಬೇಸಿಗೆಯೇ ಆಗಿದ್ದರೂ ಬೀಜ ಮೊಳಕೆಯೊಡೆದು ಸಸಿ ಮೇಲೇರುತ್ತದೆ.</p>
<p style="text-align:justify;">ಒಂದು ವರ್ಷದ ನಂತರ ಮೆಲ್ಲಗೆ ಬುಟ್ಟಿಯನ್ನು ಎತ್ತಿ, ಸಸ್ಯವನ್ನು ಅದರ ಪಾಡಿಗೆ ಬಿಟ್ಟು, ಅದೇ ಬುಟ್ಟಿಯನ್ನು  ಬೇರೆಡೆ ಇಟ್ಟು ಇನ್ನೊಂದು ಬೀಜ ಊರಬಹುದು.</p>
<p style="text-align:justify;">‘ಗ್ರೋಯಾಸಿಸ್ ಬಾಕ್ಸ್’ ಹೆಸರಿನ ಎರಡು ಅಡಿ ವ್ಯಾಸದ ಈ ಪ್ಲಾಸ್ಟಿಕ್ ಬುಟ್ಟಿ ತನ್ನೊಳಗೆ ಸಾಕಷ್ಟು ವೈಜ್ಞಾನಿಕ ತಥ್ಯಗಳನ್ನು ತುಂಬಿಕೊಂಡಿದೆ. ಗಾಳಿಯಲ್ಲಿನ ತೇವಾಂಶವೇ ನಸುಕಿನಲ್ಲಿ ಇಬ್ಬನಿ ರೂಪದಲ್ಲಿ ಸಂಗ್ರಹವಾಗಿ ಬೀಜದ ಮೇಲೆ ಬೀಳುವಂತೆ ಇದರಲ್ಲಿ ವ್ಯವಸ್ಥೆ ಇದೆ. ಬುಟ್ಟಿಯಲ್ಲಿ ತುಂಬಿಟ್ಟ ನೀರು ಒಂದು ಬತ್ತಿಯ ಮೂಲಕ ತಿಂಗಳುಗಟ್ಟಲೆ ತೊಟ್ಟಿಕ್ಕುವಂತೆ ಮಾಡಲಾಗಿದೆ. ಸಸ್ಯ ತುಸು ಹೆಚ್ಚಿನ ನೀರನ್ನು ಹುಡುಕುತ್ತ ತನ್ನ ಲೋಮನಾಳಗಳನ್ನು ಆಳದವರೆಗೆ ಇಳಿಸಲು ಪ್ರೇರಣೆ ನೀಡುವಂತೆ ಬತ್ತಿಯ ಮೂಲಕ ತುಸುವೇ ತುಸು ನೀರು ಇಳಿಯುವಂತೆ ಮಾಡಲಾಗಿದೆ. ಪಕ್ಷಿಗಳ ಪಿಚಕಿಯಲ್ಲಿರುವ ಬೀಜ ಎಲ್ಲೋ ಬಂಡೆಗಳ ಬಿರುಕಿನ ಮೇಲೂ ಬಿದ್ದು ಗಿಡವಾಗಿ ಬೆಳೆಯುವುದರ ಹಿಂದಿನ ನಿಸರ್ಗ ತತ್ವವನ್ನು ಕೂಲಂಕಷ ಅಧ್ಯಯನ ಮಾಡಿ ಅದನ್ನಿಲ್ಲಿ ಅಳವಡಿಸಲಾಗಿದೆ ಎಂದು ಹೊಫ್ ಹೇಳುತ್ತಾರೆ (ಹೆಚ್ಚಿನ ವಿವರ ಮತ್ತು ಚಲನಶೀಲ ಗ್ರಾಫಿಕ್ ವಿನ್ಯಾಸಕ್ಕೆ ವೆಬ್‌ಸೈಟ್http://www.groasis.com /page/uk/principle. php ಇಲ್ಲಿ ನೋಡಬಹುದು. ನಮ್ಮ ಅರಣ್ಯಾಧಿಕಾರಿಗಳಿಗೂ ಅದನ್ನು ತೋರಿಸಬಹುದು).</p>
<p style="text-align:justify;">‘ಪಾಪ್ಯುಲರ್ ಸೈನ್ಸ್’ ಪತ್ರಿಕೆ ನಡೆಸಿದ ಈ ವರ್ಷದ ಸ್ಪರ್ಧೆಗೆ ಹೈಟೆಕ್‌ಗಳಲ್ಲೇ ಹೈಟೆಕ್ ಎನಿಸಿದ ಆಪಲ್ ಕಂಪೆನಿಯ ‘ಐಪ್ಯಾಡ್’ ಬಂದಿತ್ತು; ಬ್ಯಾಟರಿ ಶಕ್ತಿಯಿಂದಲೂ ಚಲಿಸಬಲ್ಲ ಪೋರ್ಶ್‌ನ ಹೈಬ್ರಿಡ್ ಸೂಪರ್ ಕಾರ್ ಬಂದಿತ್ತು. ಅಂಥ 119 ಸ್ಪರ್ಧಿಗಳನ್ನು ಹಿಂದಿಕ್ಕಿ ಗ್ರೋಯಾಸಿಸ್ ಜಯಿಸಿದೆ. </p>
<p style="text-align:justify;">‘ಜಗತ್ತಿನ ಅತಿ ದೊಡ್ಡ ಸಮಸ್ಯೆಗೆ ಅತಿ ಸರಳ ಪರಿಹಾರ’ ಎಂದು ತೀರ್ಪುಗಾರರು ಈ ಬುಟ್ಟಿಯನ್ನು ಬಣ್ಣಿಸಿದ್ದಾರೆ. ಇಷ್ಟಾದರೂ ಮುಖವನ್ನು ಬೆಳ್ಳಗೆ ಮಾಡುವ ಕ್ರೀಮ್ ಕುರಿತ ಸಂಶೋಧನೆಯೇ ಅನೇಕರಿಗೆ ಮಹತ್ವದ್ದಾಗಿ ಕಾಣಬಹುದು. ಮುಖ ಬೆಳ್ಳಗಿರಬೇಕು, ಸುಕ್ಕುಗಳು ಕಾಣಕೂಡದು, ಬೊಕ್ಕತಲೆ ಆಗಬಾರದು&#8230;.</p>
<p style="text-align:justify;">ಇಂಥ ಚಿಂತನೆಗಳೇ ಅನುಕೂಲಸ್ಥ ಸಮಾಜದ ಆದ್ಯತೆಗಳಾಗಿದ್ದರೆ ವಿಜ್ಞಾನ ಸಹಜವಾಗಿಯೇ ಅತ್ತ ದಾಂಗುಡಿ ಇಡುತ್ತದೆ. ಇಟ್ಟಿದೆ ಕೂಡ. ಹಾರ್ವರ್ಡ್ ವಿಜ್ಞಾನಿಗಳು ಮುದಿ ಇಲಿಯೊಂದಕ್ಕೆ ಅದೆಂಥದೊ ಔಷಧ ಕೊಟ್ಟು ಅದರ ಯೌವನ ಮರುಕಳಿಸುವಂತೆ ಮಾಡಿದ್ದಾರೆ. ಅದೀಗ ಈ ವಾರದ ವಿಜ್ಞಾನಲೋಕದ ಬಹುದೊಡ್ಡ ಸುದ್ದಿಯಾಗಿದೆ.</p>
<p style="text-align:justify;">ಇನ್ನೇನು ಮನುಷ್ಯರಿಗೂ ಅದೇ ಔಷಧ ಸಿಗುವ ದಿನ ದೂರವಿಲ್ಲ. ವಯಸ್ಸಿಗೆ ಬಂದವರಷ್ಟೇ ಅಲ್ಲ, ನಿವೃತ್ತಿ ವಯಸ್ಸಿಗೆ ಬಂದವರೂ ಹೊಸ ಸಂಶೋಧನೆಯ ಫಲಿತಾಂಶಕ್ಕೆ ಕಾದು ಕೂರುವಂತಾಗಿದೆ.</p>
<p style="text-align:justify;"><a href="http://prajavani.net/Content/Dec22010/nagesh20101201215575.asp" target="_blank">Copyright: 2009 The Printers (Mysore) Private Ltd., 75, M.G. Road, Post Box No 5331, Bangalore &#8211; 560001</a></p>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1661/"><img alt="" border="0" src="http://feeds.wordpress.com/1.0/comments/beluru.wordpress.com/1661/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1661/"><img alt="" border="0" src="http://feeds.wordpress.com/1.0/delicious/beluru.wordpress.com/1661/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1661/"><img alt="" border="0" src="http://feeds.wordpress.com/1.0/facebook/beluru.wordpress.com/1661/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1661/"><img alt="" border="0" src="http://feeds.wordpress.com/1.0/twitter/beluru.wordpress.com/1661/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1661/"><img alt="" border="0" src="http://feeds.wordpress.com/1.0/stumble/beluru.wordpress.com/1661/" /></a> <a rel="nofollow" href="http://feeds.wordpress.com/1.0/godigg/beluru.wordpress.com/1661/"><img alt="" border="0" src="http://feeds.wordpress.com/1.0/digg/beluru.wordpress.com/1661/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1661/"><img alt="" border="0" src="http://feeds.wordpress.com/1.0/reddit/beluru.wordpress.com/1661/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1661&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ac%e0%b2%bf%e0%b2%b3%e0%b2%bf-%e0%b2%ae%e0%b3%81%e0%b2%96%e0%b2%95%e0%b3%8d/feed/</wfw:commentRss>
		<slash:comments>2</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>

		<media:content url="http://mitramaadhyama.co.in/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>

		<media:content url="http://mitramaadhyama.co.in/wp-content/uploads/2009/09/NH-column-artwork.jpg" medium="image">
			<media:title type="html">NH-column-artwork</media:title>
		</media:content>
	</item>
		<item>
		<title>ನಾಗೇಶ್‌ ಹೆಗಡೆ : ಮರಣಶಯ್ಯೆಯಲ್ಲಿ ಇಂಡಿಯಂ, ದೂಳಿನಲ್ಲಿ ಪ್ಲಾಟಿನಂ</title>
		<link>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%b0%e0%b2%a3%e0%b2%b6%e0%b2%af%e0%b3%8d%e0%b2%af%e0%b3%86%e0%b2%af/</link>
		<comments>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%b0%e0%b2%a3%e0%b2%b6%e0%b2%af%e0%b3%8d%e0%b2%af%e0%b3%86%e0%b2%af/#comments</comments>
		<pubDate>Sat, 18 Dec 2010 10:11:44 +0000</pubDate>
		<dc:creator>beluru</dc:creator>
				<category><![CDATA[ನಾಗೇಶ ಹೆಗಡೆ ಕಾಲಂ]]></category>

		<guid isPermaLink="false">http://beluru.wordpress.com/?p=1657</guid>
		<description><![CDATA[ಇಂಧನ ತೈಲವೇ ಜಾಗತಿಕ ಸಂಘರ್ಷಗಳಿಗೆ ಕಾರಣವೆಂದು ತಿಳಿದಿದ್ದವರು ಈಗ ಅದಕ್ಕಿಂತ ಮಹತ್ವದ ವಿರಳ ಲೋಹಗಳತ್ತ ಗಮನ ಹರಿಸುತ್ತಿದ್ದಾರೆ. ಜಗತ್ತಿನ ಕೆಲವೇ ಕೆಲವು ತಾಣಗಳಲ್ಲಿ ಸಾಂದ್ರವಾಗಿ ಅದಿರಿನ ನಿಕ್ಷೇಪಗಳಾಗಿ ಕೂತಿರುವ ಇವು ಹೊಸ ಸಂಘರ್ಷಕ್ಕೆ ನಾಂದಿ ಹಾಡುತ್ತಿವೆ. ‘ಕಬ್ಬಿಣ ಸತ್ತುಹೋಯಿತು’ ಎಂಬ ಶಿರೋನಾಮೆಯಲ್ಲಿ ಫ್ರೆಂಚ್ ಕತೆಗಾರ ಎಸ್ ಎಸ್ ಹೆಲ್ಡ್ 1932ರಲ್ಲಿ ಒಂದು ಕತೆಯನ್ನು ಬರೆದಿದ್ದ. ಫ್ರಾನ್ಸ್‌ನ ಉಕ್ಕಿನ ಕಾರ್ಖಾನೆಗೆ ಒಂದು ವಿಚಿತ್ರ ರೋಗ ತಗಲುತ್ತದೆ. ಕಬ್ಬಿಣದ ಸರಳು, ಕಂಬ, ಹಳಿಗಳೆಲ್ಲ ಗೆದ್ದಲು ಹತ್ತಿದಂತೆ ಕಂದು ಪುಡಿಪುಡಿಯಾಗಿ ಉದುರುತ್ತವೆ. [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1657&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:justify;">ಇಂಧನ ತೈಲವೇ ಜಾಗತಿಕ ಸಂಘರ್ಷಗಳಿಗೆ ಕಾರಣವೆಂದು ತಿಳಿದಿದ್ದವರು ಈಗ ಅದಕ್ಕಿಂತ ಮಹತ್ವದ ವಿರಳ ಲೋಹಗಳತ್ತ ಗಮನ ಹರಿಸುತ್ತಿದ್ದಾರೆ. ಜಗತ್ತಿನ ಕೆಲವೇ ಕೆಲವು ತಾಣಗಳಲ್ಲಿ ಸಾಂದ್ರವಾಗಿ ಅದಿರಿನ ನಿಕ್ಷೇಪಗಳಾಗಿ ಕೂತಿರುವ ಇವು ಹೊಸ ಸಂಘರ್ಷಕ್ಕೆ ನಾಂದಿ ಹಾಡುತ್ತಿವೆ.<img title="More..." src="http://mitramaadhyama.co.in/wp-includes/js/tinymce/plugins/wordpress/img/trans.gif" alt="" /><span id="more-1657"></span></p>
<p><img class="alignleft" title="NH-column-artwork" src="http://mitramaadhyama.co.in/wp-content/uploads/2009/09/NH-column-artwork.jpg" alt="" width="228" height="228" /></p>
<p style="text-align:justify;">‘ಕಬ್ಬಿಣ ಸತ್ತುಹೋಯಿತು’ ಎಂಬ ಶಿರೋನಾಮೆಯಲ್ಲಿ ಫ್ರೆಂಚ್ ಕತೆಗಾರ ಎಸ್ ಎಸ್ ಹೆಲ್ಡ್ 1932ರಲ್ಲಿ ಒಂದು ಕತೆಯನ್ನು ಬರೆದಿದ್ದ. ಫ್ರಾನ್ಸ್‌ನ ಉಕ್ಕಿನ ಕಾರ್ಖಾನೆಗೆ ಒಂದು ವಿಚಿತ್ರ ರೋಗ ತಗಲುತ್ತದೆ. ಕಬ್ಬಿಣದ ಸರಳು, ಕಂಬ, ಹಳಿಗಳೆಲ್ಲ ಗೆದ್ದಲು ಹತ್ತಿದಂತೆ ಕಂದು ಪುಡಿಪುಡಿಯಾಗಿ ಉದುರುತ್ತವೆ. ವಿಜ್ಞಾನಿಗಳು ತನಿಖೆ ನಡೆಸಲು ಹೋದಾಗ ಇನ್ನೇನೋ ಭಾನಗಡಿ ಆಗಿ ‘ಸಿಡೆರೊಸಿಸ್’ ಎಂಬ ಆ ರೋಗ ಸಾಂಕ್ರಾಮಿಕವೇ ಆಗುತ್ತದೆ. ರೋಗಾಣು ಕಾರ್ಖಾನೆಯ ಆವರಣದಿಂದ ಜಿಗಿದು ಕಬ್ಬಿಣ ಕಂಡಲ್ಲೆಲ್ಲ ದಾಳಿ ಮಾಡುತ್ತದೆ. ರೈಲು, ಬಸ್ಸು, ಹಡಗು, ಸೇತುವೆ, ಕತ್ತಿ, ಸನಿಕೆ, ಕಟ್ಟಡ, ಕೊಳವೆ, ಕೊಳಾಯಿ ಎಲ್ಲವೂ ಶಿಥಿಲವಾಗಿ, ಪುಡಿಪುಡಿಯಾಗಿ ಇಡೀ ನಾಗರಿಕತೆಯೇ ಕುಸಿದು ಶಿಲಾಯುಗಕ್ಕೆ ಮರಳುತ್ತದೆ. ಅಲ್ಲಿಂದ ಇನ್ನೊಮ್ಮೆ ಹೊಸ ಜಂಗ್ಲೀ ನಾಗರಿಕತೆಯೊಂದು ಉಗಮವಾಗಿ ಮತ್ತೆ ಭೂತ-ಪ್ರೇತ, ಮಾಟ-ಮಂತ್ರ. ನಾಗಪೂಜೆ, ನರಬಲಿಯಂಥ ಮೂಢನಂಬಿಕೆಗಳ ಹೊಸಯುಗ ಆರಂಭವಾಗುತ್ತದೆ.</p>
<p style="text-align:justify;">ಇದು ನಿಜವಾಗುವಂಥ ಕತೆಯೇನಲ್ಲ ಬಿಡಿ. ಕಬ್ಬಿಣದ ಅದಿರಿನ ಸಹವಾಸದಿಂದಾಗಿ ಹೆಚ್ಚೆಂದರೆ ಬಳ್ಳಾರಿಯ ಗ್ರಾಮೀಣ ನಾಗರಿಕತೆ ಎಕ್ಕುಟ್ಟಿ ಹೋಗಬಹುದು, ಬೇಲೇಕೇರಿಯ ಬೆಸ್ತರ ಬದುಕು ಮೂರಾಬಟ್ಟೆ ಆಗಬಹುದು; ವಿಧಾನಸೌಧದ ರಾಜಕೀಯ ಮೌಲ್ಯಗಳು ಧ್ವಂಸವಾಗಬಹುದೇ ವಿನಾ ಕಬ್ಬಿಣಕ್ಕೇನೂ ಅಪಾಯ ಬರಲಾರದು. ಕಬ್ಬಿಣವೊಂದೇ ಅಲ್ಲ, ತಾಮ್ರ, ಬೆಳ್ಳಿ, ಚಿನ್ನ, ಪಾದರಸ ಹೀಗೆ ನಿಸರ್ಗದ ಯಾವುದೇ ಧಾತುಗಳು ರೋಗಗಳಿಂದಾಗಲೀ ಪಂಚಭೂತಗಳಿಂದಾಗಲೀ ನಶಿಸುವುದಿಲ್ಲ, ನಿರ್ವಂಶವಾಗುವುದಿಲ್ಲ. ನಾಶ, ನಿರ್ವಂಶದಂಥ ದುರ್ದೆಸೆ ಏನಿದ್ದರೂ ಪ್ರಾಣಿ, ಪಕ್ಷಿಗಳಿಗೆ, ಆರ್ಕಿಡ್ ಸಸ್ಯಗಳಿಗೆ,  ಔಷಧ ಮೂಲಿಕೆಗಳಿಗೆ; ಡೋಡೋ, ಕಗ್ಗಾ, ಚೀತಾ, ಈಗ ಘೇಂಡಾಗಳಿಗೆ, ಹುಲಿಗಳಿಗೆ ಅಷ್ಟೆ. ವಿನಾ, ಅವುಗಳನ್ನು ಸದೆಬಡಿಯುವ ಕತ್ತಿಗಳು, ಭರ್ಜಿಗಳು, ಕುಣಿಕೆಗಳು, ಕಾಡತೂಸಿನ ಚರೆಗಳಿಗೆ ಸೇರಿಸುವ ಸೀಸ ಇವೆಂದೂ ನಾಶವಾಗಲಾರವು. ಹಾಗೆಯೇ ವನ್ಯಜೀವಹರಣಕ್ಕೆ ಬಳಸುವ ಆರ್ಸೆನಿಕ್, ಕ್ರೋಮಿಯಂ, ರಂಜಕ, ಮೆಟಾಸಿಡ್ ಕೆಮಿಕಲ್ ಪಾಷಾಣಗಳು ನಿರ್ವಂಶವಾಗಲಾರವು.</p>
<p style="text-align:justify;">ಹಾಗೆಂದು ನಾವೆಲ್ಲ ಓದಿ ತಿಳಿದಿದ್ದೇವೆ. ಆದರೆ ನಿಜವೆ? ಅಸಿಮೊವ್ ನೆನಪಿನ ವೆಬ್‌ಸೈಟ್‌ನಲ್ಲಿ ಎರಡು ವರ್ಷಗಳ ಹಿಂದೆ  ‘ಸಾವಿನಂಚಿನಲ್ಲಿ ಗ್ಯಾಲಿಯಂ’ ಹೆಸರಿನ ಲೇಖನವೊಂದು ಪ್ರಕಟವಾಯಿತು. ಖನಿಜ ನಿಕ್ಷೇಪಗಳಲ್ಲಿ ತೀರ ಅಲ್ಪ ಪ್ರಮಾಣದಲ್ಲಿ ಸಿಗುತ್ತಿರುವ ಗ್ಯಾಲಿಯಂ, ಇಂಡಿಯಂ ಮುಂತಾದ ಧಾತುಗಳನ್ನು ಇಂದು ಟಿವಿ, ಕಂಪ್ಯೂಟರ್, ಮೊಬೈಲ್‌ಗಳಂಥ ವಿದ್ಯುನ್ಮಾನ ಸಾಧನಗಳಲ್ಲಿ ನಾವು ತೀರ ಹೆಚ್ಚಾಗಿ ಬಳಸುತ್ತಿದ್ದೇವೆ. ಅವು ಮುಗಿದು ಹೋದರೆ  ‘ಕಬ್ಬಿಣ ಸತ್ತು ಹೋ&#8230;.’ದಾಗಿನ ವಿಕಲ್ಪವೇ ಎಲ್ಲೆಡೆ ಸಾಕಾರಗೊಳ್ಳುತ್ತದೆ.</p>
<p style="text-align:justify;">ನಿರ್ವಂಶವಾಗಬಲ್ಲ ನಿರ್ಜೀವ ದ್ರವ್ಯಗಳ ಪಟ್ಟಿಯಲ್ಲಿ ಪೆಟ್ರೋಲು- ಡೀಸೆಲ್ ಮೊದಲ ಸ್ಥಾನದಲ್ಲಿವೆ, ನಿಜ. ಅವುಗಳ ‘ಗರಿಷ್ಠ ಬಳಕೆಯ ಹಂತ’ದಲ್ಲಿ ನಾವಿದ್ದೇವೆಂದು ಸಮೀಕ್ಷೆಗಳು ಹೇಳುತ್ತವೆ. ಇನ್ನೇನಿದ್ದರೂ ಖನಿಜ ತೈಲಗಳ ಉತ್ಪಾದನೆ ದಿನದಿನಕ್ಕೆ ಕಡಿಮೆಯಾಗುತ್ತ, ಬೆಲೆ ದಿನದಿನಕ್ಕೆ ಏರುತ್ತ, ನಾನಾ ಬಗೆಯ ಸಂಘರ್ಷಗಳಿಗೆ ಕಾರಣವಾಗುತ್ತ ದುರ್ಬಲರ ಬದುಕನ್ನು ನರಕಕ್ಕೆ ದೂಡುತ್ತ ಹೋಗುತ್ತದೆ. ಕಳೆದ ವರ್ಷ ಜಗತ್ತಿನ ಎಲ್ಲ 840 ಪೆಟ್ರೋಲಿಯಂ ನಿಕ್ಷೇಪಗಳ ಸಮೀಕ್ಷಾ ವರದಿಯಲ್ಲಿ ‘ಗರಿಷ್ಠ ಬಳಕೆ’ (ಪೀಕ್ ಆಯಿಲ್) ಅವಧಿ ಮುಗಿಯಿತು ಎಂತಲೂ ಹೇಳಲಾಗಿದೆ. ಅದೇ ರೀತಿ ‘ನೀರಿನ ಗರಿಷ್ಠ ಬಳಕೆ’ (ಪೀಕ್ ವಾಟರ್),  ‘ಮರಮುಟ್ಟುಗಳ ಗರಿಷ್ಠ ಬಳಕೆ’ (ಪೀಕ್ ವುಡ್) ಅವಧಿಗಳೂ ನಿಗದಿಗೊಳ್ಳುತ್ತಿವೆ. ಈಗ ಚರ್ಚೆಗೆ ಬಂದಿರುವುದು ‘ಪೀಕ್ ಮೆಟಲ್’, ಅಂದರೆ ಖನಿಜಗಳ, ಅದರಲ್ಲೂ ವಿರಳ ಖನಿಜಗಳ ಗರಿಷ್ಠ ಬಳಕೆಯ ವಿಚಾರ.</p>
<p style="text-align:justify;">ಪೆಟ್ರೋಲಿಯಂ ಯುಗ ಮುಗಿದರೆ ಭೂಮಿಗೆ ಒಳ್ಳೆಯದೇ ಆದೀತೆನ್ನುವವರು ಸಾಕಷ್ಟಿದ್ದಾರೆ. ಅದಕ್ಕೆ ಬದಲಿಯಾಗಿ ಬೇರೆ ಶಕ್ತಿಮೂಲಗಳ ಬಳಕೆ ಈಗಾಗಲೇ ಆರಂಭವಾಗಿವೆ. ಜರ್ಮನಿಯಲ್ಲಿ ಮನೆಮನೆಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್‌ಗೆ ಮಾರುವ ಕಾರ್ಯಾಚರಣೆ ಅದೆಷ್ಟು ಹೆಚ್ಚಾಗಿದೆ ಎಂದರೆ ಅಲ್ಲಿ ಏಕಕಾಲಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಹರಿದು  ‘ಇಡೀ ವಿದ್ಯುತ್ ಜಾಲ ಕುಸಿಯುವ ಭೀತಿ ತಲೆದೋರಿದೆ’ ಎಂದು ಕಳೆದ ವಾರ ‘ನ್ಯೂ ಸೈಂಟಿಸ್ಟ್’ ಪತ್ರಿಕೆ ವರದಿ ಮಾಡಿತ್ತು.</p>
<p style="text-align:justify;">ಬ್ಯಾಟರಿಚಾಲಿತ ಕಾರುಗಳ ಉತ್ಪಾದನೆ ಹೆಚ್ಚುತ್ತಿದೆ. ವಿಮಾನಗಳೂ ಬ್ಯಾಟರಿ ಶಕ್ತಿಯಿಂದಲೇ ಹಾರುವಂತೆ ಮಾಡಲು ಯತ್ನಗಳು ನಡೆಯುತ್ತಿವೆ. ರೈಲು, ಹಡಗುಗಳಿಗೆ ತೈಲವೇ ಬೇಕೆಂದಿಲ್ಲ. ಕಲ್ಲಿದ್ದಲೂ ನಡೆಯುತ್ತದೆ. ನೀರಿನ ‘ಗರಿಷ್ಠ ಬಳಕೆ’ಯ ಯುಗದಲ್ಲಿ ನಾವಿದ್ದೇವಾದರೂ ಅದು ಮುಗಿಯುವ ಭಯವಿಲ್ಲ. ಬದಲಿಗೆ ಭೂಮಿ ಬಿಸಿಯಾಗುತ್ತ ಹೋದಾಗ ಧ್ರುವ ಪ್ರದೇಶಗಳು ಕರಗಿ, ಕೆಲವೆಡೆ ಯದ್ವಾತದ್ವಾ ಅತಿವೃಷ್ಟಿಯಾದೀತು. ನೀರು ಸಾಕಪ್ಪಾ ಸಾಕು ಎನ್ನುವಂತೆಯೂ ಆದೀತು. ಮರಮುಟ್ಟುಗಳ ಕೊರತೆಯಾದರೆ ಇತರ ಜೀವ ಜಂತುಗಳ ಅವಸಾನ ಚುರುಕಾದೀತೇ ವಿನಾ ಮನುಷ್ಯನಿಗೆ ಚಿಂತೆಯಿಲ್ಲ. ಮರಗಳ ಅವಲಂಬನೆಯನ್ನು ಮೀರಿ ಆತ ಬೆಳೆದಿದ್ದಾನೆ.</p>
<p style="text-align:justify;">ಆದರೆ ವಿರಳ ಲೋಹಗಳ ವಿಚಾರ ಹಾಗಲ್ಲ. ಅವುಗಳ ಮೇಲೆ ನಮ್ಮ ಅವಲಂಬನೆ ದಿನದಿನಕ್ಕೆ ಹೆಚ್ಚುತ್ತಿದೆ. ಅದರ ಬಳಕೆಯ ವಿರಾಟ್ ವಿಶ್ವರೂಪವನ್ನು ಮೊನ್ನೆ ಚೀನಾದಲ್ಲಿ ಏಷ್ಯನ್ ಗೇಮ್ಸ್‌ನ ಉದ್ಘಾಟನೆಯಲ್ಲಿ ನಾವೆಲ್ಲ ಕಂಡಿದ್ದೇವೆ. ಅಲ್ಲಿ ಯಾವುದು ನೀರು, ಯಾವುದು ನೆಲ, ಯಾವುದು ವಿಡಿಯೊ ಆಕಾಶ, ಯಾವುದು ಅಸಲೀ ಆಕಾಶ, ಯಾವುದು ಹಗ್ಗ , ಯಾವುದು ಲೇಸರ್ ಪುಂಜ ಎಂಬುದೇ ಗೊತ್ತಾಗದ ಮಾಯಾಲೋಕ ಸೃಷ್ಟಿಯಾಗಿ, ಅಲ್ಲಿಂದ ಹೊರಟ ಬಿಂಬಗಳು ನಮ್ಮ ಟಿವಿ, ಲ್ಯಾಪ್‌ಟಾಪ್, ಡಿವಿಡಿಗಳಲ್ಲಿ, ಪಾಮ್‌ಟಾಪ್, ಮೊಬೈಲ್‌ಗಳಲ್ಲೂ ಮೂಡಿದಾಗ ಆಗ ಬಳಕೆಯಾದ ಶತಕೋಟಿ ಸಾಧನಗಳಲ್ಲೆಲ್ಲ ವಿರಳ ಲೋಹಗಳ ಬಳಕೆಯಾಗಿದೆ.</p>
<p style="text-align:justify;">ಉದಾಹರಣೆಗೆ: ಗ್ಯಾಲಿಯಂ ಎಂಬ ಲೋಹವನ್ನು ಟಿವಿ ಮತ್ತು ಕಂಪ್ಯೂಟರ್‌ಗಳ ಸಪಾಟು ಪರದೆಯ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಮಸೂರಗಳ ಮುಖಲೇಪನಕ್ಕೆ, ಅತಿಶಾಖದಲ್ಲಿ ಕೆಲಸ ಮಾಡುವ ಯಂತ್ರಗಳ ಕವಾಟಗಳಿಗೆ ಹಾಗೂ ದ್ರವಸ್ಫಟಿಕಗಳ ತಯಾರಿಕೆಗೆ ಬಳಕೆಯಾಗುತ್ತಿದೆ. ಭೂಮಿಯ ಶೇ 0.0015 ಪ್ರಮಾಣದಲ್ಲಿ ಸಿಗುವ ಈ ಲೋಹ ಎಲ್ಲೂ ನಿಕ್ಷೇಪ ರೂಪದಲ್ಲಿಲ್ಲ. ಸತುವು ಮತ್ತು ಅಲ್ಯೂಮಿನಿಯಂ ಅದಿರನ್ನು ಶುದ್ಧಗೊಳಿಸುವಾಗ ಹೊರಬೀಳುವ ಕಿಟ್ಟದಲ್ಲಿ ಇದು ಅಲ್ಪ ಪ್ರಮಾಣದಲ್ಲಿ ಸಿಗುತ್ತದೆ. ಅದೇ ರೀತಿ ಇಂಡಿಯಂ ಮತ್ತು ಹಾಫ್ನಿಯಂ ಕೂಡ. ಬಳಕೆಯ ಪ್ರಮಾಣ ಹೆಚ್ಚುತ್ತಿದೆ, ಲಭ್ಯತೆಯ ಪ್ರಮಾಣ ಕಡಿಮೆಯಾಗುತ್ತಿದೆ.</p>
<p style="text-align:justify;">ಆವರ್ತನ ಕೋಷ್ಟಕದಲ್ಲಿನ ಲ್ಯಾಂಥನೈಡ್ ಸರಣಿಯ 14 ಮೂಲವಸ್ತುಗಳಿಗೆ  ‘ರೇರ್ ಅರ್ಥ್ ಎಲಿಮೆಂಟ್ಸ್’ ಎನ್ನುತ್ತಾರೆ (ಕನ್ನಡದಲ್ಲಿ ‘ವಿರಳ ಭಸ್ಮದ ಧಾತುಗಳು’). ವಿದ್ಯುನ್ಮಾನ ಉಪಕರಣಗಳ ಉತ್ಪಾದನೆಯಲ್ಲಿ ಇವುಗಳಿಗೆ ಬೇಡಿಕೆ ಅದೆಷ್ಟು ಹೆಚ್ಚುತ್ತಿದೆ ಎಂದರೆ, ಜಾಗತಿಕ ರಾಜಕೀಯರಂಗದಲ್ಲಿ ಜಟಾಪಟಿ ಏಳುತ್ತಿದೆ, ಬಿಕ್ಕಟ್ಟು  ತಲೆದೋರಿದೆ.</p>
<p style="text-align:justify;">ಈಚೆಗೆ ಚೀನಾ- ಜಪಾನ್ ನಡುವೆ ಶೀತಲ ಸಮರ ಹೊತ್ತಿಕೊಂಡಿತ್ತು. ಚೀನಾದ ಮೀನುಗಾರರಿದ್ದ ದೋಣಿಯೊಂದು ಜಪಾನೀ ಸಮುದ್ರಕ್ಕೆ ಬಂತಂತೆ. ಜಪಾನೀಯರು ಕುಪಿತಗೊಂಡು ದೋಣಿಯ ಕ್ಯಾಪ್ಟನ್‌ನನ್ನು ಬಂಧಿಸಿದರಂತೆ. ಅದು ಮೇಲ್ನೋಟದ ಚಿಲ್ಲರೆ ಘಟನೆ. ಆಗಿದ್ದೇನೆಂದರೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನಗಳಿಗೆ ಬೇಕಿರುವ ರೇರ್ ಅರ್ಥ್ ಮೂಲ ವಸ್ತುಗಳಲ್ಲಿ ಶೇ 99ರಷ್ಟು ಚೀನಾದ ಗಣಿಗಳಿಂದಲೇ ಬರುತ್ತಿವೆ. ಅವು ಗಣಿಗಳಿಂದ ಎದ್ದು ಜಪಾನಿನಲ್ಲಿ ಸಂಸ್ಕರಣೆಗೊಂದು ಶುದ್ಧಲೋಹದ ಗಟ್ಟಿಗಳಾಗಿ ವಿವಿಧ ದೇಶಗಳ ಕಂಪೆನಿಗಳಿಗೆ ಹಾಗೂ ವಿವಿಧ ಮಿಲಿಟರಿ ಉಪಕರಣ ತಯಾರಿಕೆಗಳಿಗೆ ಹೋಗುತ್ತಿವೆ. ಇದೀಗ ಚೀನಾ ಹಠಾತ್ತಾಗಿ ರೇರ್‌ಅರ್ಥ್ ಗಣಿಗಾರಿಕೆಯನ್ನು ನಿಲ್ಲಿಸಿದೆ. ತನಗೆ ಬೇಕಿದ್ದುದನ್ನು ತಾನೇ ಸಂಸ್ಕರಣೆ ಮಾಡತೊಡಗಿದೆ.</p>
<p style="text-align:justify;">ಇದರಿಂದಾಗಿ ಜಪಾನ್‌ಗೆ ಡಬಲ್ ಧಕ್ಕೆಯಾಗಿದೆ. ಅಲ್ಲಿನ ಅದಿರು ಸಂಸ್ಕರಣ ಘಟಕಗಳೆಲ್ಲ ಸ್ಥಗಿತಗೊಂಡಿವೆ. ಮೇಲಾಗಿ ಶುದ್ಧರೂಪದ ರೇರ್‌ಅರ್ಥ್ ಲೋಹಗಳನ್ನು ಮೊಬೈಲ್, ಟಿವಿ, ಕಂಪ್ಯೂಟರ್‌ಗಳಲ್ಲಿ ಹಾಗೂ ಹೈಬ್ರಿಡ್ ಕಾರ್‌ಗಳಲ್ಲಿ ಬಳಸುತ್ತಿದ್ದ ಜಪಾನೀ ಕಂಪೆನಿಗಳೆಲ್ಲ ಹಸಿದು ಕೂರುವಂತಾಗಿದೆ. ಕುಪಿತ ಜಪಾನ್ ಚೀನಾಕ್ಕೆ ತುಸು ಚುರುಕು ಮುಟ್ಟಿಸಲು ಹೊರಟಿದೆ.</p>
<p style="text-align:justify;">ಚೀನಾದ ಗಣಿ ದಿಗ್ಬಂಧನ ನೋಡಿ ಅಮೆರಿಕ ಧಿಗ್ಗನೆದ್ದಿದೆ. ಎಂಟು ವರ್ಷಗಳ ಹಿಂದೆ ಅಮೆರಿಕ ತನ್ನ ಏಕೈಕ ರೇರ್‌ಅರ್ಥ್ ಗಣಿಯನ್ನು ಮುಚ್ಚಿತ್ತು. ಏಕೆಂದರೆ ಅದಿರಿನ ಗಣಿಗಾರಿಕೆ ಹಾಗೂ ಸಂಸ್ಕರಣೆ ತೀರಾ ವಿಷಕಾರಿ ಎಂಬುದು ಅದರ ಅರಿವಿಗೆ ಬಂದಿತ್ತು. ನಂತರ ಮೆಲ್ಲಮೆಲ್ಲಗೆ ಇಡೀ ಸಂಸ್ಕರಣ ತಂತ್ರಜ್ಞಾನವನ್ನೇ ಚೀನಾಕ್ಕೆ ವರ್ಗಾಯಿಸಿ ಅಲ್ಲಿನವರ ಕೈಯಿಂದಲೇ ತನಗೆ ಬೇಕಿದ್ದುದನ್ನು ಶುದ್ಧರೂಪದಲ್ಲಿ ಪಡೆಯತೊಡಗಿತ್ತು. ಈಗ ಚೀನಾ ಉಲ್ಟಾ ಹೊಡೆದಿದ್ದರಿಂದ ಮತ್ತೆ ತನ್ನ ಗಣಿಗಾರಿಕೆಗೆ ಚಾಲನೆ ಕೊಡಲೆಂದು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದೆ.</p>
<p style="text-align:justify;">ಇಂಧನ ತೈಲವೇ ಜಾಗತಿಕ ಸಂಘರ್ಷಗಳಿಗೆ ಕಾರಣವೆಂದು ತಿಳಿದಿದ್ದವರು ಈಗ ಅದಕ್ಕಿಂತ ಮಹತ್ವದ ವಿರಳ ಲೋಹಗಳತ್ತ ಗಮನ ಹರಿಸುತ್ತಿದ್ದಾರೆ. ಜಗತ್ತಿನ ಕೆಲವೇ ಕೆಲವು ತಾಣಗಳಲ್ಲಿ ಸಾಂದ್ರವಾಗಿ ಅದಿರಿನ ನಿಕ್ಷೇಪಗಳಾಗಿ ಕೂತಿರುವ ಇವು ಹೊಸ ಸಂಘರ್ಷಕ್ಕೆ ನಾಂದಿ ಹಾಡುತ್ತಿವೆ. ಇಂದಿನ ಮಾಹಿತಿ ಕ್ರಾಂತಿ, ಸಂಚಾರ ಕ್ರಾಂತಿ, ವೈದ್ಯಕೀಯ ಕ್ರಾಂತಿ, ಮನರಂಜನ ಕ್ರಾಂತಿಗಳ ಬೆನ್ನೇರಿ ಈ ಅಪರೂಪದ ಲೋಹಗಳು ಮನೆಮನೆಗಳನ್ನು ಹೊಕ್ಕು ಕ್ರಮೇಣ ತಿಪ್ಪೆಗೆ ಸೇರುತ್ತಿವೆ. ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಸಿಗುವ ಕೆಲವಂತೂ ಇನ್ನೇನು ಮುಗಿಯುವ ಹಂತದಲ್ಲಿವೆ. ಪ್ಲಾಟಿನಂ, ಗ್ಯಾಲಿಯಂ, ಆಂಟಿಮನಿ, ಇಂಡಿಯಮ್, ಟೆಂಟಾಲಮ್ ಇವೆಲ್ಲ ಎಷ್ಟಿವೆ ಎಂಬುದನ್ನೂ ಗಣಿ ಕಂಪೆನಿಗಳು ಹೇಳುತ್ತಿಲ್ಲ. ಪ್ರತಿ ಕಿಲೋಗ್ರಾಂಗೆ ಸಾವಿರ ಡಾಲರ್ ಬೆಲೆಯುಳ್ಳ ಇಂಡಿಯಂ ಎಂಬ ಲೋಹ  ಇನ್ನು ಹತ್ತೇ ವರ್ಷಗಳಲ್ಲಿ ಮುಗಿಯಲಿದೆ ಎಂದು ಜರ್ಮನಿಯ ಆಗಸ್‌ಬರ್ಗ್ ವಿವಿಯ ವಿಜ್ಞಾನಿ ಆರ್ಮಿನ್ ರೆಲ್ಲರ್ ಹೇಳಿದ್ದಾಗಿ ವರದಿಯಾಗಿದೆ. ಹಾಫ್ನಿಯಮ್ ಎಂಬುದು 2017ರ ವೇಳೆಗೆ ಮುಗಿಯುತ್ತದಂತೆ.</p>
<p style="text-align:justify;">‘ಮುಗಿಯುತ್ತದೆ’ ಎನ್ನುವ ಬದಲು  ‘ಚದುರಿ ಹೋಗಲಿದೆ’ ಎಂದು ಹೇಳಬೇಕು. ಎಲ್ಲೋ ಭೂಮಿಯಲ್ಲಿ ಸಾಂದ್ರವಾಗಿದ್ದ ಈ ಧಾತುಗಳು ಬಳಕೆಗೆ ಬಂದು, ‘ಇ-ವೇಸ್ಟ್’ಗಳಾಗಿ ಚೆಲ್ಲಾಡಿ ಹೋಗುತ್ತವೆ. ಕೆಲಮಟ್ಟಿಗೆ ಚಿಂದಿ ಆಯುವವರು ಕೊಳೆಗೇರಿ ಸಂದುಮೂಲೆಯಲ್ಲಿ ಅವನ್ನು ಕರಗಿಸಿ ನೀರಿಗೆ, ಗಾಳಿಗೆ ವಿಷವನ್ನು ಸೇರಿಸಿ ಅರ್ಧಂಬರ್ಧ ನಷ್ಟ ಮಾಡಿ ಮಾರುತ್ತಾರೆ.</p>
<p style="text-align:justify;">ಆರೋಗ್ಯವೂ ನಷ್ಟ, ಅಮೂಲ್ಯ ಸಂಪತ್ತೂ ನಷ್ಟವಾಗುತ್ತದೆ. ಕೆಲವಂತೂ ನೂರಕ್ಕೆ ನೂರು ನಷ್ಟ. ಉದಾಹರಣೆಗೆ ಪೆಟ್ರೋಲ್ ಹೊಗೆಯನ್ನು ಕಮ್ಮಿ ಮಾಡಲೆಂದು ಪ್ಲಾಟಿನಂ ಲೋಹವನ್ನು ವಾಹನಗಳ ವೇಗವರ್ಧಕ ಕನ್ವರ್ಟರ್‌ನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸೇರಿಸುತ್ತಾರೆ. ಅದು ವಾಯುಮಂಡಲಕ್ಕೆ ಸೇರುತ್ತದೆ. ನಾಳೆ ಪೆಟ್ರೋಲ್ ಖಾಲಿಯಾಗಿ ಬ್ಯಾಟರಿ ಚಾಲಿತ ವಾಹನಗಳು ಬಂದರೆ ಅವುಗಳ ಇಂಧನಕೋಶದಲ್ಲೂ ಪ್ಲಾಟಿನಂ ಬಳಕೆಯಾಗಲಿದೆ. ಹಾಗೊಂದಾದರೆ 15 ವರ್ಷಗಳಲ್ಲಿ ಜಗತ್ತಿನ ಎಲ್ಲ ಪ್ಲಾಟಿನಂ ಚದುರಿಹೋಗುತ್ತದೆ. ಬ್ರಿಟನ್ನಿನ ಕಾರ್ಡಿಫ್ ವಿವಿಯ ಭೂವಿಜ್ಞಾನಿ ಹೇಝೆಲ್ ಪ್ರಿಚರ್ಡ್ ಎಂಬಾಕೆ ರಸ್ತೆಯ ದೂಳಿನಲ್ಲಿ ಪ್ಲಾಟಿನಂ ಎಷ್ಟಿದೆಯೆಂದು ಅಳೆಯುತ್ತ ದೂಳು ಸಂಸ್ಕರಣೆಯ ಪ್ರಸ್ತಾವನೆ ಮುಂದಿಟ್ಟಿದ್ದರು.</p>
<p style="text-align:justify;">ಅಂದ ಹಾಗೆ, ನಮ್ಮಲ್ಲೂ ಕೇರಳದ ಕಡಲ ತೀರದ ಮೊನಝೈಟ್ ಮರಳಿನಲ್ಲಿ ಥೋರಿಯಂ ಮತ್ತು ಯುರೇನಿಯಂ ಜತೆಗೆ ಅತ್ಯಲ್ಪ ಪ್ರಮಾಣದಲ್ಲಿ ರೇರ್‌ಅರ್ಥ್ ಧಾತುಗಳ ಸಂಸ್ಕರಣೆಯೂ ನಡೆದಿದೆ. ಅಲ್ಲಿ ಅಂಗವಿಕಲ ಮಕ್ಕಳು ಜನಿಸುತ್ತಿವೆ, ಕ್ಯಾನ್ಸರ್ ರೋಗಿಗಳ ಹಾಗೂ ನಪುಂಸಕರ ಪ್ರಮಾಣ ತೀರಾ ಹೆಚ್ಚಿದೆ ಎಂದು ವೈದ್ಯ ವಿಜ್ಞಾನಿಗಳು ಹಿಂದೆ ವರದಿ ಮಾಡಿದ್ದರು. ಇದರಿಂದ ಎಚ್ಚೆತ್ತ ಅಣುಶಕ್ತಿ ಇಲಾಖೆ ಅಂಥ ಸಮೀಕ್ಷೆ, ಸಂಶೋಧನೆಗಳಿಗೆ ತನ್ನ ವಿನಾ ಯಾರೂ ತಲೆ ಹಾಕಕೂಡದೆಂದು ಎಲ್ಲ ಸ್ವತಂತ್ರ ತನಿಖೆಗಳಿಗೂ ದಿಗ್ಬಂಧನ ಹಾಕಿದೆ.</p>
<p style="text-align:justify;">ಹಾರ್ಡ್‌ವೇರ್ ಉದ್ಯಮ ನಮ್ಮಲ್ಲಿ ಅಷ್ಟಾಗಿ ಬೆಳೆದಿಲ್ಲದ ಕಾರಣ, ರೇರ್‌ಅರ್ಥ್ ಧಾತುಗಳು ನಮ್ಮಲ್ಲೇನೂ ನಿರ್ವಂಶ ಆಗಲಿಕ್ಕಿಲ್ಲ. ಹೆಚ್ಚೆಂದರೆ ರೇರ್‌ಅರ್ಥ್ ಗಣಿಗಾರಿಕೆ ನಡೆಯುವಲ್ಲಿ ಹಲಕೆಲವು ಕಾರ್ಮಿಕರು ನಿರ್ವಂಶ ಆದಾರು!!       </p>
<p style="text-align:justify;"><a href="http://prajavani.net/Content/Nov182010/nagesh20101117213395.asp" target="_blank">Copyright: 2009 The Printers (Mysore) Private Ltd., 75, M.G. Road, Post Box No 5331, Bangalore &#8211; 560001</a></p>
<p style="text-align:justify;"> </p>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1657/"><img alt="" border="0" src="http://feeds.wordpress.com/1.0/comments/beluru.wordpress.com/1657/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1657/"><img alt="" border="0" src="http://feeds.wordpress.com/1.0/delicious/beluru.wordpress.com/1657/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1657/"><img alt="" border="0" src="http://feeds.wordpress.com/1.0/facebook/beluru.wordpress.com/1657/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1657/"><img alt="" border="0" src="http://feeds.wordpress.com/1.0/twitter/beluru.wordpress.com/1657/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1657/"><img alt="" border="0" src="http://feeds.wordpress.com/1.0/stumble/beluru.wordpress.com/1657/" /></a> <a rel="nofollow" href="http://feeds.wordpress.com/1.0/godigg/beluru.wordpress.com/1657/"><img alt="" border="0" src="http://feeds.wordpress.com/1.0/digg/beluru.wordpress.com/1657/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1657/"><img alt="" border="0" src="http://feeds.wordpress.com/1.0/reddit/beluru.wordpress.com/1657/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1657&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%ae%e0%b2%b0%e0%b2%a3%e0%b2%b6%e0%b2%af%e0%b3%8d%e0%b2%af%e0%b3%86%e0%b2%af/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>

		<media:content url="http://mitramaadhyama.co.in/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>

		<media:content url="http://mitramaadhyama.co.in/wp-content/uploads/2009/09/NH-column-artwork.jpg" medium="image">
			<media:title type="html">NH-column-artwork</media:title>
		</media:content>
	</item>
		<item>
		<title>ನಾಗೇಶ್‌ ಹೆಗಡೆ: ಶತಕೋಟಿ ಚೀನೀಯರು ಕುಪ್ಪಳಿಸಿದಾಗ&#8230;</title>
		<link>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%b6%e0%b2%a4%e0%b2%95%e0%b3%8b%e0%b2%9f%e0%b2%bf-%e0%b2%9a%e0%b3%80%e0%b2%a8/</link>
		<comments>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%b6%e0%b2%a4%e0%b2%95%e0%b3%8b%e0%b2%9f%e0%b2%bf-%e0%b2%9a%e0%b3%80%e0%b2%a8/#comments</comments>
		<pubDate>Sat, 18 Dec 2010 10:07:40 +0000</pubDate>
		<dc:creator>beluru</dc:creator>
				<category><![CDATA[ನಾಗೇಶ ಹೆಗಡೆ ಕಾಲಂ]]></category>
		<category><![CDATA[mitramaadhyama]]></category>
		<category><![CDATA[nagesh hegde]]></category>

		<guid isPermaLink="false">http://beluru.wordpress.com/?p=1654</guid>
		<description><![CDATA[ನಗರದ ಬೆಳಕಿನ ಮಾಲಿನ್ಯದಿಂದ ದೂರವಾಗಿ, ಮಿಥುನರಾಶಿಯಿಂದ ಬರುವ ಮನ್ಮಥಬಾಣಗಳನ್ನು ನೋಡಿ ಚಕಿತರಾಗೋಣ. ಉಲ್ಕಾಪಾತ ನೋಡಲು ಹೈಟೆಕ್ ತಂತ್ರಜ್ಞಾನ ಬೇಕಿಲ್ಲ. ಹಳ್ಳಿಯ ನಿಚ್ಚಳ ಆಕಾಶ ಸಾಕು; ಸ್ವೆಟರ್ ತೊಟ್ಟು ಸಂಗಾತಿಯೊಂದಿಗೆ ರಾತ್ರಿ ಅಂಗಳಕ್ಕಿಳಿದು ಬರಿಗಣ್ಣಿನಲ್ಲಿ ಆಕಾಶ ನೋಡೋಣ. ಪಶ್ಚಿಮಕ್ಕಲ್ಲ, ಪೂರ್ವಕ್ಕೆ ಮುಖ ಮಾಡಿ! ಇದು ಉಲ್ಕಾವೃಷ್ಟಿಯ ವಾರ. ಇಂದು ರಾತ್ರಿ ಹತ್ತರ ನಂತರ ಪೂರ್ವ ದಿಕ್ಕಿನ ಆಕಾಶದತ್ತ ನೋಡಿ. ಪ್ರತಿ ಒಂದೆರಡು ನಿಮಿಷಗಳಿಗೊಮ್ಮೆ ಬಂಗಾರದ ಬಾಣದಂತೆ ಉಲ್ಕೆಯೊಂದು ಉದ್ದ ಗೀರು ಮಾಡಿ ಮಾಯವಾಗುತ್ತದೆ. ಒಂದರ ನಂತರ ಒಂದರಂತೆ ಗಂಟೆಗೆ [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1654&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:justify;">ನಗರದ ಬೆಳಕಿನ ಮಾಲಿನ್ಯದಿಂದ ದೂರವಾಗಿ, ಮಿಥುನರಾಶಿಯಿಂದ ಬರುವ ಮನ್ಮಥಬಾಣಗಳನ್ನು ನೋಡಿ ಚಕಿತರಾಗೋಣ. ಉಲ್ಕಾಪಾತ ನೋಡಲು ಹೈಟೆಕ್ ತಂತ್ರಜ್ಞಾನ ಬೇಕಿಲ್ಲ. ಹಳ್ಳಿಯ ನಿಚ್ಚಳ ಆಕಾಶ ಸಾಕು; ಸ್ವೆಟರ್ ತೊಟ್ಟು ಸಂಗಾತಿಯೊಂದಿಗೆ ರಾತ್ರಿ ಅಂಗಳಕ್ಕಿಳಿದು ಬರಿಗಣ್ಣಿನಲ್ಲಿ ಆಕಾಶ ನೋಡೋಣ. ಪಶ್ಚಿಮಕ್ಕಲ್ಲ, ಪೂರ್ವಕ್ಕೆ ಮುಖ ಮಾಡಿ!<img title="More..." src="http://mitramaadhyama.co.in/wp-includes/js/tinymce/plugins/wordpress/img/trans.gif" alt="" /><span id="more-1654"></span></p>
<p><img class="alignleft" title="NH-column-artwork" src="http://mitramaadhyama.co.in/wp-content/uploads/2009/09/NH-column-artwork.jpg" alt="" width="228" height="228" /></p>
<p style="text-align:justify;">ಇದು ಉಲ್ಕಾವೃಷ್ಟಿಯ ವಾರ. ಇಂದು ರಾತ್ರಿ ಹತ್ತರ ನಂತರ ಪೂರ್ವ ದಿಕ್ಕಿನ ಆಕಾಶದತ್ತ ನೋಡಿ. ಪ್ರತಿ ಒಂದೆರಡು ನಿಮಿಷಗಳಿಗೊಮ್ಮೆ ಬಂಗಾರದ ಬಾಣದಂತೆ ಉಲ್ಕೆಯೊಂದು ಉದ್ದ ಗೀರು ಮಾಡಿ ಮಾಯವಾಗುತ್ತದೆ. ಒಂದರ ನಂತರ ಒಂದರಂತೆ ಗಂಟೆಗೆ 30-40 ಉಲ್ಕೆಗಳು ರಾತ್ರಿಯಿಡೀ ಉದುರುತ್ತಿರುತ್ತವೆ.</p>
<p style="text-align:justify;">ಕಳೆದ ಐದಾರು ರಾತ್ರಿಗಳಿಂದ ಈ ಅಚ್ಚರಿ ಘಟಿಸುತ್ತಿದೆ. ಮೊನ್ನೆ ಮಂಗಳವಾರ ರಾತ್ರಿ ಗರಿಷ್ಠ, ಅಂದರೆ ಗಂಟೆಗೆ ನೂರು ಉಲ್ಕೆಗಳು ಕಾಣಿಸುತ್ತಿದ್ದವು. ನಾಳೆ, ನಾಡಿದ್ದು ಅವು ಕಮ್ಮಿಯಾಗುತ್ತ ಹೋಗುತ್ತವೆ. ಮತ್ತೆ ಮುಂದಿನ ವರ್ಷ ಡಿಸೆಂಬರ್‌ನಲ್ಲೇ ಅವು ಅಷ್ಟೊಂದು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ಜೆಮಿನಿ (ಮಿಥುನ) ನಕ್ಷತ್ರಪುಂಜದಿಂದ ಬಂದಂತೆ ಕಾಣುವುದರಿಂದ ಇವಕ್ಕೆ ‘ಜೆಮಿನಿಡ್’ ಉಲ್ಕಾಪಾತ ಎನ್ನುತ್ತಾರೆ. ಹೀಗೇ ಆಗಸ್ಟ್‌ನಲ್ಲಿ ಪರ್ಸೀಸ್ ಪುಂಜದಿಂದ ‘ಪರ್ಸೀಡ್’ ಹಾಗೂ ನವೆಂಬರ್‌ನಲ್ಲಿ ಲಿಯೊ (ಸಿಂಹ) ರಾಶಿಯಿಂದ ‘ಲಿಯೊನಿಡ್’ ಉಲ್ಕಾವೃಷ್ಟಿ ಆಗುತ್ತದೆ. ಆದರೆ ಎಲ್ಲಕ್ಕಿಂತ ತೇಜದ್ದು ಮತ್ತು ಕೌತುಕದ್ದು ಈಗಿನ ಈ ಜೆಮಿನಿಡ್.</p>
<p style="text-align:justify;">ಉಲ್ಕೆಗಳು ದೂರದ ನಕ್ಷತ್ರಗಳಿಂದ ಬರುವುದಿಲ್ಲ. ನಮ್ಮ ಸೌರಮಂಡಲದಲ್ಲೇ ಅಲ್ಲಲ್ಲಿ ಪುಡಿಚೆಂಡುಗಳು ಭೂಮಿಗಿಂತ ಬೇರೆ ಕಕ್ಷೆಯಲ್ಲಿ, ವಿಭಿನ್ನ ವೇಗದಲ್ಲಿ ಸೂರ್ಯನನ್ನು ಸುತ್ತುತ್ತಿರುತ್ತವೆ. ಭೂಮಿ ತನ್ನ ಕಕ್ಷೆಯಲ್ಲಿ ಸಾಗುವಾಗ ಈ ಪುಡಿರಾಶಿ ಅಡ್ಡಬರುತ್ತದೆ. ಭೂಮಿ ಅದನ್ನು ಸೀಳಿಕೊಂಡು ಸಾಗುವಾಗ ಕೋಟ್ಯಂತರ ಪುಡಿಗಳು ವಾತಾವರಣದ ಘರ್ಷಣಕ್ಕೆ ಸಿಕ್ಕು ಉಲ್ಕೆಗಳಾಗಿ ಉರಿದು ಬಾಣದಂತೆ ಚಲಿಸಿ ಕರಕಲಾಗಿ ಚದುರುತ್ತವೆ. ಅಪರೂಪಕ್ಕೆ ಮುಷ್ಟಿಗಾತ್ರದ ಬಂಡೆಗಲ್ಲು ಸಿಕ್ಕರಂತೂ ಬೆಂಕಿಯ ಚೆಂಡಿನಂತೆ ಜಾಸ್ತಿ ಉರಿದು ಸುಂದರ ಶೋ ಕೊಡುತ್ತವೆ. ನೆಲದ ಮೇಲಿದ್ದ ನಮಗೆ ಈ ಉಲ್ಕೆಗಳು ದೂರದ ತಾರಾಪುಂಜದಿಂದ ಬಂದಂತೆ ಕಾಣುವುದರಿಂದ ಆಯಾ ತಾರಾಪುಂಜಗಳ ಹೆಸರನ್ನೇ ಅವಕ್ಕೆ ಇಡಲಾಗಿದೆ.</p>
<p style="text-align:justify;">ದೂಳಿನ ಪುಡಿರಾಶಿ ಹೇಗೆ ಬಂದವು, ಸೂರ್ಯನ ಸುತ್ತ ಏಕೆ ಸುತ್ತುತ್ತವೆ ಎಂಬುದಕ್ಕೆ ಎರಡು ಮುಖ್ಯ ಕಾರಣ ಇವೆ: ಹಿಂದೆಂದೋ ಇಡಿಯಾಗಿದ್ದ ಕ್ಷುದ್ರಗ್ರಹವೊಂದು ಯಾವುದೋ ಕಾರಣದಿಂದ ಸಿಡಿದು ಪುಡಿಯಾಗಿರಬಹುದು. ಸಿಡಿದರೂ ದೂರ ಹೋಗಲಾರದೆ, ಹಿಂದೀ ಚಿತ್ರರಂಗದ ಕಪೂರ್ ಮನೆತನದವರ ಹಾಗೆ ಪರಸ್ಪರ ಸನಿಹದಲ್ಲೇ  ವಾಸಿಸುತ್ತವೆ. ಇವರು ಬಾಲಿವುಡ್ ಸುತ್ತ ಸುತ್ತುವ ಹಾಗೆ ಅವೂ ಅಭ್ಯಾಸಬಲದಿಂದ ಸೂರ್ಯನ ಪ್ರದಕ್ಷಿಣೆ ಹಾಕುತ್ತಿರುತ್ತವೆ. ಎರಡನೆಯ ಕಾರಣವೆಂದರೆ, ಧೂಮಕೇತುವೊಂದು ಸೂರ್ಯನ ಸಮೀಪ ಬಂದಾಗ ಅದರ ತಲೆಯ ಹಿಮಶಿಲೆ ಕರಗಿ ಅದರಲ್ಲಿದ್ದ ತಾರಾಪುಡಿಯೆಲ್ಲ ಭೂಮಿಯ ಪಥಕ್ಕೆ ಅಡ್ಡ ಬಂದಾಗ ಉಲ್ಕಾಬಾಣ ಸುರಿಸುತ್ತವೆ.</p>
<p style="text-align:justify;">ಜೆಮಿನಿಡ್ ಉಲ್ಕಾಪಾತಕ್ಕೆ ಇವೆರಡೂ ಕಾರಣವಲ್ಲ. ಏಕೆಂದರೆ ಈ ಉಲ್ಕೆಗಳೆಲ್ಲ ಒಂದು ಇಡಿಯಾದ ಕ್ಷುದ್ರಗ್ರಹದಿಂದ ಬರುತ್ತಿವೆ ಎಂಬುದು 1983ರಲ್ಲಿ ಪತ್ತೆಯಾಯಿತು. ಪುಟ್ಟ, ಐದು ಕಿಲೊಮೀಟರ್ ದಪ್ಪದ ಅದಕ್ಕೆ ‘ಫೇಥಿಯಾನ್’ ಎಂದು ಹೆಸರಿಡಲಾಯಿತು. ಮುಂದಿನ ಕೌತುಕದ ಪ್ರಶ್ನೆ ಏನೆಂದರೆ ಇದು ಯಾಕೆ, ಬಳ್ಳಾರಿ-ಹೊಸಪೇಟೆಯ ಗಣಿ ಲಾರಿಗಳ ಹಾಗೆ ದೂಳನ್ನು ಕೊಡವುತ್ತ ಸಾಗುತ್ತದೆ?</p>
<p style="text-align:justify;">ಕಳೆದ ವರ್ಷ ಫೇಥಿಯಾನ್ ಇನ್ನೊಂದು ಚಮತ್ಕಾರವನ್ನು ಪ್ರದರ್ಶಿಸಿತು. ಸೂರ್ಯನ ಬಳಿ ಸಾಗುವಾಗ ಅದು ಥೇಟ್ ಧೂಮಕೇತುವಿನ ಹಾಗೆ ಕಿಡಿಗಳನ್ನು ಸಿಡಿಸಿ ಮತ್ತೆ ಇಡಿಯಾಗಿ ಈಚೆ ಬಂತು. ಹಾಗಿದ್ದರೆ ಇದೊಂದು ಶಿಲಾಧೂಮಕೇತು ಎಂದು ಕೆಲವರು ತರ್ಕಿಸಿದರು. ಈಚಿನ ಶೋಧದ ಪ್ರಕಾರ ಮಂಗಳ ಮತ್ತು ಗುರುವಿನ ನಡುವೆ ತಂಡ ಕಟ್ಟಿಕೊಂಡು ಸುತ್ತುವ ನೂರಾರು ಕ್ಷುದ್ರಗ್ರಹಗಳ ಪೈಕಿ 340 ಕಿಮೀ ಅಗಲದ ‘ಪಲ್ಲಾಸ್’ ಎಂಬ ಕ್ಷುದ್ರಗ್ರಹದ ಒಂಬತ್ತು ತುಣುಕುಗಳಲ್ಲಿ ಇದೂ ಒಂದು. ಆದರೆ ಇದು ಮಾತ್ರ ಅರಳು ಹುರಿದಂತೆ ಕಲ್ಲುಗಳನ್ನೇಕೆ ಸಿಡಿಸುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.  </p>
<p style="text-align:justify;">ಆಕಾಶದ ಉಲ್ಕೆಗಳನ್ನು ಬಿಟ್ಟು ಈಚೆ ಬರೋಣ. ಈಚೀಚೆಗೆ ಮಾಧ್ಯಮಗಳಲ್ಲೂ ಉಲ್ಕೆಗಳ ಸುರಿಮಳೆ ಆಗುತ್ತಿದೆ. ಒಂದೆಡೆ ವಿಕಿಲೀಕ್ಸ್ ಉಲ್ಕಾವರ್ಷ, ಇನ್ನೊಂದೆಡೆ ಟೂಜಿ- ರಾಡಿಯಾ ಉಲ್ಕಾಪಾತ. ಈ ಮಧ್ಯೆ ಕಣ್ಣು ಕೋರೈಸುವಂತೆ ಒಮ್ಮೆ ಒಬಾಮಾ, ಇನ್ನೊಮ್ಮೆ ಸಾರ್ಕೋಝಿ, ಇಂದು ಚೀನಾದ ವೆನ್ ಜಿಯಾಬೊ, ಅವರ ನಂತರ ರಷ್ಯದ ಪುತಿನ್ ಹೀಗೆ ಸಾಲುಸಾಲು ಛಮಕ್.</p>
<p style="text-align:justify;">ಉಲ್ಕೆಗಳನ್ನು ಕಂಡಾಕ್ಷಣ ಏನನ್ನೇ ಬಯಸಿದರೂ ಬಯಕೆ ಈಡೇರುತ್ತದೆ ಎಂಬ ನಂಬಿಕೆ ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿದೆ. ದಿಲ್ಲಿಯಲ್ಲಿದ್ದವರು ಬಾಣ ಬಿರುಸುಗಳನ್ನೇ ಬಯಸುತ್ತಿರಬೇಕು. ಒಬಾಮಾ ಪರಮಾಣು ತಂತ್ರ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವ ಭರವಸೆ ನೀಡಿದರೆ, ಸಾರ್ಕೋಝಿ ಅಣುಸ್ಥಾವರಗಳನ್ನೂ ಫೈಟರ್ ಜೆಟ್‌ಗಳನ್ನೂ ಪೂರೈಸಲು ವಾಗ್ದಾನ ಮಾಡಿ ಹೋಗಿದ್ದಾರೆ. ಎಲ್ಲವೂ ಬಹು ಬಿಲಿಯನ್ ಲೆಕ್ಕಾಚಾರ. ಈಗ ಚೀನಾದ ವೆನ್ ಅದೆಂಥ ಶತಕೋಟಿ ಪ್ರಸ್ತಾವನೆ ತಂದಾರು?</p>
<p style="text-align:justify;">ಪತ್ರಕರ್ತ ಜೊನಾಥಾನ್ ವ್ಯಾಟ್ಸ್ ಎಂಬಾತ ಈಚೆಗೆ ‘ಶತಕೋಟಿ ಚೀನೀಯರು ಕುಪ್ಪಳಿಸಿದಾಗ’ ಎಂಬ ಕೌತುಕದ ಶಿರೋನಾಮೆಯ ಗ್ರಂಥ ಬರೆದು ಭಾರೀ ಚರ್ಚೆಯ, ಆತಂಕದ, ಆಶಾವಾದದ ಅಲೆಗಳನ್ನು ಹಬ್ಬಿಸಿದ್ದಾನೆ. ಈತ ಬ್ರಿಟನ್ನಿನ ‘ಗಾರ್ಡಿಯನ್’ ಪತ್ರಿಕೆಯ ಪರಿಸರ ಬಾತ್ಮೀದಾರನಾಗಿ ಚೀನಾದಲ್ಲಿ 12 ವರ್ಷಗಳಿಂದ ಇದ್ದು, ಇಡೀ ದೇಶವನ್ನು ಸುತ್ತಾಡಿ ಅಲ್ಲಿನ ಅಭಿವೃದ್ಧಿಯ ವಿರಾಟ್ ರೂಪವನ್ನೂ ಅದರಿಂದಾದ ಅನರ್ಥಗಳನ್ನೂ ದಾಖಲಿಸಿದ್ದಾನೆ. ಚೀನಾದ ನೂರು ಕೋಟಿ ಪ್ರಜೆಗಳು ಒಮ್ಮೆಲೇ ಕುಪ್ಪಳಿಸಿದರೆ ಇಡೀ ಭೂಮಿಯೇ ಹೊಯ್ದಾಡಿ, ತನ್ನ ಅಕ್ಷದಿಂದ ಪಲ್ಟಿ ಹೊಡೆಯುತ್ತದೆ ಎಂದು ಅಮೆರಿಕ, ಯುರೋಪ್‌ನವರು ತಮ್ಮ ಮಕ್ಕಳಲ್ಲಿ ಭಯಬಿಂಬ ಮೂಡಿಸುತ್ತಾರೆ. ಗ್ರಂಥಕರ್ತ ವ್ಯಾಟ್ಸ್ ಚಿಕ್ಕವನಿದ್ದಾಗ ದಿನಾಲೂ ಮಲಗುವ ಮುನ್ನ ‘ದೇವರೇ, ನಮ್ಮನ್ನೆಲ್ಲ ಕಾಪಾಡು, ಚೀನೀಯರು ಏಕತ್ರವಾಗಿ ಕುಪ್ಪಳಿಸದ ಹಾಗೆ ಮಾಡು’ ಎಂದು ಪ್ರಾರ್ಥನೆ ಮಾಡುತ್ತಿದ್ದನಂತೆ.</p>
<p style="text-align:justify;">ಎಂಥವರನ್ನೂ ತಲ್ಲಣಗೊಳಿಸುವ ಅನೇಕ ಅಂಕಿ ಅಂಶಗಳು ಈ ಗ್ರಂಥದಲ್ಲಿವೆ: ಇನ್ನು ಹದಿನೈದು ವರ್ಷಗಳಲ್ಲಿ ಜಗತ್ತಿನ ಒಟ್ಟೂ ಕಟ್ಟಡಗಳಲ್ಲಿ ಅರ್ಧಪಾಲು ಚೀನಾದಲ್ಲೇ ಇರುತ್ತವೆ. ಅವುಗಳಲ್ಲಿ 50 ಸಾವಿರ ಕಟ್ಟಡಗಳು, ಅಂದರೆ ಹತ್ತು ನ್ಯೂಯಾರ್ಕ್‌ಗಳಲ್ಲಿರುವಷ್ಟು ವಸತಿ- ಕಚೇರಿಗಳು ಗಗನಚುಂಬಿಗಳೇ ಆಗಿರುತ್ತವೆ. ಅಭಿವೃದ್ಧಿಯ ಹುಚ್ಚು ಹಿಡಿಸಿಕೊಂಡಂತೆ ಚೀನೀಯರು ಕಳೆದ ಮೂವತ್ತು ವರ್ಷಗಳಲ್ಲಿ 87 ಸಾವಿರ ಅಣೆಕಟ್ಟು ಕಟ್ಟಿದ್ದಾರೆ. ಕಲ್ಲಿದ್ದಲು ಗಣಿಗಳಲ್ಲಿ 176 ಸಾವಿರ ಕಾರ್ಮಿಕರು ಜೀವ ತೆತ್ತಿದ್ದಾರೆ; ವಾರಕ್ಕೊಂದು ಹೊಸ ಉಷ್ಣ ವಿದ್ಯುತ್ ಸ್ಥಾವರ ತಲೆ ಎತ್ತುತ್ತಿದೆ; ಉದ್ಯಮಗಳ ಕಿಷ್ಕಿಂಧೆ ಎನಿಸಿದ ಗ್ವಾಂಗ್‌ಡೋಂಗ್ ಮತ್ತು ಫ್ಯುಜಿಯನ್ ಪ್ರಾಂತಗಳಿಂದ 830 ಕೋಟಿ ಟನ್ ಕಚಡಾ ದ್ರವ್ಯಗಳನ್ನು ಸಮುದ್ರಕ್ಕೆ ಬಿಟ್ಟಿದ್ದಾರೆ.</p>
<p style="text-align:justify;">1997ರಲ್ಲಿ ಇಡೀ ಜಗತ್ತು ಉತ್ಪಾದಿಸಿದಷ್ಟು ಕಚಡಾ ತಿಪ್ಪೆಗಳನ್ನು ಅದೊಂದೇ ದೇಶ 2006ರಲ್ಲಿ ಬಿಸಾಕಿದೆ. ಅಲ್ಲಿ ಕಾರು, ಲಾರಿ, ಹಡಗು, ರೈಲು, ವಿಮಾನಗಳ ಸಂಖ್ಯೆ ಅದೆಷ್ಟು ಹೆಚ್ಚಾಗಿದೆ ಎಂದರೆ ಇಡೀ ಪೃಥ್ವಿಯ ವಾಯುಮಂಡಲದಲ್ಲಿನ ಮಲಿನ ಕಣಗಳಲ್ಲಿ ಅರ್ಧ ಪಾಲು ಚೀನಾದಿಂದಲೇ ಹೊಮ್ಮಿದ್ದಾಗಿದೆ.</p>
<p style="text-align:justify;">ಈ ಮೂರು ದಶಕಗಳಲ್ಲಿ ಅಲ್ಲಿ ಧ್ವಂಸವಾದ ಅರಣ್ಯಗಳನ್ನೂ ಬತ್ತಿ ಹೋದ ನದಿಗಳನ್ನೂ ಕೆಂದೂಳಿನ ಮರುಭೂಮಿಯಾದ ಸರೋವರಗಳನ್ನೂ ಈತ ಪಟ್ಟಿ ಮಾಡುತ್ತ ಹೋಗುತ್ತಾನೆ. ಮೃಗಾಲಯಗಳಲ್ಲಿ ಪಂಜರಗಳ ಎದುರು, ಆಯಾ ಪ್ರಾಣಿಯನ್ನು ಹೆಸರಿಸಿ, ಅದರ ಯಾವ ಯಾವ ಅಂಗಗಳು ತಿನ್ನಲು ಹಾಗೂ ಔಷಧಕ್ಕೆ ಯೋಗ್ಯ ಎಂಬ ಫಲಕವನ್ನು ಹಾಕುವ ಪರಿಪಾಠ 1993ರವರೆಗೂ ಇತ್ತೆಂಬುದನ್ನು ಮನಕಲಕುವಂತೆ ವಿವರಿಸುತ್ತಾನೆ. ಕ್ಯಾನ್ಸರ್‌ನಿಂದ ನರಳುತ್ತಿರುವ ಗ್ರಾಮಗಳ ಕರುಣಾಜನಕ ಚಿತ್ರಣ ನೀಡುತ್ತಾನೆ. ಪ್ರತಿವರ್ಷ ಬಳಸಿ ಬಿಸಾಕುವ 120 ಶತಕೋಟಿ ಊಟದ ಕಡ್ಡಿಗಳಿಗೆಂದು ನೆಲಸಮವಾಗುವ ಅರಣ್ಯಗಳ ಬಗ್ಗೆ ಹೇಳುತ್ತಾನೆ. ಜೀವದ್ರವ್ಯ ಅನ್ನಿ, ತಾಂತ್ರಿಕ ಸಾಮಗ್ರಿ ಅನ್ನಿ, ಶೋಕಿವಸ್ತು ಅನ್ನಿ, ಶಸ್ತ್ರಾಸ್ತ್ರ ಅನ್ನಿ, ಸಂಶೋಧನೆ ಅನ್ನಿ, ನಿರ್ಮಾಣ ಅನ್ನಿ, ಜಗತ್ತಿನ ಎಲ್ಲೇ ಯಾರೇ ಏನೇ ಮಾಡಿದರೂ ಅದಕ್ಕಿಂತ ಶೀಘ್ರವಾಗಿ, ಉತ್ತಮವಾಗಿ, ಎಗ್ಗಿಲ್ಲದೆ ಮಾಡಿ ಬಿಸಾಕುವ ಅವರು ಈಗೀಗ ತಮ್ಮ ನೆಲ ಸಾಲದೆಂದು ಬೇರೆ ದೇಶಗಳ ನಿಸರ್ಗ ಸಂಪತ್ತುಗಳಿಗೆ ಲಗ್ಗೆ ಹಾಕುತ್ತಿರುವ ಪರಿಯನ್ನು ವರ್ಣಿಸುತ್ತಾನೆ. ಖಚಿತ, ನಿರ್ವಿವಾದದ ಅಂಕಿ-ಅಂಶಗಳನ್ನು ಮುಂದಿಡುತ್ತಾನೆ.</p>
<p style="text-align:justify;">ಚೀನಾದ ಈ ಪರಿಯ ಅಭಿವೃದ್ಧಿಯ ದಾಂಗುಡಿ ನಮ್ಮ ಕಾಲ ಬಳಿಯೂ ಬಂದಿದೆ. ಗೋವಾ, ಬಳ್ಳಾರಿಗಳೆಲ್ಲ ಅದುರಿನ ಉರಿ ಬಾಣಲೆಯಾಗಿದ್ದು, ಬಂದರುಗಳಲ್ಲೆಲ್ಲ ದೂಳಿನ ರಾಡಿ ರಾಚಿದ್ದು, ಜನನಾಯಕರ ನೈತಿಕತೆ ನೆಲಕಚ್ಚಿದ್ದು, ಊರೂರೂ ಪ್ಲಾಸ್ಟಿಕ್ ತಿಪ್ಪೆಗುಂಡಿಯಾಗಿದ್ದು ಎಲ್ಲದರಲ್ಲೂ ಚೀನೀ ಹೆಜ್ಜೆಗುರುತು ಢಾಳಾಗಿ ಕಾಣುತ್ತದೆ. ಅವಸರದ ಅಭಿವೃದ್ಧಿಯ ಫಲಶ್ರುತಿಗಳು ನಮ್ಮಲ್ಲೂ ಕಾಣುತ್ತಿವೆ.</p>
<p style="text-align:justify;">ನಮ್ಮಲ್ಲಿ ಕಾಣದ ಅನೇಕ ಸಂಗತಿಗಳು ಅಲ್ಲಿ ಕಾಣುತ್ತಿವೆ. ಚೀನೀಯರು ತಮ್ಮ ತಪ್ಪನ್ನು ತ್ವರಿತವಾಗಿ ತಿದ್ದಿಕೊಳ್ಳುತ್ತಿದ್ದಾರೆ. ಇಂದು ಜಗತ್ತಿನ ಅತಿ ಹೆಚ್ಚು ಸೌರ ವಿದ್ಯುತ್ ಫಲಕಗಳು, ಗಾಳಿಯಂತ್ರಗಳು ಅಲ್ಲಿ ಕಾಣುತ್ತಿವೆ. ಪೋಪ್ಲಾರ್ ವೃಕ್ಷಗಳ ಸೂಪರ್ ತಳಿಗಳನ್ನು ಉತ್ತರ ಚೀನಾದಲ್ಲಿ ಕೋಟಿಗಟ್ಟಲೆ ಬೆಳೆಸುತ್ತಿದ್ದಾರೆ. ಸಮುದ್ರಬೇಟೆಗಿಂತ ಜಾಸ್ತಿ ಮೀನನ್ನು ಒಳನಾಡಿನಲ್ಲೇ ಪಡೆದ ಮೊದಲ ದೇಶವೆಂಬ ಅಗ್ಗಳಿಕೆ ಗಳಿಸಿದ್ದಾರೆ. ಕಲ್ಲಿದ್ದಲನ್ನು ದ್ರವೀಕರಿಸಿ ಉರಿಸುವ ಶುದ್ಧ ಉಷ್ಣಸ್ಥಾವರಗಳು ತಲೆ ಎತ್ತುತ್ತಿವೆ. ಕಡುಭ್ರಷ್ಟರನ್ನು ಕಚಕ್ಕೆಂದು ಮುಗಿಸಬಲ್ಲ ಸಂಚಾರಿ ಶವಗಾಡಿಗಳನ್ನು ನ್ಯಾಯಾಲಯದ ಬಳಿಯೇ ನಿಲ್ಲಿಸಿರುತ್ತಾರೆ.</p>
<p style="text-align:justify;">ನಮ್ಮಲ್ಲಿದ್ದಷ್ಟು ಶತಕೋಟ್ಯಧೀಶರೂ ಅಲ್ಲಿಲ್ಲ. ನಮ್ಮಲ್ಲಿದ್ದಷ್ಟು ಕಡುಬಡವರೂ ಅಲ್ಲಿಲ್ಲ. ನಮ್ಮಂತೆ ಅಲ್ಲಿನ  ಹೆಚ್ಚಿನ ಶತಕೋಟ್ಯಧೀಶರು ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿಲ್ಲ; ಬದಲಿಗೆ ದಕ್ಷ ಉತ್ಪಾದನೆಯಲ್ಲಿ, ಉಪಯುಕ್ತ ತಂತ್ರಜ್ಞಾನದಲ್ಲಿ ಶತಕೋಟಿ ಗಳಿಸುತ್ತಿದ್ದಾರೆ. ನಮ್ಮಲ್ಲಿ ಪ್ರತಿ ಲಕ್ಷ ಪ್ರಜೆಗೆ 14 ಸಂಶೋಧಕರಿದ್ದರೆ ಅಲ್ಲಿ 465 ಜನರಿದ್ದಾರೆ; ನಾವು ವಿಜ್ಞಾನಕ್ಕೆ ಸುರಿಯುವ ನಾಲ್ಕು ಪಟ್ಟು ಹೆಚ್ಚು ಹಣವನ್ನು ಅವರು ಅದಕ್ಕೆ ವಿನಿಯೋಗಿಸುತ್ತಾರೆ. ನಮ್ಮಂತೆ ಅವರು ಎಂಜಿನಿಯರ್‌ಗಳನ್ನು ವಿಜ್ಞಾನಿಗಳನ್ನು ರಫ್ತು ಮಾಡುತ್ತಿಲ್ಲ; ಬದಲಿಗೆ ಸ್ವದೇಶದಲ್ಲೇ ಬಳಸಿಕೊಳ್ಳುತ್ತಿದ್ದಾರೆ.</p>
<p style="text-align:justify;">ಏಕೆಂದರೆ ಅಲ್ಲಿ ಹೈಡ್ರಾಲಿಕ್ ಎಂಜಿನಿಯರ್ ಒಬ್ಬರು ರಾಷ್ಟ್ರಪತಿ ಆಗಿದ್ದಾರೆ; ಭೂವಿಜ್ಞಾನಿಯೊಬ್ಬರು ಪ್ರಧಾನಿಯಾಗಿದ್ದಾರೆ. ಆ ಪ್ರಧಾನಿ ಈ ಪ್ರಧಾನಿಗೆ ಎಂಥ ಸುಖಾಕ್ರಮಣದ ಸಂದೇಶ ತಂದಿದ್ದಾರೊ, ಎರಡೂ ದೇಶಗಳ ಶತಕೋಟಿ ಪ್ರಜೆಗಳು ಒಟ್ಟಾಗಿ ಕುಪ್ಪಳಿಸುವ ಪ್ರಸ್ತಾವನೆ ಇಡುತ್ತಾರೊ ಅಥವಾ ಸುಸ್ಥಿರ ಅಭಿವೃದ್ಧಿಗಾಗಿ ನಾವೆಲ್ಲ ಪಶ್ಚಿಮಕ್ಕಲ್ಲ, ಪೂರ್ವಕ್ಕೆ ನೋಡುವಂತೆ ಮಾಡುತ್ತಾರೊ ನೋಡಬೇಕು.</p>
<p style="text-align:justify;">ಅಭಿವೃದ್ಧಿಯ ಈ ವಿಚಾರ- ವಿಕಾರಗಳನ್ನೆಲ್ಲ ಬದಿಗಿಡಿ. ನಗರದ ಬೆಳಕಿನ ಮಾಲಿನ್ಯದಿಂದ ದೂರವಾಗಿ, ಮಿಥುನರಾಶಿಯಿಂದ ಬರುವ ಮನ್ಮಥಬಾಣಗಳನ್ನು ನೋಡಿ ಚಕಿತರಾಗೋಣ. ಉಲ್ಕಾಪಾತ ನೋಡಲು ಹೈಟೆಕ್ ತಂತ್ರಜ್ಞಾನ ಬೇಕಿಲ್ಲ. ಹಳ್ಳಿಯ ನಿಚ್ಚಳ ಆಕಾಶ ಸಾಕು; ಸ್ವೆಟರ್ ತೊಟ್ಟು ಸಂಗಾತಿಯೊಂದಿಗೆ ರಾತ್ರಿ ಅಂಗಳಕ್ಕಿಳಿದು ಬರಿಗಣ್ಣಿನಲ್ಲಿ ಆಕಾಶ ನೋಡೋಣ. ಪಶ್ಚಿಮಕ್ಕಲ್ಲ, ಪೂರ್ವಕ್ಕೆ ಮುಖ ಮಾಡಿ!</p>
<p style="text-align:justify;"><a href="http://prajavani.net/Content/Dec162010/nagesh20101215217897.asp" target="_blank">Copyright: 2009 The Printers (Mysore) Private Ltd., 75, M.G. Road, Post Box No 5331, Bangalore &#8211; 560001</a></p>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1654/"><img alt="" border="0" src="http://feeds.wordpress.com/1.0/comments/beluru.wordpress.com/1654/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1654/"><img alt="" border="0" src="http://feeds.wordpress.com/1.0/delicious/beluru.wordpress.com/1654/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1654/"><img alt="" border="0" src="http://feeds.wordpress.com/1.0/facebook/beluru.wordpress.com/1654/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1654/"><img alt="" border="0" src="http://feeds.wordpress.com/1.0/twitter/beluru.wordpress.com/1654/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1654/"><img alt="" border="0" src="http://feeds.wordpress.com/1.0/stumble/beluru.wordpress.com/1654/" /></a> <a rel="nofollow" href="http://feeds.wordpress.com/1.0/godigg/beluru.wordpress.com/1654/"><img alt="" border="0" src="http://feeds.wordpress.com/1.0/digg/beluru.wordpress.com/1654/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1654/"><img alt="" border="0" src="http://feeds.wordpress.com/1.0/reddit/beluru.wordpress.com/1654/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1654&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/12/18/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%b6%e0%b2%a4%e0%b2%95%e0%b3%8b%e0%b2%9f%e0%b2%bf-%e0%b2%9a%e0%b3%80%e0%b2%a8/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>

		<media:content url="http://mitramaadhyama.co.in/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>

		<media:content url="http://mitramaadhyama.co.in/wp-content/uploads/2009/09/NH-column-artwork.jpg" medium="image">
			<media:title type="html">NH-column-artwork</media:title>
		</media:content>
	</item>
		<item>
		<title>ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?</title>
		<link>http://beluru.wordpress.com/2010/11/14/%e0%b2%b5%e0%b2%bf%e0%b2%b7%e0%b2%95%e0%b2%be%e0%b2%b0%e0%b2%bf-%e0%b2%87%e0%b2%82%e0%b2%a7%e0%b2%a8%e0%b2%ac%e0%b2%be%e0%b2%95-%e0%b2%ae%e0%b2%a8%e0%b3%81%e0%b2%95%e0%b3%81%e0%b2%b2-%e0%b2%87/</link>
		<comments>http://beluru.wordpress.com/2010/11/14/%e0%b2%b5%e0%b2%bf%e0%b2%b7%e0%b2%95%e0%b2%be%e0%b2%b0%e0%b2%bf-%e0%b2%87%e0%b2%82%e0%b2%a7%e0%b2%a8%e0%b2%ac%e0%b2%be%e0%b2%95-%e0%b2%ae%e0%b2%a8%e0%b3%81%e0%b2%95%e0%b3%81%e0%b2%b2-%e0%b2%87/#comments</comments>
		<pubDate>Sun, 14 Nov 2010 16:38:16 +0000</pubDate>
		<dc:creator>beluru</dc:creator>
				<category><![CDATA[ಲೇಖನಗಳು]]></category>
		<category><![CDATA[beluru sudarshana]]></category>
		<category><![CDATA[mitramaadhyama]]></category>

		<guid isPermaLink="false">http://beluru.wordpress.com/?p=1650</guid>
		<description><![CDATA[ಮನುಷ್ಯನು ಯಂತ್ರಗಳ ದಾಸನಾಗಿದ್ದಾನೆಯೆ? ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು ಸುತ್ತಲಾರೆ. ಯಂತ್ರಗಳು ಶುದ್ಧೀಕರಿಸಿದ ದಿನಸಿ ವಸ್ತುಗಳನ್ನು ಕೊಂಡು, ಗಣಕದಲ್ಲೇ ಬಿಲ್ ಪಡೆದು, ಕಾರ್ಡಿನ ಮೂಲಕವೇ ಪಾವತಿ ಮಾಡುವುದು ಈ ಜಗತ್ತಿನ [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1650&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:justify;"><strong>ಮನುಷ್ಯನು ಯಂತ್ರಗಳ ದಾಸನಾಗಿದ್ದಾನೆಯೆ?</strong></p>
<p style="text-align:justify;">ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು ಸುತ್ತಲಾರೆ. ಯಂತ್ರಗಳು ಶುದ್ಧೀಕರಿಸಿದ ದಿನಸಿ ವಸ್ತುಗಳನ್ನು ಕೊಂಡು, ಗಣಕದಲ್ಲೇ ಬಿಲ್ ಪಡೆದು, ಕಾರ್ಡಿನ ಮೂಲಕವೇ ಪಾವತಿ ಮಾಡುವುದು ಈ ಜಗತ್ತಿನ ಹಲವರ ಸಹಜ ಕೃತ್ಯವಾಗಿದೆ.<img title="More..." src="http://mitramaadhyama.co.in/wp-includes/js/tinymce/plugins/wordpress/img/trans.gif" alt="" /><span id="more-1650"></span></p>
<p style="text-align:justify;">ಈ ಯಂತ್ರಗಳು ಮುಂದಿನ ದಿನಗಳಲ್ಲಿ ನಿರಂತರ ಚಲಿಸಲು, ಮನುಷ್ಯನ ದಿನಚರ್ಯೆಯು ಚಕಚಕನೆ ನಡೆಯುವಂತಾಗಲು ದೇಶ-ಭಾಷೆ-ಗಡಿ ಮೀರಿದ ಒಂದು ಅಘೋಷಿತ ಒಕ್ಕೂಟವು ಅವಿರತವಾಗಿ ಕಾರ್ಯನಿರತವಾಗಿದೆ. ಅದಕ್ಕಾಗಿ ಇಡೀ ಭೂಮಿಯನ್ನೇ ಯೋಜಿತವಾಗಿ ಶೋಷಿಸುವ ಜಾಗತಿಕ ಯೋಜನೆ ಸಿದ್ಧವಾಗಿದೆ. ವಸುಂಧರೆಯ ಸೆರಗಿನಲ್ಲಿ, ಒಡಲಿನಲ್ಲಿ, ಜಡೆಯಲ್ಲಿ, ಮುಡಿಯಲ್ಲಿ ಇರುವ ಎಲ್ಲ ಸಂಪನ್ಮೂಲಗಳ ನಕಾಶೆ ಈಗ ಸಿದ್ಧವಾಗಿದೆ. ಈ ಸಂಪತ್ತನ್ನು ಯಾವ ಕಾಲದಲ್ಲಿ ಎಷ್ಟೆಷ್ಟು ದೋಚಬೇಕೆಂಬ ನೀಲನಕಾಶೆಯನ್ನು ಯಾವ ಸರ್ಕಾರವೂ ವಿರೋಧಿಸುತ್ತಿಲ್ಲ.</p>
<p style="text-align:justify;">ಮನುಷ್ಯನ ಈ `ಚಕಚಕನೆ ಮುನ್ನಡೆಯುವ ಅಗತ್ಯ&#8217;ದಿಂದ ಇಂಧನದ ಬೇಡಿಕೆ ಹೆಚ್ಚಿದೆ. ತೈಲಸಮರಗಳು ಸಾಮಾನ್ಯವಾಗಿವೆ. ಕಲ್ಲಿದ್ದಲಿನ ಬಳಕೆ ಇನ್ನಿಲ್ಲದ ವೇಗದಲ್ಲಿ ಹೆಚ್ಚಳ ಕಂಡಿದೆ. ಈಗಿರುವ ಪೆಟ್ರೋಲಿಯಂ ಮೂಲಗಳು ಒಣಗುವ ಭೀತಿಯಲ್ಲಿ ಮುಂದಿನ ಶತಮಾನಗಳಿಗೆ ಬೇಕಾಗುವ ಪೆಟ್ರೋಲಿಯಂಗಾಗಿ ಈಗಲೇ  ಗಣಿಗಳ ಸರ್ವೇಕ್ಷಣೆ ನಡೆದಿದೆ. ನೈಸರ್ಗಿಕ ಅನಿಲದ ಕೊಳವೆಗಳು ಭೂಮಿಯಾದ್ಯಂತ ಹರಿದಿವೆ.</p>
<p style="text-align:justify;"><strong>ಇಂಧನದ ಅತಿಬಳಕೆ : ಬದುಕಿಗೆ ಅನಗತ್ಯ ಸಂಕೀರ್ಣತೆ</strong></p>
<p style="text-align:justify;">ಇಂಧನಮೂಲಗಳ ದಹನದಿಂದ ಮಾಲಿನ್ಯವಾಗುತ್ತಿದೆ. ಪರಮಾಣು ಸ್ಥಾವರಗಳ ಸ್ಥಾಪನೆಯಾದಾಗಿನಿಂದ ಈವರೆಗೂ ಹೊರಬಿದ್ದ ವಿಕಿರಣ ಕಸವನ್ನು ಎಲ್ಲೂ ಹೂತಿಡಲಾಗದೆ ಬಲಾಢ್ಯವೆಂದು ನಂಬಿದ ಕೊಳವೆಗಳಲ್ಲಿ ಅವುಗಳ ದಾಸ್ತಾನು ಮಾಡಲಾಗಿದೆ. ಸರ್ಕಾರಗಳು ಹೀಗೆ ಇಂಧನ ಕಸವನ್ನು ಪೇರಿಸುತ್ತಿದ್ದರೆ, ಜನ ವಿಷಪೂರಿತ ಪ್ಲಾಸ್ಟಿಕ್ ಕಸದ ಬೆಟ್ಟವನ್ನೇ ನಿರ್ಮಿಸುತ್ತಿದ್ದಾರೆ. ಕಾರ್ಖಾನೆಗಳು ಎಡಬಿಡದೆ ಹೊಗೆ, ವಿಷಜಲ, ಎಲ್ಲವನ್ನೂ ಕಾರುತ್ತ ಕುಡಿಯುವ ನೀರನ್ನೇ ಮಲಿನಗೊಳಿಸಿವೆ. ಅವುಗಳಿಂದ ತಯಾರಾದ ಘೋರ ವಿಷದ ರಾಸಾಯನಿಕಗಳನ್ನು ನಮ್ಮ ಹೊಲಗಳಲ್ಲಿ ಬಳಸಿ ನೆಲವೆಲ್ಲ ಕಟುವಿಷದ ಬಟ್ಟಲಾಗಿದೆ. ನಾವು ಉಡುವ ಬಟ್ಟೆಗಳಲ್ಲಿ, ನಾವು ಬಳಸುವ ಮಾರ್ಜಕಗಳಲ್ಲಿ, ಕುಡಿಯುವ ಔಷಧಿಗಳಲ್ಲಿ, ಅಡುಗೆ ಪದಾರ್ಥಗಳಲ್ಲಿ, ಸಾಧನ ಸಲಕರಣೆಗಳಲ್ಲಿ ಏನೆಲ್ಲ ಕಂಟಕಪ್ರಾಯ ವಸ್ತುಗಳು ಬೆರೆತಿವೆ ಎಂಬ ಪಟ್ಟಿಯನ್ನು ಮಾಡಲೂ ನಮಗೆ ಸಾಧ್ಯವಾಗುತ್ತಿಲ್ಲ.</p>
<p style="text-align:justify;">ಹೇಗೆ ಬೇಕಾದರೂ ಇಂಧನವನ್ನು ಪಡೆಯಬಹುದೆಂಬ ಧಿಮಾಕಿನಿಂದಾಗಿಯೇ ನಾಗರಿಕತೆಯು ಇನ್ನಿಲ್ಲದ ವೇಗವನ್ನು ಪಡೆದುಕೊಂಡಿದೆ. ಈ ವೇಗ ಮತ್ತು ನಿಯಂತ್ರಣವೇ ಇಲ್ಲದ ಸಂಪನ್ಮೂಲಗಳ ಬಳಕೆಯಿಂದ ಬದುಕಿನ ಚಹರೆ ಬದಲಾಗಿದೆ. ಸುಮಾರು ಇನ್ನೂರು ವರ್ಷಗಳಿಂದ ನಡೆಯುತ್ತಿರುವ ಔದ್ಯಮೀಕರಣವು ಮನುಷ್ಯನ ವಿಷಯಾಸಕ್ತ ಲೋಲುಪ ಬದುಕಿಗೆ ಕಾರಣವಾಗಿದೆ.</p>
<p style="text-align:justify;">ಯೂರೋಪಿನ ದೇಶಗಳು ಪೂರ್ವದ ದೇಶಗಳನ್ನು ವಸಾಹತುಗಳನ್ನಾಗಿ ಮಾಡಿಕೊಂಡಿದ್ದೇ ಸಂಪನ್ಮೂಲಗಳನ್ನು ದೋಚಲು ಎಂಬುದೀಗ ಎಲ್ಲರಿಗೂ ಗೊತ್ತಿರುವ ರಹಸ್ಯವಾಗಿದೆ. ಆಗ ಭೌತಿಕವಾಗಿ ದೇಶಗಳನ್ನು ಆಕ್ರಮಿಸಿದ ದೇಶಗಳು ಕೊಳ್ಳುಬಾಕ ಸಂಸ್ಕೃತಿಯನ್ನು ಬಿತ್ತಿದವು. ಹೀಗಾಗಿ ಭಾರತದಿಂದಲೇ ಆರಂಭವಾಗುವ (ಇದು ನನ್ನ ಅಭಿಮತವಷ್ಟೆ!) ಪೂರ್ವದೇಶಗಳಲ್ಲೂ ಬದುಕಿನ ಅರ್ಥವೇ ಬದಲಾಯಿತು. ವಸಾಹತುಶಾಹಿ ಮತ್ತು ದೊರೆತನದ ಆಳ್ವಿಕೆಗಳು  ಕೊನೆಗೊಂಡಂತೆಯೇ ಕಮ್ಯುನಿಸಂ ಮತ್ತು ಪ್ರಜಾತಂತ್ರ ಆಧಾರಿತ ದೇಶಗಳು ತಲೆಯೆತ್ತಿದವು. ಮನುಷ್ಯನ ಮುಕ್ತ ಅಭಿವ್ಯಕ್ತಿ ಮತ್ತು ಉದಾರ ಚಿಂತನೆಗಿಂತ ಸಮುದಾಯದ ಏಳಿಗೆಯೇ ಮುಖ್ಯ ಎಂಬ ತಾಜಾ ವಾದದೊಂದಿಗೆ ತಳವೂರಿದ ಕಮ್ಯುನಿಸಂನ ದೇಶಗಳಲ್ಲಿ ಸಾಮುದಾಯಿಕ ಕೃಷಿ ಮತ್ತು ಉದ್ಯಮಗಳು ಬೆಳೆದವು. ಭಾರತದಂಥ ಸಮಾಜವಾದಿ ದೇಶಗಳು ಕಮ್ಯುನಿಸಂನ ಈ ತತ್ವಗಳನ್ನು ಎರವಲು ಪಡೆದವು. ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೆರಿಕಾ ಖಂಡಗಳಲ್ಲಿ ಪ್ರಜಾತಂತ್ರವು ಬಂಡವಾಳಶಾಹಿ ವ್ಯವಸ್ಥೆಯೇ ಬಲವಾಯಿತು. ಈ ಎರಡು ಬಣಗಳ ನಡುವಣ ಶೀತಲ ಸಮರದಿಂದಾಗಿ ಅಣ್ವಸ್ತ್ರ ಕೋಠಿ ಬೆಳೆಯಿತು.</p>
<p style="text-align:justify;">ಈಗ ? ಬಂಡವಾಳವನ್ನೇ ನೆಚ್ಚಿಕೊಂಡ ಅಮೆರಿಕಾ ಇಂಧನಕ್ಕಾಗಿ ಸಮರಗಳ ಸರಣಿಯನ್ನೇ ಆರಂಭಿಸಿದೆ. ಮೊದಲು ಇರಾಖ್. ಈಗ ಇರಾನ್. ಮುಂದೆ? ಪರಮಾಣು ತಲೆಸಿಡಿಗಳ ಜಾಗತಿಕ ಪಾರಮ್ಯದ ಉತ್ತರ ಕೊರಿಯಾ ಮತ್ತು ಅಪಾರ ತೈಲನಿಕ್ಷೇಪ ಇರುವ ವೆನೆಝುಲಾ ಇರಬಹುದು. ಯುರೋಪ್ ಖಂಡದಲ್ಲಿ ಕಮ್ಯುನಿಸಂ ಕುಸಿದು ಇಡೀ ಖಂಡವೇ ಒಂದು ಸಮುದಾಯವಾಗಿದೆ. ಅಂದಿನ ಸೋವಿಯೆತ್ ಒಕ್ಕೂಟವು ವಿದಳನಗೊಂಡು ಹೊಸ, ಅರೆ-ಪ್ರಜಾತಾಂತ್ರಿಕ ದೇಶಗಳು ಹುಟ್ಟಿವೆ.</p>
<p style="text-align:justify;"><strong>ಸಿದ್ಧಾಂತಗಳನ್ನು ಮೀರಿದ ಜಾಗತಿಕ ಬದುಕು</strong></p>
<p style="text-align:justify;">ಚೀನಾವೊಂದೇ ಕಮ್ಯುನಿಸಂನ ಪ್ರಾತಿನಿಧಿಕ ದೇಶವಾಗಿದ್ದರೂ, ಅಲ್ಲಿಯೂ ಬಂಡವಾಳಶಾಹಿ ನೀತಿ ಜಾರಿಯಾಗಿದೆ. ಚೀನಾದೆಲ್ಲಡೆ ಹರಡಿದ ಲಾಗೋಯ್‌ಗಳಲ್ಲಿ (ಬಲವಂತದ ಕಾರ್ಮಿಕ ಶಿಬಿರಗಳು) ವಿಶ್ವ ಮಾರುಕಟ್ಟೆಗೆ ಬೇಕಾದ ಎಲ್ಲ ಉತ್ಪನ್ನಗಳು ಅತಿ ಕಡಿಮೆ ಬೆಲೆಯಲ್ಲಿ ತಯಾರಾಗುತ್ತಿವೆ.  ಕಮ್ಯುನಿಸಂ ಹೆಸರಿನಲ್ಲಿ ಉತ್ತರ ಕೊರಿಯಾವು ಹಸಿವಿನಿಂದ ಕಂಗೆಟ್ಟ ಜನರನ್ನು ಎಡಬಿಡದೆ ಶೋಷಿಸುವ ಪರಮ ಸರ್ವಾಧಿಕಾರದ ದೇಶವಾಗಿದೆ. ಅಮೆರಿಕಾದ ಪ್ರಭಾವಕ್ಕೆ ಒಳಗಾದ ದಕ್ಷಿಣ ಕೊರಿಯಾ &#8211; ಜಪಾನ್‌ಗಳು ಒಮ್ಮೆ ಏರುತ್ತ, ಇನ್ನೊಮ್ಮೆ ಕುಸಿಯುತ್ತ ಹೇಗೋ ನಡೆದಿವೆ.</p>
<p style="text-align:justify;">ಹಲವು ಅರಬ್ ದೇಶಗಳು ಪೆಟ್ರೋ ಉತ್ಪನ್ನಗಳಿಂದ ಸಿರಿವಂತವಾದವು; ಅಮೆರಿಕಾದೊಂದಿಗೆ ಸಖ್ಯ ಬೆಳೆಸಿಕೊಂಡವು; ಅಮೆರಿಕಾವನ್ನು ವಿರೋಧಿಸುವ ದೇಶಗಳಲ್ಲಿ ಒಂದೋ ಸಮರ ನಡೆಂ       iತ್ತಿದೆ (ಆಫಘಾನಿಸ್ತಾನ, ಇರಾಖ್); ಇಲ್ಲವೇ ಉದ್ವಿಗ್ನತೆ ಮನೆಮಾಡಿದೆ (ಇರಾನ್). ಭಾರತದಿಂದ ಪ್ರತ್ಯೇಕವಾದ ಪಾಕಿಸ್ತಾನವೀಗ ಅರಾಜಕತೆಯ ಗೂಡಾಗಿದೆ. ಪ್ರಜಾತಂತ್ರವೂ ಇಲ್ಲ; ಶಾಂತಿಯೂ ಇಲ್ಲ.</p>
<p style="text-align:justify;">ಭಾರತ? ಪ್ರಜಾಪ್ರಭುತ್ವವಿರುವ ಅತಿದೊಡ್ಡ ದೇಶವೆಂಬ ಭಾರತದಲ್ಲಿ ಸೇನಾಡಳಿತ ಬಂದಿಲ್ಲ ಎಂಬುದು ಎಷ್ಟು ಸಂತೋಷದ ವಿಷಯವೋ, ದೇಶವು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿದೆ, ಭ್ರಷ್ಟ ಆಡಳಿತವನ್ನು ಹೊಂದಿದೆ, ಬಡವ-ಧನಿಕರ ಕಂದರವಾಗಿದೆ ಎಂಬುದೂ ಅಷ್ಟೇ ಕಳವಳಕಾರಿ ಸಂಗತಿ. ಭಾರತದಲ್ಲೀಗ ಸೋವಿಯೆತ್ ಒಕ್ಕೂಟದಿಂದ ಎರವಲು ಪಡೆದು ಜಾರಿ ಪಂಚವಾರ್ಷಿಕ ಯೋಜನೆಗಳು ಒಂದು ವ್ಯವಸ್ಥೆಯಾಗಿದೆ. ದೇಶದ ಶೇ. ೭೭ರಷ್ಟು ಜನರ ಸರಾಸರಿ ವರಮಾನ ದಿನಕ್ಕೆ ಕೇವಲ ೨೦ ರೂ. ಎಂದು ಅರ್ಜುನ್ ಸೇನ್‌ಗುಪ್ತಾ ವರದಿ ಹೇಳುತ್ತದೆ. ೮೮ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತವು ೬೭ನೇ ಸ್ಥಾನದಲ್ಲಿದೆ.</p>
<p style="text-align:justify;">ಸಂಪನ್ಮೂಲಗಳು ವಿಪರೀತ ಪ್ರಮಾಣದಲ್ಲಿ ಸೋರಿಕೆಯಾಗಿ ದೇಶದ ಅಭ್ಯುದಯವು ಅತಿ ನಿಧಾನಗತಿಯಲ್ಲಿದೆ. ಅಭಿವೃದ್ಧಿ ಸೂಚ್ಯಂಕಗಳ ಆಧಾರದಲ್ಲಿ ಭಾರತ ಮತ್ತು ಚೀನಾ ದೇಶಗಳು ಜಾಗತಿಕ ಭೂಪಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳು ಎಂಬುದೇನೋ ನಿಜ.  ಆದರೆ ಭಾರತವು ಅನಾರೋಗ್ಯಕರ ಪ್ರಜಾತಂತ್ರ ಮತ್ತು ಶಿಕ್ಷಣ &#8211; ಸಾಕ್ಷರತೆಯ ಕೊರತೆಯನ್ನು ನಿರ್ಲಕ್ಷಿಸಿದೆ; ಚೀನಾವು ಮಾನವ ಹಕ್ಕುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅಭಿವೃದ್ಧಿಯನ್ನೇ ಈ ದೇಶಗಳ ಸಮುದಾಯದ ಅಭ್ಯುದಯ ಎಂದು ಭ್ರಮಿಸಿಕೊಂಡಿದ್ದೇವಷ್ಟೆ!</p>
<p style="text-align:justify;">ಇದು ದೇಶಗಳ ವಿಷಯ. ಈ ಎಲ್ಲ ದೇಶಗಳ ಆಡಳಿತ ತತ್ವಗಳನ್ನು ಹೊರತುಪಡಿಸಿ ನೋಡಿದರೆ ಎಲ್ಲೂ ಸಂಘರ್ಷ ಇದೆ ಎಂದು ಅನ್ನಿಸುವುದಿಲ್ಲ. ಬಹುತೇಕ ದೇಶಗಳು ಅಂತಾರಾಷ್ಟ್ರೀಯ ವ್ಯಾಪರ &#8211; ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿವೆ. ವಿಶ್ವವ್ಯಾಪಾರ ಒಪ್ಪಂದದಿಂದ ಎಲ್ಲ ದೇಶಗಳ ಮಾರುಕಟ್ಟೆಗಳು ಪರಸ್ಪರ ಮುಕ್ತವಾಗಿದೆ. ಎಲ್ಲ ದೇಶಗಳಲ್ಲೂ ಬಳಸುವ ಯಂತ್ರ ಸಾಧನಗಳು ಏಕರೂಪತೆಯನ್ನು ಹೊಂದಿವೆ. ಎಲ್ಲರ ಬದುಕೂ ಬಹುತೇಕ ಒಂದೇ ಬಗೆಯದು. ಅಂತಾರಾಷ್ಟ್ರೀಯ ಸಂಸ್ಥೆಗಳ ಬದಲಿಗೆ ಬಹುರಾಷ್ಟ್ರೀಯ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆದಿವೆ. ಹಲವು ಪುಟ್ಟ ದೇಶಗಳ ಆಂತರಿಕ ಉತ್ಪನ್ನದ ಬಹುಪಟ್ಟು ಹೆಚ್ಚಿನ ಸಂಪತ್ತನ್ನು ಹೊಂದಿರುವ ಸಂಸ್ಥೆಗಳಿಗೆ ಲೆಕ್ಕವಿಲ್ಲ. ಈ ಸಂಸ್ಥೆಗಳ ಉತ್ಪನ್ನಗಳಿಗೆ ಚೀನಾ ದೇಶವೂ ಹೆಗಲು ಕೊಡುತ್ತದೆ. ಇದೆಲ್ಲದರ ಫಲವಾಗಿ ಇಡೀ ಮನುಷ್ಯಕುಲವೇ ಏಕರೂಪ ಬದುಕಿನತ್ತ ಮುಖಮಾಡಿದೆ.</p>
<p style="text-align:justify;"><strong>ಅಭ್ಯುದಯ ಬೇರೆ &#8211; ಅಭಿವೃದ್ಧಿ ಬೇರೆ: ಗೊಂದಲ ಬೇಡ</strong></p>
<p style="text-align:justify;">ಹಾಗಾದರೆ ಅಭ್ಯುದಯ ಎಂದರೇನು? ಅಭಿವೃದ್ಧಿ ಎಂದರೇನು? ಮನುಷ್ಯನ ಬದುಕು ಹೇಗಿರಬೇಕು? ಈಗ ಪ್ರಪಂಚವು ಸಾಗುತ್ತಿರುವ ಹಾದಿಯೇಕೆ ಸರಿಯಲ್ಲ? ಎಲ್ಲರ ಬಳಿಯೂ ಹಣ ಸಂಚಯವಾಗುತ್ತಿಲ್ಲವೆ? ಜನ ಹಬ್ಬಗಳಂದು ಪಟಾಕಿ ಹಚ್ಚುವರಲ್ಲವೆ? ಜಾತ್ರೆಗಳು ನಡೆಯುತ್ತಿಲ್ಲವೆ? ಥಿಯೇಟರುಗಳಲ್ಲಿ ಜನ ತುಂಬಿಲ್ಲವೆ? ಸಂಗೀತ &#8211; ನೃತ್ಯ ಕಲೆಗಳು ಬೆಳೆದಿಲ್ಲವೆ? ತಲಾ ವರಮಾನ ಹೆಚ್ಚಿಲ್ಲವೆ? ಸಾಕ್ಷರತೆ ಏರುತ್ತಿಲ್ಲವೆ? ಉದ್ಯಮೀಕರಣದಿಂದ ಸಮೃದ್ಧಿ ಉಂಟಾಗಿಲ್ಲವೆ? ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಸಂಪನ್ಮೂಲಗಳ ಬಳಕೆ ಆಗಬೇಡವೆ? &#8211; ನೂರಾರು ಪ್ರಶ್ನೆಗಳು ಎದುರಾಗುತ್ತವೆ.</p>
<p style="text-align:justify;">ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಕಾಳಿ ಜಲವಿದ್ಯುತ್ ಯೋಜನೆಯಲ್ಲಿ ಉತ್ಪಾದನೆಯಾಗುವ ವಿದ್ಯುತ್ತು, ಆ ಯೋಜನೆಯ ಬುಡದಲ್ಲಿರುವ ಹಳ್ಳಿಗಳಿಗೇ ಸಿಕ್ಕಿಲ್ಲ. ವಿದ್ಯುತ್ ಉತ್ಪಾದನೆ ಹೆಚ್ಚಲು ಕಾರಣವಾದ ಯೋಜನೆಯು ನಗರಗಳಿಗೆ ವರದಾನವಾಗಿರಬಹುದು; ಆದರೆ ಯೋಜನಾಸ್ಥಳದಲ್ಲಿ ಸಂತ್ರಸ್ತಾರದ ಕುಟುಂಬಗಳಿಗೆ ಅದು ಶಾಪವಾಗಿದೆ. ಹೀಗೆ ದೂರದೂರದ ಯೋಜನೆಗಳ ಫಲವೆಲ್ಲವೂ ನಗರಗಳಿಗೇ ಹೋಗುತ್ತದೆ, ಬೆಂಗಳೂರು ಮಹಾನಗರಕ್ಕೆ ಕಾವೇರಿಯಿಂದ ನೀರು ಸರಬರಾಜಾಗುವ ಹಾಗೆ (ಕಾವೇರಿ ಕುಡಿಯುವ ನೀರಿನ ಯೋಜನೆಯಿಂದ ಬರುವ ನೀರನ್ನೇ ಬೆಂಗಳೂರಿನ ಸಾವಿರಾರು ಸಿರಿವಂತರು ತಮ್ಮ ಕಾರು ತೊಳೆಯಲು, ಶೌಚಾಲಯದಲ್ಲಿ ಬಳಸುತ್ತಾರೆ ಎಂಬುದನ್ನು ಗಮನಿಸಿ. `ಕಾವೇರಿ ಜಲವಿವಾದ&#8217; ಇರಬೇಕಾದ್ದೇ ಅಂತಾರಾಜ್ಯ ಗಡಿಯಲ್ಲಲ್ಲ, ಬೆಂಗಳೂರಿನಲ್ಲಿ ಅನ್ನಿಸುವುದಿಲ್ಲವೆ?). ಯೋಜನೆಗಳಿಂದ ಸಾಮಾಜಿಕ ಅಸಮತೋಲನವಾಗದೆ, ನಿಸರ್ಗಕ್ಕೆ ಧಕ್ಕೆಯಾಗದೆ, ಇಡೀ ಸಮುದಾಯದ ಬದುಕು ಹಸನಾದರೆ ಅದು ಅಭ್ಯುದಯ; ನಗರಕ್ಕೆ ವಿದ್ಯುತ್ತು, ನೀರು ಕೊಡುವುದು ಅಭಿವೃದ್ಧಿ ಯೋಜನೆಯಷ್ಟೆ.</p>
<p style="text-align:justify;">ಈ ಜಗತ್ತಿನಲ್ಲಿ ಅಪಾರ ಪ್ರಮಾಣದ ಸಿಮೆಂಟು, ಕಬ್ಬಿಣವನ್ನು ಬಳಸಿ, ದೈತ್ಯಾಕಾರದ ಯಂತ್ರಗಳಿಂದ ನಡೆಯುವ ಕಾಮಗಾರಿಗಳೆಲ್ಲವೂ ನಾಗರಿಕತೆಯ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳೇ ಹೊರತು ಅಭ್ಯುದಯದ ಯೋಜನೆಗಳಲ್ಲ. ಬಸ್ ನಿಲ್ದಾಣಗಳ ನವೀಕರಣದಿಂದ ಹೊರನೋಟವಷ್ಟೇ ಸುಂದರವಾಗುತ್ತದೆ. ಸಕಾಲದಲ್ಲಿ, ಬೇಕಾದ ಊರಿಗೆ ಬಸ್ ಬರದಿದ್ದರೆ ಆ ಬಸ್ ನಿಲ್ದಾಣ ಇರುವುದಾದರೂ ಯಾಕೆ? ಬಸ್ ನಿಲ್ದಾಣ ಕಟ್ಟುವುದು ಅಭಿವೃದ್ಧಿ ಕಾಮಗಾರಿ; ಬಸ್ಸುಗಳು ಬಂದು, ಎಲ್ಲರೂ ಹೆಚ್ಚು ಕಾಯದೆ ತಮ್ಮ ಗಮ್ಯಕ್ಕೆ ತೆರಳುವ ಸನ್ನಿವೇಶ ಸೃಷ್ಟಿಯಾದರೆ ಮಾತ್ರ ಅದು ಅಭ್ಯುದಯ.</p>
<p style="text-align:justify;"><strong>ಹಸಿರು ಕ್ರಾಂತಿಯ ಭ್ರಾಂತಿ ಮತ್ತು ಅಪಾಯ</strong></p>
<p style="text-align:justify;"><img title="THE-EFFECT-OF-GREEN-REVOLUTION" src="http://mitramaadhyama.co.in/wp-content/uploads/2010/11/THE-EFFECT-OF-GREEN-REVOLUTION.jpg" alt="" width="430" height="635" /></p>
<p style="text-align:justify;"> </p>
<p style="text-align:justify;"><img title="green-revolution-cartoon" src="http://mitramaadhyama.co.in/wp-content/uploads/2010/11/green-revolution-cartoon.jpg" alt="" width="450" height="317" /></p>
<p style="text-align:justify;">ಇನ್ನೂ ವಿಸ್ತೃತವಾದ ಉದಾಹರಣೆಯನ್ನು ತೆಗೆದುಕೊಳ್ಳೋಣ. `ವಿಶ್ವದ ಮೊದಲ ಹಸಿರು ಕ್ರಾಂತಿ&#8217; ಭಾರತದ ಪಂಜಾಬಿನಲ್ಲಿ ಅರವತ್ತರ ದಶಕದಲ್ಲಿ ನಡೆಯಿತು. ನಾರ್ಮನ್ ಬೋರ್ಲಾಗ್ ಎಂಬ ವಿಜ್ಞಾನಿಯ ಚಿಂತನೆಗಳಿಂದಾಗಿ ಬಹುಬೇಗ ಫಸಲು ನೀಡುವ ಭತ್ತ, ಗೋಧಿ ತಳಿಗಳು ಕೃಷಿಕರಿಗೆ ಬಂದವು. ಇವುಗಳನ್ನು ಅಧಿಕ ಇಳುವರಿ ತಳಿಗಳೆಂದೂ ಪ್ರಚಾರ ಮಾಡಲಾಯಿತು. ವಾಸ್ತವವಾಗಿ ಇವೆಲ್ಲವೂ ನಿಸರ್ಗದತ್ತ ತಳಿಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಮತ್ತು ಅತ್ಯಧಿಕ ಪ್ರಮಾಣದಲ್ಲಿ ಕೀಟನಾಶಕ, ರಾಸಾಯನಿಕ ಗೊಬ್ಬರಗಳನ್ನು ಬೇಡುವ ತಳಿಗಳಾಗಿದ್ದವು. ಅಧಿಕ ನೀರು, ಅಧಿಕ ರಾಸಾಯನಿಕ, ಅಧಿಕ ವಿಷಪೂರಿತ ಕೀಟನಾಶಕಗಳಿಂದ ಈ `ಅಧಿಕ&#8217; ಇಳುವರಿ ಬಂತು. ಸರ್ಕಾರಗಳು, ವಿಜ್ಞಾನಿಗಳು, ಸಂಶೋಧಕರು ಅಧಿಕ ಇಳುವರಿಗಷ್ಟೇ ಪ್ರಚಾರ ಕೊಟ್ಟರು; ಅಧಿಕ ನೀರು, ವಿಷದ ಬಳಕೆಯನ್ನು ಮುಚ್ಚಿಟ್ಟರು.</p>
<p style="text-align:justify;">ಈಗ? ಪಂಜಾಬಿನ ಕೃಷಿ ಉತ್ಪನ್ನ ಕುಸಿದಿದೆ. ಪಂಜಾಬಿನ ಮೇಲೆ (೨೦೧೦ರ ಅಕ್ಟೋಬರಿನಲ್ಲಿ ಇದ್ದಂತೆ) ೬೭ ಸಾವಿರ ಕೋಟಿ ರೂ.ಗಳ ಸಾರ್ವಜನಿಕ ಋಣಭಾರವಿದೆ. ಹಸಿರುಕ್ರಾಂತಿಯಲ್ಲಿ ಬಳಸಿದ ಕೀಟನಾಶಕಗಳಿಂದಾಗಿ ಪಂಜಾಬಿನಲ್ಲಿ ಕ್ಯಾನ್ಸರ್ ಮತ್ತಿತರ ಮಾರಕ ರೋಗಗಳು ಹೆಚ್ಚಿವೆ; ಒಂದು ಕಾಲದಲ್ಲಿ ಪಂಜಾಬ್ ಉಗ್ರವಾದಿಗಳ ಕೇಂದ್ರವೂ ಆಗಿದ್ದು ನಮಗೆ ಗೊತ್ತೇ ಇದೆ. ಭಾರತವೀಗ ಗೋಧಿಯನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ನಲವತ್ತೇ ವರ್ಷಗಳಲ್ಲಿ ಹಸಿರು ಕ್ರಾಂತಿಯು ಸಂಪೂರ್ಣವಾಗಿ ಕುಸಿದು ಹೊಸಬಗೆಯ ಕೃಷಿಯ ಘನಘೋರ ಅಪಾಯಗಳನ್ನು ತೆರೆದಿಟ್ಟಿದೆ.</p>
<p style="text-align:justify;">ಉದಾರೀಕರಣ ಪಠಿಸುವ ಪ್ರಜಾಪ್ರಭುತ್ವ, ಬಂಡವಾಳಶಾಹಿ ವ್ಯವಸ್ಥೆ, ಸಮುದಾಯವನ್ನು ನಿರ್ಲಕ್ಷಿಸಿ ಬಂಡವಾಳಶಾಹಿ ಮಾರುಕಟ್ಟೆಯ ಪೂರೈಕೆದಾರ ಕಮ್ಯುನಿಸ್ಟ್ ದೇಶಗಳು ಮತ್ತು ಜನರ ನಿರಂತರ ಲೌಕಿಕ ಅಗತ್ಯಗಳಿಂದ ಒಂದು ವಿಚಿತ್ರ, ಸಂಕೀರ್ಣ ವ್ಯವಸ್ಥೆಯೊಂದು ಏರ್ಪಟ್ಟಿದೆ. ನೂರಾರು ದೇಶಗಳ ಆಸ್ತಿಪಾಸ್ತಿಗಳನ್ನು ಮೀರಿಸುವ ಬಹುರಾಷ್ಟ್ರೀಯ ಸಂಸ್ಥೆಗಳು ಭೂಮಿಯ ಬಹ್ವಂಶ ನೈಸರ್ಗಿಕ ಸಂಪನ್ಮೂಲಗಳ ಹತೋಟಿ ಪಡೆದಿವೆ; ಪಡೆಯುತ್ತಿವೆ. ಭಾರತದಂಥ ಆರ್ಥಿಕ ಸುದೃಢ ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಶಿಕ್ಷಣ, ಆರೋಗ್ಯ, ಇಂಧನ, ಸಾಮಾಜಿಕ ಸೇವೆಗಳು, ಕೃಷಿ ಮುಂತಾದ ಸಾರ್ವಜನಿಕ ಯೋಜನೆಗಳನ್ನು ಹೆಚ್ಚೆಚ್ಚು ಖಾಸಗೀಕರಣಗೊಳಿಸುತ್ತಿವೆ.</p>
<p style="text-align:justify;">`ವಾಣಿಜ್ಯ ಸಂಸ್ಥೆಗಳೇ ಜಗತ್ತಿನ ಮುಂದಿನ ಭವಿಷ್ಯವನ್ನು ರೂಪಿಸಲು ಹೊರಟಿವೆ. ಆ ಜಗತ್ತಿನಲ್ಲಿ ದಯೆ, ದಾಕ್ಷಿಣ್ಯ, ಸಹಿಷ್ಣುತೆ, ಅನುಕಂಪಗಳಂಥ ಕೋಮಲ ಭಾವನೆಗಳಿಗೆ ಸ್ಥಾನವಿಲ್ಲ. ಲಾಭಗಳಿಕೆ, ನಿರ್ದಯ ಆರ್ಥಿಕ ದಕ್ಷತೆ, ನಿರಂತ ಅಭಿವೃದ್ಧಿ ಇವು ಆ ಜಗತ್ತಿನ ಲಾಂಛನಗಳಾಗಿರುತ್ತವೆ. ಅಸಮಾನತೆ, ಅನ್ಯಾಯ, ಆಶಕ್ತತೆ, ಅಭದ್ರತೆ ಇವುಗಳತ್ತ ಲಕ್ಷ್ಯ ಕೊಡಲು ಯಾರಿಗೂ ಆ ಜಗತ್ತಿನಲ್ಲಿ ಬಿಡುವಿರುವುದಿಲ್ಲ. ಅಶಕ್ತರ, ಅಲ್ಪಶಕ್ತರ ಸ್ಥಿತಿಯನ್ನು ಕಂಡು ಮರುಗಿ ಬುದ್ಧನಾಗಲು ಹೊರಟವ ಅರ್ಧಹಾದಿಯಲ್ಲೇ ಮನಸ್ಸು ಬದಲಾಯಿಸಿ ಮತ್ತೆ ಹಿಂದಿರುಗಿ ಅಂತಃಪುರ ಸೇರಿ ರಾಜಭೋಗಕ್ಕೆ ಅಣಿಯಾಗಬೇಕೆನ್ನುವವರ ಜಗತ್ತು ಇದು&#8217; ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಹೇಳಿದ್ದು ಈ ಹಿನ್ನೆಲೆಯಲ್ಲಿಯೇ.</p>
<p style="text-align:justify;"><strong>ಉಳ್ಳವರನ್ನು ಬಾಧಿಸುತ್ತಿರುವ ಆಫ್ಲುಯೆಂಜಾ ರೋಗ</strong></p>
<p style="text-align:justify;">ಉಳ್ಳವರು ಯಾವುದೇ ಸಮಾಧಾನದಿಂದಲೂ ದಿನ ಕಳೆಯಲಾಗದ ಸ್ಥಿತಿಯನ್ನೇ ಅಫ್ಲುಯೆಂಜಾ ಎಂದಿ ಕರೆಯುತ್ತಾರೆ. ಬಂಡವಾಳಶಾಹಿ ವ್ಯವಸ್ಥೆ ಮತ್ತು ಅತಿ ಕೊಳ್ಳುಬಾಕತನದ ಪರಿಣಾಮವೇ ಈ ರೋಗ.</p>
<p style="text-align:justify;">ಒಮ್ಮೆ ಸಿರಿವಂತಿಕೆ ಬಂದಮೇಲೆ ಮತ್ತಷ್ಟು ಸಿರಿವಂತರಾಗಬೇಕೆಂಬ ಬಯಕೆಯಾಗುತ್ತದೆ. ಅದು ಮತ್ತಷ್ಟು ವಸ್ತುಗಳ ಖರೀದಿಗೆ ಕಾರಣವಾಗುತ್ತದೆ. ಹೀಗೇ ಬೇಡಿಕೆಯೂ ಹೆಚ್ಚುತ್ತದೆ; ಸಿರಿವಂತಿಕೆಯೂ ಹೆಚ್ಚುತ್ತದೆ. ಜೊತೆಗೇ ಅಸಂತೃಪ್ತಿಯೂ ಹೆಚ್ಚುತ್ತದೆ. ಸಾಮಾನ್ಯವಾಗಿ ಸಿರಿವಂತರ ಮಕ್ಕಳಿಗೆ ಈ ಬಗೆಯ ರೋಗ ಅಂಟಿಕೊಳ್ಳುತ್ತದೆ ಎನ್ನಲಾಗಿದೆ. ಉದಾಹರಣೆಗೆ ಯೂರೋಪಿನ ಇಂಗ್ಲಿಶ್ ಭಾಷಾ ದೇಶಗಳಲ್ಲಿನ ಜನರ ಅನಾರೋಗ್ಯದ ಪ್ರಮಾಣ (ಶೇ. ೨೩), ಇಂಗ್ಲಿಶೇತರ ದೇಶಗಳ ಜನರ ಅನಾರೋಗ್ಯದ ಪ್ರಮಾಣಕ್ಕಿಂತ (ಶೇ. ೧೧.೫) ಎರಡು ಪಟ್ಟು ಹೆಚ್ಚು. ಹಣ, ಆಸ್ತಿ, ಭೌತಿಕ ಚಹರೆಯ ಮೋಹ, ಪ್ರಸಿದ್ಧಿಯ ಚಪಲ &#8211; ಇವೇ ಅಫ್ಲುಯೆಂಜಾದ ಮೂಲಕಾರಣಗಳು.</p>
<ul style="text-align:justify;">
<li>
<div>ನಾವು ಯಾವಾಗಲೂ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತೇವೆ: ನಾವು ಎಷ್ಟು ಸಂಪಾದಿಸುತ್ತಿದ್ದೇವೆ, ನಮ್ಮ ಮನೆ ಎಷ್ಟು ದೊಡ್ಡದು, ನಮ್ಮ ಕಾರಿನ ಬೆಲೆ ಎಷ್ಟು, ನಮ್ಮ ಸಾಮಾಜಿಕ ಬದುಕಿನ ವ್ಯಾಪ್ತಿ ಎಷ್ಟು, ನಮ್ಮ ಚಹರೆ, ಹೀಗೆ.</div>
</li>
<li>
<div>ಆರ್ಥಿಕ, ವಸ್ತುಕೇಂದ್ರಿತ ಬಾಹ್ಯ ಅಂಶಗಳೇ ಮಾನದಂಡಗಳೆಂದು ನಮಗೆ ನಮ್ಮ ಪಾಲಕರು ಹೇಳಿಕೊಟ್ಟಿದ್ದಾರೆ. ಹೀಗೆ ಪರಸ್ಪರ ಹೋಲಿಸಿಕೊಳ್ಳುವುದರಿಂದ ನಮ್ಮ ಬದುಕಿನ ಖುಷಿಯು ಕರಗಿಹೋಗುತ್ತದೆ. ನಾವೆಂದೂ ಬದುಕಿನಲ್ಲಿ ಜಯ ಸಾಧಿಸಲಾರೆವು.</div>
</li>
<li>
<div>ಬದಲಿಗೆ, ನಮ್ಮ ಸಂತೋಷ ಕೊಡುವ ವಿಷಯಗಳತ್ತ ಗಮನ ಕೊಡುವುದು ಒಳ್ಳೆಯದು. ನಮ್ಮ ನಿರ್ಧಾರಗಳಿಗೆ ನಮ್ಮ ಬದುಕಿನ ಅಗತ್ಯಗಳೇ ಆಧಾರವಾಗಬೇಕೇ ಹೊರತು, ಬೇರೆಯವರ ಬದುಕಿನ ಲೌಕಿಕ ಸಂಗತಿಗಳಲ್ಲ.</div>
</li>
<li>
<div>ನಾವು ಯಾವಾಗಲೂ ನಮ್ಮ ವರ್ತನೆಯನ್ನು ವಿಶ್ವಾಸದಿಂದ ಖಿನ್ನತೆಯೆಡೆಗೆ, ಆಶಾವಾದದಿಂದ ನಿರಾಶಾವಾದದ ಕಡೆಗೆ ತೊನೆಯಲು ಬಿಡುತ್ತೇವೆ. ಕಾಲವು ಕ್ರಮೇಣ ಸರಿದಂತೆ ನಮ್ಮ ಬದುಕೂ ವಿಸ್ತಾರವಾಗುತ್ತದೆ ಎಂಬ ವರ್ತನೆಯನ್ನು ನಾವು ಬೆಳೆಸಿಕೊಳ್ಳಬೇಕು.</div>
</li>
</ul>
<blockquote><p>&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8211;</p></blockquote>
<blockquote>
<h3>ಜೀವ-ಜೀವನಗಳನ್ನು ಬಲಿಕೊಟ್ಟಾದರೂ ಉದ್ಯಮಗಳು ಉಳಿಯಬೇಕೆ? ಯಾರಿಗಾಗಿ?</h3>
<p>ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದ ನುಡಿಸಿರಿ ಸಮಾವೇಶದ ಅಧ್ಯಕ್ಷೆಯಾಗಿ ಖ್ಯಾತ ಲೇಖಕಿ ವೈದೇಹಿಯವರೂ ಈ ಪ್ರಶ್ನೆಗಳನ್ನು ಎತ್ತಿದರು. `ಜೀವ-ಜೀವನಗಳನ್ನು ಬಲಿಕೊಟ್ಟಾದರೂ ಉದ್ಯಮಗಳು ಉಳಿಯಬೇಕೆ? ಯಾರಿಗಾಗಿ? ಜನಪರ ಕಾಳಜಿ ಇದೇ ಎನುವ ಯಾವುದೇ ಸರಕಾರದೆದುರು ಇಂದು ಜನಮನ ಗೆಲ್ಲುವ ಒಂದು ಅಪೂರ್ವ ಅವಕಾಶವಿದೆ. ಅವಿವೇಕಕ್ಕೆ, ಹುಚ್ಚು ಅಮಲಿಗೆ ಬಲಿಯಾಗದೆ ಫಲವತ್ತಾದ ನೆಲಗದ್ದೆ ತೋಟ ಚರಾಚರ ಜೀವಿಗಳ ಬದುಕುವ ಹಕ್ಕಿಗೆ ಸ್ಪಂದಿಸುವ (ಭೂಮಿಯನ್ನು ಗುಡಿಸಿ ಗುಂಡಾಡಿಸಲೆಂದೇ ಇರುವ ಕಡಿಮೆಸಂಖ್ಯೆಯ ಲಾಭಕೋರರ ಮಾತನ್ನು ಧಿಕ್ಕರಿಸಿ) ಜನಮತಕ್ಕೆ ಸ್ಪಂದಿಸುವ ಸುವರ್ಣ ಅವಕಾಶವಿದು. ನೋವಿಗೆ ಬದುಕಿಗೆ ಸ್ಪಂದಿಸುವ ಸರಕಾರಗಳಿಗೆ ಯಾವತ್ತೂ ಸೋಲಿಲ್ಲವೆಂಬುದನ್ನು ಮನಗಂಡು ತಕ್ಷಣವೇ ಅದು ಕಾರ್ಯೋನ್ಮುಖವಾಗಬೇಕು&#8217; ಎಂದು ಸರ್ಕಾರಕ್ಕೆ ಕರೆ ನೀಡುವ ವೈದೇಹಿಯವರು ನಮ್ಮ ಮುಂದೆ ಬದುಕಿನ ಪ್ರಶ್ನೆಗಳನ್ನು ಇಡುತ್ತಾರೆ:</p>
<ul>
<li>ಬದುಕಿನ ಮೌಲ್ಯವನ್ನು ಹೇಗೆ ನಿರ್ಧರಿಸುವಿರಿ? ಭಂಗಿ, ಅಂಗಿ, ಬಣ್ಣಗಳಿಂದಲೆ, ನಡತೆ ಧೋರಣೆಗಳಿಂದಲೆ, ಖರೀದಿಯ ಅಥವಾ ಆಳುವ ಸಾಮರ್ಥ್ಯದಿಂದಲೆ? ನಮ್ಮ ಪೂರ್ವಿಕರೆಲ್ಲ ಕಳಪೆ ಬದುಕನ್ನು ಬದುಕಿದರು ಎನ್ನುವಿರ?</li>
<li>ಜಗತ್ತನ್ನೇ ಗೆಲ್ಲ ಹೋದವರ ಇತಿಹಾಸ ಓದಿಕೊಂಡಿರುವಿರಷ್ಟೆ? ಮುಗಲ್ ಸಾಮ್ರಾಟ ಮತ್ತು ಸಂಗೀತ ಸಾಮ್ರಾಟರಲ್ಲಿ ವ್ಯತ್ಯಾಸ ಕಾಣಲಾರದೆ ಹೋದೆವೆ ನಾವು?</li>
<li>ನೆನಸಿಕೊಳ್ಳಿ. ಒಂದೇ ಮನೆಯ ಒಂದು ಕೋಣೆಯಲ್ಲಿ ಹಸಿವು ರೋಗ ರುಜಿನ ಕಾಯಿಲೆ ಬದುಕು ಸಾವಿನ ಹೋರಾಟ, ಇನ್ನೊಂದು ಕೋಣೆಯಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ.</li>
<li>ಕಲ್ಪಿಸಿಕೊಳ್ಳಿ. ಒಂದು ಕೋಣೆಯಲ್ಲಿ ಕೊಲೆ, ಹೆಮ್ಮಕ್ಕಳ ಮಾನಹಾನಿ, ಇನ್ನೊಂದೆಡೆ ಮನೆಯ ಜವಾಬ್ದಾರಿ ಹೊತ್ತವರು ರೆಸಾರ್ಟ್‌ಗೆ ಹೋಗಿದ್ದಾರೆ. ದಿನಗಟ್ಟಲೆ ಆಯ್ತು, ಬಂದಿಲ್ಲ.</li>
<li>ಒಂದು ಕೋಣೆಯಲ್ಲಿ ಆತ್ಮಹತ್ಯೆಗಳು ಸಾಲುಸಾಲಾಗಿ ನೇಣಿನಲ್ಲಿ ನೇತಾಡುತ್ತಿವೆ, ಇನ್ನೊಂದರಲ್ಲಿ ಮೋಜು ಮೇಜವಾನಿ ನಡೆಯುತ್ತಿದೆ.</li>
<li>ಒಂದೆಡೆ ವರದಕ್ಷಿಣೆ ಉರಿ ವಧುವನ್ನು ಸುಡುತ್ತಿದೆ, ಇನ್ನೊಂದು ಕೋಣೆಯಲ್ಲಿ ಒಲೆಉರಿಯ ಮೇಲೆ ಅಂದಿನ ತಿಂಡಿ ಅಡುಗೆ ತಯಾರಿ ನಡೆಯುತ್ತಿದೆ. </li>
<li>ಒಂದು ಕೋಣೆಯಲ್ಲಿ ಅನಾಚಾರ, ಭ್ರಷ್ಟತೆ, ವಂಚನೆ, ಜಗಲಿಯಲ್ಲಿ ಅಂದಿನ ಪೇಪರು ಓದುತ್ತ ಹರಟೆ ಪಟ್ಟಾಂಗ ಮುಗಿದಿಲ್ಲದಂತೆ ನಡೆಯುತ್ತಿದೆ.</li>
</ul>
<p>`ಕುಸುಮಾ, ಮೇಧಾ, ಸುಂದರಲಾಲ ಬಹುಗುಣ, ಕಮಲಾದೇವಿ, ಮುಂತಾದವರು ಇಂದು ಮಾದರಿಯಲ್ಲ. ಅಕ್ಕ ಮಹಾದೇವಿಯ ಆತ್ಮಸ್ಥೈರ್ಯವೂ ಅಲ್ಲ&#8217; ಎಂದು ವ್ಯಥಿಸುವ ವೈದೇಹಿ `ಸೌಂದರ್ಯ ಸ್ಪರ್ಧೆ ಮತ್ತು ಅಂತಹ ಅಬದ್ಧಗಳಾಗಲೀ, ಅಸಂಗತಗಳಾಗಲೀ ಒಯ್ಯುವುದು `ಅಂತರಂಗ&#8217;ಕ್ಕೆ ಏನನ್ನೂ ಕೊಡಲಾಗದ ಪೊಳ್ಳು `ಬಹಿರಂಗ&#8217;ಕ್ಕೆ&#8217; ಎನ್ನುತ್ತಾರೆ. ಹೀಗೆ ವಾಸ್ತವವನ್ನು ಬಿಟ್ಟು ರಿಯಾಲಿಟಿ ಶೋಗಳಲ್ಲಿ ಕರಗಿಹೋಗುತ್ತಿರುವ ಯುವಜಗತ್ತು ಒಂದೆಡೆ, ವಾಸ್ತವವನ್ನು ಅರಗಿಸಿಕೊಳ್ಳಲಾರದೆ  ತಪ್ಪಿ ಓಡುವ, ಕಹಿಗೊಳ್ಳುವ, ಕಂಡದ್ದನ್ನು ಕಂಡ ಹಾಗೆ ನಂಬುವ ಅಮಾಯಕವಾಗಿ ಬಲಿಯಾಗುವವರು ಇನ್ನೊಂದೆಡೆ ಎಂದು ವೈದೇಹಿ ದುಃಖಿಸುತ್ತಾರೆ.</p>
<p>&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8211;</p></blockquote>
<p style="text-align:justify;"><strong>ಭೂತಾನದ ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್ ಸೂಚ್ಯಂಕ : ನಮ್ಮೆದುರಿನ ಮಾದರಿ</strong></p>
<p style="text-align:justify;"><img title="BHUTAN-SMILING-CHILDREN" src="http://mitramaadhyama.co.in/wp-content/uploads/2010/11/BHUTAN-SMILING-CHILDREN.jpg" alt="" width="230" height="230" /></p>
<p style="text-align:justify;">ವಿಶ್ವದ ಅರ್ಥಶಾಸ್ತ್ರಜ್ಞರು ಒಂದು ದೇಶದ ಅಭಿವೃದ್ಧಿಯನ್ನು ಅಳೆಯಲು ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ) ಎಂಬ ಆರ್ಥಿಕ ಮಾನದಂಡವನ್ನು ಬಳಸುತ್ತಾರೆ. ಇವತ್ತು ಅಭಿವೃದ್ಧ &#8211; ಅಭಿವೃದ್ಧಿಶೀಲ ದೇಶಗಳೆಂಬ ಹಣೆಪಟ್ಟಿ ಬಂದಿರುವುದೇ ಈ ಮಾನದಂಡದಿಂದ. ಆದರೆ ಈ ಮಾನದಂಡದಲ್ಲಿ ಹಲವು ಲೋಪಗಳಿವೆ ಎಂದು ಅರ್ಥಶಾಸ್ತ್ರಜ್ಞರೇ ಒಪ್ಪಿಕೊಳ್ಳುತ್ತಾರೆ.</p>
<p style="text-align:justify;">೧೯೭೨ರಲ್ಲಿ ಭೂತಾನ್ ದೇಶದ ಹಿಂದಿನ ದೊರೆ ಜಿಂಗ್ಮೆ ಸಿಂಗ್ಯೆ ವಾಂಗ್‌ಚುಕ್ ಚಾಲ್ತಿಗೆ ತಂದ `ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್ (ಜಿ ಎನ್ ಎಚ್)&#8217; ಎಂಬ ಸೂಚ್ಯಂಕವು ಒಂದು ಸಮುದಾಯದ ಬದುಕಿನ ಗುಣಮಟ್ಟವನ್ನು ಹೆಚ್ಚಿನ ಸಮಚಿತ್ತ ಮತ್ತು ಸರ್ವಗ್ರಾಹಿಯಾಗಿ ನೋಡುವ ಮಾನದಂಡವೆಂದು ಹೆಸರಾಗಿದೆ. ಸುಖದ ಸೂಚ್ಯಂಕವನ್ನು ಯಾವ ದೇಶವೂ ಕಡೆಗಣಿಸುವಂತಿಲ್ಲ ಎಂಬ ಹೊಸ ಅರಿವು ಈಗ ಮೂಡುತ್ತಿದೆ. ಪುಟ್ಟ ದೇಶವಾದ ಭೂತಾನ್ ಇಡೀ ಜಗತ್ತಿಗೇ ಹೊಸ ನೋಟವೊಂದನ್ನು ನೀಡಿದೆ.</p>
<p style="text-align:justify;">ಮಾನಸಿಕ ಸ್ವಾಸ್ಥ, ಆರೋಗ್ಯ, ಕಾಲದ ಸಮರ್ಥ ಬಳಕೆ, ಸಾಮುದಾಯಿಕ ಚಟುವಟಿಕೆಗಳು, ಶಿಕ್ಷಣ, ಸಂಸ್ಕೃತಿ, ಪರಿಸರ, ಆಡಳಿತ, ಬದುಕಿನ ಮಟ್ಟ &#8211; ಇವು ಸುಖಸೂಚ್ಯಂಕದ ಒಂಬತ್ತು ಮಾನದಂಡಗಳು. ಬೌದ್ಧ ಮತದ ಆಧ್ಯಾತ್ಮಿಕ ಮೌಲ್ಯಗಳಿಂದ ರೂಪುಗೊಂಡ ಈ ಮಾನದಂಡವನ್ನು ಅತ್ಯಂತ ವೈಜ್ಞಾನಿಕವಾಗಿ ರೂಪಿಸಲಾಗಿದೆ. ಆರ್ಥಿಕ ಸ್ವಾಸ್ಥ್ಯ, ಪಾರಿಸರಿಕ ಸ್ವಾಸ್ಥ್ಯ, ಭೌತಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯ, ಕಚೇರಿ ಸ್ವಾಸ್ಥ್ಯ, ಸಾಮಾಜಿಕ ಸ್ವಾಸ್ಥ್ಯ, ರಾಜಕೀಯ ಸ್ವಾಸ್ಥ್ಯ &#8211; ಈ ಏಳು ಮಾನದಂಡಗಳ ಮೂಲಕ ಸುಖಸೂಚ್ಯಂಕವನ್ನು ಲೆಕ್ಕ ಮಾಡುತ್ತಾರೆ.</p>
<p style="text-align:justify;">ಸುಖೀ ಗ್ರಹ ಸೂಚ್ಯಂಕ (ಹ್ಯಾಪಿ ಪ್ಲಾನೆಟ್ ಇಂಡೆಕ್ಸ್ ಎಚ್ ಪಿ ಐ) ಎಂಬ ಇನ್ನೊಂದು ಹೊಸ ಸೂಚ್ಯಂಕವಿದೆ. ಇದರ ಪ್ರಕಾರ ಭೂತಾನವು ೧೭ನೇ ಅತ್ಯಂತ ಸುಖೀ ದೇಶ. ಭಾರತಕ್ಕೆ ಇಲ್ಲಿ ೩೫ನೇ ಸ್ಥಾನ. ಈ ಪಟ್ಟಿಯಲ್ಲಿ ಅಮೆರಿಕಾಗೆ ೧೧೪ನೇ ಸ್ಥಾನ. ವಿಷಯಾಸಕ್ತ ಬದುಕೇ ಸುಖಕ್ಕೆ ಕಾರಣವಲ್ಲ ಎಂಬುದು ಈ ಮಾನದಂಡದ ಸಂದೇಶ.</p>
<p style="text-align:justify;"><img title="HAPPINESS-INDEX-OF-NATIONS" src="http://mitramaadhyama.co.in/wp-content/uploads/2010/11/HAPPINESS-INDEX-OF-NATIONS1.jpg" alt="" width="397" height="242" /></p>
<p style="text-align:justify;">ಭೂತಾನದಲ್ಲಿ ದೂರದರ್ಶನಕ್ಕೆ ಪ್ರವೇಶ ಸಿಕ್ಕಿದ್ದೇ ೧೯೯೯ರಲ್ಲಿ. ಈಗಲೂ ಅಲ್ಲಿನ ಜನ ೧೪ನೇ ಶತಮಾನದ ಸಾಂಪ್ರದಾಯಿಕ ಉಡುಗೆಗಳನ್ನೇ ತೊಡುತ್ತಾರೆ. ಇಡೀ ದೇಶದಲ್ಲಿ ಎಲ್ಲೂ ಸಂಚಾರ ಸಂಕೇತದೀಪಗಳ ವ್ಯವಸ್ಥೆ ಇಲ್ಲ.</p>
<p style="text-align:justify;">ವಿಷಯಾಸಕ್ತ ಬದುಕಿನ ಪ್ರಭಾವವನ್ನು ಬುದ್ಧನ ಮಾತುಗಳಿಂದ ನಿಯಂತ್ರಿಸಬಹುದು ಎಂಬುದಕ್ಕೆ ಭೂತಾನವೇ ಸ್ಪಷ್ಟ ನಿದರ್ಶನ. ಈ ಮಟ್ಟಿಗೆ ಭೂತಾನವು ಜಗತ್ತಿಗೇ ಮಾದರಿ ಎನ್ನಬಹುದು.</p>
<p style="text-align:justify;">ಈ ಮಧ್ಯೆ ಭೂಮಿಯ ತಾಪಮಾನ ಹೆಚ್ಚುತ್ತಿದೆ ಎಂಬ ಸಂದೇಶವನ್ನು ಜಗತ್ತಿಗೆ ತಲುಪಿಸಲು ಕಳೆದ ವರ್ಷ (೨೦೦೯)ಮಾಲ್ಡೀವ್ಸ್ ದ್ವೀಪದೇಶದ ಸರ್ಕಾರವು ಸಮುದ್ರತಳದಲ್ಲಿ ಸಂಪುಟ ಸಭೆ ನಡೆಸಿದರೆ, ಈ ವರ್ಷ (೨೦೧೦)ರಲ್ಲಿ ಮಂಗೋಲಿಯಾ ದೇಶದ ಸರ್ಕಾರವು ಗೋಬಿ ಮರುಭೂಮಿಯಲ್ಲಿ ಸಂಪುಟ ಸಭೆ ನಡೆಸಿ ವಿಶ್ವಜಾಗೃತಿಗೆ ಯತ್ನಿಸಿತು. ಬಹುಶಃ ಇವೆರಡೂ ಯತ್ನಗಳು ಪ್ರಚಾರದ ತಂತ್ರವೆಂದಾದರೂ ಸರಿಯೆ, ಎಲ್ಲೋ ಒಂದು ಒಳ್ಳೆಯ ಸಂದೇಶವನ್ನು ಬೀರುವಲ್ಲಿ ಯಶ ಪಡೆದವು.</p>
<p style="text-align:justify;"><strong>ಎಚ್ಚರಿಕೆ! ಅಭಿವೃದ್ಧಿಗೂ ನಿರ್ದಿಷ್ಟ ಕಾಲಮಿತಿಯಿದೆ</strong></p>
<p style="text-align:justify;"><img title="THE-LIMITS-TO-GROWTH" src="http://mitramaadhyama.co.in/wp-content/uploads/2010/11/THE-LIMITS-TO-GROWTH.jpg" alt="" width="243" height="410" /></p>
<p style="text-align:justify;">ವಿಶ್ವದ ಜನಸಂಖ್ಯೆ, ಔದ್ಯಮೀಕರಣ, ಮಾಲಿನ್ಯ, ಆಹಾರ ಉತ್ಪಾದನೆ ಮತ್ತು ಸಂಪನ್ಮೂಲಗಳ ವಿನಾಶ &#8211; ಈ ಐದು ಮಾನದಂಡಗಳ ಮೂಲಕ ವಿಶ್ವದ ಬೆಳವಣಿಗೆಯ ಗತಿ ಮುಂದೇನಾಗಬಹುದು ಎಂದು ಲೆಕ್ಕಾಚಾರ ಮಾಡಿದ ಪುಸ್ತಕವೇ ೧೯೭೨ರಲ್ಲಿ ಪ್ರಕಟವಾದ `ದಿ ಲಿಮಿಟ್ಸ್ ಟು ಗ್ರೋಥ್&#8217;. ಜಾಗತಿಕ ಚಿಂತನಾಕೂಟ `ಕ್ಲಬ್ ಆಫ್ ರೋಮ್&#8217;ನ ವಿನಂತಿಯಂತೆ ಡೊನೆಲ್ಲಾ ಮೀಡೋಸ್, ಡೆನಿಸ್ ಮೀಡೋಸ್, ಜೋರ್ಗೆನ್ ರ್‍ಯಾಂಡರ್ಸ್ ಮತ್ತು ವಿಲಿಯಂ ಬರ್‌ಹೆನ್ಸ್ ೩ &#8211; ಇವರೆಲ್ಲ ಸೇರಿ ಬರೆದ ಈ ಪುಸ್ತಕದಲ್ಲಿ ಹೇಳಿರುವ ಅಂಶಗಳನ್ನು ಮೂವತ್ತು ವರ್ಷಗಳ ನಂತರ, ೨೦೦೪ರಲ್ಲಿ ಪರಾಮರ್ಶೆಗೆ ಒಳಪಡಿಸಲಾಯಿತು. ಔದ್ಯಮೀಕರಣ, ಮಾಲಿನ್ಯ, ಆಹಾರ ಉತ್ಪಾದನೆ- ಈ ಮೂರು ಸಂಗತಿಗಳಲ್ಲಿ ಪುಸ್ತಕವು ಊಹಿಸಿದ ಹಾದಿಯಲ್ಲೇ ಜಗತ್ತು ನಡೆದಿದೆ ಎಂಬ ಅಂಶವನ್ನು ಈ ಅಧ್ಯಯನ ಸ್ಪಷ್ಟಪಡಿಸಿದೆ. ೨೦೦೮ರಲ್ಲಿ ಈ ಕುರಿತು ತನ್ನದೇ ಪ್ರತ್ಯೇಕ ವರದಿಯನ್ನು ಬರೆದ ಆಸ್ಟ್ರೇಲಿಯಾದ ಗ್ರಹಾಂ ಟರ್ನರ್ ಅಂಕಿ ಅಂಶಗಳ ಮೂಲಕ ಈ ವಾಸ್ತವವನ್ನು ದಾಖಲಿಸಿದ್ದಾರೆ. `ದಿ ಲಿಮಿಟ್ಸ್ ಟು ಗ್ರೋಥ್&#8217; ಪುಸ್ತಕದಲ್ಲಿ ೧೯೦೦-೧೯೭೦ರವರೆಗಿನ ಮಾಹಿತಿಗಳನ್ನು ಆಧಾರವಾಗಿ ತೆಗೆದುಕೊಂಡಿದ್ದರೆ, ಗ್ರಹಾಂ ಟರ್ನರ್ ೧೯೭೦-೨೦೦೦ದ ನಡುವಣ ಮಾಹಿತಿಗಳನ್ನು ಬಳಸಿಕೊಂಡಿದ್ದಾರೆ.</p>
<p style="text-align:justify;">೨೧ನೇ ಶತಮಾನದ ಮಧ್ಯಭಾಗದಲ್ಲಿ ಜಾಗತಿಕ ಆರ್ಥಿಕ ಮತ್ತು ಸಾಮಾಜಿಕ ಪತನ ಖಚಿತ ಎಂಬುದು ಈ ಪುಸ್ತಕದ ಒಟ್ಟಾರೆ ಅಭಿಮತ. `೨೧ನೇ ಶತಮಾನದ ಆರಂಭದಿಂದಲೇ ಸಂಪನ್ಮೂಲಗಳ ಕೊರತೆ ಕಾಣಿಸಿಕೊಳ್ಳುತ್ತದೆ; ಮಾಲಿನ್ಯವು ವಿಪರೀತವಾಗಿ ಹೆಚ್ಚುತ್ತದೆ;  ತಲಾವಾರು ಆಹಾರ ಉತ್ಪಾದನೆ, ಸೇವೆಗಳು ಮತ್ತು ಲೌಕಿಕ ಸಿರಿವಂತಿಕೆ ಕಡಿಮೆಯಾಗುತ್ತದೆ&#8217; ಎಂದು ಡೊನೆಲ್ಲಾ ಮೀಡೋಸ್ ಮತ್ತಿತರರು ಹೇಳಿದ್ದರು.</p>
<p style="text-align:justify;">ಈ ಪುಸ್ತಕದ ಸಾಮಾನ್ಯ ವಾದಗಳು ಖಂಡಿತವಾಗಿಯೂ ಆತಂಕ ತರುವಂಥ ವಾಸ್ತವ ಸಂಗತಿಗಳು ಎನ್ನುತ್ತಾರೆ ಪಳೆಯುಳಿಕೆ ಇಂಧನ ಬಳಕೆ ಮುಕ್ತಿಗಾಗಿ ಅಭಿಯಾನ ಮಾಡುತ್ತಿರುವ ರಿಚರ್ಡ್ ಹೀನ್‌ಬರ್ಗ್. ಅವರ ಮಾತುಗಳಲ್ಲೇ ಹೇಳುವುದಾದರೆ ವಿಶ್ವದ ಮುಂದಿನ ಭವಿಷ್ಯ ಹೀಗಿದೆ:</p>
<ul style="text-align:justify;">
<li>
<div>ಮರುಬಳಕೆ ಮಾಡಲಾಗದ ತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಲು, ಆಂಟಿಮನಿ, ಝಿಂಕ್ ಇತ್ಯಾದಿ ಇಂಧನಮೂಲಗಳ ಪ್ರಮಾಣ ಕುಸಿಯುತ್ತಿದೆ.</div>
</li>
<li>
<div>ಪಳೆಯುಳಿಕೆ ಇಂಧನಗಳಿಂದ ತಾಪಮಾನ ಹೆಚ್ಚುತ್ತಿದೆ; ಬರಗಾಲ ಹೆಚ್ಚುತ್ತಿದೆ; ಹಿಮಗಡ್ಡೆಗಳು ಕರಗುತ್ತಿವೆ; ಸಮುದ್ರಮಟ್ಟ ಹೆಚ್ಚುತ್ತಿದೆ.</div>
</li>
<li>
<div>ಜಗತ್ತಿನ ಎಲ್ಲ ದೇಶಗಳೂ ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗುತ್ತಿವೆ. ಇದಕ್ಕೆ ಪರಿಸರ ಮಾಲಿನ್ಯ, ಉದ್ಯಮಗಳಿಗಾಗಿ ಮತ್ತು ಕೃಷಿಗಾಗಿ ಅಂತರ್ಜಲದ ಅತಿಯಾದ ಬಳಕೆ &#8211; ಇವೇ ಮುಖ್ಯ ಕಾರಣ.</div>
</li>
<li>
<div>ವಿಶ್ವದ ತಲಾ ಆಹಾರ ಉತ್ಪಾದನೆ ಕುಸಿಯುತ್ತಿದೆ. ಈಗಿನ ಫಸಲನ್ನೇ ಕಾಯ್ದುಕೊಳ್ಳುವ ಯತ್ನಗಳಿಗೆ ವಾತಾವರಣ ಬದಲಾವಣೆ, ಭೂ ಸವಕಳಿ, ನೀರಿನ ಕೊರತೆ ಮತ್ತು ಅತಿಯಾದ ಇಂಧನ ವೆಚ್ಚಗಳು ಅಡ್ಡಿಯಾಗುತ್ತಿವೆ.</div>
</li>
<li>
<div>ಭೂಮಿಯ ಜೀವಕೋಟಿಗಳೆಲ್ಲ ವಿನಾಶದ ಅಂಚಿಗೆ ಬರುತ್ತಿವೆ. ಈ ಪರಿಸ್ಥಿತಿ ಹಿಂದಿನ ೬ ಕೋಟಿ ವರ್ಷಗಳಲ್ಲಿ ಬಂದಿರಲಿಲ್ಲ.</div>
</li>
</ul>
<p style="text-align:justify;">ಆದ್ದರಿಂದ ವಿಶ್ವದ ನಾಯಕರು ೧) ಪಳೆಯುಳಿಕೆ ಇಂಧನದ ಅವಲಂಬನೆಯನ್ನು ಆದಷ್ಟು ಬೇಗ ತಗ್ಗಿಸುವುದು; ೨) ಆರ್ಥಿಕ ಬೆಳವಣಿಗೆಯನ್ನು ಕೊನೆಗೊಳಿಸಲು ಹೊಂದಾಣಿಕೆ ಮಾಡಿಕೊಳ್ಳುವುದು; ೩) ವಿಶ್ವದ ೭೦೦ ಕೋಟಿ ಜನರಿಗೆ ಸುಸ್ಥಿರ ಬದುಕಿನ ಮಾರ್ಗವನ್ನು ರೂಪಿಸಿಕೊಡುವುದು ಮತ್ತು ೪) ಕಳೆದ ನೂರು ವರ್ಷಗಳಲ್ಲಿ ನಡೆದ ಪಳೆಯುಳಿಕೆ ಇಂಧನ ಆಧಾರಿತ ಪ್ರಗತಿಯ ಪಾರಿಸರಿಕ ದುಷ್ಪರಿಣಾಮಗಳನ್ನು ಸಮರ್ಥವಾಗಿ ನಿರ್ವಹಿಸುವುದು &#8211; ಈ ನಾಲ್ಕು ಸಂಗತಿಗಳಿಗೆ ಆದ್ಯತೆ ನೀಡಬೇಕು ಎಂದು ಹೀನ್‌ಬರ್ಗ್ ಹೇಳುತ್ತಾರೆ.</p>
<p style="text-align:justify;">ಒಂದು ಮಟ್ಟ ದಾಟಿದ ಮೇಲೆ ಬೆಳವಣಿಗೆಯು ಅನುಕೂಲಕ್ಕಿಂತ ಸಮಸ್ಯೆಯಾಗುವ ಸಂಭವವೇ ಹೆಚ್ಚು ಎಂದು ಹೀನ್‌ಬರ್ಗ್ ಹೇಳುತ್ತಾರೆ.</p>
<p style="text-align:justify;"><strong>ನಾಗರಿಕತೆಗಳ ಪತನದ ಕಾರಣವೇ ನಮಗೆ ಪಾಠವಲ್ಲವೆ?</strong></p>
<p style="text-align:justify;"> </p>
<p style="text-align:justify;"><img title="Collapse_book" src="http://mitramaadhyama.co.in/wp-content/uploads/2010/11/Collapse_book.jpg" alt="" width="261" height="400" /></p>
<p style="text-align:justify;">`ಕೊಲಾಪ್ಸ್: ಹೌ ಸೊಸೈಟೀಸ್ ಚೂಸ್ ಟು ಫೈಲ್ ಆರ್ ಸಕ್ಸೀಡ್&#8217; ಎಂಬ ಬೃಹತ್ ಗ್ರಂಥವನ್ನು ಬರೆದ  ಜಾರೆಡ್ ಡೈಮಂಡ್ ಕೂಡಾ ಪರಿಸರ ನಾಶವೇ ಹಲವು ನಾಗರಿಕತೆಗಳ ಕಣ್ಮರೆಗೆ ಕಾರಣ ಎಂದು ಹಲವಾರು ಉದಾಹರಣೆ, ಇತಿಹಾಸದ ವಾಸ್ತವಾಂಶಗಳ ಮೇಲೆ ವಾದಿಸುತ್ತಾರೆ. ಸಮಕಾಲೀನ ಜಗತ್ತನ್ನೂ ಅವರು ತಮ್ಮ ಹರಿತ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಮಧ್ಯ ಅಮೆರಿಕಾದ ಮಾಯಾ ನಾಗರಿಕತೆ, ಉತ್ತರ ಅಮೆರಿಕಾದ ಅನಾಸಾಝಿ ನಾಗರಿಕತೆ, ಪಿಟ್‌ಕೇರ್ನ್ ದ್ವೀಪದ ಪಾಲಿನೇಶಿಯನ್ ನಾಗರಿಕತೆ, ಈಸ್ಟರ್ ದ್ವೀಪದ ನಾಶ, ಗ್ರೀನ್‌ಲ್ಯಾಂಡ್ ನಾರ್ಸ್‌ನ ಪತನ &#8211; ಎಲ್ಲದರಲ್ಲೂ  ಪರಿಸರ ಹಾನಿಯ ಅಂಶವಿದೆ ಎಂದು ಡೈಮಂಡ್ ಪ್ರತಿಪಾದಿಸಿದ್ದಾರೆ. ಹಾಗೇ ಸಮಕಾಲೀನ ಚೀನಾ, ಆಸ್ಟ್ರೇಲಿಯಾ, ಹೈಟಿ, ರ್‍ವಾಂಡಾವನ್ನೂ ಅವರು ತಮ್ಮ ಸಿದ್ಧಾಂತದ ಒರೆಗೆ ಹಚ್ಚಿದ್ದಾರೆ. `ನಾಗರಿಕತೆಗಳ ವಧೆಯಾಗಲಿಲ್ಲ; ಅವು ಆತ್ಮಹತ್ಯೆ ಮಾಡಿಕೊಂಡವು&#8217; ಎಂದು  ಖ್ಯಾತ ಇತಿಹಾಸಕಾರ ಆರ್ನಾಲ್ಡ್ ಟಾಯ್ನಬೀ ಹೇಳಿದ್ದನ್ನು ಡೈಮಂಡ್ ಬೆಂಬಲಿಸುತ್ತಾರೆ.</p>
<p style="text-align:justify;">ಅದಿರಲಿ, ೨೦೪೦ರ ಹೊತ್ತಿಗೆ ಜಾಗತಿಕ ಏರುಪೇರುಗಳಾಗಿ ಪ್ರಳಯ ಸ್ವರೂಪದ ಘಟನೆಗಳು ಜರುಗುತ್ತವೆ ಎಂದು ಹವಾಮಾನ ವಿಜ್ಞಾನಿ ಜೇಮ್ಸ್ ಲವ್‌ಲಾಕ್ ತನ್ನ ಪುಸ್ತಕ `ದಿ ರಿವೆಂಜ್ ಆಫ್ ಗಾಯಾ&#8217; (೨೦೦೬)ದಲ್ಲಿ ಎಚ್ಚರಿಸಿದ್ದಾರೆ. ಇನ್ನು ಮೂವತ್ತು ವರ್ಷಗಳಲ್ಲಿ ಚೀನಾ ದೇಶವು ಮಾನವ ವಸತಿಗೆ ಅಯೋಗ್ಯವಾಗುತ್ತದೆ; ೬೦೦ ಕೋಟಿ ಜನರು ಪ್ರವಾಹ, ಬರಗಾಲಕ್ಕೆ ತುತ್ತಾಗುತ್ತಾರೆ; ಪರಮಾಣು ಸ್ಥಾವರಗಳ ಪರಿಣಾಮ ಪರಿಸರವಾದಿಗಳ ಕಲ್ಪನೆಗಿಂತ ಭೀಕರವಾಗಿರುತ್ತದೆ; ಯೂರೋಪಿನಲ್ಲಿ ಬೆಳೆಗಳೇ ಬೆಳೆಯುವುದಿಲ್ಲ. `ಮನುಕುಲವು ದೇವರೇ ಆಯ್ಕೆ ಮಾಡಿದ ಜೀವ ಸಮುದಾಯ&#8217; ಎಂದು ಭಾವಿಸುವುದು ಅಧಿಕಪ್ರಸಂಗಿತನದ ಪರಮಾವಧಿ ಎಂದು ಲವ್‌ಲಾಕ್ ಹೇಳುತ್ತಾರೆ.</p>
<p style="text-align:justify;">ಭಾರತವು ಸಿಂಧೂ ನಾಗರಿಕತೆಯ ಮೂಸೆಯಲ್ಲಿ ಅರಳಿದ ಮಹಾನ್ ಸಮಾಜ ಎಂಬುದನ್ನು ನಾವು ಗಮನಿಸಿದರೆ, ಸಿಂಧೂ ನಾಗರಿಕತೆಯ ನಾಶವೇಕಾಯಿತು ಎಂಬುದನ್ನೂ ಒಮ್ಮೆ ನೆನಪಿಸಿಕೊಳ್ಳಬೇಕಾಗುತ್ತದೆ. ಸಿಂಧೂ &#8211; ಸರಸ್ವತಿ ನದಿಗಳ ತಟದಲ್ಲಿ ಉಚ್ಛ್ರಾಯಕ್ಕೆ ಬಂದ ನಮ್ಮ ನಾಗರಿಕತೆಯು ಅತಿಯಾದ ಕೃಷಿ ಜೀವನ, ಪರಿಸರ ನಾಶ, ನದೀ ಪಾತ್ರಗಳಲ್ಲಿನ ಬದಲಾವಣೆ, &#8211; ಇವೆಲ್ಲ ಕಾರಣಗಳಿಂದಾಗಿ ಕುಸಿಯಿತು ಎಂಬ ಮಾಹಿತಿಗಳು ಈಗ ಸಿಕ್ಕಿವೆ.</p>
<p style="text-align:justify;"> <strong>ಹೋಮ್ : `ಈ ವಸುಂಧರೆಯೇ ನಮ್ಮ ಮನೆ, ಹಾಳುಗೆಡಹಬೇಡಿ&#8217;</strong></p>
<p style="text-align:justify;">೨೦೦೯ರಲ್ಲಿ ಯಾನ್ ಆರ್ಥಸ್ ಬರ್ಟ್‌ರಂಡ್ ನಿರ್ಮಿಸಿದ `ಹೋಮ್&#8217; ಎಂಬ ಸಾಕ್ಷ್ಯಚಿತ್ರವನ್ನು ನೋಡಿ. ಅದರಲ್ಲಿ ಇರುವ ನೂರಾರು ಪುಟ್ಟ ವಾಕ್ಯಗಳಲ್ಲಿ ಭೂಮಿಯ ಕಥೆಯಿದೆ; ವ್ಯಥೆಯಿದೆ; ಆಶಾಕಿರಣವೂ ಇದೆ.</p>
<ul style="text-align:justify;">
<li>
<div>೪೦೦ ಕೋಟಿ ವರ್ಷಗಳ ಹಿಂದೆ ಮೂಡಿದ ಈ ಭೂಮಿಯ ಮೇಲೆ ಮನುಷ್ಯ ಹುಟ್ಟಿ ಬರೀ ಎರಡು ಲಕ್ಷ ವರ್ಷಗಳಾದವು. ಆದರೆ ಇಡೀ ಭೂಮಿಯ ಚಹರೆಯನ್ನೇ ಮನುಷ್ಯ ಬದಲಿಸಿದ್ದಾನೆ. ಕೆಲವೇ ಸಾವಿರ ವರ್ಷಗಳ ಹಿಂದೆ ಆರಂಭವಾದ ಕೃಷಿಜೀವನದಲ್ಲಿ ಇಂದು ಜಗತ್ತಿನ ಅರ್ಧಕ್ಕರ್ಧ ಪಾಲು ಜನ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಮುಕ್ಕಾಲು ಪಾಳು ಜನ ತಮ್ಮ ಕೈಗಳಿಂದಲೇ ಬಿತ್ತಿ ಬೆಳೆಯುತ್ತಿದ್ದಾರೆ. ಕೃಷಿಭೂಮಿಯೀಗ ಹಾಳಾಗಿ ಮನುಷ್ಯ ಅಭಿವೃದ್ಧಿಪಡಿಸಿದ್ದ ತಳಿಗಳ ಪೈಕಿ ಮುಕ್ಕಾಲು ಪಾಲು ನಾಶವಾಗಿದೆ.</div>
<p><img title="HOME-MOVIE-STILL" src="http://mitramaadhyama.co.in/wp-content/uploads/2010/11/HOME-MOVIE-STILL.jpg" alt="" width="500" height="285" /></li>
<li>
<div>ಚೀನಾದ ಶಾಂಘೈ ಒಂದರಲ್ಲೇ ಕಳೆದ ೨೦ ವರ್ಷಗಳಲ್ಲಿ ೩೦೦೦ ಗಗನಚುಂಬಿ ಕಟ್ಟಡಗಳು ಮೇಲೆದ್ದವು. ಇಂದು ಮುನ್ನೂರೈವತ್ತು ಕೋಟಿ ಜನ ನಗರಗಳಲ್ಲೇ ಬದುಕುತ್ತಿದ್ದಾರೆ. ಬರೀ ನ್ಯೂಯಾಕ್ ನಗರವೊಂದೇ ಜಗತ್ತಿನ ಆರನೇ ಅತಿ ದೊಡ್ಡ ಆರ್ಥಿಕತೆಯಾಗಿದೆ.  ಎಲ್ಲೆಲ್ಲೂ ಯಂತ್ರಗಳ ಭರಾಟೆ.  ಲಾಸ್ ಏಂಜಲಿಸ್‌ನಲ್ಲಿ ಪ್ರತಿಯೊಬ್ಬರಿಗೂ ಒಂದು ಕಾರು.</div>
</li>
<li>
<div>ಬಹುಪ್ರಸಿದ್ಧವಾದ ದುಬೈ ಕೂಡಾ ಈ ಪಟ್ಟಿಯಲ್ಲಿದೆ. ಇಲ್ಲಿಯೂ ಸಾವಿರಾರು ಗಗನಚುಂಬಿಗಳು. ಎಲ್ಲೂ ಸೌರಶಕ್ತಿಯ ಬಳಕೆಯಿಲ್ಲ.</div>
</li>
<li>
<div>ಒಂದು ಕಿಲೋಗ್ರಾಂ ಆಲೂಗೆಡ್ಡೆ ಬೆಳೆಯಲು ೧೦೦ ಲೀಟರ್ ನೀರು ಬೇಕು; ಒಂದು ಕಿಲೋಗ್ರಾಂ ಅಕ್ಕಿ ಬೆಳೆಯಲು ೪೦೦೦ ಲೀಟರ್ ನೀರು ಬೇಕು; ಒಂದು ಕಿಲೋಗ್ರಾಂ ಮಾಂಸ ಸಿದ್ಧಪಡಿಸಲು ೧೩ ಸಾವಿರ ಲೀಟರ್ ನೀರು ಬೇಕು; ಅವನ್ನೆಲ್ಲ ಉತ್ಪಾದಿಸಿ ರವಾನಿಸಲು ಬೇಕಾದ ಇಂಧನದ ಲೆಕ್ಕ ಬೇರೆ.</div>
</li>
<li>
<div>ವಿಶ್ವದ ಶೇ. ೮೦ರಷ್ಟು ಇಂಧನ ಸಂಪನ್ಮೂಲವನ್ನು ಕೇವಲ ಶೇ. ೨೦ರಷ್ಟು ಜನ ಕಬಳಿಸುತ್ತಾರೆ. ೧೯೫೦ರಿಂದ ಈವರೆಗೆ ವಿಶ್ವದ ವ್ಯಾಪಾರವು ೨೦ ಪಟ್ಟು ಹೆಚ್ಚಿದೆ.</div>
</li>
<li>
<div>ಒಂದು ಕಾಲದಲ್ಲಿ ನೀರಿನ ವ್ಯವಸ್ಥೆಗೆ ಹೆಸರಾಗಿದ್ದ ಉದಯಪುರ ಇರುವ ಭಾರತವು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಭಾರೀ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈಗ ಭಾರತದಲ್ಲಿ ಎರಡು ಕೋಟಿ ಬಾವಿಗಳಿವೆ.</div>
</li>
</ul>
<p style="text-align:justify;"><strong><img title="HOME-MOVIE-STILL-2" src="http://mitramaadhyama.co.in/wp-content/uploads/2010/11/HOME-MOVIE-STILL-2.jpg" alt="" width="400" height="286" /></strong></p>
<p style="text-align:justify;"><strong>`ಹೋಮ್&#8217; ಹೇಳಿದ ಭರವಸೆಯ ಸಂಗತಿಗಳು</strong></p>
<p style="text-align:justify;">ಲೆಸೋಥೋ ಎಂಬ ಪುಟ್ಟ ಬಡದೇಶವು ಶಿಕ್ಷಣಕ್ಕೆ ಮೀಸಲಿಟ್ಟ ಸಂಪನ್ಮೂಲ ಜಗತ್ತಿನಲ್ಲೇ ಗರಿಷ್ಠ. ಹಾಗೇ ಸಿರಿವಂತ ದೇಶವಾದ ಖತಾರ್ ಕೂಡಾ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ. ಬಾಂಗ್ಲಾ ದೇಶದ ಮೈಕ್ರೋಬ್ಯಾಂಕಿಂಗ್ ಕ್ರಾಂತಿಯು ಬಡವರಿಗೆ ನೆರವಾಗಿದೆ. ಆಂಟಾರ್ಕಟಿಕಾ ಖಂಡವನ್ನು ಶಾಂತಿ ಮತ್ತು ವಿಜ್ಞಾನಕ್ಕೆಂದೇ ಮೀಸಲಿಡಲಾಗಿದೆ. ದಕ್ಷಿಣ ಕೊರಿಯಾದಲ್ಲಿ ಕಾಡಿನ ಪ್ರಮಾಣ ಒಟ್ಟು ಭೂಪ್ರಮಾಣದ ಶೇ. ೬೫ಕ್ಕೆ ಏರಿದೆ. ಅಲ್ಲೀಗ ಶೇ. ೭೫ರಷ್ಟು ಕಾಗದವು ಮರುಬಳಕೆಯಾದದ್ದು. ಕೋಸ್ಟಾರಿಕಾ ದೇಶದಲ್ಲಿ ಸೇನೆಯೇ ಇಲ್ಲ; ಬದಲಿಗೆ ಭೂಮಿಯ ರಕ್ಷಣೆಗೇ ಹೆಚ್ಚು ಮಹತ್ವ. ಗಾಬೋನ್ ದೇಶದಲ್ಲಿ ಹೆಕ್ಟೇರಿಗೆ ಕೇವಲ ಒಂದು ಮರವನ್ನು ಕಡಿಯುವ ಮಿತಿ ಹಾಕಲಾಗಿದೆ. ಜರ್ಮನಿಯ ಫ್ರೀಬರ್ಗ್ ಜಿಲ್ಲೆಯಲ್ಲಿ ಐದು ಸಾವಿರ ಜನರ ಮನೆಗಳಿಗೆ ಬೇಕಾದ ಇಂಧನ ಅವರ ಮನೆಗಳಲ್ಲೇ ಉತ್ಪಾದನೆಯಾಗುತ್ತದೆ. ನ್ಯೂಝೀಲ್ಯಾಂಡ್, ಐಸ್‌ಲ್ಯಾಂಡ್, ಆಸ್ಟ್ರಿಯಾ, ಸ್ವೀಡನ್ ದೇಶಗಳಲ್ಲಿ ಮರುಬಳಕೆಯ ಇಂಧನ ಯೋಜನೆಗಳಿಗೇ ಹೆಚ್ಚಿನ ಆದ್ಯತೆ ದೊರೆತಿದೆ.</p>
<p style="text-align:justify;">ಇಂಥ ಹತ್ತು ಹಲವು ಉದಾಹರಣೆಗಳೊಂದಿಗೆ ಮುಗಿಯುವ ಈ ಸಾಕ್ಷ್ಯಚಿತ್ರವು ಒಬ್ಬ ಸಹೃದಯ, ಸೂಕ್ಷ್ಮ ಮನುಷ್ಯನ ಎದೆಯಾಳದಲ್ಲಿ ಆತಂಕದ ಕಥೆಯನ್ನು ಹೇಳುತ್ತಲೇ ವಿಶ್ವಾಸದ ಬಿಂದುಗಳನ್ನೂ ಮೂಡಿಸುತ್ತದೆ.</p>
<p style="text-align:justify;"><strong>ಎಣ್ಣೆಬಾಕ ಮನುಕುಲಕ್ಕೆ ಕ್ಯೂಬಿಕ್ ಮೈಲ್ ಆಫ್ ಆಯಿಲ್</strong></p>
<p style="text-align:justify;"><img title="ONE-CUBIC-MILE-OF-OIL-BOOK" src="http://mitramaadhyama.co.in/wp-content/uploads/2010/11/ONE-CUBIC-MILE-OF-OIL-BOOK-678x1024.jpg" alt="" width="218" height="306" /></p>
<p style="text-align:justify;"> ಒಂದು ಘನ ಮೈಲು (ಒಂದು ಮೈಲು ಉದ್ದ, ಅಗಲ ಮತ್ತು ಎತ್ತರದ ಒಂದು ಘನಪ್ರದೇಶ) ಪ್ರಮಾಣದಲ್ಲಿ ಹಿಡಿಸುವಷ್ಟು ತೈಲವನ್ನು ಸುಟ್ಟರೆ ಸಿಗುವ ಇಂಧನವನ್ನು &#8216;ಕ್ಯೂಬಿಕ್ ಮೈಲ್ ಆಫ್ ಆಯಿಲ್&#8217; ಎಂದು ಕರೆದವನು ಸ್ಟಾನ್‌ಫರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಹ್ಯೂ ಕ್ರೇನ್ ಎಂಬ ವಿಜ್ಞಾನಿ. ಈ ಪರಿಕಲ್ಪನೆಯು ಇಂಧನವನ್ನು ಅಳೆಯು ಹಲವಾರು ಮಾನದಂಡಗಳ ಗೊಂದಲವನ್ನು ತಪ್ಪಿಸಿದ್ದಷ್ಟೇ ಅಲ್ಲ, ಜಗತ್ತಿನ ಭವಿಷ್ಯದ ಇಂಧನ ಬೇಡಿಕೆಯ ಲೆಕ್ಕಾಚಾರವನ್ನೂ ಸರಳಗೊಳಿಸಿತು. ೨೦೦೬ ಹೊತ್ತಿಗೆ ಜಗತ್ತು ಮೂರು ಕ್ಯೂಬಿಕ್ ಮೈಲ್ ತೈಲ (ಸಿಎಂಓ)ವನ್ನು ಕಬಳಿಸುತ್ತಿತ್ತು ಎಂಬ ಲೆಕ್ಕ ಸಿಕ್ಕಿದೆ. ಈಗಿನ ಲೆಕ್ಕದಂತೆ ವಸುಂಧರೆಯ ಒಡಲಲ್ಲಿ ೪೨ ಸಿಎಂಓ ನೈಸರ್ಗಿಕ ಅನಿಲವಿದೆ; ೧೨೧ ಸಿಎಂಓಗಳಷ್ಟು ಕಲ್ಲಿದ್ದಲಿನ ನಿಕ್ಷೇಪವಿದೆ. ಇತರೆ ಅಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳ ಲೆಕ್ಕ ಸಿಕ್ಕಿಲ್ಲ. ಅದೇನೇ ಇರಲಿ, ಈಗಿನ ಲೆಕ್ಕಾಚಾರದಂತೆ ಇನ್ನು ೪೦ ವರ್ಷಗಳಲ್ಲಿ ತೈಲನಿಕ್ಷೇಪಗಳು ಖಾಲಿಯಾಗುತ್ತವೆ.</p>
<p style="text-align:justify;">ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಬಗ್ಗೆ ಉಪನ್ಯಾಸ ನೀಡಿದ `ಕ್ಯೂಬಿಕ್ ಮೈಲ್ ಆಫ್ ಆಯಿಲ್&#8217; ಪುಸ್ತಕದ ಲೇಖಕ, ವಿಜ್ಞಾನಿ ಋತುದಮನ ಮಲ್ಹೋತ್ರಾ ಪ್ರಕಾರ ಸೌರ ವಿದ್ಯುತ್ ಫಲಕಗಳೂ ದುಬಾರಿಯೇ.</p>
<p style="text-align:justify;">(ನಿಮಗೆ ಈ ಸಿಎಂಓದ ಲೆಕ್ಕ ಸಿಗಬೇಕಾದರೆ ಇನ್ನೂ ಕೆಲವು ಹೋಲಿಕೆಗಳನ್ನು ಗಮನಿಸಬೇಕು: ವರ್ಷಕ್ಕೆ ೪ ಅಣೆಕಟ್ಟುಗಳು ಅಥವಾ ೫೨ ಪರಮಾಣು ಸ್ಥಾವರಗಳು, ಅಥವಾ ೧೦೪ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಅಥವಾ ೩೨,೮೦೦ ಗಾಳಿ ಆಧಾರಿತ ಸ್ಥಾವರಗಳು, ಅಥವಾ ಒಂಭತ್ತು ಕೋಟಿ ಛಾವಣಿಗಳಲ್ಲಿ ಸೋಲಾರ್ ಫೋಟೋವೋಲ್ಟಾಯಿಕ್ ಫಲಕಗಳು! ಇವುಗಳಲ್ಲಿ ಯಾವುದಾದರೊಂದನ್ನು ನಿರಂತರ ೫೦ ವರ್ಷಗಳ ಕಾಲ ಸ್ಥಾಪಿಸಿದರೆ, ಅದು ಒಂದು ಕ್ಯೂಬಿಕ್ ಮೈಲ್ ಆಯಿಲ್‌ಗೆ ಸಮ! ೨೦೦೮ರ ಲೆಕ್ಕದಂತೆ ಒಂದು ಸಿಎಂಓ ತೈಲದ ಬೆಲೆ ೩ ಲಕ್ಷ ಕೋಟಿ ಡಾಲರ್‌ಗಳು)</p>
<p style="text-align:justify;"> </p>
<p style="text-align:justify;"> </p>
<p style="text-align:justify;"><img title="ONE-CUBIC-MILE-OF-OIL-EQUIVALENT" src="http://mitramaadhyama.co.in/wp-content/uploads/2010/11/ONE-CUBIC-MILE-OF-OIL-EQUIVALENT.jpg" alt="" width="380" height="338" /></p>
<p style="text-align:justify;"><strong></strong> </p>
<p style="text-align:justify;"><strong><img title="Ren2008" src="http://mitramaadhyama.co.in/wp-content/uploads/2010/11/Ren2008.jpg" alt="" width="496" height="290" /></strong></p>
<p style="text-align:justify;"><strong>ಏಕಾತ್ಮ ಮಾನವತೆಯ ಒಂದಂಶ ಇಲ್ಲಿದೆ</strong></p>
<p style="text-align:justify;">ಭಾರತೀಯ ಜನಸಂಘದ ಅಧ್ಯಕ್ಷರಾಗಿದ್ದ ಚಿಂತಕ ಪಂಡಿತ ದೀನದಯಾಳ್ ಉಪಾಧ್ಯಾಯರ `ಏಕಾತ್ಮ ಮಾನವತೆ&#8217;ಯು ನನ್ನ ಮಟ್ಟಿಗೆ ಒಂದು ಉತ್ಕೃಷ್ಟ ಚಿಂತನೆಯ ದಾಖಲೆ. ಅದರಲ್ಲಿ ದೀನದಯಾಳರು ಇಂಧನ ಬಳಕೆ ಕುರಿತಂತೆ ಹೀಗೆ ಹೇಳಿದ್ದಾರೆ:</p>
<p style="text-align:justify;">`ಯಂತ್ರಗಳು ಸವೆದಾಗ, ಅದಕ್ಕೆ ಸವಕಳಿ ಬೆಲೆಯನ್ನು ಲೆಕ್ಕ ಹಾಕುತ್ತೇವೆ. ಅಂದಮೇಲೆ ನಾವು ಪ್ರಕೃತಿಯನ್ನು ನಾಶಮಾಡಿದಾಗ ಅದಕ್ಕೆ ಸವಕಳಿ ಮೌಲ್ಯವನ್ನು ಕಟ್ಟಬೇಕಲ್ಲವೆ? ನಮ್ಮ ಆರ್ಥಿಕ ವ್ಯವಸ್ಥೆಯು ಈಗಿರುವ ಸಂಪನ್ಮೂಲವನ್ನು ಸ್ವೇಚ್ಛೆಯಿಂದ ಬಳಸಬಾರದು; ಬದಲಿಗೆ ಸಂಪನ್ಮೂಲದ ನಿಯಂತ್ರಿತ ಬಳಕೆಯಾಗಬೇಕು. ಅರ್ಥಪೂರ್ಣ, ಸುಖೀ ಮತ್ತು ಪ್ರಗತಿಪರ ಬದುಕಿಗಾಗಿ ಬೇಕಾಗುವ ಭೌತಿಕ ವಸ್ತುಗಳನ್ನು ಪಡೆಯಬೇಕೆಂಬುದೇನೋ ನಿಜ. ಅದಕ್ಕಾಗಿ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಹಾಗಂತ ನಾವು `ಮನುಷ್ಯನ ಹುಟ್ಟಿನ ಪರಮ ಮತ್ತು ಏಕೈಕ ಉದ್ದೇಶವೇ ಬಳಕೆ ಮಾಡುವುದು&#8217; ಎಂಬಂತೆ ಉತ್ಪಾದನೆ ಮತ್ತು ಬಳಕೆಯ ಇಲಿಪಂದ್ಯಾಟಕ್ಕೆ ಮುಂದಾಗುವುದು ಸರಿಯಲ್ಲ. ಯಂತ್ರವೊಂದಕ್ಕೆ ಕಲ್ಲಿದ್ದಲು ಬೇಕು, ನಿಜ. ಆದರೆ ಅದು ಕೇವಲ ಕಲ್ಲಿದ್ದಲನ್ನು ಕಬಳಿಸೋದಕ್ಕಷ್ಟೇ ರೂಪುಗೊಂಡಿಲ್ಲ. ಕನಿಷ್ಟ ಇಂಧನದ ಬಳಕೆಯಿಂದ ಗರಿಷ್ಟ ವೇಗವನ್ನು ಪಡೆಯುವುದೇ ನಾಗರಿಕತೆ. ಹಾಲು ಕರೆಯುವ ಕೃತ್ಯದಲ್ಲಿ ಇರುವ ಸಂಯಮವನ್ನು ನಾವು ಹೊಂದಬೇಕೇ ವಿನಃ, ಶೋಷಣೆಯ ಮಾನಸಿಕತೆಯನ್ನಲ್ಲ.</p>
<p style="text-align:justify;"><strong>ಧರಂಪಾಲ್ ಕಂಡ `ಒಂದು ಸುಂದರ ವೃಕ್ಷ&#8217;</strong></p>
<p style="text-align:justify;"><img title="DHARAMPAL" src="http://mitramaadhyama.co.in/wp-content/uploads/2010/11/DHARAMPAL.jpg" alt="" width="339" height="512" /></p>
<p style="text-align:justify;">ಭಾರತವು ಎಂದೂ ಹಿಂದುಳಿದ ದೇಶವಾಗಿರಲಿಲ್ಲ, ಬದಲಿಗೆ ಅತ್ಯಂತ ಮುಂದುವರಿದ ದೇಶವಾಗಿತ್ತು ಎಂದು ಖ್ಯಾತ ಇತಿಹಾಸ ಸಂಶೋಧಕ ಧರಂಪಾಲ್ ಹೇಳುತ್ತಾರೆ. ೨೦೦೬ರಲ್ಲಿ, ತಮ್ಮ ೮೪ರ ವಯಸ್ಸಿನಲ್ಲಿ ವಾರ್ಧಾದ ಸೇವಾಗ್ರಾಮದಲ್ಲಿ ಕೊನೆಯುಸಿರೆಳೆದ ಧರಂಪಾಲ್ ಇಪ್ಪತ್ತನೇ ಶತಮಾನದ ಭಾರತೀಯ ಸಂಶೋಧಕ.</p>
<p style="text-align:justify;">೧೯೩೧ರಲ್ಲಿ ಗಾಂಧೀಜಿಯವರು ಒಂದು ವಾದವನ್ನು ಮಂಡಿಸಿದ್ದರು: ನೂರು ವರ್ಷಗಳ ಹಿಂದಿನ ಭಾರತೀಯ ಶಿಕ್ಷಣ ವ್ಯವಸ್ಥೆ ಇಂದಿನ (ಗಾಂಧೀಜಿ ಕಾಲದ) ಬ್ರಿಟಿಶ್ ಶಿಕ್ಷಣಕ್ಕಿಂತ ಉತ್ತಮವಾಗಿತ್ತು ಎನ್ನುವುದೇ ಈ ಪ್ರತಿಪಾದನೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈ ವಿಷಯವು ಧರಂಪಾಲರನ್ನು ತುಂಬಾ ಕಾಡಿತ್ತು. ೬೦ರ ದಶಕದಿಂದ ಅರಂಭಿಸಿ ಧರಂಪಾಲ್ ಭಾರತದ ಇತಿಹಾಸ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳನ್ನು, ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಸಿಕ್ಕ ದಾಖಲೆಗಳನ್ನು ಆಳವಾಗಿ ಆಭ್ಯಸಿಸಿದರು. ಇದರ ಫಲವಾಗಿ ೧೯೭೧ರಲ್ಲಿ ಬಂದ ಪುಸ್ತಕವೇ:  ೧೮ನೇ ಶತಮಾನದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ. ಭಾರತೀಯ ಖಗೋಳಶಾಸ್ತ್ರ, ವೈದ್ಯಕೀಯ ವಿಜ್ಞಾನ, ಕಬ್ಬಿಣ ಮತ್ತು ಉಕ್ಕು ತಯಾರಿಕೆ, ಮಂಜುಗಡ್ಡೆ ತಯಾರಿಕೆ, ಕೃಷಿ ಸಲಕರಣೆಗಳು, &#8211; ಮುಂತಾದ ಕ್ಷೇತ್ರಗಳಲ್ಲಿ ಭಾರತೀಯರ ಸಕ್ಷಮತೆ ಇತ್ತೆಂದು ಸಾಬೀತುಪಡಿಸಿದ ಈ ಪುಸ್ತಕವು ಆಗ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.</p>
<p style="text-align:justify;">೧೯೮೩ರಲ್ಲಿ ವರು ಬರೆದ ಗ್ರಂಥ: `ದಿ ಬ್ಯೂಟಿಫುಲ್ ಟ್ರೀ&#8217; ಅವರ ಅತ್ಯಂತ ಆಳ ಅಧ್ಯಯನದ ಫಲ. ೪೩೬ ಪುಟಗಳ ಈ ಪುಸ್ತಕದಲ್ಲಿ ಅವರು ೧೮ನೇ ಶತಮಾನದ ಭಾರತದ ಶಿಕ್ಷಣ ವ್ಯವಸ್ಥೆ ಎಷ್ಟು ಗಟ್ಟಿಯಾಗಿತ್ತು, ಆಮೇಲೆ ಬ್ರಿಟಿಶರು ಹೇಗೆ ಅದನ್ನು ಶಿಥಿಲಗೊಳಿಸಿದರು ಎಂಬುದನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ. ಕಾರ್ಲ್ ಮಾರ್ಕ್ಸ್‌ನಿಂದ ಹಿಡಿದು ಅಂದಿನ ಪ್ರಮುಖ ಚಿಂತಕರು ಭಾರತವನ್ನು ಪಾಶ್ಚಾತ್ಯೀಕರಣಗೊಳಿಸಲು ಹೊರಟ ಸಂಗತಿಯೇ ಹೇಗೆ ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿತು ಎಂದು ಅವರು ವಿವರಿಸಿದ್ದಾರೆ. ಅದನ್ನೆಲ್ಲ ಅವರು ಬ್ರಿಟಿಶ್ ದಾಖಲೆಗಳನ್ನು ಬಳಸಿಯೇ ನಿರೂಪಿಸಿದ್ದಾರೆ ಎಂಬುದು ಗಮನಾರ್ಹ.</p>
<p style="text-align:justify;">ಪ್ರತಿಯೊಂದು ಹಳ್ಳಿಯಲ್ಲೂ ಒಂದು ಶಾಲೆ ಇತ್ತು; ೧೮೩೦ರ ಹೊತ್ತಿನಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಒಂದು ಲಕ್ಷ ಶಾಲೆಗಳಿದ್ದವು. ಮುಂಬಯಿ ಪ್ರೆಸಿಡಿನ್ಸಿಯಲ್ಲಿ ಶಾಲೆ ಇಲ್ಲದ ಒಂದು ಹಳ್ಳಿಯೂ ಇರಲಿಲ್ಲ; ಶಾಲೆಗಳಲ್ಲಿ ಬ್ರಾಹ್ಮಣೇತರರೂ ಶಿಕ್ಷಣ ಪಡೆಯುತ್ತಿದ್ದರು; ಉನ್ನತ ಶಿಕ್ಷಣದಲ್ಲಿ ಮಾತ್ರ ಬ್ರಾಹ್ಮಣರೇ ಹೆಚ್ಚಾಗಿದ್ದರು &#8211; ಇವೇ ಮುಂತಾದ ಅಂಶಗಳನ್ನು ಧರಂಪಾಲ್ ದಾಖಲಿಸಿದ್ದಾರೆ. ಇಂಥ ಸುಂದರ ವೃಕ್ಷ ಹೇಗೆ ಶಿಥಿಲವಾಯಿತು? ರಾಜಾರಾಮ್ ಮೋಹನ್‌ರಾಯ್ ಆಹ್ವಾನದ ಮೇರೆಗೆ ಬ್ರಿಟಿಶರು ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆದರು. ಇಂಥ ಶಾಲೆಗಳಿಗೆ ಸರ್ಕಾರದ ಮಾನ್ಯತೆ ನೀಡಲಾರಂಭಿಸಿದರು. ಆದ್ದರಿಂದ ದೇಶಿ ಶಿಕ್ಷಣ ವ್ಯವಸ್ಥೆಯು ಮಾನ್ಯತೆಯ ಕೊರತೆಯಿಂದ ತನ್ನಷ್ಟಕ್ಕೆ ತಾನೇ ಕುಸಿಯಿತು ಎಂಬ ವಾದವಿದೆ.</p>
<p style="text-align:justify;"><strong>ಭಾರತೀಯ ವಿಜ್ಞಾನದ ಗರಿಮೆ</strong></p>
<p style="text-align:justify;">ಧರಂಪಾಲ್ ನಮಗೆ ಬಿಟ್ಟುಹೋಗಿರುವ ಇನ್ನೊಂದು ಪ್ರಮುಖ ದಾಖಲೆ ಎಂದರೆ ಭಾರತೀಯ ವಿಜ್ಞಾನ, ತಂತ್ರಜ್ಞಾನವು ಹೇಗೆ ಪಾಶ್ಚಾತ್ಯರಿಗಿಂತ ಉನ್ನತ ಮಟ್ಟದ್ದಾಗಿತ್ತು; ಅದನ್ನು ಬ್ರಿಟಿಶರು ಹೇಗೆ ದಮನಿಸಿದರು ಎಂಬ ಮಾಹಿತಿಗಳ ಪ್ರಬಂಧಗಳು. ಈ ಪ್ರಬಂಧಗಳನ್ನು ಓದುವುದೇ ಒಂದು ಥ್ರಿಲ್ಲರ್ ಓದಿದ ಅನುಭವ ಕೊಡುತ್ತದೆ.</p>
<p style="text-align:justify;">೧೬೭೮-೯೩ರ ಅವಧಿಯಲ್ಲಿ ಯೂರೋಪಿನಲ್ಲಿ ಹಾರ್ಟಸ್ ಮಲಬಾರಿಕಸ್ ಎಂಬ ೭೫೦ ಭಾರತೀಯ ಸಸ್ಯಪ್ರಬೇಧಗಳ ೧೨ ಸಂಪುಟಗಳ ಚಿತ್ರಸಹಿತ ಗ್ರಂಥ ಪ್ರಕಟವಾಗುತ್ತದೆ. ಇದರಲ್ಲಿ ಕೇರಳ ಮತ್ತು ಕೊಂಕಣ ಪ್ರದೇಶದ ಪಂಡಿತರು ಈ ಪುಸ್ತಕವು ಸರಿಯಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ! ಭಾರತೀಯ ಕೃಷಿ ಸಲಕರಣೆಗಳು ೧೮ನೇ ಶತಮಾನದ ಬ್ರಿಟಿಶ್ ಕೃಷಿಗೆ ಭಾರೀ ಪ್ರಮಾಣದಲ್ಲಿ ನೆರವಾದವು. ಸಿಡುಬಿಗೆ ಭಾರತದಲ್ಲಿ ನೀಡುತ್ತಿದ್ದ ಲಸಿಕೆಯ ವಿಧಾನ; ಅಲಾಹಾಬಾದ್ &#8211; ವಾರಾಣಸಿಯಲ್ಲಿ ಮಂಜುಗಡ್ಡೆ ಮಾಡುತ್ತಿದ್ದ ವಿಧಾನ, ಕಟ್ಟಡ ನಿರ್ಮಾಣದ ವಿವಿಧ ಯಾಂತ್ರಿಕ ಹಾಗೂ ರಾಸಾಯನಿಕ ಮಾಹಿತಿಗಳು, ಭಾರತೀಯ ಉಕ್ಕು &#8211; ಕಬ್ಬಿಣ ತಯಾರಿಕೆ ವಿಧಾನಗಳು, ಶಸ್ತ್ರಚಿಕಿತ್ಸೆ, ಶಾಲೆಗಳಲ್ಲಿನ ಬೋಧನಾ ಕ್ರಮಗಳು &#8211; ಇವೆಲ್ಲವನ್ನೂ ಬ್ರಿಟಿಶರು ತಿಳಿದುಕೊಂಡರು. ಅದಿರಲಿ, ೧೭೯೭ರಲ್ಲೇ ಬರ್ಮಾದಲ್ಲಿ ಸುಮಾರು ೫೨೦ ಪೆಟ್ರೋಲಿಯಂ ಬಾವಿಗಳಿದ್ದವು ಎಂಬುದನ್ನೂ ಧರಂಪಾಲ್ ದಾಖಲಿಸುತ್ತಾರೆ. ಆ ಕಾಲದಲ್ಲಿ ಅವುಗಳಿಂದ ಒಂದು ಲಕ್ಷ ಟನ್ ತೈಲವನ್ನು ಎತ್ತಿ ೧೦ ಲಕ್ಷ ಭಾರತೀಯ ರೂಪಾಯಿಯ ವರಮಾನ ಪಡೆಯಲಾಗುತ್ತಿತ್ತು! (ಈ ರೂಪಾಯಿ ಈಗಿನದಲ್ಲ, ಸುಮಾರು ೨೧೦ ವರ್ಷ ಹಳೆಯದು ಎಂಬುದನ್ನು ನೆನಪಿಡಿ). ಈ ತೈಲವನ್ನು ದೀಪ ಬೆಳಗಿಸಲು, ಮರಗಳಿಗೆ ಬಳಿಯಲು, ದೋಣಿ &#8211; ಹಡಗುಗಳ ಬುಡಕ್ಕೆ ಸವರಲು, ವೈದ್ಯಕೀಯ ಅಗತ್ಯಗಳಿಗಾಗಿ ಬಳಸಲಾಗುತ್ತಿತ್ತು.</p>
<p style="text-align:justify;">೧೮೧೬ರಲ್ಲಿ ಆಧುನಿಕ ಬ್ರಿಟಿಶ್ ಶಸ್ತ್ರಚಿಕಿತ್ಸೆಯ ಸ್ಥಾಪಕ ಎಂದೇ ಮಾನ್ಯರಾದ ಜೆ ಸಿ ಕಾರ್ಪ್  ದಾಖಲಿಸಿದ  ಭಾರತೀಯ ಪ್ಲಾಸ್ಟಿಕ್ ಸರ್ಜರಿಯ ವಿವರಗಳನ್ನು ಧರಂಪಾಲ್ ಕೊಡುತ್ತಾರೆ.</p>
<p style="text-align:justify;"><strong>ಸರಳ ಬದುಕಿನ ಸರಳ ಸೂತ್ರಗಳು</strong></p>
<p style="text-align:justify;">ಸರಳ ಜೀವನವೇ ಇದಕ್ಕೆ ಪರಿಹಾರ ಎಂದು ಒಂದೇ ಮಾತಿನಲ್ಲಿ ಹೇಳಬಹುದು. ಸರಳ ಜೀವನ ಎಂದರೇನು ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ.</p>
<p style="text-align:justify;">ಸುಸ್ಥಿರ ಬದುಕಿಗೆ ಬೇಕಾದ ವಸ್ತುಗಳನ್ನಷ್ಟೇ ಬಳಸಿಕೊಂಡು ಬದುಕುವುದನ್ನೇ ಸರಳ ಜೀವನ ಎಂದು ಕರೆಯಬಹುದು. ಇಂಥ ಬದುಕಿನಲ್ಲೂ ವೈವಿಧ್ಯವಿದೆ. ಆಧ್ಯಾತ್ಮಿಕ ಸಂಗತಿಗಳಲ್ಲಿ ಆಸಕ್ತಿ ಇರುವವರು ಅದೇ ರಂಗದಲ್ಲಿ ಸರಳ ಜೀವನ ಸಾಗಿಸಬಹುದು. ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಬದುಕುವುದೇ ಸರಳ ಜೀವನದ ಸೂತ್ರವಾಗಲೂಬಹುದು. ಅಥವಾ ಪಾರಿಸರಿಕ ದುಷ್‌ಪ್ರಭಾವ ಬೀರದೆಯೇ ಬದುಕುವುದು, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಗ್ರಾಹಕ ಕೊಳ್ಳುಬಾಕತನದಿಂದ ದೂರ ಇರುವುದು, ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುವುದು, ಸುಸ್ಥಿರ ಅಭ್ಯುದಯಕ್ಕಾಗಿ ಹೋರಾಡುವುದು, ವೈವಿಧ್ಯಮಯ ಸಮಾಜಕ್ಕಾಗಿ ತುಡಿಯುವುದು &#8211; ಇವೆಲ್ಲವೂ ಸರಳ ಬದುಕಿನ ಭಾಗವಾಗಬಹುದು.</p>
<p style="text-align:justify;">ಭಾರತದಲ್ಲಿ ಹುಟ್ಟಿ ಇಡೀ ಮನುಕುಲಕ್ಕೇ ಸ್ವಾತಂತ್ರ್ಯದ ಭಾಷ್ಯ ಬರೆದ ಮಹಾತ್ಮಾ ಗಾಂಧಿ, ಕನ್ನಡದಲ್ಲಿ ಅತ್ಯುತ್ತಮ ಗ್ರಂಥಗಳನ್ನು, ಕಾವ್ಯವನ್ನು ಬರೆದ ಡಿ ವಿ ಗುಂಡಪ್ಪ, ಭಗವಾನ್ ಬುದ್ಧ, ಸಂತ ಕಬೀರ, ಸಂತ ಶಿಶುನಾಳ ಶರೀಫ, ಮೀರಾಬಾಯಿ, ಪುರಂಧರದಾಸ, ಕನಕದಾಸ, &#8211; ಹೀಗೆ ಸರಳ ಬದುಕು ಮತ್ತು ಸಮಷ್ಟಿಯ ಹಿತವನ್ನು ಬಯಸಿದ ಹಲವರನ್ನು ಇಲ್ಲಿ ಉದಾಹರಿಸಬಹುದು.</p>
<p style="text-align:justify;"><strong>ಯಂತ್ರಗಳನ್ನು ಕಳಚುವ ಬಗೆ</strong></p>
<p style="text-align:justify;">ಹೀಗೆ ಇಂಧನ ಆಧಾರಿತ ನಾಗರಿಕತೆಯ ಆಧುನಿಕ ಮುಖಗಳನ್ನು ಪರಿಚಯಿಸುವ ಕೃತಿಯೊಂದು ಕನ್ನಡದಲ್ಲಿ ಬಂದಿದೆ. ನಾಟಕಕಾರ ಪ್ರಸನ್ನ ಬರೆದ `ಯಂತ್ರಗಳನ್ನು ಕಳಚೋಣ ಬನ್ನಿ&#8217; ಪುಸ್ತಕದಲ್ಲಿ ಮಾನವನ ಯಂತ್ರ ಆಧಾರಿತ ಬದುಕಿನ ಚಿತ್ರಣ ಮತ್ತು ಅದರಿಂದ ಹೊರಬರಬೇಕಾದ ಅನಿವಾರ್ಯತೆಯ ಪ್ರತಿಪಾದನೆಯಿದೆ. ಇಂದಿನ ನೂರಾರು ಉದಾಹರಣೆಗಳನ್ನು ಕೊಡುತ್ತಲೇ, ಸಮಾಜವಾದ ಮತ್ತು ಇತರೆ ಸಿದ್ಧಾಂತಗಳನ್ನು ಛೇದಿಸುತ್ತಲೇ ಪ್ರಸನ್ನರು ಯಂತ್ರಗಳ ಬಗೆಗೆ ಒಂದು ರೋಚಕ ಮಾಹಿತಿಗಳನ್ನು ನೀಡುತ್ತಾರೆ. ಯಾವುದೇ ಸಮಾಜದಲ್ಲಿ ಮನುಷ್ಯ ಮುಖ್ಯನಾಗಬೇಕೇ ಹೊರತು ಯಂತ್ರಗಳಲ್ಲ ಎಂಬ ಗಾಂಧಿಯವರ ಮಾತನ್ನು ಉದಾಹರಿಸುವ ಪ್ರಸನ್ನ ಕೈಮಗ್ಗ ಪರಂಪರೆಯಿಂದ ಹಿಡಿದು ನಮ್ಮ ನಡುವೆ ಇರುವ ಎಲ್ಲ ಬಗೆಯ ಮನುಷ್ಯಭಾಗಿತ್ವದ ಚಟುವಟಿಕೆಗಳನ್ನು ನಿರೂಪಿಸುತ್ತಾರೆ.</p>
<p style="text-align:justify;">ಇಂದಿನ ಗ್ರಾಹಕವಾದಿ ಒತ್ತಡದಲ್ಲಿ ನಾವು ಕೊಳ್ಳುವುದನ್ನೇ ನಿಲ್ಲಿಸಬೇಕು ಎನ್ನುವ ಪ್ರಸನ್ನ ದುಡ್ಡಿನ ಮೇಲಿನ ನಮ್ಮ ಅವಲಂಬನೆಯು ಕಡಿಮೆಯಾಗಬೇಕು ಎನ್ನುತ್ತಾರೆ. ಊಟ, ಬಟ್ಟೆ, ಪುಸ್ತಕಗಳನ್ನು ಹಂಚಿಕೊಂಡು ಬಳಸಬೇಕು, ವ್ಯರ್ಥ ಓಡಾಟ ಕಡಿಮೆ ಮಾಡಬೇಕು, ಕಡಿಮೆ ಬೆಲೆಯ ಒರಟು ಧಾನ್ಯಗಳನ್ನು ಬಳಸಬೇಕು, ಸ್ಥಳೀಯವಾದ ಮತ್ತು ಆಯಾ ಋತುವಿನ ಹಣ್ಣು ತರಕಾರಿ ಬಳಸಬೇಕು, ಪರಸ್ಪರರಿಗೆ ಸಹಾಯ, ಅರ್ಥಾತ್ ಮೈಗೂಲಿ ಮಾಡಬೇಕು, ಬಡತನದಲ್ಲಿ ಸುಖ ಕಾಣಬೇಕು &#8211; ಇದು ಪ್ರಸನ್ನರ ಬದುಕಿನ ನೋಟ.</p>
<p style="text-align:justify;">ಭಾರತವು ಹಿಂದುಳಿದ ದೇಶವಾಗಿತ್ತು, ಪಾಶ್ಚಾತ್ಯ ಚಿಂತನೆಗಳನ್ನು ಅನುಸರಿಸಿದ ಕೂಡಲೇ ಮುಂದುವರಿಯಿತೆ? ಎಂದು ವ್ಯಂಗ್ಯವಾಡುವ ಪ್ರಸನ್ನರೂ ಧರಂಪಾಲರಂತೆ ಭಾರತವು ಎಂದೋ ಸಮೃದ್ಧ ಮತ್ತು ಸಂತುಲಿತ ಸಮಾಜವಾಗಿತ್ತು ಎನ್ನುವುದನ್ನು ಒಪ್ಪಿಕೊಂಡಂತೆ ಕಾಣಿಸುತ್ತದೆ.</p>
<p style="text-align:justify;">ಸರಳ ಜೀವನದ ಇನ್ನೊಂದು ಮುಖ್ಯ ಭೂಮಿಕೆ ಸ್ಥಳೀಯತೆಯನ್ನು ಬೆಂಬಲಿಸುವುದು. ಇದಕ್ಕೆ ಪ್ರಸನ್ನರು ಗ್ರಾಮದ ಮತ್ತು ಬೃಹತ್ ಕೈಗಾರಿಕೆಗಳನ್ನು ಹೋಲಿಸಿದ್ದಾರೆ. ಗ್ರಾಮ ಕೈಗಾರಿಕೆಯು ಚದುರಿದಂತಿರುತ್ತದೆ; ಬೃಹತ್ ಕೈಗಾರಿಕೆಯು ಕೇಂದ್ರೀಕೃತವಾಗಿರುತ್ತದೆ. ಗ್ರಾಮ ಕೈಗಾರಿಕೆಯು ಸಾಮಾಜಿಕ ಬಂಡವಾಳ ಬೇಡಿದರೆ, ಬೃಹತ್ ಕೈಗಾರಿಕೆಯು ದುಡ್ಡು ಬೇಡುತ್ತದೆ. ಗ್ರಾಮ ಕೈಗಾರಿಕೆಗೆ ನಗರಗಳೇ ಬೇಡ. ಅದು ನಿಧಾನಗತಿಯಲ್ಲಿ ಚಲಿಸುತ್ತದೆ. ಬೃಹತ್ ಕೈಗಾರಿಕೆಗೆ ವೇಗವೇ ಮೂಲಗುಣ. ಗ್ರಾಮ ಕೈಗಾರಿಕೆಯು ಮಾನವ ದುಡಿಮೆ ಅಥವಾ ಹೆಚ್ಚೆಂದರೆ ಸಾಕು ಪ್ರಾಣಿಗಳ ದುಡಿಮೆಯನ್ನು ಬಳಸುತ್ತದೆ. ಆದರೆ ಬೃಹತ್ ಕೈಗಾರಿಕೆಯು ಬೃಹತ್ ಪ್ರಮಾಣದ ವಿದ್ಯುತ್, ಖನಿಜ, ಅರಣ್ಯ, ನದಿ, ಅಣುವಿದ್ಯುತ್, ಬಂಡವಾಳ ಇತ್ಯಾದಿಗಳನ್ನು ನಿರೀಕ್ಷಿಸುತ್ತದೆ.</p>
<p style="text-align:justify;"><strong>ಸರಳ ಬದುಕಿನ ನೀಲನಕಾಶೆಗೆ ಇಲ್ಲಿದೆ ಮುನ್ನುಡಿ</strong></p>
<p style="text-align:justify;">ಇಂಧನ ಆಧಾರಿತ ನಾಗರಿಕತೆಯ ಅಪಾಯಗಳು, ಭಾರತೀಯ ಬದುಕಿನ ಕೆಲವು ನೋಟಗಳನ್ನು ನೋಡಿದ ಮೇಲೆ, ಸರಳ ಮತ್ತು ಯಂತ್ರಗಳಿಂದ ಮುಕ್ತ ಬದುಕನ್ನು ಸಾಧಿಸುವುದು ಹೇಗೆ ಎಂಬುದನ್ನು ಸೂತ್ರ ರೂಪದಲ್ಲಿ ಹೀಗೆ ಹೇಳಬಹುದೇನೋ:</p>
<ul style="text-align:justify;">
<li>
<div>ನೀವು ಹಳ್ಳಿಯಲ್ಲಿದ್ದರೆ, ಅಭಿನಂದನೆಗಳು! ನೀವೀಗಾಗಲೇ ಸರಳ ಬದುಕಿನ ಯಾವುದೋ ಘಟ್ಟದಲ್ಲಿ ಇದ್ದೇ ಇದ್ದೀರಿ. ದಯವಿಟ್ಟು ನಗರಕ್ಕೆ ಬರುವ ಯಾವುದೇ ಯೋಚನೆಯನ್ನೂ ಮಾಡಬೇಡಿ. ಸರಳ ಬದುಕಿಗೆ ಹಳ್ಳಿಯೇ ಮೊದಲ ಘಟ್ಟ.</div>
</li>
<li>
<div>ನಿಮ್ಮ ಹಳ್ಳಿಯಲ್ಲಿ ಇರುವ ಸಣ್ಣಪುಟ್ಟ ಜಗಳಗಳನ್ನು ಪರಿಹರಿಸಿಕೊಳ್ಳಲು ಪ್ರಾಮಾಣಿಕ ಯತ್ನ ನಡೆಸಿ. ಭಾರತೀಯ ಜನಸಂಘದ ಹಿರಿಯ ನಾಯಕ, ಮುಂದೆ ಜನತಾಪಾರ್ಟಿಯ ಸ್ಥಾಪನೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸಿದ ನಾನಾಜಿ ದೇಶಮುಖರು ತಮ್ಮ ಸಾಮಾಜಿಕ ಸೇವಾಕ್ಷೇತ್ರದಲ್ಲಿ ಇಂಥ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ.  ಎಲ್ಲ ರಾಜಕಾರಣಿಗಳೂ ೬೦ ವರ್ಷ ವಯಸ್ಸಾದ ತಕ್ಷಣ ರಾಜಕೀಯ ಬಿಟ್ಟು ಸಮಾಜಸೇವೆ ಮಾಡಬೇಕು ಎಂಬುದು ಅವರ ನೀತಿಯಾಗಿತ್ತು; ದೃಢನಂಬುಗೆಯಾಗಿತ್ತು. ಅದರಂತೆ ದಿಲ್ಲಿಯಲ್ಲೂ ಇರದೆ, ಮಧ್ಯಪ್ರದೇಶ &#8211; ಉತ್ತರಪ್ರದೇಶ ಗಡಿಭಾಗದ ಚಿತ್ರಕೂಟ &#8211; ಗೊಂಡಾ ಪ್ರದೇಶಕ್ಕೆ ಹೋಗಿ ನೆಲೆಸಿದರು. ಅಲ್ಲಿ ಐನೂರು ಹಳ್ಳಿಗಳಲ್ಲಿ ಸಾಮಾಜಿಕ ಕಾರ್ಯ ಮಾಡುವುದಕ್ಕೆ ಆರಂಭಿಸಿದರು. ಜನಸಂಘದ ನೇತಾರ ಪಂಡಿತ ದೀನದಯಾಳರ ಹೆಸರಿನ ಪ್ರತಿಷ್ಠಾನದಲ್ಲಿ ಅಲ್ಲಿ ಕೆಲಸ ಆರಂಭವಾಯಿತು. ಈಗ ಅಲ್ಲಿ ಏನೇನು ಪ್ರಗತಿಯಾಗಿದೆ ಎಂದು ನೀವು ನೋಡಬೇಕೆಂದರೆ ಅಲ್ಲಿಗೇ ಹೋಗಬಹುದು. ಒಂದೇ ಚಿಕ್ಕ ಉದಾಹರಣೆ ಕೊಡಬೇಕೆಂದರೆ, ಆ ಪ್ರದೇಶದ ೮೦ ಹಳ್ಳಿಗಳ ಜನ ಈಗ ಕೋರ್ಟು ಕಚೇರಿ ಎಂದು ಅಲೆಯುವುದೇ ಇಲ್ಲ. ಎಲ್ಲರೂ ಒಟ್ಟಾಗಿ ಕುಳಿತು ಪರಿಹಾರ ಕಂಡುಕೊಳ್ಳುತ್ತಾರಂತೆ. ದೇಶದ ಪ್ರಪ್ರಥಮ ಗ್ರಾಮೀಣ ವಿಶ್ವವಿದ್ಯಾಲಯ ಇರುವುದೂ ಇಲ್ಲಿಯೇ!</div>
</li>
<li>
<div>ನಿಮ್ಮ ಹಳ್ಳಿಯ ಇಂಧನದ ಬೇಡಿಕೆಯನ್ನು ಸಾಮೂಹಿಕವಾಗಿ ಪರಿಹರಿಸಲು ಯತ್ನಿಸಿ. ಇದಕ್ಕಾಗಿ ತಜ್ಞರ ನೆರವು ಪಡೆಯಿರಿ. ಸೌರವಿದ್ಯುತ್ ಫಲಕಗಳಿಂದ ಹಿಡಿದು ಛಾವಣಿ ಮಳೆ ನೀರು ಸಂಗ್ರಹದವರೆಗೆ, ಅಂಗಳದಲ್ಲೇ ತರಕಾರಿ ಬೆಳೆಯುವುದರಿಂದ ಹಿಡಿದು, ಸಾವಯವ ಆಹಾರ ಪದ್ಧತಿಯನ್ನು ಅನುಸರಿಸುವವರೆಗೆ ಹಲವು ಪ್ರಯೋಗಗಳನ್ನು ನೀವು ಹೆಚ್ಚಿನ ಹಣ ಖರ್ಚು ಮಾಡದೇ (ಸೌರ ವಿದ್ಯುತ್ ಸಾಧನಗಳಿಗೆ ಇರುವ ಸರ್ಕಾರಿ ಸಬ್ಸಿಡಿಯನ್ನು ಬಳಸುವುದರಲ್ಲಿ ತಪ್ಪಿಲ್ಲ) ಮಾಡಬಹುದು.</div>
</li>
<li>
<div>ಸಾವಯವ ಮತ್ತು ನಿಸರ್ಗ ಕೃಷಿಯ  ಉತ್ಪನ್ನಗಳು ಈಗ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿವೆ. ಅವನ್ನು ನೀವು ಸ್ಥಳೀಯವಾಗೇ ಖರೀದಿಸಿದರೆ ಬೆಲೆಯೂ ಕಡಿಮೆ; ಸ್ವಾವಲಂಬನೆಯೂ ಹೆಚ್ಚು; ಆರೋಗ್ಯವೂ ಸುಧಾರಿಸುತ್ತದೆ. ಹೊಳಪಿಲ್ಲದ, ಸೊಟ್ಟಂಬಟ್ಟ ತರಕಾರಿಗಳೇ ಹೆಚ್ಚು ಶಕ್ತಿಯುತ ಎಂದು ನಿಸರ್ಗಕೃಷಿಯ ಹರಿಕಾರ ಮಸನೋಬು ಫುಕುವೋಕಾ ಹೇಳಿದ್ದನ್ನು ನೆನಪಿಡಿ. ಹಾಗೆಯೇ ಆಹಾರ ಬಿಳಿಯಾದಷ್ಟೂ ಪೌಷ್ಟಿಕತೆ ಕಡಿಮೆ. ಆದ್ದರಿಂದ ಬಿಳಿ ಅಕ್ಕಿಯ ನಿರಂತರ ಬಳಕೆ ಬೇಡ. ನಿಮ್ಮಲ್ಲೇ ಸಿಗುವ ಎಲ್ಲ ಧಾನ್ಯಗಳನ್ನು ಸರಣಿಯಂತೆ ಬಳಸಿ. ಅಕ್ಕಿಗಿಂತ ನವಣೆಯು ಮೂರು ಪಟ್ಟು ಪೌಷ್ಟಿಕ ಎಂಬುದು ಇಲ್ಲಿ ಕೊಡಬಹುದಾದ ಒಂದೇ ಒಂದು ಉದಾಹರಣೆ.</div>
</li>
<li>
<div>ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕೆಂದು ನಗರಗಳಿಗೆ ಕಳಿಸುವ ಒತ್ತಡಕ್ಕೆ ಬೀಳಬೇಡಿ. ಹತ್ತಿರದ ಊರಿನಲ್ಲೂ ಒಳ್ಳೆಯ ಶಿಕ್ಷಕರು, ಒಳ್ಳೆಯ ಕಾಲೇಜು ಇದ್ದೇ ಇರುತ್ತದೆ. ಹೆಚ್ಚು ಮಕ್ಕಳಿರುವ ಶಾಲೆಗಿಂತ ಕಡಿಮೆ ಮಕ್ಕಳಿರುವ ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಶಿಕ್ಷಕರು ಹೆಚ್ಚು ಮಉತುವರ್ಜಿಯಿಂದ ನೋಡಿಕೊಳ್ಳುವ ಸಂದರ್ಭ ಹೆಚ್ಚು.</div>
</li>
<li>
<div>ನಿಮ್ಮ ಮನೆಯನ್ನು ವಾಸ್ತುವಿಗೆ ತಕ್ಕಂತೆ ರೂಪಿಸುವಾಗ ಗಾಳಿ, ಬೆಳಕು ಹರಿಯುವಂತೆಯೂ ನೋಡಿಕೊಳ್ಳಿ. ನಿಸರ್ಗದ ಕೊಡುಗೆಯಾದ ಗಾಳಿ ಮತ್ತು ಬೆಳಕಿನಿಂದ ನಿಮ್ಮ ಸರಳ ಬದುಕಿನ ಬೆಲೆ ಹೆಚ್ಚುತ್ತದೆ.</div>
</li>
<li>
<div>ರಾಸಾಯನಿಕ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಿ. ಸಸ್ಯಜನ್ಯ (ಆಯುರ್ವೇದಿಕ್) ಔಷಧಗಳನ್ನು ಬಳಸಿ. ಇಂದು ಎಲ್ಲ ಫಾರ್ಮಾಸೂಟಿಕಲ್ ಸಂಸ್ಥೆಗಳು, ಸೌಂದರ್ಯವರ್ಧಕ ಕಂಪೆನಿಗಳು ಮಾಡುತ್ತಿರುವುದೂ ಆಯುರ್ವೇದದ ಸರಕೀಕರಣವೇ. ಅತಿ ರಾಸಾಯನಿಕ ತುಂಬಿದ ಸರಕುಗಳು ಭಾರತದಲ್ಲಿ ಬಿಕರಿಯಾಗುವುದಿಲ್ಲ ಎಂದು ಅವು ಅರಿತುಕೊಂಡಿವೆ. ನೇರವಾಗಿ ಬಳಸಬಹುದಾದ ಆಲೋವೇರಾ ನಿಮ್ಮ ಮನೆಯಲ್ಲೇ ಬೆಳೆಯುವುದಾದರೆ, ಅದಕ್ಕೆ ಯಾಕೆ ಸುಮ್ಮನೇ ಹೆಚ್ಚು ಹಣ ಕೊಡಬೇಕು?</div>
</li>
<li>
<div>ಹಳ್ಳಿಗಳಲ್ಲಿ ಇರುವ ಪರಂಪರೆ, ಸಂಸ್ಕೃತಿ, ಜಾನಪದ, &#8211; ಎಲ್ಲದರಲ್ಲೂ ಆಸಕ್ತಿ ತೋರಿಸಿ.</div>
</li>
<li>
<div>ಯಾವುದೇ ವಸ್ತುವು ಕೊಂಚ ಹಾಳಾದರೂ ಪೂರ್ತಿ ಎಸೆಯಬೇಕಾಗಿಲ್ಲ. ಹಾಗೆ `ಯೂಸ್ ಎಂಡ್ ಥ್ರೋ&#8217; ಮಾಡುವುದು ಅಪ್ಪಟ ಕೊಳ್ಳುಬಾಕತನದ ವಿಚಾರ. ಅದನ್ನು ತಿರಸ್ಕರಿಸಿ. ಸಾಕಷ್ಟು ವಸ್ತುಗಳನ್ನು ರಿಪೇರಿ ಮಾಡಿ ಬಳಸುವುದರಿಂದ ಸಂಪನ್ಮೂಲಗಳ ಸದ್ಬಳಕೆ ಆದಂತೆಯೇ. `ಬಳಸಿರಿ, ಎಸೆಯಿರಿ, ಬದಲಿಸಿರಿ, ಬಳಸಿರಿ, ಎಸೆಯಿರಿ&#8217; ಎಂಬ ಚಿಂತನೆಗಿಂತ `ಬಳಕೆಯನ್ನು ಕಡಿಮೆ ಮಾಡಿರಿ, ಮರುಬಳಕೆ ಮಾಡಿರಿ, ದುರಸ್ತಿ ಮಾಡಿ ಬಳಸಿರಿ, ಪರ್ಯಾಯ ಬಳಕೆಯ ಬಗ್ಗೆ ಯೋಚಿಸಿ&#8217; ಎಂಬ ಚಿಂತನೆಯನ್ನು ರೂಪಿಸಿಕೊಳ್ಳಿ.</div>
</li>
<li>
<div>ನಗರವನ್ನು ಬೃಹದಾಕಾರವಾಗಿ ಬೆಳೆಸುವುದರಲ್ಲಿ ನಿಮ್ಮ ಪಾತ್ರ ಇರದಂತೆ ನೋಡಿಕೊಳ್ಳಿ.</div>
</li>
<li>
<div>ನಗರಗಳಿಂದ ಹಳ್ಳಿಗಳಿಗೆ ವಲಸೆ ಹೋಗುವುದು ಹೇಗೆ ಎಂದು ಪ್ರತಿದಿನವೂ ಚಿಂತಿಸಿ. ಬೆಂಗಳೂರಿನಿಂದ ತುಸು ದೂರದಲ್ಲಿ ಮನೆ ಮಾಡಿ ಸರಳ ಬದುಕಿಗೆ ಹೊಂದಿಕೊಂಡಿರುವ ಪತ್ರಕರ್ತ, ವಿಶ್ವ ಚಿಂತಕ ನಾಗೇಶ ಹೆಗಡೆಯವರು, ತೀರ್ಥಹಳ್ಳಿಯಾಚೆ ತಮ್ಮದೇ ಬದುಕಿನಲ್ಲಿ ಸಂತೃಪ್ತಿ ಕಂಡಿರುವ ನಾಗರಾಜರಾಯರು, ದೇಶದ ಇಂಧನ ನೀತಿಯು ಸುಸ್ಥಿರ ಚಿಂತನೆಯನ್ನು ರೂಢಿಸಿಕೊಳ್ಳಬೇಕು ಎಂದು ಶ್ರಮಿಸುತ್ತಿರುವ ಶಂಕರ ಶರ್ಮರು, ನಿಸರ್ಗ ಕೃಷಿಯ ಬಿಡುವಿನ ಸಮಯದಲ್ಲಿ ಏಕತಾರಿ ಹಿಡಿದು ತಾನೇ ಬರೆದ ತತ್ವಪದಗಳನ್ನು ಹಾಡುತ್ತ ಬೆಂಗಳೂರಿಗೂ ಬರುವ, ಬಸ್ಸುಗಳಲ್ಲಿ ಪುಸ್ತಕ ಮಾರುವ ಕೃಷ್ಣಮೂರ್ತಿ ಬಿಳಿಗೆರೆ  &#8211; ಇವರೆಲ್ಲ ಇಲ್ಲಿ ಉದಾಹರಿಸಬಹುದಾದ ಕೆಲವೇ ವ್ಯಕ್ತಿತ್ವಗಳು.</div>
</li>
<li>
<div>ನೀವು ಬಾಡಿಗೆ ಮನೆಯಲ್ಲಿದ್ದರೆ ತಾರಸಿಯನ್ನು ಸದ್ಬಳಕೆ ಮಾಡಿಕೊಳ್ಳಿ. ತಾರಸಿಯ ಆವರಣದಲ್ಲೇ ತೋಟಗಾರಿಕೆಯನ್ನೋ, ಜೇನುಕೃಷಿಯನ್ನೋ ಮಾಡಬಹುದು. ಅಷ್ಟರಮಟ್ಟಿಗೆ ಹಳ್ಳಿಯ ಅವಲಂಬನೆಯನ್ನು ತಪ್ಪಿಸಬಹುದು. ಸ್ವಂತ ಮನೆ ಇದ್ದವರಂತೂ ಸುತ್ತಮುತ್ತಲಿನ ಜಾಗದಲ್ಲಿ ಕೈತೋಟ ಮಾಡಿಕೊಳ್ಳಬಹುದು.</div>
</li>
<li>
<div>ಪದೇ ಪದೇ ಮಾಲ್‌ಗಳಿಗೆ ಹೋಗಬೇಡಿ. ಮಾಲ್‌ಗಳಲ್ಲಿ ಖರೀದಿ ಮಾಡುವುದಕ್ಕಿಂತ ಹತ್ತಿರದ ಅಂಗಡಿಯೇ ಲೇಸು. ಖರೀದಿಗೆ ಮುನ್ನ ಖರೀದಿಸಬೇಕಾದ ವಸ್ತುಗಳ ಪಟ್ಟಿ ಮಾಡಿಕೊಂಡು, ಅವುಗಳನ್ನು ಮಾತ್ರವೇ ಖರೀದಿಸಿ. ಇದು ತುಂಬಾ ಮುಖ್ಯ.</div>
</li>
<li>
<div>ನಿಮ್ಮ ಮಕ್ಕಳಿಗೆ ಕನಿಷ್ಟ ಪ್ರಮಾಣದ ಕನ್ನಡ / ನಿಮ್ಮ ಮಾತೃಭಾಷೆ ಕಲಿಸಿ. ಭಾಷೆ ಉಳಿದರೇ ನಮ್ಮ ಪರಂಪರೆ ಉಳಿಯುತ್ತದೆ.</div>
</li>
</ul>
<p style="text-align:justify;"> ಸರಳ ಬದುಕಿನ ಉಳಿದೆಲ್ಲ ಸೂತ್ರಗಳನ್ನು ತಾವೇ ಬೇಕಾದಂತೆ ರೂಪಿಸಿ ಅಳವಡಿಸಿಕೊಳ್ಳಲು ಎಲ್ಲರೂ ಸ್ವತಂತ್ರರು. ಬದುಕನ್ನು ಸ್ವತಂತ್ರವಾಗಿಯೂ, ಸುಖಮಯವಾಗಿಯೂ ಸಾಗಿಸುವ ಹಕ್ಕು ಎಲ್ಲರಿಗೂ ಇದೆ. ಸರ್ಕಾರ ಯಾವುದೇ ಇರಲಿ, ಅದು ನಮ್ಮ ಮೇಲೆ ಯಾವುದೇಪರಿಣಾಮ ಬೀರದಂತೆ ನೋಡಿಕೊಳ್ಳುವುದು ಮುಖ್ಯ.</p>
<p style="text-align:justify;">ಇಂಧನದ ಬಳಕೆ ಪ್ರಮಾಣವನ್ನು ತಗ್ಗಿಸುವುದು ಸರಳ ಬದುಕಿನ ಅತಿ ಮುಖ್ಯ ಸೂತ್ರ. ನಾಗರಿಕತೆಯ ಸೂಚ್ಯಂಕಗಳು ಬದಲಾಗುವುದೇ ಇಂಧನಗಳ ಅತಿ ಬಳಕೆಯಿಂದ. ಇದನ್ನು ನಾವೆಲ್ಲ ವೈಯಕ್ತಿಕವಾಗಿಯೂ, ಸಾಮುದಾಯಿಕವಾಗಿಯೂ, ಒಂದು ದೇಶವಾಗಿಯೂ, ಕೊನೆಗೆ ಒಂದು ವಿಶ್ವ ಸಮುದಾಯವಾಗಿಯೂ ಸಾಧಿಸಬಹುದು. ಅದಕ್ಕೆ ಬೇಕಾದ ರಾಜಕೀಯ ದೃಢತೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಷ್ಟೆ.</p>
<p style="text-align:justify;">ಇತ್ತೀಚೆಗೆ ಒರಿಸ್ಸಾದ ನಿಯಮಗಿರಿಯಲ್ಲಿ ಸ್ಥಾಪನೆಯಾಗಬೇಕಾಗಿದ್ದ ಒಂದು ಖನಿಜಗಣಿಯನ್ನು ಕೇಂದ್ರ ಸರ್ಕಾರವು ರದ್ದು ಮಾಡಿತು. ಆ ಪ್ರದೇಶದಲ್ಲಿ ಸಾವಿರಾರು ಜನ ಕಾಡನ್ನೇ ಆಧರಿಸಿ ಬದುಕುತ್ತಿದ್ದಾರೆ, ಅವರ ಜೀವನವನ್ನು ಅಸ್ತವ್ಯಸ್ತಗೊಳಿಸುವುದು ಬೇಡ ಎಂಬ ತಜ್ಞರ ವರದಿಯನ್ನು ಸರ್ಕಾರ ಗೌರವಿಸಿತು. ಇಂಥ ಉದಾಹರಣೆಗಳು ಅಪರೂಪದ್ದೇ ಆದರೂ ಸ್ವಾಗತಾರ್ಹ ಅಲ್ಲವೆ?</p>
<p style="text-align:justify;"><strong>`ಡ್ರೀಮ್ಸ್&#8217; : ಅಜ್ಜನ ಮಾತುಗಳನ್ನು ಕೇಳೋಣ</strong></p>
<p style="text-align:justify;">ಮನುಕುಲ ಕಂಡ ಅತ್ಯುತ್ತಮ ಸಿನೆಮಾ ನಿರ್ದೇಶಕ ಜಪಾನಿನ ಅಕಿರಾ ಕುರೋಸಾವಾನ ಬಹುಚರ್ಚಿತ ಚಲನಚಿತ್ರ `ಡ್ರೀಮ್ಸ್&#8217;ನ ಕೊನೆಯ ಭಾಗದಲ್ಲಿ ಹಳ್ಳಿಯ ಚಿತ್ರಣವೊಂದಿದೆ. ಅಲ್ಲಿ ಹೊಳೆಯ ಬದಿಯಲ್ಲಿ ಗಾಳಿ ಗಿರಣಿಯನ್ನು ದುರಸ್ತಿ ಮಾಡುತ್ತಿರುವ ಮಾಡುತ್ತಿರುವ ಅಜ್ಜನ ಜೊತೆ ಅಲ್ಲಿಗೆ ಬಂದ ಯುವಕನೊಬ್ಬ ನಡೆಸುವ ಸಂಭಾಷಣೆ ಹೀಗಿದೆ:</p>
<p style="text-align:justify;"><img title="DREAMS-FILM-VILLAGE" src="http://mitramaadhyama.co.in/wp-content/uploads/2010/11/DREAMS-FILM-VILLAGE-1024x768.jpg" alt="" width="315" height="198" /></p>
<p style="text-align:justify;"><img title="DREAMS-OLD-MAN-AND-YOUNG-MAN" src="http://mitramaadhyama.co.in/wp-content/uploads/2010/11/DREAMS-OLD-MAN-AND-YOUNG-MAN.jpg" alt="" width="300" height="168" /></p>
<p style="text-align:justify;">ಯುವಕ: `ಈ ಹಳ್ಳಿಯ ಹೆಸರೇನು?&#8217;</p>
<p style="text-align:justify;">ಅಜ್ಜ: `ಹಳ್ಳಿಗೆ ಹೆಸರೇ ಇಲ್ಲ. ಇದನ್ನು ಬರೀ ಹಳ್ಳಿ ಅಂತ ಕರೀತೇವೆ.&#8217; ಕೆಲವರು ಇದನ್ನು ನೀರಿನ ಗಿರಣಿ ಹಳ್ಳಿ ಅಂತ ಕರೀತಾರೆ.</p>
<p style="text-align:justify;">ಯುವಕ: `ಎಲ್ಲರೂ ಇಲ್ಲೇ ವಾಸ ಮಾಡಿದೀರ?&#8217;</p>
<p style="text-align:justify;">ಅಜ್ಜ: `ಇಲ್ಲ. ಎಲ್ಲರೂ ಅವರವರ ಜಾಗದಲ್ಲೇ ಇದ್ದಾರೆ.&#8217;</p>
<p style="text-align:justify;">ಯುವಕ: `ಇಲ್ಲಿ ವಿದ್ಯುಚ್ಛಕ್ತಿ ಇಲ್ಲವೆ?&#8217;</p>
<p style="text-align:justify;">ಅಜ್ಜ: `ಅದರ ಅಗತ್ಯವೇ ಇಲ್ಲ. ಜನರಿಗೆ ಅನುಕೂಲವೇ ಮುಖ್ಯ.&#8217;</p>
<p style="text-align:justify;">ಯುವಕ: `ಮತ್ತೆ? ಬೆಳಕಿಗೆ ಏನು ಮಾಡ್ತೀರ?&#8217;</p>
<p style="text-align:justify;">ಅಜ್ಜ: `ನಮ್ಮ ಹತ್ರ ಬೀಜದ ಎಣ್ಣೆ ದೀಪಗಳಿವೆ. ಮೋಂಬತ್ತಿಗಳಿವೆ.&#8217;</p>
<p style="text-align:justify;">ಯುವಕ: `ಆದ್ರೆ ರಾತ್ರಿ ತುಂಬಾ ಕತ್ತಲು ಇರುತ್ತಲ್ಲ?&#8217;</p>
<p style="text-align:justify;">ಅಜ್ಜ: `ಹೌದು. ರಾತ್ರಿ ಅಂದ್ರೆ  ರಾತ್ರಿ ಥರಾನೇ ಇರಬೇಕಲ್ಲ?&#8217; ರಾತ್ರಿಯೂ ಯಾಕೆ ಹಗಲಿನ ಥರ ಪ್ರಖರವಾಗಿರ್‍ಬೇಕು? ಹಾಗೆ ರಾತ್ರಿಯೂ ಬೆಳಕಿನಿಂದ ಕೂಡಿದ್ರೆ ನಿನಗೆ ನಕ್ಷತ್ರಗಳನ್ನು ನೋಡೋದಕ್ಕೇ ಆಗಲ್ಲ.&#8217;</p>
<p style="text-align:justify;">ಯುವಕ: `ನಿಮ್ಮಲ್ಲಿ ಭತ್ತೆ ಬೆಳಿತೀರಿ. ಅದರ ಉಳುಮೆಗೆ ಟ್ರಾಕ್ಟರ್ ಇಲ್ಲವಲ್ಲ?&#8217;</p>
<p style="text-align:justify;">ಅಜ್ಜ: `ನಮಗೆ ಟ್ರಾಕ್ಟರ್ ಬೇಡವೇ ಬೇಡ. ನಮ್ಮ ಬಳಿ ದನಗಳಿವೆ, ಕುದುರೆಗಳಿವೆ&#8217;</p>
<p style="text-align:justify;">ಯುವಕ: `ನೀವು ಇಂಧನಕ್ಕಾಗಿ ಏನು ಮಾಡ್ತೀರಿ ಮತ್ತೆ?&#8217;</p>
<p style="text-align:justify;">ಅಜ್ಜ: `ಸಾಮಾನ್ಯವಾಗಿ ಉರುವಲು ಸುಡ್ತೀವಿ. ಮರ ಕಡಿಯಬೇಕು ಅಂತ ನಮಗೆ ಅನ್ನಿಸಿಲ್ಲ. ಆದರೆ ತಾನಾಗೇ ಬಿದ್ದ ಮರಗಳು ನಮಗೆ ಸಾಕು. ನಾವು ಅದನ್ನೇ ಕತ್ತರಿಸಿ ಉರುವಲಾಗಿ ಬಳಸ್ತೇವೆ. ನೀನು ಸೌದೆಯನ್ನು ಇದ್ದಿಲಾಗಿ ಮಾಡಿದರೆ ಇಡೀ ಕಾಡು ಕೊಡೋ ಶಕ್ತಿಯನ್ನು ಒಂದೇ ಮರದಿಂದ ಪಡೆಯಬಹುದು. ಹೌದು, ಸೆಗಣಿಯೂ ಒಳ್ಳೇ ಇಂಧನವೇ. ನಾವು ಮನುಷ್ಯನ ಹಾಗೆ ಬದುಕೋದಕ್ಕೆ ಪ್ರಯತ್ನಿಸ್ತೇವೆ.</p>
<p style="text-align:justify;">`ನಾವು ಪ್ರಕೃತಿಯ ಭಾಗ ಅನ್ನೋದನ್ನ ಜನ ಮರೆತಿದಾರೆ. ಪ್ರಕೃತೀನ ನಾಶ ಮಾಡ್ತಾ ಇದಾರೆ. ಈ ಪ್ರಕೃತಿ ಮೇಲೇ ಅವರ ಬದುಕು ನಿಂತಿದೆ. ಅದರಲ್ಲೂ ವಿಜ್ಞಾನಿಗಳು ತಾವೇನೋ ವಿಶೇಷವಾದದ್ದನ್ನೇ ಮಾಡ್ತಿದೀವಿ ಅಂತ ಹೇಳ್ತಾರೆ. ಅವರೇನೋ ಜಾಣರಿರಬಹುದು. ಆದರೆ ಅವರಲ್ಲಿ ಬಹಳಷ್ಟು ಜನರಿಗೆ ಪ್ರಕೃತಿಯ ಹೃದಯವೇ ಅರ್ಥ ಆಗೋದಿಲ್ಲ. ಜನರಿಗೆ ಅಸಂತೋಷ ಆಗೋ ವಸ್ತುಗಳನ್ನೇ ಯಾವಾಗ್ಲೂ ಸಂಶೋಧಿಸ್ತಾರೆ. ಅಂಥವರನ್ನು ಕೆಲವರು ಆರಾಧಿಸ್ತಾರೆ. ಆದ್ರೆ ಅದರಿಂದ ಪರಿಸರ ನಾಶವಾಗ್ತಿದೆ. ಶುದ್ಧ ಗಾಳಿ ಮತ್ತು ಶುದ್ಧ ನೀರನ್ನು ಕೊಡೋದು ಈ ಮರಗಳು, ಈ ಹುಲ್ಲುಗಳು&#8230;. ಆದರೆ ಈಗ ಎಲ್ಲವೂ ಕಲುಷಿತವಾಗಿ ಮನುಷ್ಯರ ಹೃದಯಗಳೂ ಕಲುಷಿತವಾಗಿವೆ.</p>
<p style="text-align:justify;">ಯುವಕ: `ಮಕ್ಕಳು ಹೊಳೆಗೆ ಹೂವು ಹಾಕ್ತಾ ಇದಾರಲ್ಲ&#8230;.. ಇವತ್ತೇನು ಏನೋ ಸಂಭ್ರಮಾಚರಣೆ ಇದ್ದಂತಿದೆ?&#8217;</p>
<p style="text-align:justify;">ಅಜ್ಜ: `ಇಲ್ಲ, ಇವತ್ತು ಶವಸಂಸ್ಕಾರ ನಡೀತಿದೆ. ಖುಷಿಯಿಂದ ನಡೀತಿರೋ ಕಾಯ್ರಕ್ರಮ. ಚೆನ್ನಾಗಿ ಕೆಲಸ ಮಾಡಿ, ದೀರ್ಘಕಾಲ ಬದುಕಿ ಆಮೇಲೆ ವಂದನೆ ಸ್ವೀಕರಿಸೋದು ಒಳ್ಳೇದೇ. ಇಲ್ಲಿ ದೇಗುಲವೂ ಇಲ್ಲ, ಅರ್ಚಕರೂ `ಇಲ್ಲ. ನಾವೆಲ್ಲಾ ಸೇರಿ ಮೃತ ಹಿರಿಯರನ್ನು ಗುಡ್ಡದ ಮೇಲೆ ಒಯ್ಯುತ್ತೇವೆ. ಇವತ್ತು ಒಬ್ಬ ಮಹಿಳೆಯ ಅಂತ್ಯಸಂಸ್ಕಾರ ನಡೀತಿದೆ.</p>
<p style="text-align:justify;">`ನೀನು ನನ್ನ ಕ್ಷಮಿಸಬೇಕು. ನಾನೂ ಆ ಮೆರವಣಿಗೆಯಲ್ಲಿ ಸೇರ್‍ಕೋಬೇಕು. ನಿಜ ಹೇಳ್ಬೇಕಂದ್ರೆ&#8230;. ಅವಳು ನನ್ನ ಮೊದಲ ಪ್ರೇಯಸಿ. ನನ್ನ ಹೃದಯವನ್ನು ಚೂರು ಮಾಡಿ ಬೇರೊಬ್ಬನನ್ನು ಮದುವೆಯಾದಳು.&#8217;</p>
<p style="text-align:justify;">ಯುವಕ: `ಅಂದಹಾಗೆ, ನಿನ್ನ ವಯಸ್ಸೆಷ್ಟು?&#8217;</p>
<p style="text-align:justify;">ಅಜ್ಜ: `ನೂರಕ್ಕೆ ಮೂರು ಸೇರಿಸು. ಬದುಕಿಗೆ ಪೂರ್ಣವಿರಾಮ ಕೊಡೋ ಹೊತ್ತು. ಜೀವನ ಕಷ್ಟ ಅಂತ ಕೆಲವರು ಹೇಳ್ತಾರೆ. ಅದೆಲ್ಲ ಬರೀ ಮಾತು. ಸಜೀವವಾಗಿರೋದು ನಿಜಕ್ಕೂ ಒಳ್ಳೇದು. ಹಾಗಿರೋದೇ ಅತ್ಯಂತ ಕುತೂಹಲಕರ.&#8217;</p>
<p style="text-align:justify;"><strong>ಅಜ್ಜನ ಉತ್ತರಗಳಲ್ಲಿ ನಮ್ಮ ಬದುಕಿನ ಅರ್ಥ ಅಡಗಿದೆಯಲ್ಲವೆ?</strong></p>
<blockquote><p>&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8211;</p></blockquote>
<blockquote>
<h3>ಜೆರೋನ್ ಲೇನಿಯೆರ್ : ಎಲೆ ಮಾನವಾ, ನೀನೊಂದು ಯಂತ್ರಸಾಧನವಲ್ಲ!</h3>
<p><img title="Jaron_lanier" src="http://mitramaadhyama.co.in/wp-content/uploads/2010/11/Jaron_lanier-1024x871.jpg" alt="" width="347" height="271" /></p>
<p>ಸಮಕಾಲೀನ ಸಾಮಾಜಿಕ ಚಿಂತಕರಲ್ಲಿ ಜೆರೋನ್ ಲೇನಿಯೆರ್ ಒಬ್ಬ ಯುವಕನೇ. ಇನ್ನೂ ಐವತ್ತರ ಹರೆಯದಲ್ಲಿರುವ ಜೆರೋಮ್ ಮಾಹಿತಿ ತಂತ್ರಜ್ಞಾನದಲ್ಲಿ ಬಳಸುವ `ವಚಯಲ್ ರಿಯಾಲಿಟಿ&#8217; (ಭ್ರಮಾ ವಾಸ್ತವ) ಪರಿಕಲ್ಪನೆಯ ರೂವಾರಿ. ಯಾವ ಔಪಚಾರಿಕ ಶಿಕ್ಷಣವೂ ಇಲ್ಲದೆ ಕಂಪ್ಯೂಟರ್ ತಜ್ಞನಾದ ಲೇನಿಯೆರ್ ಮುಂದೆ ಒಬ್ಬ ಸಂಗೀತಕಾರನಾಗಿಯೂ ಪ್ರಸಿದ್ಧರಾದವರು. ಅವರ ಬಳಿ ನೂರಾರು ಸಂಗೀತ ಪರಿಕರಗಳಿವೆ; ಅವೆಲ್ಲವನ್ನೂ ಅವರು ಕಲಿತಿದ್ದಾರೆ, ಸುಶ್ರಾವ್ಯವಾಗಿ ನುಡಿಸುತ್ತಾರೆ.</p>
<p>೨೦೧೦ರಲ್ಲಿ ಅವರು `ಯೂ ಆರ್ ನಾಟ್ ಎ ಗ್ಯಾಜೆಟ್&#8217; ಎಂಬ ಪುಸ್ತಕವನ್ನು ಬರೆದಿದ್ದಾರೆ. ಹಲವು ವರ್ಷಗಳಿಂದ ಅವರು ಗಂಟು ಜಡೆ ಬಿಟ್ಟುಕೊಂಡು ಹೇಳುತ್ತಿದ್ದ ಪ್ರತಿಪಾದನೆಗಳೇ ಈ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ಮೂಡಿವೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿರುವ ಯುವ ಪೀಳಿಗೆಗೆ ಅವರು ನೀಡುವ ಸರಳ ಬದುಕಿನ ಸಲಹೆಗಳಿವು:</p>
<ul>
<li>
<div>ನೀವು ನಿಜಕ್ಕೂ ಅಪಾಯದಲ್ಲಿ ಸಿಕ್ಕಿಕೊಂಡಿಲ್ಲ ಎನ್ನುವ ಸನ್ನಿವೇಶ ಇರುವವರೆಗೆ ಎಂದೂ ಅನಾಮಿಕವಾಗಿ ಇಂಟರ್‌ನೆಟ್‌ನಲ್ಲಿ ಬರೆಯಬೇಡಿ.</div>
</li>
<li>
<div>ನೀವು ಆನ್‌ಲೈನ್ ವಿಶ್ವಕೋಶವಾದ `ವಿಕಿಪೀಡಿಯಾ&#8217; ಗೆ ಲೇಖನಗಳನ್ನು ಬರೆದರೂ, ಅದರಿಂದ ಹೊರಗೆ, ನಿಮ್ಮದೇ ಧ್ವನಿ ಮತ್ತು ಅಭಿವ್ಯಕ್ತಿಯ ಮೂಲಕ ಜನರನ್ನು ತಲುಪಿ.</div>
</li>
<li>
<div>ನೀವು ಯಾರು ಎಂಬುದನ್ನು ಬಿಂಬಿಸುವ ಮತ್ತು ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳಲ್ಲಿ ದಾಖಲಿಸಲಾಗದ ಸಂಗತಿಗಳನ್ನು ತಿಳಿಸಲು ಒಂದು ಸ್ವಂತ ಜಾಲತಾಣವನ್ನು ಹೊಂದಿ.</div>
</li>
<li>
<div>ಒಂದು ವಿಡಿಯೋವನ್ನು ನೀವು ನೋಡುವ ಸಮಯಕ್ಕಿಂತ ನೂರುಪಟ್ಟು ಹೆಚ್ಚು ಕಾಲಾವಧಿಯಲ್ಲಿ ನಿರ್ಮಿಸಿದ್ದರೆ, ಅಂಥ ವಿಡಿಯೋಗಳನ್ನು ಮಾತ್ರ ಪ್ರಕಟಿಸಿ.</div>
</li>
<li>
<div>ನಿಮ್ಮ ಅಂತರಾಳವು ಸೂಚಿಸಿದ ಕ್ಷಣಗಳಲ್ಲಿ ಮಾತ್ರವೇ ಬ್ಲಾಗಿಂಗ್ ಮಾಡಿರಿ.</div>
</li>
</ul>
<p>&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8211;</p></blockquote>
<p style="text-align:justify;"> </p>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1650/"><img alt="" border="0" src="http://feeds.wordpress.com/1.0/comments/beluru.wordpress.com/1650/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1650/"><img alt="" border="0" src="http://feeds.wordpress.com/1.0/delicious/beluru.wordpress.com/1650/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1650/"><img alt="" border="0" src="http://feeds.wordpress.com/1.0/facebook/beluru.wordpress.com/1650/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1650/"><img alt="" border="0" src="http://feeds.wordpress.com/1.0/twitter/beluru.wordpress.com/1650/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1650/"><img alt="" border="0" src="http://feeds.wordpress.com/1.0/stumble/beluru.wordpress.com/1650/" /></a> <a rel="nofollow" href="http://feeds.wordpress.com/1.0/godigg/beluru.wordpress.com/1650/"><img alt="" border="0" src="http://feeds.wordpress.com/1.0/digg/beluru.wordpress.com/1650/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1650/"><img alt="" border="0" src="http://feeds.wordpress.com/1.0/reddit/beluru.wordpress.com/1650/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1650&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/11/14/%e0%b2%b5%e0%b2%bf%e0%b2%b7%e0%b2%95%e0%b2%be%e0%b2%b0%e0%b2%bf-%e0%b2%87%e0%b2%82%e0%b2%a7%e0%b2%a8%e0%b2%ac%e0%b2%be%e0%b2%95-%e0%b2%ae%e0%b2%a8%e0%b3%81%e0%b2%95%e0%b3%81%e0%b2%b2-%e0%b2%87/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>

		<media:content url="http://mitramaadhyama.co.in/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>

		<media:content url="http://mitramaadhyama.co.in/wp-content/uploads/2010/11/THE-EFFECT-OF-GREEN-REVOLUTION.jpg" medium="image">
			<media:title type="html">THE-EFFECT-OF-GREEN-REVOLUTION</media:title>
		</media:content>

		<media:content url="http://mitramaadhyama.co.in/wp-content/uploads/2010/11/green-revolution-cartoon.jpg" medium="image">
			<media:title type="html">green-revolution-cartoon</media:title>
		</media:content>

		<media:content url="http://mitramaadhyama.co.in/wp-content/uploads/2010/11/BHUTAN-SMILING-CHILDREN.jpg" medium="image">
			<media:title type="html">BHUTAN-SMILING-CHILDREN</media:title>
		</media:content>

		<media:content url="http://mitramaadhyama.co.in/wp-content/uploads/2010/11/HAPPINESS-INDEX-OF-NATIONS1.jpg" medium="image">
			<media:title type="html">HAPPINESS-INDEX-OF-NATIONS</media:title>
		</media:content>

		<media:content url="http://mitramaadhyama.co.in/wp-content/uploads/2010/11/THE-LIMITS-TO-GROWTH.jpg" medium="image">
			<media:title type="html">THE-LIMITS-TO-GROWTH</media:title>
		</media:content>

		<media:content url="http://mitramaadhyama.co.in/wp-content/uploads/2010/11/Collapse_book.jpg" medium="image">
			<media:title type="html">Collapse_book</media:title>
		</media:content>

		<media:content url="http://mitramaadhyama.co.in/wp-content/uploads/2010/11/HOME-MOVIE-STILL.jpg" medium="image">
			<media:title type="html">HOME-MOVIE-STILL</media:title>
		</media:content>

		<media:content url="http://mitramaadhyama.co.in/wp-content/uploads/2010/11/HOME-MOVIE-STILL-2.jpg" medium="image">
			<media:title type="html">HOME-MOVIE-STILL-2</media:title>
		</media:content>

		<media:content url="http://mitramaadhyama.co.in/wp-content/uploads/2010/11/ONE-CUBIC-MILE-OF-OIL-BOOK-678x1024.jpg" medium="image">
			<media:title type="html">ONE-CUBIC-MILE-OF-OIL-BOOK</media:title>
		</media:content>

		<media:content url="http://mitramaadhyama.co.in/wp-content/uploads/2010/11/ONE-CUBIC-MILE-OF-OIL-EQUIVALENT.jpg" medium="image">
			<media:title type="html">ONE-CUBIC-MILE-OF-OIL-EQUIVALENT</media:title>
		</media:content>

		<media:content url="http://mitramaadhyama.co.in/wp-content/uploads/2010/11/Ren2008.jpg" medium="image">
			<media:title type="html">Ren2008</media:title>
		</media:content>

		<media:content url="http://mitramaadhyama.co.in/wp-content/uploads/2010/11/DHARAMPAL.jpg" medium="image">
			<media:title type="html">DHARAMPAL</media:title>
		</media:content>

		<media:content url="http://mitramaadhyama.co.in/wp-content/uploads/2010/11/DREAMS-FILM-VILLAGE-1024x768.jpg" medium="image">
			<media:title type="html">DREAMS-FILM-VILLAGE</media:title>
		</media:content>

		<media:content url="http://mitramaadhyama.co.in/wp-content/uploads/2010/11/DREAMS-OLD-MAN-AND-YOUNG-MAN.jpg" medium="image">
			<media:title type="html">DREAMS-OLD-MAN-AND-YOUNG-MAN</media:title>
		</media:content>

		<media:content url="http://mitramaadhyama.co.in/wp-content/uploads/2010/11/Jaron_lanier-1024x871.jpg" medium="image">
			<media:title type="html">Jaron_lanier</media:title>
		</media:content>
	</item>
		<item>
		<title>ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ</title>
		<link>http://beluru.wordpress.com/2010/10/26/%e0%b2%9f%e0%b3%86%e0%b2%95%e0%b3%8d%e0%b2%b8%e0%b3%8d-%e0%b2%97%e0%b3%81%e0%b2%b0%e0%b3%81-%e0%b2%b0%e0%b2%be%e0%b2%a7%e0%b2%be%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d/</link>
		<comments>http://beluru.wordpress.com/2010/10/26/%e0%b2%9f%e0%b3%86%e0%b2%95%e0%b3%8d%e0%b2%b8%e0%b3%8d-%e0%b2%97%e0%b3%81%e0%b2%b0%e0%b3%81-%e0%b2%b0%e0%b2%be%e0%b2%a7%e0%b2%be%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d/#comments</comments>
		<pubDate>Tue, 26 Oct 2010 18:21:41 +0000</pubDate>
		<dc:creator>beluru</dc:creator>
				<category><![CDATA[Uncategorized]]></category>
		<category><![CDATA[donald knuth]]></category>
		<category><![CDATA[mitramaadhyama]]></category>
		<category><![CDATA[radhakrishnan]]></category>
		<category><![CDATA[tex]]></category>

		<guid isPermaLink="false">http://beluru.wordpress.com/?p=1627</guid>
		<description><![CDATA[ಆಗ ನನಗೆ ಎರಡು ವರ್ಷ. ನಾನು ಆಗಿನ ಕಾಲದಲ್ಲಿ ನಮ್ಮೂರಿನ ಮಹಿಳೆಯರು ಸ್ನಾನ ಮಾಡಲು ಬಳಸುತ್ತಿದ್ದ ದೊಡ್ಡ ಹಳ್ಳದಲ್ಲಿ ಬಿದ್ದುಬಿಟ್ಟಿದ್ದೆ. ಆಟ ಆಡ್ತಾ ಆಡ್ತಾ ಅಲ್ಲಿ ಮುಳುಗಿಹೋದ ನಾನು ಮೇಲೆಬ್ಬಿಸಿದ ನೀರಿನ ಗುಳ್ಳೆಗಳನ್ನು ನೋಡಿ ನಮ್ಮ ಮನೆಗೆಲಸದವಳು ಓಡಿ ಬಂದು ನನ್ನನ್ನು ಎತ್ತಿದಳಂತೆ. ಹತ್ತು ವರ್ಷಗಳ ಹಿಂದೆ ಆಕೆ ತೀರಿಕೊಂಡಳು. ಆದರೆ ಕೊನೇವರೆಗೂ ಆಕೆ ನನ್ನನ್ನು ಭೇಟಿಯಾದಾಗೆಲ್ಲ ನಿನ್ನ ಬದುಕಿಗೆ ನಾನೇ ಕಾರಣ ಎಂದು ಕೀಟಲೆ ಮಾಡುತ್ತಿದ್ದಳು. ಅದು ನಿಜವೇ ಬಿಡಿ. ನನ್ನ ಪದವಿ ಶಿಕ್ಷಣದ ಕಾಲದಲ್ಲಿ [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1627&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<ul>
<li>
<div style="text-align:justify;">ಆಗ ನನಗೆ ಎರಡು ವರ್ಷ. ನಾನು ಆಗಿನ ಕಾಲದಲ್ಲಿ ನಮ್ಮೂರಿನ ಮಹಿಳೆಯರು ಸ್ನಾನ ಮಾಡಲು ಬಳಸುತ್ತಿದ್ದ ದೊಡ್ಡ ಹಳ್ಳದಲ್ಲಿ ಬಿದ್ದುಬಿಟ್ಟಿದ್ದೆ. ಆಟ ಆಡ್ತಾ ಆಡ್ತಾ ಅಲ್ಲಿ ಮುಳುಗಿಹೋದ ನಾನು ಮೇಲೆಬ್ಬಿಸಿದ ನೀರಿನ ಗುಳ್ಳೆಗಳನ್ನು ನೋಡಿ ನಮ್ಮ ಮನೆಗೆಲಸದವಳು ಓಡಿ ಬಂದು ನನ್ನನ್ನು ಎತ್ತಿದಳಂತೆ. ಹತ್ತು ವರ್ಷಗಳ ಹಿಂದೆ ಆಕೆ ತೀರಿಕೊಂಡಳು. ಆದರೆ ಕೊನೇವರೆಗೂ ಆಕೆ ನನ್ನನ್ನು ಭೇಟಿಯಾದಾಗೆಲ್ಲ ನಿನ್ನ ಬದುಕಿಗೆ ನಾನೇ ಕಾರಣ ಎಂದು ಕೀಟಲೆ ಮಾಡುತ್ತಿದ್ದಳು. ಅದು ನಿಜವೇ ಬಿಡಿ.<span id="more-1627"></span></div>
</li>
</ul>
<p style="text-align:justify;"><img title="More..." src="http://mitramaadhyama.co.in/wp-includes/js/tinymce/plugins/wordpress/img/trans.gif" alt="" /></p>
<p style="text-align:justify;"><img class="alignleft" title="river-valley-brochure-24" src="http://mitramaadhyama.co.in/wp-content/uploads/2010/10/river-valley-brochure-24.jpg" alt="" width="208" height="186" /></p>
<ul style="text-align:justify;">
<li>
<div>ನನ್ನ ಪದವಿ ಶಿಕ್ಷಣದ ಕಾಲದಲ್ಲಿ ನನ್ನ ಬಳಿ ಒಂದು ಬೈಸಿಕಲ್ ಇತ್ತು. ಆ ಕಾಲದಲ್ಲಿ ಸೈಕಲ್ ಇರುವುದೇ ಊರಿನಲ್ಲಿ ಘನತೆಯ ವಿಚಾರ. ನನ್ನ ಬಳಿ ಒಂದು ಮರ್ಸಿಡಿಸ್ ಇದ್ದಂತೆಯೇ ಸಂಭ್ರಮಿಸುತ್ತಿದ್ದೆ. ಒಂದು ದಿನ ಕಾಲೇಜಿನಿಂದ ಮನೆಗೆ ಬರೋವಾಗ ಹಾದಿಯಲ್ಲಿದ್ದ ಸೇತುವೆಯ ಮೇಲೆ ನನ್ನ ಸವಾರಿ ನಡೆದಿತ್ತು. ತುಂಬಾ ಕಿರಿದಾಗಿದ್ದ ಆ ಸೇತುವೆಯ ಆಚೆಗೆ ಒಂದು ಟ್ರಕ್ಕು, ಈಚೆಗೆ ಒಂದು ಬಸ್ಸು ಬಂದು ನಾನು ಸಿಕ್ಕಿಹಾಕಿಕೊಂಡೆ. ಕೊನೆಗೆ ಸೈಕಲ್‌ನ್ನು ವಾಳಿಸಿ ಸೇತುವೆಯ ಕಟ್ಟೆಯ ಮೇಲೆ ಕಾಲಿಟ್ಟೆ. ಆದರೆ ನನ್ನ ಲೆಕ್ಕಾಚಾರ ತಪ್ಪಿ ಸೀದಾ ರಸ್ತೆಯ ಮೇಲೇ ಬಿದ್ದೆ. ಇನ್ನೇನು, ಕೆಲವೇ ಸೆಕೆಂಡುಗಳಲ್ಲಿ ಟ್ರಕ್ಕು ನನ್ನ ಮೇಲೆ ಹಾದುಹೋಗಲಿದೆ ಎಂಬ ನಿರೀಕ್ಷೆಯಲ್ಲೇ ಹೃದಯ ಬಾಯಿಗೆ ಬಂತು. ಆದರೆ ಏನೂ ಆಗಲಿಲ್ಲ. ಟ್ರಕ್ಕಿ ಚಾಲಕ ಬ್ರೇಕ್ ಹಾಕಿದ ಸದ್ದು ಕೇಳಿತು. ನಾನು ಮತ್ತೆ ಬದುಕಿಕೊಂಡೆ.</div>
</li>
<li>
<div>೩೨ ವರ್ಷಗಳ ಹಿಂದೆ ನಾನು ಹೊಸದಿಲ್ಲಿಯ ಲೋಧಿ ಉದ್ಯಾನದಲ್ಲಿ ವಾಕಿಂಗ್ ಮಾಡ್ತಾ ಇದ್ದೆ. ಹಠಾತ್ತನೆ ನನ್ನೆರಡೂ ಕಾಲಿನ ಕೀಲುಗಳಲ್ಲಿ ನೋವು ಕಾಣಿಸಿಕೊಂಡಿತು. ಮರುದಿನ ತಪಾಸಣೆಗಾಗಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ಹೋದೆ. ನನಗೆ ಪೆರೆನಿಯಲ್ ಮಸ್ಕ್ಯುಲಾರ್ ಡಿಸ್ಟ್ರೋಫಿ ಎಂಬ ಅತ್ಯಪರೂಪದ ಮೋಟಾರ್ ನ್ಯೂರಾನ್ ಕಾಯಿಲೆ ಇದೆ ಎಂದು ವೈದ್ಯರು ಹೇಳಿದರು. ನಾನು ಅಂದಿನಿಂದ ಐದು ವರ್ಷಗಳಿಗಿಂತ ಹೆಚ್ಚು ಕಾಲ ಬದುಕಲಾರೆ ಎಂದೂ ಅವರು ತಿಳಿಸಿದರು. ಅದಾಗಿ ಮೂರು ದಶಕಗಳೇ ಕಳೆದಿವೆ. ಏನೂ ಆಗಿಲ್ಲ!</div>
</li>
</ul>
<p style="text-align:justify;">ಮೂರು ಸಲ ನಾನು ಸಾವಿನ ಗಳಿಗೆಯ ಹತ್ತಿರ ಹೋಗಿ ಹೊರಬಂದಿದ್ದೇನೆ. ಅದಕ್ಕೆ ಕಾರಣ ಏನು ಗೊತ್ತೆ? ಇನ್ನೊಂದು ಗುರಿ ಸಾಧನೆಯೇ ನನ್ನ ಗಮ್ಯವಾಗಿತ್ತು: ಅದೇ ರಿವರ್ ವ್ಯಾಲಿ.</p>
<p style="text-align:justify;">ಹೀಗೆ ತನ್ನ ಸಾವಿನಂಚಿನ ಕಥೆಯನ್ನು ಅತ್ಯಂತ ವಿನೀತನಾಗಿ ನಮ್ಮೊಂದಿಗೆ ಹಂಚಿಕೊಂಡವರು ಸಿ.ವಿ. ರಾಧಾಕೃಷ್ಣನ್. ರಿವರ್ ವ್ಯಾಲಿ ಎಂಬ ಅವರ ಸಂಸ್ಥೆ ೧೩೦ಕ್ಕೂ ಹೆಚ್ಚು ಯುವಕ &#8211; ಯುವತಿಯರ ಬಾಳಿಗೆ ಬೆಳಕಾಗಿದೆ. <a href="http://mitramaadhyama.co.in/?p=2216" target="_blank">`ನನ್ನ ಈ ಹೊಸ ಬದುಕಿಗೆ ಡೊನಾಲ್ಡ್ ಕನೂಥ್‌ರೇ ಕಾರಣ&#8217; </a>ಎಂದು ರಾಧಾಕೃಷ್ಣನ್ ಘೋಷಿಸಿದ್ದಾರೆ. ಹೌದೆ? ಅದು ಹೇಗೆ? ಗಣಿತಜ್ಞ ಕನೂಥ್‌ಗೂ ರಾಧಾಕೃಷ್ಣನ್‌ಗೂ ಇರುವ ನಂಟೇನು? ಈ ಕಥೆ ಬಹುಶಃ ನಮ್ಮ ಸಾಫ್ಟ್‌ವೇರ್ ರಂಗದ ಒಂದು ರೋಚಕ ಇತಿಹಾಸ. ಕನೂಥ್‌ರ `ಟೆಕ್ಸ್&#8217; ತಂತ್ರಾಂಶವು ರಾಧಾಕೃಷ್ಣನ್‌ರ ಬದುಕಷ್ಟೇ ಯಾಕೆ, ವಿಶ್ವದ ವೈಜ್ಞಾನಿಕ ಪ್ರಕಾಶನ ರಂಗದ ದಿಕ್ಕನ್ನೇ ಬದಲಿಸಿತು.</p>
<p style="text-align:justify;">೧೯೭೭ರ ಆ ದಿನ ದಿಲ್ಲಿಯಲ್ಲಿ ತನಗೆ ಗುಣಪಡಿಸಲಾಗದ ರೋಗವಿದೆ, ಇನ್ನು ಐದೇ ವರ್ಷಗಳು ಮಾತ್ರ ಬದುಕಿರಬಲ್ಲೆ ಎಂದು ವೈದ್ಯರಿಂದ ಕೇಳಿದ ರಾಧಾಕೃಷ್ಣನ್‌ಗೆ ಆಗ ಕೇವಲ ೨೫ರ ಹರೆಯ. ಹಡಗು ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಅವರು ಸೀದಾ ಕೇರಳದ ಮನೆಗೆ ಬಂದರು. ಬೇರೆ ಕೆಲಸ ಮಾಡು ಎಂದು ಅವರ ಅಪ್ಪ &#8211; ಅಮ್ಮ ಹೇಳಿದರು. ಕೊನೆಗೆ ಹೇಗೋ ತಿರುವನಂತಪುರದಲ್ಲಿ ಒಂದು ವರ್ಷ ಕಳೆದರು. ಆಮೇಲೆ ಕೇರಳ ವಿಶ್ವವಿದ್ಯಾಲಯದಲ್ಲಿ ಕಾರಕೂನರಾದ ರಾಧಾಕೃಷ್ಣನ್ ತಮ್ಮ ಹಳೆ ಶಿಕ್ಷಕ, ಗಣಿತ ವಿಭಾಗದ ಪ್ರೊ. ಕೆ ಎಸ್ ಎಸ್ ನಂಬೂದ್ರಿಪಾಡ್ ಬಳಿ ಹೋಗಿ `ನಾನಿನ್ನು ಕೆಲವೇ ವರ್ಷ ಬದುಕುವೆ. ಅಷ್ಟು ದಿನ ಕಲಿಯಲು ಏನಾದರೂ ಇದ್ದರೆ ಹೇಳಿ&#8217; ಎಂದರು. `ಹೌದ? ಹಾಗಾದ್ರೆ ನೀನು `ಟೆಕ್ಸ್&#8217; ಕಲಿ. ನೀನು ಬದುಕಿ ಇರೋವರೆಗೂ ಅದನ್ನ ಕಲೀತಾನೇ ಇರಬಹುದು&#8217; ಎಂದು ನಂಬೂದ್ರಿಪಾಡ್ ಸಲಹೆ ನೀಡಿದರು. ಸರಿ, ಟೆಕ್ಸ್ ಬಗ್ಗೆ ಇದ್ದ ಸರಕನ್ನೆಲ್ಲ ಸಂಗ್ರಹಿಸಿದ ರಾಧಾಕೃಷ್ಣನ್ ಅದನ್ನು ಓದಲು, ಕಲಿಯಲು ಆರಂಭಿಸಿದರು. ಅಷ್ಟು ಹೊತ್ತಿಗೆ ಅವರ ದೇಹವನ್ನು  ಮತ್ತೆ ತಪಾಸಣೆ ಮಾಡಿದ ವೈದ್ಯರು ಕಾಯಿಲೆಯನ್ನು ದೃಢೀಕರಿಸಿದ್ದರು.</p>
<p style="text-align:justify;">ಸಾವಿನ ಭಯ, ನೋವು, ಹತಾಶೆ, ಒಂಟಿತನ &#8211; ಎಲ್ಲವನ್ನೂ ನೀಗಿಕೊಳ್ಳಲು ಅವರು ಗಣಕದ ದೋಸ್ತಿ ಮಾಡಿದರು. ತಾನು ಜೀವಂತ ಜಡ ದೇಹವಾದರೆ ಬುದ್ಧಿಯಾದರೂ ಜಾಗೃತವಾಗಿರಲಿ ಎಂಬುದೇ ರಾಧಾಕೃಷ್ಣನ್‌ರ ಆಶಯವಾಗಿತ್ತು.</p>
<p style="text-align:justify;">ಸರಿ, ಟೆಕ್ಸ್ ಮೂಲಕ ನಿಧಾನವಾಗಿ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಗಳನ್ನು ರೂಪಿಸುವಲ್ಲಿ, ವಿದ್ಯಾರ್ಥಿಗಳ ಸಂಶೋಧನಾ ಪತ್ರಿಕೆಗಳನ್ನು ವಿನ್ಯಾಸಗೊಳಿಸುವುದರಲ್ಲಿ ರಾಧಾಕೃಷ್ಣನ್ ಪುಟ್ಟ ಯಶ ಕಂಡರು. ಹಾಗೇ ವಿವಿಯ ಜೀವಶಾಸ್ತ್ರ ವಿಭಾಗದ ಕೀಟಶಾಸ್ತ್ರ ನಿಯತಕಾಲಿಕೆಯನ್ನೂ ಅವರು ರೂಪಿಸಿದರು. ಮೊದಲು ವಿದ್ಯಾರ್ಥಿಗಳಿಂದ ಹಣ ಪಡೆಯದ ಅವರು ಕೊನೆಗೆ ಮನೆಯ ಸಾಲದ ಕಂತನ್ನು ತೀರಿಸಲು ಶುಲ್ಕ ಪಡೆಯಲು ಮುಂದಾದರು. ಮುಂದೆ ಇದೇ ವೃತ್ತಿಯಾಗಿ, ರಿವರ್ ವ್ಯಾಲಿ ಟೆಕ್ನಾಲಜೀಸ್ ಎಂಬ ಸಂಸ್ಥೆಯನ್ನು ರಾಧಾಕೃಷ್ಣನ್ ಸ್ಥಾಪಿಸಿದರು. ಆ ಕಾಲದಲ್ಲಿ ಕೇಂದ್ರ ಸರ್ಕಾರದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಅವರ ನೆರವಿಗೆ ಬಂತು. ತೆರಿಗೆ ರಜೆಯೂ ಸಿಕ್ಕಿತ್ತು. ಯಾವ ಸಂಪರ್ಕ ಜಾಲವೂ ಇಲ್ಲದೆ, ಮುಂದೇನು ಮಾಡಬೇಕೆಂದು ಗೊತ್ತಿಲ್ಲದೆ ಹೋದ ರಾಧಾಕೃಷ್ಣನ್, ಟೆಕ್ಸ್ ಬಳಕೆದಾರರ ಗುಂಪಿನ ಸೆಬಾಸ್ಟಿಯನ್‌ರ ಸಲಹೆಯಂತೆ ಭಾರತದಲ್ಲೂ ಟೆಕ್ಸ್ ಬಳಕೆದಾರರ ಗುಂಪನ್ನು ಸ್ಥಾಪಿಸಿದರು. ಆಗ ಅವರು ಬರೆದಿದ್ದ ಒಂದು ಪತ್ರವನ್ನು ನೋಡಿದ ಇಂಗ್ಲೆಂಡಿನ ಟೆಕ್ಸ್ ವೃತ್ತಿಪರ ಪ್ರಕಾಶಕ ಕಾವೇ ಬಝಾರ್ಗನ್ ತಕ್ಷಣ ರಾಧಾಕೃಷ್ಣನ್‌ರನ್ನು ಸಂಪರ್ಕಿಸಿದರು. ೧೯೯೭ರಲ್ಲಿ ಅವರ ಮತ್ತು ರಾಧಾಕೃಷ್ಣನ್‌ರ ಸಂಸ್ಥೆಗಳು ವಿಲೀನವಾದವು. ಅಲ್ಲಿಂದ ರಾಧಾಕೃಷ್ಣನ್ ಬರೆದಿದ್ದು ಹೊಸ ಇತಿಹಾಸ.</p>
<p style="text-align:justify;">ವೃತ್ತಿಯಲ್ಲಿ ತನ್ನದೇ ಆದ ಆದರ್ಶಗಳು, ಕಾರ್ಯಶೈಲಿ, ಸಿಬ್ಬಂದಿ ನಿರ್ವಹಣೆ &#8211; ಎಲ್ಲ ವಿಶೇಷ ಗುಣಗಳನ್ನೂ ಹೊಂದಿರುವ ರಾಧಾಕೃಷ್ಣನ್‌ರ ಸಂಸ್ಥೆ ಈಗ ವಿಶ್ವದಲ್ಲೇ ವೈಜ್ಞಾನಿಕ ಪ್ರಕಾಶನ ವಿನ್ಯಾಸದ ಅಗ್ರಮಾನ್ಯ ಸಂಸ್ಥೆಯಾಗಿದೆ. ಐಓಪಿ ಪಬ್ಲಿಶಿಂಗ್ ಹೌಸ್, ಎಲ್ಸ್‌ವೀರ್, ನೇಚರ್ ಪಬ್ಲಿಶಿಂಗ್ ಹೌಸ್ ಸೇರಿದಂತೆ ಜಗತ್ತಿನ ಹಲವು ಪ್ರತಿಷ್ಠಿತ ಸಂಸ್ಥೆಗಳ ಪುಸ್ತಕಗಳನ್ನು ರಿವರ್ ವ್ಯಾಲಿಯ ಸಿಬ್ಬಂದಿಗಳು ರೂಪಿಸುತ್ತಿದ್ದಾರೆ. ವಾರ್ಷಿಕ ಏಳು ಕೋಟಿ ರೂ. ವಹಿವಾಟಿನ ಈ ಸಂಸ್ಥೆ ಈಗ ನಾಲ್ಕೆಕೆರೆ ಜಾಗದಲ್ಲಿ ಸ್ವಂತ ಕಚೇರಿಯನ್ನು ಹೊಂದಿದೆ. ಇಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿಲ್ಲ; ಹೆಚ್ಚಾಗಿ ಸೂರ್ಯನ ಬೆಳಕು ಮತ್ತು ಸೌರವಿದ್ಯುತ್ ಬಳಕೆಯಾಗುತ್ತಿದೆ; ಕ್ಯಾಂಪಸ್ಸಿಗೆ ಬೇಕಾಗುವಷ್ಟು ಮಳೆನೀರಿನ ಸಂಗ್ರಹ ವ್ಯವಸ್ಥೆಯಿದೆ. ಸಂಸ್ಥೆಯ ಸಿಬ್ಬಂದಿಗಳಿಗೆ ಬೇಕಾಗುವಷ್ಟು ಸಾವಯವ ಕೃಷಿಯ ತರಕಾರಿ ಅಲ್ಲೇ ಬೆಳೆಯುತ್ತದೆ. ಅಡುಗೆಗೆ ಬಳಸುವ ಶೇ.೫೦ರಷ್ಟು ಇಂಧನವನ್ನು ಆಹಾರ ತ್ಯಾಜ್ಯದಿಂದಲೇ ಉತ್ಪಾದಿಸಲಾಗುತ್ತಿದೆ. ಇಡೀ ಕ್ಯಾಂಪಸ್ಸಿನಲ್ಲಿ ಬಿದಿರನ್ನು ವ್ಯಾಪಕವಾಗಿ ಬಳಸಲಾಗಿದೆ. ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆಯಿದೆ.</p>
<p style="text-align:justify;">ಇಲ್ಲಿ ಸಾಫ್ಟ್‌ವೇರ್ ಕಚೇರಿಯಲ್ಲದ್ದಂತೆ ಠಾಕುಠೀಕಾಗಿ ಓಡಾಡುವುದಿಲ್ಲ. ಸ್ವತಃ ರಾಧಾಕೃಷ್ಣನ್ ಸರಳ ಉಡುಗೆಯಲ್ಲಿ ತಮ್ಮ ಗಾಲಿಕುರ್ಚಿಯಲ್ಲಿ (ಹೌದು, ಅವರ ಕಾಯಿಲೆಯೀಗ ನಿಧಾನವಾಗಿ ಅವರ ದೇಹದ ನಿಯಂತ್ರಣವನ್ನು ಕಸಿದುಕೊಳ್ಳುತ್ತಿದೆ). ಎಲ್ಲೆಡೆ ಓಡಾಡಿ ಸಿಬ್ಬಂದಿಗಳೊಂದಿಗೆ ಬೆರೆಯುತ್ತಾರೆ.</p>
<p style="text-align:justify;"><strong>ಎರಡು ಕನಸು</strong></p>
<p style="text-align:justify;">ರಾಧಾಕೃಷ್ಣನ್ ಹೇಳುವಂತೆ ಅವರಿಗೆ ಎರಡು ಕನಸುಗಳಿವೆ: ಒಂದು &#8211; ಸುಸ್ಥಿರ ಸಾಮುದಾಯಿಕ ಬದುಕು. ಇನ್ನೊಂದು ಟೆಕ್ಸ್ ಪ್ರೋಗ್ರಾಮಿಂಗ್ ಕುರಿತಂತೆ ಆತ್ಮಕಥಾನಕ ಬರೆಯುವುದು.</p>
<p style="text-align:justify;">ಮೊದಲಿನಿಂದಲೂ ಸಾಮುದಾಯಿಕ ಬದುಕಿನ ಬಗ್ಗೆ ಆಸಕ್ತಿ ಬೆಳೆಸಿಕೊಂಡ ರಾಧಾಕೃಷ್ಣನ್ ಆ ಬಗ್ಗೆ ಮೊದಲ ಪ್ರಯತ್ನಗಳಲ್ಲಿ ವಿಫಲಗೊಂಡರು. ಆದರೆ ಈಗ ತಮ್ಮದೇ ಕ್ಯಾಂಪಸ್ಸಿನಲ್ಲಿ ಅವರ ಕನಸನ್ನು ಸಾಕಾರಗೊಳಿಸಿದ್ದಾರೆ. ಅವರ ಮನೆಯೀಗ ಈ ಸಾಮುದಾಯಿಕ ಬದುಕಿನ ಕನಸಿನಂತೆಯೇ ವಿನ್ಯಾಸಗೊಂಡಿದೆ.</p>
<p style="text-align:justify;">ಇನ್ನೊಂದು ಕನಸು, ಟೆಕ್ಸ್ ಕುರಿತ ಎರಡು ದಶಕಗಳಿಗೂ ಹೆಚ್ಚಿನ ಅನುಭವವನ್ನು ಹಂಚಿಕೊಳ್ಳುವುದು. ಡೊನಾಲ್ಡ್ ಕನೂಥ್ `ಟೆಕ್ಸ್&#8217; ಬರೆಯುವಾಗ ಊಹಿಸದಿದ್ದ ಹಲವು ಪ್ರಯೋಗಗಳನ್ನು ರಾಧಾಕೃಷ್ಣನ್ ಮಾಡಿದ್ದಾರೆ. ಭಾವನಾತ್ಮಕ, ತಾಂತ್ರಿಕ &#8211; ರಾಜಕೀಯ, ವ್ಯವಹಾರ, ಪ್ರೋಗ್ರಾಮಿಂಗ್ &#8211; ಹೀಗೆ ನಾಲ್ಕು ಎಳೆಗಳಲ್ಲಿ ಹರಿಯುವ ಆತ್ಮಕಥೆಯ ಸೂತ್ರವೊಂದನ್ನು ಅವರೀಗ ಹೆಣೆದಿದ್ದಾರೆ. ಆದರೆ ಭಾವನಾತ್ಮಕ ಎಳೆ ಮಾತ್ರ ನನ್ನ ನಿಧನದ ನಂತರವೇ ಬಿಡುಗಡೆಯಾಗಲಿದೆ ಎಂದು ಅವರು ಹೇಳುತ್ತಾರೆ.</p>
<p style="text-align:justify;">ತನ್ನ ಕಾಯಿಲೆಯನ್ನು ಎಲ್ಲೂ ರಹಸ್ಯವಾಗಿಡಕೂಡದು, ಯಾರಿಗೂ ತಿಳಿಸದೆ ಇರಬಾರದು, ಯಾರಿಗೂ ಸಮಸ್ಯೆ ಆಗಬಾರದು ಎಂದು ರಾಧಾಕೃಷ್ಣನ್ ದೃಢವಾಗಿ ಭಾವಿಸಿದ್ದರು. ಕೆಲವು ವರ್ಷಗಳಿಂದ ವಿದ್ಯಾ ಅವರ ಬಾಳಸಂಗಾತಿಯಾಗಿದ್ದಾರೆ.</p>
<p style="text-align:justify;"><strong>ರಿವರ್ ವ್ಯಾಲಿಯ ನೀತಿ</strong></p>
<p style="text-align:justify;">ರಿವರ್ ವ್ಯಾಲಿ ಸಂಸ್ಥೆಯಯ ನೀತಿಸೂತ್ರಗಳು ಹೀಗಿವೆ:</p>
<ul style="text-align:justify;">
<li> 
<ul>
<li>
<div>ತಾಂತ್ರಿಕವಾಗಿ, ನೈತಿಕವಾಗಿ, ಮೌಲ್ಯಯುತವಾಗಿ ಸರಿಯಾದ ಕೆಲಸವನ್ನೇ ಮಾಡಿ; ಆಗ ತಳಮಟ್ಟದ ವಿಷಯಗಳು ಚೆನ್ನಾಗೇ ಇರುತ್ತವೆ.</div>
</li>
<li>
<div>ಲಿಖಿತ ಒಪ್ಪಂದಗಳನ್ನು ನಂಬಬೇಡಿ; ಅಲ್ಲಿ `ನಂಬಿಕೆ&#8217; ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.</div>
</li>
<li>
<div>ನಿಮ್ಮ ಕಾರ್ಯಶೈಲಿಯ ಬಗ್ಗೆ ಪ್ರಚಾರ ಮಾಡಿ; ನಿಮ್ಮ ಪ್ರತಿಸ್ಪರ್ಧಿಗಳಿಗೂ ತಿಳಿಸಿ.</div>
</li>
<li>
<div>ನೈಜ ಚಿತ್ರಣವನ್ನೇ ನೀಡಿ; ಅದು ಯಾವಾಗಲೂ ಚೆನ್ನಾಗಿಲ್ಲದೆ ಇರಬಹುದು.</div>
</li>
<li>
<div>ನಿಮ್ಮನ್ನೂ ಮೀರಿ ಉಳಿಯುವ ಸಮುದಾಯವೊಂದನ್ನು ರೂಪಿಸಲು ಯತ್ನಿಸಿ.</div>
</li>
<li>
<div>ಸಾಮಾನ್ಯವಾಗಿ ಗ್ರಾಹಕನೇ ಸರಿ; ಹಾಗಂತ ಯಾವಾಗಲೂ ಅಲ್ಲ.</div>
</li>
<li>
<div>ಸಾಧ್ಯವಾದಾಗೆಲ್ಲ ಮುಕ್ತ ಮತ್ತು ಫ್ರೀ ಸಾಫ್ಟ್‌ವೇರನ್ನು ಬಳಸಿ.</div>
</li>
<li>
<div>ನಿಮ್ಮಲ್ಲಿ ಇಲ್ಲದ್ದನ್ನು ಖರ್ಚು ಮಾಡಬೇಡಿ.</div>
</li>
</ul>
</li>
</ul>
<p style="text-align:justify;">ವಾರ್ಷಿಕ ಸರಾಸರಿ ಎರಡು ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸಿದ್ಧಗೊಳಿಸುವ ಈ ಸಂಸ್ಥೆಯಲ್ಲಿ ಬಳಸುವ ಎಲ್ಲ ತಂತ್ರಾಂಶಗಳೂ ಮುಕ್ತ ತಂತ್ರಾಂಶಗಳು. ಅವರ ಸಂಸ್ಥೆಯ ಈ ಕೆಲವು ದೃಶ್ಯಗಳನ್ನು ನೋಡಿದರೆ ನಿಮಗೆ ಅವರ ಜೀವಶೈಲಿಯ ಅರಿವಾಗುತ್ತದೆ.</p>
<p style="text-align:center;"><img class="aligncenter" title="river-valley-brochure-9" src="http://mitramaadhyama.co.in/wp-content/uploads/2010/10/river-valley-brochure-9-1024x765.jpg" alt="" width="383" height="289" /></p>
<ul>
<li style="text-align:justify;">
<div><a href="http://www.cvr.cc/" target="_blank">ರಾಧಾಕೃಷ್ಣನ್‌ರ ಖಾಸಗಿ ವೆಬ್‌ಸೈಟ್ ಇಲ್ಲಿದೆ.</a></div>
</li>
<li style="text-align:justify;">
<div><a href="http://river-valley.com/" target="_blank">ರಿವರ್ ವ್ಯಾಲಿ ವೆಬ್‌ಸೈಟ್ ಇಲ್ಲಿದೆ. ಫ್ರೀ ಮತ್ತು ಮುಕ್ತ ತಂತ್ರಾಂಶಗಳನ್ನು ನೀವು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.</a></div>
</li>
<li>
<div style="text-align:justify;"><a href="http://river-valley.tv/" target="_blank">ರಿವರ್ ವ್ಯಾಲಿ ವೆಬ್‌ಸೈಟಿನ ಜೊತೆಗೇ ನೀವು ಸಂಸ್ಥೆಯು ಸಂಗ್ರಹಿಸಿದ ತಾಂತ್ರಿಕ ಉಪನ್ಯಾಸಗಳ ದೊಡ್ಡ ವೆಬ್ ಗ್ರಂಥಾಲಯದಲ್ಲೂ ವಿಹರಿಸಬಹುದು. (ಕನೂಥ್‌ರ `ಭೂಮಿಯನ್ನೇ ನಡುಗಿಸುವ ಘೋಷಣೆಯ&#8217; ಉಪನ್ಯಾಸದ ವಿಡಿಯೋ ಹುಡುಕುವಾಗಲೇ ನನಗೆ ರಾಧಾಕೃಷ್ಣನ್ ಬಗ್ಗೆ ತಿಳಿಯಿತು).</a></div>
</li>
</ul>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1627/"><img alt="" border="0" src="http://feeds.wordpress.com/1.0/comments/beluru.wordpress.com/1627/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1627/"><img alt="" border="0" src="http://feeds.wordpress.com/1.0/delicious/beluru.wordpress.com/1627/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1627/"><img alt="" border="0" src="http://feeds.wordpress.com/1.0/facebook/beluru.wordpress.com/1627/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1627/"><img alt="" border="0" src="http://feeds.wordpress.com/1.0/twitter/beluru.wordpress.com/1627/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1627/"><img alt="" border="0" src="http://feeds.wordpress.com/1.0/stumble/beluru.wordpress.com/1627/" /></a> <a rel="nofollow" href="http://feeds.wordpress.com/1.0/godigg/beluru.wordpress.com/1627/"><img alt="" border="0" src="http://feeds.wordpress.com/1.0/digg/beluru.wordpress.com/1627/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1627/"><img alt="" border="0" src="http://feeds.wordpress.com/1.0/reddit/beluru.wordpress.com/1627/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1627&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/10/26/%e0%b2%9f%e0%b3%86%e0%b2%95%e0%b3%8d%e0%b2%b8%e0%b3%8d-%e0%b2%97%e0%b3%81%e0%b2%b0%e0%b3%81-%e0%b2%b0%e0%b2%be%e0%b2%a7%e0%b2%be%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b3%8d/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>

		<media:content url="http://mitramaadhyama.co.in/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>

		<media:content url="http://mitramaadhyama.co.in/wp-content/uploads/2010/10/river-valley-brochure-24.jpg" medium="image">
			<media:title type="html">river-valley-brochure-24</media:title>
		</media:content>

		<media:content url="http://mitramaadhyama.co.in/wp-content/uploads/2010/10/river-valley-brochure-9-1024x765.jpg" medium="image">
			<media:title type="html">river-valley-brochure-9</media:title>
		</media:content>
	</item>
		<item>
		<title>ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ</title>
		<link>http://beluru.wordpress.com/2010/10/26/%e0%b2%9f%e0%b3%86%e0%b2%95%e0%b3%8d%e0%b2%b8%e0%b3%8d-%e0%b2%a1%e0%b3%8a%e0%b2%a8%e0%b2%be%e0%b2%b2%e0%b3%8d%e0%b2%a1%e0%b3%8d-%e0%b2%95%e0%b2%a8%e0%b3%82%e0%b2%a5%e0%b3%8d%e2%80%8c%e0%b2%a8/</link>
		<comments>http://beluru.wordpress.com/2010/10/26/%e0%b2%9f%e0%b3%86%e0%b2%95%e0%b3%8d%e0%b2%b8%e0%b3%8d-%e0%b2%a1%e0%b3%8a%e0%b2%a8%e0%b2%be%e0%b2%b2%e0%b3%8d%e0%b2%a1%e0%b3%8d-%e0%b2%95%e0%b2%a8%e0%b3%82%e0%b2%a5%e0%b3%8d%e2%80%8c%e0%b2%a8/#comments</comments>
		<pubDate>Tue, 26 Oct 2010 18:21:23 +0000</pubDate>
		<dc:creator>beluru</dc:creator>
				<category><![CDATA[ಲೇಖನಗಳು]]></category>
		<category><![CDATA[donald knuth]]></category>
		<category><![CDATA[mitramaadhyama]]></category>
		<category><![CDATA[tex]]></category>

		<guid isPermaLink="false">http://beluru.wordpress.com/?p=1628</guid>
		<description><![CDATA[ಒಂದು ಕಥೆಯನ್ನು ಹುಡುಕುತ್ತ ಇನ್ನೊಂದು ಅಂತಃಕರಣ ಕಲಕುವ ಇನ್ನೊಂದು ಕಥೆ ಸಿಕ್ಕಿದ ಬ್ಲಾಗ್ ಇದು. ಇತ್ತೀಚೆಗೆ ಯಾವುದೋ ಪುಸ್ತಕ ವಿನ್ಯಾಸದಲ್ಲಿ ತೊಡಗಿದ್ದಾಗ ಮೆಟಾ ಎಂಬ ಹೆಸರಿನ ಫಾಂಟ್ ಹುಡುಕಲು ಹೋಗಿ ಮೆಟಾಫಾಂಟ್ ಎಂಬ ಸಿದ್ಧಾಂತ ಮತ್ತು ಸಾಫ್ಟ್‌ವೇರನ್ನೇ ಎಡವಿ ಬಿದ್ದೆ! ಮೆಟಾಫಾಂಟ್ ಎಂಬ ಪರಿಕಲ್ಪನೆಯನ್ನು ರೂಪಿಸಿ ಅದಕ್ಕೆ ಶಾಸ್ತ್ರೀಯವಾದ ವಿವರಣೆ, ಸಾಧನಗಳನ್ನು ನೀಡಿದ ಡೊನಾಲ್ಡ್ ಕನೂಥ್ ಎಂಬ ವಿಚಿತ್ರ ವ್ಯಕ್ತಿತ್ವ ನನ್ನನ್ನು ಸೆಳೆಯಿತು. ಈತ ಮಹಾನ್ ವಿಜ್ಞಾನಿಯಾದರೂ, ಅಷ್ಟೇ ಹಾಸ್ಯಪ್ರಜ್ಞೆ ಉಳ್ಳವ. ಇವನ ಮೆಟಾಫಾಂಟ್ ಪುಸ್ತಕಗಳ ಪ್ರತೀ [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1628&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:justify;">ಒಂದು ಕಥೆಯನ್ನು ಹುಡುಕುತ್ತ ಇನ್ನೊಂದು ಅಂತಃಕರಣ ಕಲಕುವ ಇನ್ನೊಂದು ಕಥೆ ಸಿಕ್ಕಿದ ಬ್ಲಾಗ್ ಇದು.</p>
<p style="text-align:justify;">ಇತ್ತೀಚೆಗೆ ಯಾವುದೋ ಪುಸ್ತಕ ವಿನ್ಯಾಸದಲ್ಲಿ ತೊಡಗಿದ್ದಾಗ ಮೆಟಾ ಎಂಬ ಹೆಸರಿನ ಫಾಂಟ್ ಹುಡುಕಲು ಹೋಗಿ ಮೆಟಾಫಾಂಟ್ ಎಂಬ ಸಿದ್ಧಾಂತ ಮತ್ತು ಸಾಫ್ಟ್‌ವೇರನ್ನೇ ಎಡವಿ ಬಿದ್ದೆ! ಮೆಟಾಫಾಂಟ್ ಎಂಬ ಪರಿಕಲ್ಪನೆಯನ್ನು ರೂಪಿಸಿ ಅದಕ್ಕೆ ಶಾಸ್ತ್ರೀಯವಾದ ವಿವರಣೆ, ಸಾಧನಗಳನ್ನು ನೀಡಿದ ಡೊನಾಲ್ಡ್ ಕನೂಥ್ ಎಂಬ ವಿಚಿತ್ರ ವ್ಯಕ್ತಿತ್ವ ನನ್ನನ್ನು ಸೆಳೆಯಿತು. ಈತ ಮಹಾನ್ ವಿಜ್ಞಾನಿಯಾದರೂ, ಅಷ್ಟೇ ಹಾಸ್ಯಪ್ರಜ್ಞೆ ಉಳ್ಳವ. ಇವನ ಮೆಟಾಫಾಂಟ್ ಪುಸ್ತಕಗಳ ಪ್ರತೀ ಪುಟದಲ್ಲೂ ಒಂದೊಂದು ತಮಾಶೆಯ ವಾಕ್ಯವನ್ನು ನೀವು ಹುಡುಕಬಹುದು! ಅವನ ವೆಬ್‌ಸೈಟಿನಲ್ಲೂ ತಮಾಶೆ ಉಕ್ಕಿ ಹರಿದಿದೆ. ಪ್ರಪಂಚದಲ್ಲಿ ಇಂಥವರೂ ಇದ್ದಾರಾ ಎಂದು ಅಚ್ಚರಿಯಾಗುವಂಥ ಸ್ವಭಾವದ ಡೊನಾಲ್ಡ್ ನುಥ್ ನನ್ನ ಕಣ್ಣಿಗೆ ಬಿದ್ದ ಮೇಲೆ ಕೇಳಬೇಕೆ? ಅವರು ಬರೆದ ಪುಸ್ತಕಗಳನ್ನೆಲ್ಲ ಇಂಟರ್‌ನೆಟ್‌ನಿಂದಲೇ ಕದ್ದು ಹಾಳೆ ತಿರುಗಿಸಿದೆ. ಇಂಥ ವ್ಯಕ್ತಿಯ ಬಗ್ಗೆ ಬರೆಯುವುದೇ ಒಂದು ಹೆಮ್ಮೆ ಅನ್ನಿಸಿಬಿಟ್ಟಿತು. ಹಾಗೇ ಹುಡುಕುತ್ತ ಹೋದಾಗ ಡೊನಾಲ್ಡ್ ಕನೂಥ್‌ನ ಸಂಶೋಧನೆಯಿಂದ ತನ್ನ ಜೀವನವನ್ನೇ ಬದಲಿಸಿಕೊಂಡು, ಸಾವನ್ನು ದೂರದೂರಕ್ಕೆ ಅಟ್ಟಿ, ಇನ್ನೂ ನೂರಾರು ಜನರ ಬಾಳಿಗೆ ಬೆಳಕಾದ ರಾಧಾಕೃಷ್ಣನ್ ಕಥೆಯೂ ಸಿಕ್ಕಿತು. ಇಬ್ಬರ ಕಥೆಯೂ ಹೇಗೆ ಪರಸ್ಪರ ಹೆಣೆದುಕೊಂಡಿದೆ ಎಂದು ನೋಡುತ್ತ ಅಚ್ಚರಿಗೆ ಬಿದ್ದೆ. ಬದುಕಿನಲ್ಲಿ ಎಡಬಿಡದೆ ಕೆಲಸ ಮಾಡಿ ಸಾಧಿಸುವುದು ಇಬ್ಬರ ಪ್ರಿಯ ಹವ್ಯಾಸ. ಹಾಗೇ ಬದುಕನ್ನು ತಮಗೆ ಬೇಕಾದ ಹಾಗೆ ಕಟ್ಟಿಕೊಳ್ಳುವುದು ಇಬ್ಬರಿಗೂ ಇಷ್ಟದ ವಿಚಾರ. ಮೊದಲು ಡೊನಾಲ್ಡ್ ಕನೂಥ್ ಕಥೆ. ಆಮೇಲೆ ರಾಧಾಕೃಷ್ಣನ್.<img title="More..." src="http://mitramaadhyama.co.in/wp-includes/js/tinymce/plugins/wordpress/img/trans.gif" alt="" /><span id="more-1628"></span></p>
<p style="text-align:justify;">ಡೋನಾಲ್ಡ್ ಕನೂಥ್‌ಗೆ ಬಹುಶಃ ನೋಬೆಲ್ ಪ್ರಶಸ್ತಿಯೊಂದು ಸಿಕ್ಕಿಲ್ಲ. ಸಮಕಾಲೀನ ಶೈಕ್ಷಣಿಕ &#8211; ಸಂಶೋಧನಾ ರಂಗದಲ್ಲಿ ಅವನಂಥ ಗಣಿತಜ್ಞ, ಕಂಪ್ಯೂಟರ್ ಪ್ರೋಗ್ರಾಮಿಂಗ್ ನಿಪುಣರು ತುಂಬಾ ಅಪರೂಪ ಎಂಬ ಮಾತಿದೆ. ಕಾಲೇಜು ಹುಡುಗನಾಗಿದ್ದಾಗಲೂ ಗಣಿತವೇ ಕನೂಥ್‌ನ ಉಸಿರು.</p>
<p style="text-align:justify;">೧೯೫೯ರಲ್ಲಿ ತಾನು ಓದುತ್ತಿದ್ದ ಕಾಲೇಜಿನ ಬ್ಯಾಸ್ಕೆಟ್‌ಬಾಲ್ ತಂಡದ ದಕ್ಷತೆಯನ್ನು ಅಳೆಯಲು ಕನೂಥ್ ಆಗಿನ ಕಾಲದಲ್ಲಿ `ನಿಮಿಷಕ್ಕೆ ೫೦ ಸಾವಿರ ಲೆಕ್ಕಾಚಾರಗಳನ್ನು ಮಾಡುತ್ತಿದ್ದ&#8217; ಐ ಬಿ ಎಂ ಕಂಪ್ಯೂಟರನ್ನು ಬಳಸಿದ. ಎಲ್ಲ ಆಟಗಾರರ ಆಟದ ಚಲನವಲನಗಳನ್ನು ಬರೆದುಕೊಂಡು, ಅದನ್ನು ಪಂಚ್ ಮಾಡಿ, ಗಣಕಕ್ಕೆ ತುಂಬಿ ಅದರಿಂದ ನಕಾಶೆಗಳನ್ನು ತೆಗೆದ. ಪ್ರತಿ ಆಟಗಾರನ ದಕ್ಷತೆಯನ್ನು ಪ್ರತ್ಯೇಕವಾದ ಸಮೀಕರಣದಿಂದ ಅಳೆದು ತೂಗಿದ ಡೊನಾಲ್ಡ್ ಕನೂಥ್, ಅದನ್ನೇ ಮುಂದೆ ನಡೆದ ಪಂದ್ಯಾವಳಿಯಲ್ಲಿ ತಂಡದ ಕೋಚ್‌ಗೆ ನೀಡಿದ. ಪರಿಣಾಮ: ಅವನ ಕಾಲೇಜಿನ ತಂಡ ೧೬ ಪಂದ್ಯಗಳನ್ನು ಗೆದ್ದು, ಒಂದೇ ಪಂದ್ಯವನ್ನು ಸೋತಿತ್ತು!</p>
<p style="text-align:justify;"> <span style="text-align:center; display: block;"><a href="http://beluru.wordpress.com/2010/10/26/%e0%b2%9f%e0%b3%86%e0%b2%95%e0%b3%8d%e0%b2%b8%e0%b3%8d-%e0%b2%a1%e0%b3%8a%e0%b2%a8%e0%b2%be%e0%b2%b2%e0%b3%8d%e0%b2%a1%e0%b3%8d-%e0%b2%95%e0%b2%a8%e0%b3%82%e0%b2%a5%e0%b3%8d%e2%80%8c%e0%b2%a8/"><img src="http://img.youtube.com/vi/dhh8Ao4yweQ/2.jpg" alt="" /></a></span></p>
<p style="text-align:justify;">೧೯೬೦ರಲ್ಲಿ ಕನೂಥ್ ವಿಜ್ಞಾನದಲ್ಲಿ ಪದವಿ ಮತ್ತಿ ಸ್ನಾತಕೋತ್ತರ ಪದವಿ &#8211; ಎರಡನ್ನೂ ಒಟ್ಟಿಗೆ ಪಡೆದ ಜಾಣ. ಹೀಗೆ ಅಂದಿನಿಂದಲೂ ಗಣಿತವನ್ನು ಅರೆದು ಕುಡಿದ ಕನೂಥ್ ಈಗ ನಮ್ಮ ನಡುವೆ ಇರುವ ವಿಶ್ವದ ಅಗ್ರಮಾನ್ಯ ಕಂಪ್ಯೂಟರ್ ಪ್ರೋಗ್ರಾಮರ್.</p>
<p style="text-align:justify;">ಅದಿರಲಿ, ಆತ ಹೈಸ್ಕೂಲಿನಲ್ಲಿದ್ದಾಗ ಒಂದು ಸ್ಪರ್ಧೆಯಲ್ಲಿ ` Ziegler&#8217;s Giant Bar &#8216; ವಾಕ್ಯದ ಅಕ್ಷರಗಳನ್ನು ಬಳಸಿ ಎಷ್ಟೆಲ್ಲ ಪದಗಳನ್ನು ರಚಿಸಬಹುದೆಂಬ ಸ್ಪರ್ಧೆ ಏರ್ಪಡಿಸಿದ್ದರಂತೆ. ಅದರಲ್ಲಿ ಕನೂಥ್ ೪೫೦೦ಕ್ಕೂ ಹೆಚ್ಚು ಪದಗಳನ್ನು ಹುಡುಕಿ ತೆಗೆದ. ಮಜಾ ಎಂದರೆ ತೀರ್ಪುಗಾರರ ಉತ್ತರದಲ್ಲಿ ಬರೀ ೨೫೦೦ ಪದಗಳಿದ್ದವು! ಬಹುಮಾನವಾಗಿ ಒಂದು ಟೆಲಿವಿಜನ್ ಸೆಟ್ ಮತ್ತು ಕ್ಯಾಂಡಿ ಬಾರ್ ಪಡೆದ ಕನೂಥ್.</p>
<p style="text-align:justify;"><img title="the art of computer programming" src="http://mitramaadhyama.co.in/wp-content/uploads/2010/10/the-art-of-computer-programming.jpg" alt="" width="344" height="310" /></p>
<p style="text-align:justify;">ಡೊನಾಲ್ಟ್ ಕನೂಥ್ ಬರೆದ `ದಿ ಆರ್ಟ್ ಆಫ್ ಕಂಪ್ಯೂಟರ್ ಪ್ರೋಗ್ರಾಮಿಂಗ್&#8217; ಎಂಬ ಪುಸ್ತಕ ಸರಣಿಯು ಬಹುಶಃ ಜಗತ್ತಿನಲ್ಲಿ ಈವರೆಗೂ ಕಂಪ್ಯೂಟರ್ ಪ್ರೋಗ್ರಾಮಿಂಗ್ ಪ್ರೇಮಿಗಳು ಆರಾಧಿಸುವ ಪುಸ್ತಕ ಎಂದು ಬಲ್ಲವರು ಹೇಳುತ್ತಾರೆ. ಕಂಪ್ಯೂಟರ್ ಜಗತ್ತಿನ ಅಲ್ಗಾರಿದಮ್‌ಗಳ ಪಿತಾಮಹ ಎಂದೇ ಕನೂಥ್‌ಗೆ ಹೆಸರಿದೆ. ಈಗ ಕನೂಥ್ ಅದೇ ಪುಸ್ತಕದ ಹೆಸರಿನಲ್ಲಿರುವ ವಿಶೇಷ ಗೌರವ ಪ್ರಾಧ್ಯಾಪಕರಾಗಿದ್ದಾರೆ.</p>
<p style="text-align:justify;">ಕನೂಥ್‌ನ ಅಪ್ಪ ಒಬ್ಬ ಮುದ್ರಕನಾಗಿದ್ದ. ಹಾಗಾಗಿ ಪುಸ್ತಕಗಳು, ಫಾಂಟ್ ಬಗ್ಗೆ ಕನೂಥ್‌ಗೆ ಬಾಲ್ಯದಿಂದಲೇ ಪ್ರೀತಿ ಬೆಳೆದಿದ್ದು ಸಹಜವೇ. ಹೀಗೇ ಒಮ್ಮೆ ಕನೂಥ್ ತನ್ನ ಗಣಿತದ ಪ್ರಬಂಧವನ್ನು ಮುದ್ರಿಸುವ ಸಂದರ್ಭದಲ್ಲಿ ಗಣಿತದ ಚಿಹ್ನೆಗಳು ಎರ್ರಾಬಿರ್ರಿಯಾಗಿ ಕಾಣುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ. ಛೆ, ಪುಸ್ತಕ ಇಷ್ಟೆಲ್ಲ ಕೆಟ್ಟದಾಗಿ ಕಾಣಿಸ್ತಾ ಇದೆಯಲ್ಲ ಎಂದು ಬೇಜಾರಾಗಿ ಸುಮ್ಮನೆ ಕೂರುವ ಬದಲು, ಒಳ್ಳೆಯ ಪುಟವಿನ್ಯಾಸ ಮಾಡುವ ಒಂದು ಕಂಪ್ಯೂಟರ್ ಪ್ರೋಗ್ರಾಮನ್ನೇ ಬರೆದ! ಈ ಪ್ರೋಗ್ರಾಮಿಂಗ್‌ನ್ನು ಕನೂಥ್ ರೂಪಿಸಿದ್ದು ೧೯೭೮ರಲ್ಲಿ. ಇವತ್ತಿಗೂ ಅದು ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಈಗ, `ಭೂಮಿಯನ್ನೇ ನಡುಗಿಸುವ ಸುದ್ದಿಯಾಗಿ&#8217; (ಇದೆಲ್ಲ ಕನೂಥ್‌ನ ತಮಾಶೆಯ ಪದಗುಚ್ಛಗಳು ಎಂಬುದನ್ನು ಗಮನಿಸಿ) ಐಟೆಕ್ಸ್ ಎಂಬ ಸುಧಾರಿತ, ಸಮಕಾಲೀನ ಪ್ರೋಗ್ರಾಮಿಂಗ್‌ನ್ನು ರೂಪಿಸುತ್ತಿರುವುದಾಗಿ ಕನೂಥ್ ಪ್ರಕಟಿಸಿದ್ದಾನೆ.</p>
<p style="text-align:justify;"><strong>ಈ ಟೆಕ್ಸ್ ಮಾಡೋದಾದ್ರೂ ಏನು?</strong></p>
<p style="text-align:justify;">ಕಂಪ್ಯೂರಿನಲ್ಲಿ ಮಾರ್ಕಪ್ ಭಾಷೆ ಎಂದು ಕರೆಯುವ ವರ್ಗಕ್ಕೆ ಟೆಕ್ಸ್ ಕೂಡಾ ಸೇರುತ್ತದೆ. ಇಲ್ಲಿ ನೀವು ನಿಮ್ಮ ಗಣಿತದ ಅಥವಾ ಯಾವುದೇ ವೈಜ್ಞಾನಿಕ ಪ್ರಬಂಧದ ಪುಸ್ತಕವು ಯಾವ ರೀತಿ ಕಾಣಿಸಬೇಕು (ಫಾಂಟ್ ಶೈಲಿ, ಪ್ಯಾರಾಗ್ರಾಫ್ ಶೈಲಿ, ಮಾರ್ಜಿನ್‌ಗಳು, ಸಂಕೇತಗಳು, ಪುಟ ಸಂಖ್ಯೆ, ಕಾಲಂಗಳು, ಬುಲೆಟ್ ಪಾಯಿಂಟ್‌ಗಳು ಹೀಗೆ ಪುಸ್ತಕ ವಿನ್ಯಾಸದ ಎಲ್ಲ ರೂಪುರೇಷೆಗಳು) ಎಂದು ಆದೇಶಗಳನ್ನು ಊಡಿಸಿದರೆ ಸಾಕು; ಇಡೀ ಪುಸ್ತಕವು ನಿಮ್ಮ ಕನಸಿಗೆ ತಕ್ಕಂತೆ ರೂಪುಗೊಳ್ಳುತ್ತದೆ.</p>
<p style="text-align:justify;"><a href="http://mitramaadhyama.co.in/?p=2217" target="_blank">ಈ ತಂತ್ರಜ್ಞಾನವನ್ನು ಬಳಸಿ ವರ್ಷಕ್ಕೆ ಎರಡು ಲಕ್ಷ ಪುಟಗಳನ್ನು ವಿನ್ಯಾಸಗೊಳಿಸುವ ರಾಧಾಕೃಷ್ಣನ್‌ರ ಕಥೆಯನ್ನು ನೀವು ಈ ಲಿಂಕಿನಲ್ಲಿ ಓದಬಹುದು.</a></p>
<p style="text-align:justify;"><strong>ಟೆಕ್ಸ್‌ನ ಸಂಗಾತಿ ಮೆಟಾಫಾಂಟ್</strong></p>
<p style="text-align:justify;">ಟೆಕ್ಸ್ ಜೊತೆಗೇ ಕನೂಥ್ ರೂಪಿಸಿದ ಇನ್ನೊಂದು ತಂತ್ರಜ್ಞಾನ ಎಂದರೆ ಫಾಂಟ್ ತಯಾರಿಸುವ ಗಣಕ ತಂತ್ರಾಂಶ ಮೆಟಾಫಾಂಟ್. ಇದನ್ನು ಬಳಸಿ ನೀವು ಎಂಥ ಬಗೆಯ ಫಾಂಟನ್ನಾದರೂ ರೂಪಿಸಬಹುದು. ಜ್ಯಾಮಿತಿಯ ಸೂತ್ರಗಳನ್ನು ಸೂಕ್ತವಾಗಿ ಈ ತಂತ್ರಾಂಶಕ್ಕೆ ಉಣಿಸಿದರೆ, ನಿಮಗೆ ಬೇಕಾದ ವಿನ್ಯಾಸದ ಫಾಂಟ್ ತಯಾರಾಗುತ್ತದೆ. ಬಿಟ್‌ಮ್ಯಾಪ್ ರೂಪದಲ್ಲಿ ತಯಾರಾದ ಇದನ್ನು ಪೋಸ್ಟ್‌ಸ್ಕ್ರಿಪ್ಟ್‌ನಲ್ಲೂ ಅಡಕ ಮಾಡಬಹುದು.</p>
<p style="text-align:justify;">ಒಂದು ಫಾಂಟ್‌ನ್ನು ೬೦ ಮಾನದಂಡಗಳ ಬಳಕೆಯ ಮೂಲಕ ಹೇಗೆ ಬರೆಯಬಹುದು ಎಂಬ ಗಣಿತದ ತಿಳಿವಳಿಕೆಯನ್ನು ಕಲಾವಿದನೊಬ್ಬ ಹೊಂದಬೇಕೆಂದು ಬಯಸುವುದು ತೀರಾ ಅತಿಯಾದ ನಿರೀಕ್ಷೆ&#8217; ಎಂದು ಕನೂಥ್ ಒಂದೆಡೆ ಹೇಳಿಕೊಂಡಿದ್ದಾರೆ. ಆದರೆ ಹೆರ್ಮನ್ ಝಾಫ್ (ಝಾಫ್ ಡಿಂಗ್‌ಬ್ಯಾಟ್‌ಗಳನ್ನು ಯಾರು ಕೇಳಿಲ್ಲ?) ಮತ್ತು ಕನೂಥ್ ಜೊತೆ ಸೇರಿ ಹಲವು ಫಾಂಟ್‌ಗಳನ್ನು ಮೆಟಾಫಾಂಟ್ ಬಳಸಿಯೇ ತಯಾರಿಸಿದ್ದಾರೆ.</p>
<p style="text-align:justify;">ಈ ಪುಸ್ತಕದಲ್ಲಿ ಕನೂಥ್ ನೀಡಿರುವ ಒಂದು ಎಚ್ಚರಿಕೆ ಹೀಗಿದೆ:</p>
<p style="text-align:justify;"><img title="KNUTH-WARNING" src="http://mitramaadhyama.co.in/wp-content/uploads/2010/10/KNUTH-WARNING.jpg" alt="" width="370" height="88" /></p>
<p style="text-align:justify;">ಡೊನಾಲ್ಡ್ ಕನೂಥ್ ೧೯೯೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಹೇಳಿರುವ ಅಂಶಗಳು ಸ್ವಾರಸ್ಯವಾಗಿವೆ:</p>
<ul style="text-align:justify;">
<li><strong>When can we buy volume four of <em>The Art of Computer Programming</em>? </strong></li>
</ul>
<blockquote><p>I’m going to be putting it out 128 pages at a time, about twice a year over the next eight years. I’m estimating it now at a little more than 2000 pages. There will be volume 4-a, volume 4-b, and volume 4-c. Volume 4 in general is combinatorial algorithms. Volume 4-a is about finding all possibilities: There’s a lot to be said about generating   them in good ways—problems where finding all reasonable solutions is not a trivial task. 4-b is going to be about graph and network algorithms, and 4-c is about combinatorial optimization. So 4-a is ‘find all arrangements,’ 4-b is ‘find arrangements that have to do with graphs and networks,’ and 4-c is ‘find the best arrangement.’ Into those 2000 pages, I have to compress about 200,000 pages of literature. I’ve been working on it a long time.</p>
<p>I had started volume 4 (<em>The Art of Computer Programming</em>)and then realized I had to work on typography. There was a revolution in the printing industry. The printing industry became computer science. It changed from metallurgy to bits, to 0s and 1s. There was no way to print my books with the quality they had before. I was going to take a year and give a computer scientist’s answer to how to print books, and that took ten years.</p>
<li><strong>If you could climb in the pulpit and scold, exhort, and encourage every working programmer in the United States, what would you tell them?</strong></li>
<p>Secondly, ideas that are mathematical in nature should be  the property of the world and not of the individual who thinks of the theorem. I’d prefer that all but the most sophisticated algorithms be made public and that everybody use them, and not that every time you use such-and-such a method you should pay a nano-penny to some fund.</p>
<p>The first thing I would say is that when you write a program, think of it primarily as a work of literature. You’re trying to write something that human beings are going to read. Don’t think of it primarily as something a computer is going to follow. The more effective you are at making your program readable, the more effective it’s going to be: You’ll understand it today, you’ll understand it next week, and your successors who are going to maintain and modify it will understand it.</p></blockquote>
<p style="text-align:justify;"><a href="http://mitramaadhyama.co.in/wp-content/uploads/2010/10/Interview-with-Knuth-14.pdf" target="_blank"> (ಸಂಪೂರ್ಣ ಸಂದರ್ಶನವನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ)</a></p>
<p style="text-align:justify;">ಡೊನಾಲ್ಡ್ ಕನೂಥ್ ಮಹಾ ಹಾಸ್ಯಚತುರ. ಮೊನಚು ಮಾತುಗಳಿಗೆ ಸುಪ್ರಸಿದ್ಧ. ಮಾತನಾಡುವಾಗ ಗಂಭೀರವಾಗಿದ್ದರೂ, ಮಾತಿನಲ್ಲಿ ಮಾತ್ರ ಹರಿತ ವ್ಯಂಗ್ಯವೋ, ತಮಾಶೆಯೋ ಇದ್ದೇ ಇರುತ್ತದೆ. ಈತ ಕಂಡುಹಿಡಿದ ಒಂದು ಹಣದ ಮಒತ್ತವೆಂದರೆ ಹೆಕ್ಸಾಡೆಸಿಮಲ್ ಡಾಲರ್ ಅರ್ಥಾತ್ ೨.೫೬ ಡಾಲರ್. ತನ್ನ ಪುಸ್ತಕಗಳಲ್ಲಿ ಇರುವ ತಪ್ಪುಗಳನ್ನು ಹುಡುಕಿಕೊಟ್ಟವರಿಗೆ ಒಂದು ತಪ್ಪಿಗೆ ೨.೫೬ ಡಾಲರ್ ಮೊತ್ತದ ಒಂದು ಹೆಕ್ಸಾಡೆಸಿಮಲ್ ಡಾಲರ್ ಚೆಕ್ಕನ್ನು ಕನೂಥ್ ತಪ್ಪಿಲ್ಲದೆ ಅಂಚೆಗೆ ಹಾಕುತ್ತಾನೆ. ಹೀಗೆ ಅವನಿಂದ ೧೦.೨೪ ಡಾಲರ್ ಚೆಕ್ ಪಡೆದ ಭಾರತೀಯನ ಚೆಕ್ ಒಂದು ಇಲ್ಲಿದೆ:</p>
<p style="text-align:justify;"><img title="502039190_26e164b32b_o" src="http://mitramaadhyama.co.in/wp-content/uploads/2010/10/502039190_26e164b32b_o-1024x454.jpg" alt="" width="312" height="133" /></p>
<p style="text-align:justify;">ಕನೂಥ್‌ನ ಟೆಕ್ಸ್ ತಂತ್ರಾಂಶದ ವರ್ಶನ್‌ಗಳ ಸಂಖ್ಯೆ ವಿಭಿನ್ನ. ಇದು ೩ರಿಂದ ಆರಂಭವಾಗಿ `ಪೈ&#8217; ()ನ ದಶಮಾಂಶ ಸ್ಥಾನಗಳಂತೆಯೇ ಬೆಳೆಯುತ್ತದೆ. ತನ್ನ ತಂತ್ರಾಂಶದ ವರ್ಶನ್‌ಗಳಿಗೆ ಕೊನೆಯೇ ಇಲ್ಲ ಎಂಬುದು ಕನೂಥ್‌ನ ರಹಸ್ಯ ಸಂದೇಶ ಇರಬಹುದೇನೋ!</p>
<p style="text-align:justify;">` Beware of bugs in the above code; I have only proved it correct, not tried it &#8216; (ನನ್ನ  ತಂತ್ರಾಂಶಗಳಲ್ಲಿ ಲೋಪಗಳಿರಬಹುದು ಎಚ್ಚರ! ನಾನು ಇವನ್ನೆಲ್ಲ ಸರಿ ಅಂತ ಸಿದ್ಧಮಾಡಿ ತೋರಿಸಿದ್ದೇನೆಯೇ ಹೊರತು ಅವುಗಳನ್ನು ಬಳಸಿಲ್ಲ) ಎಂಬ ಸುಪ್ರಸಿದ್ಧ ವಾಕ್ಯವು ಕನೂಥ್‌ನ ಬಾಯಿಯಿಂದಲೇ ಬಂದಿದ್ದು.</p>
<p style="text-align:justify;">ಸಂಗೀತದಲ್ಲೂ ಪಳಗಿರುವ ಕನೂಥ್ ಮನೆಯಲ್ಲಿ ಒಂದು ಪೈಪ್ ಆರ್ಗನ್ ಸ್ಥಾಪಿಸಿಕೊಂಡಿದ್ದಾನೆ. ಅವನ ಗಣಿತದ ನಿಪುಣತೆಯೂ ಇದಕ್ಕೆ ಸಹಾಯ ಮಾಡಿರಬಹುದು. ಇದರಲ್ಲಿ ಒಟ್ಟು ೮೧೨ ಧ್ವನಿ ಹೊರಡಿಸುವ ಕೊಳವೆಗಳಿವೆ. </p>
<p style="text-align:justify;"><img title="donald_knuth" src="http://mitramaadhyama.co.in/wp-content/uploads/2010/10/donald_knuth.jpg" alt="" width="404" height="162" /></p>
<p style="text-align:justify;">೧೯೭೫ರಿಂದಲೇ ಈ ಮೈಲ್ ಬಳಸುತ್ತಿದ್ದ ಕನೂಥ್ ೧೯೯೦ರ ಜನವರಿ ೧ರಿಂದ ಈಮೈಲ್ ಬಳಕೆಯನ್ನು ನಿಲ್ಲಿಸಿದ್ದಾನೆ. ೧೫ ವರ್ಷ ಈ ಮೈಲ್ ಬಳಸುವುದೆಂದರೆ ಬದುಕಿಗೆ ಬೇಕಾದಷ್ಟಾಯಿತು ಎನ್ನುವುದು ಕನೂಥ್‌ನ ವಾದ. ಜೀವನದಲ್ಲಿ ಯಾವಾಗಲೂ ಮೇಲೇ ಇರಬೇಕೆನ್ನುವವರಿಗೆ ಈ ಮೈಲ್ ಬೇಕು. ಆದರೆ ನಾನು ಯಾವಾಗಲೂ ತಳದಲ್ಲೇ ಪಾತ್ರ ನಿರ್ವಹಿಸಬಯಸುವ ವ್ಯಕ್ತಿ ಎಂದು ಕನೂಥ್ ಹೇಳುತ್ತಾರೆ. ಅವರ ಮಾತುಗಳಲ್ಲೇ  ಹೇಳುವುದಾದರೆ&#8230;</p>
<blockquote><p>ನನಗೆ ಬೇಕಾದದ್ದು ಅಧ್ಯಯನಕ್ಕೆ ಸೂಕ್ತವಾದ ಸುದೀರ್ಘ ಸಮಯಾವಕಾಶ; ಅಲ್ಲಿ ನನ್ನ ಗಮನವನ್ನು ಅತ್ತಿತ್ತ ಸೆಳೆಯುವ ಯಾವುದೇ ಅಡ್ಡಿಯೂ ಇರಕೂಡದು. ನಾನು ಗಣಕ ವಿಜ್ಞಾನದ ಹಲವು ಕ್ಷೇತ್ರಗಳಲ್ಲಿ ಅತಿ ಆಳವಾಗಿ ಅಭ್ಯಾಸ ಮಾಡುತ್ತೇನೆ. ಹೀಗೆ ಅಭ್ಯಾಸ ಮಾಡದವರಿಗೆ ಅರ್ಥವಾಗುವ ಹಾಗೆ ತಿಳಿವಳಿಕೆಯನ್ನು ಹೊಂದಲು ನಾನು ಬಯಸುತ್ತೇನೆ. ಆದರೆ ಹಲವು ಪುಸ್ತಕಗಳನ್ನು ಬರೆಯುವ ನನಗೆ ಸಾವಿರಾರು ಜನರ ಜೊತೆಗೆ ಸಂಪರ್ಕ ಸಾಧಿಸುವ ಅಗತ್ಯವಿದೆ. ಜನರ ಪ್ರಶ್ನೆಗಳಿಗೂ ನಾನು ಉತ್ತರಿಸಬೇಕಿದೆ. ಆದ್ದರಿಂದ ಪ್ರತೀ ಮೂರು ತಿಂಗಳಿಗೊಮ್ಮೆ ಒಂದು ದಿನವಿಡೀ ಈ ಪ್ರತಿಕ್ರಿಯೆ ನೀಡುವುದಕ್ಕೇ ಸಮಯ ಮೀಸಲಿಟ್ಟಿದ್ದೇನೆ.  ನಿಮಗೇನಾದರೂ ಹೇಳಬೇಕೆಂದಿದ್ದರೆ ದಯಮಾಡಿ ಈ ಕೆಳಗಿನ ವಿಳಾಸಕ್ಕೆ ಕಾಗದದ ಪತ್ರ ಹಾಕಿ: (ಪ್ರೊ. ಡೊನಾಲ್ಡ್ ಕನೂಥ್, ಕಂಪ್ಯೂಟರ್ ಸೈನ್ಸ್ ಡಿಪಾರ್ಟ್‌ಮೆಂಟ್, ಗೇಟ್ಸ್ ಬಿಲ್ಟಿಂಗ್ ೪ಬಿ, ಸ್ಟಾನ್‌ಫರ್ಡ್ ಯೂನಿವರ್ಸಿಟಿ, ಸ್ಟಾನ್‌ಫರ್ಡ್, ಅಮೆರಿಕಾ).</p>
<p>ನನಗೆ ಬಂದ ಪತ್ರಗಳನ್ನು ನನ್ನ ಅದ್ಭುತ ಕಾರ್ಯದರ್ಶಿಯು ಜೋಡಿಸಿಡುತ್ತಾಳೆ. ನಾನು ಅವುಗಳನ್ನು ನಿಯಮಿತವಾಗಿ ನೋಡುತ್ತೇನೆ. ಹಾಗೇ ನನ್ನ ಈ ಮೈಲ್‌ಗೂ ನೀವು ಪತ್ರ ಕಳಿಸಬಹುದು. ಅಕಸ್ಮಾತ್ ನೀವೇನಾದ್ರೂ ಫ್ಯಾಕ್ಸ್ ಕಳಿಸಿದರೆ ಅದನ್ನು ನಾನು ಮೂರು ತಿಂಗಳಲ್ಲ, ಆರು ತಿಂಗಳಿಗೆ ಒಮ್ಮೆ ನೋಡ್ತೇನೆ ಅಷ್ಟೆ!</p>
<p>`ನಾನು ಈ ಮೈಲ್ ವಿಳಾಸವನ್ನೂ ಇಟ್ಟುಕೊಂಡಿಲ್ಲ. ನನ್ನ ಪರಮ ಉದ್ದೇಶವು ಸಂದೇಶಗಳನ್ನು ಸ್ವೀಕರಿಸುವ ಕಾಲ ಇದಲ್ಲ; ಈ ಕಾಲವನ್ನು ನನ್ನ ವಯಸ್ಸು ಮೀರಿದೆ&#8217; ಎಂದು ಉಂಬರ್ಟೋ ಇಕೋ ಹೇಳಿದ್ದು ಕೇಳಿಲ್ಲವೆ?</p>
<p>ನೋಡಿ, ನನ್ನ ಪುಸ್ತಕ `ದಿ ಆರ್ಟ್ ಆಫ್ ಕಂಪ್ಯೂಟರ್ ಪ್ರೋಗ್ರಾಮಿಂಗ್ ಇದೆಯಲ್ಲ, ಅದನ್ನು ೧೯೬೨ರಿಂದ ಬರೆಯೋದಕ್ಕೆ ಶುರು ಮಾಡಿದ್ದೇನೆ. ಅದನ್ನು ಮುಗಿಸೋದಕ್ಕೆ ನನಗೆ ಇನ್ನೂ ಹಲವು ವರ್ಷಗಳು ಬೇಕು. ಅದಕ್ಕಾಗಿ ಕೆಲವರಿಗೆ ಅನಿವಾರ್ಯವಾಗಿ ಈ ಮೈಲ್ ಹಾಕುತ್ತೇನೆ.</p></blockquote>
<p style="text-align:justify;">ಹೀಗೆ ಈ ಮೈಲ್ ಬಳಕೆಯ ಕುರಿತು ಬರೆಯೋದ್ರಲ್ಲೇ ತನ್ನ ಜೀವನದೃಷ್ಟಿಯನ್ನೂ  ದಾಖಲಿಸಿದ ಕನೂಥ್ ಟ್ಯೂರಿಂಗ್ ಪ್ರಶಸ್ತಿ, ನ್ಯಾಶನಲ್ ಮೆಡಲ್ ಫಾರ್ ಸೈನ್ಸ್, ಜಾನ್ ವಾನ್ ನ್ಯೂಮನ್ ಮೆಡಲ್, ಕ್ಯೋಟೊ ಪ್ರೈಜ್, ಮತ್ತು ಇತ್ತೀಚೆಗಷ್ಟೆ (೨೦೧೦) ಪ್ರತಿಷ್ಠಿತ ಕತಯಾನಗಿ ಬಹುಮಾನವನ್ನು ಪಡೆದಿದ್ದಾರೆ. ೨೦೦೬ರಲ್ಲಿ ಅವರಿಗೆ ಕ್ಯಾನ್ಸರ್ ಇದೆ ಎಂಬುದು ಗೊತ್ತಾಗಿದೆ. ಅದನ್ನೂ ಕ್ರೀಡಾಮನೋಭಾವದಿಂದಲೇ ಸ್ವೀಕರಿಸಿದ್ದಾರೆ ಕನೂಥ್.</p>
<p style="text-align:justify;"><strong>ತನ್ನ ವೆಬ್‌ಸೈಟಿನಲ್ಲಿ ಅತ್ಯಂತ ಮುಕ್ತವಾಗಿ ತನ್ನೆಲ್ಲ ವಿಚಾರಗಳನ್ನೂ ತೆರೆದಿಟ್ಟಿರುವ ಕನೂಥ್ ನಮ್ಮ ನಡುವೆ ಇರುವ ಒಬ್ಬ ಹೃದಯವಂತ ಗಣಿತಜ್ಞ.</strong></p>
<ul>
<li style="text-align:justify;">
<div><a href="http://www-cs-faculty.stanford.edu/~uno/" target="_blank">ಡೊನಾಲ್ಡ್ ಕನೂಥ್‌ರವರ ವೆಬ್‌ಸೈಟ್ ಇಲ್ಲಿದೆ.</a></div>
</li>
<li>
<div style="text-align:justify;"><a href="http://www.tug.org/" target="_blank">ಡೊನಾಲ್ಡ್ ಕನೂಥ್ ರೂಪಿಸಿದ &#8216;ಟೆಕ್ಸ್&#8217; ನ ಬಳಕೆದಾರರ ವೆಬ್‌ಸೈಟ್ ಇಲ್ಲಿದೆ.</a></div>
</li>
</ul>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1628/"><img alt="" border="0" src="http://feeds.wordpress.com/1.0/comments/beluru.wordpress.com/1628/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1628/"><img alt="" border="0" src="http://feeds.wordpress.com/1.0/delicious/beluru.wordpress.com/1628/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1628/"><img alt="" border="0" src="http://feeds.wordpress.com/1.0/facebook/beluru.wordpress.com/1628/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1628/"><img alt="" border="0" src="http://feeds.wordpress.com/1.0/twitter/beluru.wordpress.com/1628/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1628/"><img alt="" border="0" src="http://feeds.wordpress.com/1.0/stumble/beluru.wordpress.com/1628/" /></a> <a rel="nofollow" href="http://feeds.wordpress.com/1.0/godigg/beluru.wordpress.com/1628/"><img alt="" border="0" src="http://feeds.wordpress.com/1.0/digg/beluru.wordpress.com/1628/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1628/"><img alt="" border="0" src="http://feeds.wordpress.com/1.0/reddit/beluru.wordpress.com/1628/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1628&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/10/26/%e0%b2%9f%e0%b3%86%e0%b2%95%e0%b3%8d%e0%b2%b8%e0%b3%8d-%e0%b2%a1%e0%b3%8a%e0%b2%a8%e0%b2%be%e0%b2%b2%e0%b3%8d%e0%b2%a1%e0%b3%8d-%e0%b2%95%e0%b2%a8%e0%b3%82%e0%b2%a5%e0%b3%8d%e2%80%8c%e0%b2%a8/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>

		<media:content url="http://mitramaadhyama.co.in/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>

		<media:content url="http://mitramaadhyama.co.in/wp-content/uploads/2010/10/the-art-of-computer-programming.jpg" medium="image">
			<media:title type="html">the art of computer programming</media:title>
		</media:content>

		<media:content url="http://mitramaadhyama.co.in/wp-content/uploads/2010/10/KNUTH-WARNING.jpg" medium="image">
			<media:title type="html">KNUTH-WARNING</media:title>
		</media:content>

		<media:content url="http://mitramaadhyama.co.in/wp-content/uploads/2010/10/502039190_26e164b32b_o-1024x454.jpg" medium="image">
			<media:title type="html">502039190_26e164b32b_o</media:title>
		</media:content>

		<media:content url="http://mitramaadhyama.co.in/wp-content/uploads/2010/10/donald_knuth.jpg" medium="image">
			<media:title type="html">donald_knuth</media:title>
		</media:content>
	</item>
		<item>
		<title>ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ</title>
		<link>http://beluru.wordpress.com/2010/10/26/%e0%b2%89%e0%b2%a4%e0%b3%8d%e0%b2%a4%e0%b2%b0-%e0%b2%95%e0%b3%8a%e0%b2%b0%e0%b2%bf%e0%b2%af%e0%b2%be-%e0%b2%b8%e0%b2%82%e0%b2%97%e0%b3%8d-%e0%b2%95%e0%b2%82%e0%b2%a1-%e0%b2%89%e0%b2%a4%e0%b3%8d/</link>
		<comments>http://beluru.wordpress.com/2010/10/26/%e0%b2%89%e0%b2%a4%e0%b3%8d%e0%b2%a4%e0%b2%b0-%e0%b2%95%e0%b3%8a%e0%b2%b0%e0%b2%bf%e0%b2%af%e0%b2%be-%e0%b2%b8%e0%b2%82%e0%b2%97%e0%b3%8d-%e0%b2%95%e0%b2%82%e0%b2%a1-%e0%b2%89%e0%b2%a4%e0%b3%8d/#comments</comments>
		<pubDate>Tue, 26 Oct 2010 17:27:37 +0000</pubDate>
		<dc:creator>beluru</dc:creator>
				<category><![CDATA[ಲೇಖನಗಳು]]></category>
		<category><![CDATA[mitramaadhyama]]></category>
		<category><![CDATA[north korea]]></category>

		<guid isPermaLink="false">http://beluru.wordpress.com/?p=1624</guid>
		<description><![CDATA[ಅವಳೀಗ ಐರೋಪ್ಯ ಸಮುದಾಯದ  ಯಾವುದೋ ಪ್ರದೇಶದಲ್ಲಿ ಬದುಕಿದ್ದಾಳೆ. ಈಗಲೂ ಆಕೆ ಕಾಫಿ ಬಟ್ಟಲಿಗೆ ಸಕ್ಕರೆ ಹಾಕುವಾಗ ಕೈ ನಡುಗಿ ಸಕ್ಕರೆಯ ಹರಳುಗಳು ಚೆಲ್ಲಿಹೋಗುತ್ತವೆ. ಸಂಗ್ ಹೀ ರಾಂಗ್ ಹೀಗೆ ಎಲ್ಲಿಯೋ ನಿಗೂಢವಾಗಿ ಬದುಕುವುದಕ್ಕೆ ಉತ್ತರ ಕೊರಿಯಾದ ಈಗಿನ ಅಧ್ಯಕ್ಷ (ಡಿಯರ್ ಲೀಡರ್) ಕಿಮ್ ಜೊಂಗ್ ಇಲ್‌ನೇ ಕಾರಣ. ಈಗ ಆಕೆಗೆ ೭೫ರ ವಯಸ್ಸು ದಾಟಿದೆ. ೨೦೦೩ರಲ್ಲಿ ಆಕೆ ಟೈಮ್ ಪತ್ರಿಕೆಗೆ ಕೊಟ್ಟ ಸಂದರ್ಶನವೇ ಅವಳ ಮೊಟ್ಟಮೊದಲ ಸಂದರ್ಶನ. ಅದರಿಂದಾಗಿಯೇ ಕಿಮ್‌ನ ಚಿತ್ರವಿಚಿತ್ರ ಸ್ವಭಾವಗಳು ಹೊರಜಗತ್ತಿಗೆ ತಿಳಿದವು. ಸಂಗ್‌ನ [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1624&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:justify;">ಅವಳೀಗ ಐರೋಪ್ಯ ಸಮುದಾಯದ  ಯಾವುದೋ ಪ್ರದೇಶದಲ್ಲಿ ಬದುಕಿದ್ದಾಳೆ. ಈಗಲೂ ಆಕೆ ಕಾಫಿ ಬಟ್ಟಲಿಗೆ ಸಕ್ಕರೆ ಹಾಕುವಾಗ ಕೈ ನಡುಗಿ ಸಕ್ಕರೆಯ ಹರಳುಗಳು ಚೆಲ್ಲಿಹೋಗುತ್ತವೆ. ಸಂಗ್ ಹೀ ರಾಂಗ್ ಹೀಗೆ ಎಲ್ಲಿಯೋ ನಿಗೂಢವಾಗಿ ಬದುಕುವುದಕ್ಕೆ ಉತ್ತರ ಕೊರಿಯಾದ ಈಗಿನ ಅಧ್ಯಕ್ಷ (ಡಿಯರ್ ಲೀಡರ್) ಕಿಮ್ ಜೊಂಗ್ ಇಲ್‌ನೇ ಕಾರಣ. ಈಗ ಆಕೆಗೆ ೭೫ರ ವಯಸ್ಸು ದಾಟಿದೆ. ೨೦೦೩ರಲ್ಲಿ ಆಕೆ ಟೈಮ್ ಪತ್ರಿಕೆಗೆ ಕೊಟ್ಟ ಸಂದರ್ಶನವೇ ಅವಳ ಮೊಟ್ಟಮೊದಲ ಸಂದರ್ಶನ. ಅದರಿಂದಾಗಿಯೇ ಕಿಮ್‌ನ ಚಿತ್ರವಿಚಿತ್ರ ಸ್ವಭಾವಗಳು ಹೊರಜಗತ್ತಿಗೆ ತಿಳಿದವು.<img title="More..." src="http://mitramaadhyama.co.in/wp-includes/js/tinymce/plugins/wordpress/img/trans.gif" alt="" /><span id="more-1624"></span></p>
<p style="text-align:justify;">ಸಂಗ್‌ನ ಒಬ್ಬ ಸೋದರಿ ಕಿಮ್ ಜೊಂಗ್ ಇಲ್‌ನ ಮೂವರು ಪತ್ನಿಯರಲ್ಲಿ ಒಬ್ಬಾಕೆ. ಕಿಮ್‌ನ ಮಗನನ್ನು ಸಂಗ್‌ಳೇ ಸಾಕಿ ಸಲಹಿದಳು. ಅವಳ ಮಗ ಮತ್ತು ಮಗಳೂ ಕಿಮ್‌ನ ಆಸರೆಯಲ್ಲಿದ್ದರು. ಕಿಮ್‌ನನ್ನು ಕೇವಲ ಪರಮಾಣು ತಲೆಸಿಡಿಗಳ ಲೆಕ್ಕದಿಂದಲೋ, ಸ್ಟಾಲಿನಿಸ್ಟ್ ಸರ್ವಾಧಿಕಾರಿ ಎಂತಲೋ ಸೀಮಿತಗೊಳಿಸಬೇಡಿ ಎಂದು ಸಂಗ್ ನಿಧಾನವಾಗಿ ಹೇಳುತ್ತಾಳೆ. ಕಾರಣವಿಷ್ಟೆ: ಕಿಮ್‌ನ ಕಿಸೆಯು ಮಾದಕದ್ರವ್ಯ ಮಾರಾಟದ ಹಣದಿಂದ ಜೋತುಬಿದ್ದಿದೆಯಂತೆ. ಜನ ಹಸಿವಿನಿಂದ ತತ್ತರಿಸಿದರೂ ಕಿಮ್‌ನ ಈ ದಂಧೆ ಮಾತ್ರ ನಿಂತಿಲ್ಲ.</p>
<p style="text-align:justify;">ಒಮ್ಮೆ ಟಿವಿ ಚಾನೆಲ್‌ನಲ್ಲಿ ಉತ್ತರ ಕೊರಿಯಾದ ಮಕ್ಕಳು ಕೃತಕ ನಗೆ ಚಿಮ್ಮುತ್ತ ಪೆರೇಡ್ ಮಾಡುವ ದೃಶ್ಯವನ್ನು ನೋಡಿದ ಸಂಗ್, ಕಿಮ್‌ನನ್ನು &#8216;ಇದೆಲ್ಲ ಫೇಕ್ ಅಲ್ಲವೇ? ಈ ಬಗ್ಗೆ ನೀನು ಏನೂ ಮಾಡಲಾರೆಯಾ?&#8217; ಎಂದು ಕೇಳಿದಳಂತೆ. &#8216;ಏನು ಮಾಡ್ಲಿ? ಅಕಸ್ಮಾತ್ ಸ್ವಾತಂತ್ರ್ಯ ಕೊಟ್ಟೆ ಅನ್ನು, ಚಿಂದಿ ತೊಟ್ಟ ಮಕ್ಕಳನ್ನೇ ಈ ಚಾನೆಲ್ ತೋರಿಸುತ್ತೆ!&#8217; ಎಂದು ಕಿಮ್ ಉತ್ತರಿಸಿದನಂತೆ. ಖುಷಿಯಿದ್ದಾಗ ಎಲ್ಲರನ್ನೂ ಖುಷಿಗೊಳಿಸುವ, ಸಿಟ್ಟು ಬಂದರೆ ಇಡೀ ಅರಮನೆಯನ್ನೇ ನಡುಗಿಸುವ ಕಿಮ್‌ನ ಹಲವು ಬಗೆಯ ವರ್ತನೆಗಳನ್ನು ಸಂಗ್ ಈ ಸಂದರ್ಶನದಲ್ಲಿ ದಾಖಲಿಸಿದ್ದಾಳೆ.</p>
<p style="text-align:justify;">೧೯೭೧ರ ಮೇ ೧೦ರಂದು ಮೊದಲ ಸಲ ಕಿಮ್‌ನನ್ನು ನೋಡಿದ ಸಂಗ್,ಅವನನ್ನು ನೋಡುವ ಅವಸರದಲ್ಲಿ ತನ್ನ ಉಡುಗೆಯನ್ನೇ ಹರಿದುಕೊಳ್ಳುವಂಥ ರಭಸದಲ್ಲಿ ಓಡಿದ್ದಳಂತೆ. ಆಗ ೨೯ರ ಹರೆಯದವನಾಗಿದ್ದ ಕಿಮ್ ಅವಳನ್ನು ಕಾರಿನ ಹಿಂಬದಿಯಲ್ಲಿ ಕೂರುವಂತೆ ಹೇಳಿದ. ಅದಾಗಲೇ ಸಂಗ್‌ಳ ಸೋದರಿ ಸಂಗ್ ಹೀ ರಿಮ್‌ಳನ್ನು ತನ್ನ ಪತ್ನಿಯನ್ನಾಗಿ ಆತ ಇಟ್ಟುಕೊಂಡಿದ್ದ. ಸಂಗ್‌ಳನ್ನು ಕರೆದಿದ್ದೇ ಈ ಸಂಬಂಧದಲ್ಲಿ ಹುಟ್ಟಿದ ಕಿಮ್ ಜೊಂಗ್ ನಾಮ್ ಎಂಬ ಹುಡುಗನನ್ನು ನೋಡಿಕೊಳ್ಳುವ ಸಲುವಾಗಿ. ಆಗ ಐದು ವರ್ಷದವನಾಗಿದ್ದ ನಾಮ್‌ನನ್ನು ಶಾಲೆಗೆ ಸೇರಿಸಿದರೆ ಅವನ ತಂದೆ ತಾಯಂದಿರ ರಹಸ್ಯ ಹೊರಬೀಳುತ್ತದೆ. ಮೇಲಾಗಿ ಈ ಸಂಬಂಧದ ಬಗ್ಗೆ ಕಿಮ್‌ನ ತಂದೆ ಕಿಮ್ ಇಲ್ ಸಂಗ್‌ಗೂ ಗೊತ್ತಿಲ್ಲ. ಒಂದು ರೀತಿಯಲ್ಲಿ ಇದು ರಾಜರಹಸ್ಯ. ಸರಿ, ಸಂಗ್‌ಳ ಗಂಡನೂ ಈ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದ. ಮಗ ಹಾಗೂ ಮಗಳನ್ನು ಕರೆದುಕೊಂಡು ಆಕೆ ಕಿಮ್‌ನ ಅರಮನೆ ಸೇರಿದಳು. ಜೊತೆಗೆ ಅವಳ ಪತ್ರಕರ್ತೆ ತಾಯಿಯೂ ಸೇರಿದಳು.</p>
<p style="text-align:justify;">ಅಲ್ಲಿಂದ ಇಪ್ಪತ್ತು ವರ್ಷಗಳ ಕಾಲ ಸಂಗ್ ಮತ್ತು ಅವಳ ಕುಟುಂಬ ಕಿಮ್‌ನ ಆಸರೆಯಲ್ಲೇ ಬದುಕಬೇಕಾಯಿತು. ಅದು ಅರಮನೆಯಂಥ ಭವ್ಯ ಸೆರೆಮನೆಯಾಗಿತ್ತು ಎಂದಾಕೆ ತನ್ನ ನೆನಪಿನ ಕಥನ &#8216;ವಿಸ್ತೀರಿಯಾ ಹೌಸ್&#8217; ಪುಸ್ತಕದಲ್ಲಿ ಬರೆಯುತ್ತಾಳೆ. ಕಿಮ್ ಇಲ್ ಸಂಗ್ ೧೯೯೪ರಲ್ಲಿ ತೀರಿಕೊಂಡ. ಆದರೆ ೨೩ ವರ್ಷಗಳಿಂದ ಈ ಥರ ರಿಮ್ ಜೊತೆ ಕಿಮ್ ಜೊಂಗ್ ಇಲ್ ಸಂಸಾರ ನಡೆಸಿದ್ದ ಎಂಬುದು ಅವನಿಗೆ ಗೊತ್ತಾಗಲಿಲ್ಲ. ರಿಮ್ ಹೇಳಿ ಕೇಳಿ ಉತ್ತರ ಕೊರಿಯಾದ ಪ್ರಮುಖ ಜನಪ್ರಿಯ ಸಿನೆಮಾ ನಟಿ. ಅವಳ ತಂದೆ ದೊಡ್ಡ ಜಮೀನುದಾರನಾಗಿಯೂ ಕಮ್ಯುನಿಸ್ಟ್ ಆಡಳಿತವನ್ನು ಬೆಂಬಲಿಸಿ ಉತ್ತರಕೊರಿಯಾಗೆ ಬಂದವ. ಆದರೆ ಆತ ಶತ್ರುವರ್ಗದವ ಎಂಬ ಹಣೆಪಟ್ಟಿ ಕಟ್ಟಲಾಯಿತು.</p>
<p style="text-align:justify;">ಕಿಮ್ ಜೊತೆಗಿನ ಬದುಕೆಂದರೆ ಐಷಾರಾಮೀ ಐಭೋಗ. ಇಡೀ ಕುಟುಂಬವೇ ರಹಸ್ಯ ತಾಣದಲ್ಲಿತ್ತು. ಕೆಲವೊಮ್ಮೆ ವಿದೇಶ ಪ್ರವಾಸಕ್ಕೂ ಅನುಮತಿ ಸಿಗುತ್ತಿತ್ತು. ತನ್ನ ಪ್ರಜೆಗಳ ಹಸಿವಿನ ಹಾಹಾಕಾರದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಕಿಮ್ ತನ್ನ ಸಿರಿವಂತಿಕೆಯ ಬದುಕಿಗೆ ಏನೂ ಕಡಿಮೆ ಮಾಡಿಕೊಳ್ಳಲಿಲ್ಲ. ಜನರ ಹೊಟ್ಟೆ ತಾಳ ಹಾಕುತ್ತಿದ್ದರೆ ಈತ ಮಾತ್ರ ಪಾರ್ಟಿಗಳನ್ನು ನಡೆಸುತ್ತ ಕುಣಿಯುತ್ತಿದ್ದ. &#8216;ಈಗಲೂ ನನಗೆ ತೀರಾ ನೋವಾಗುತ್ತದೆ. ಅವರೆಲ್ಲ ನನ್ನ ಜನರೇ. ಆದರೆ ನಾನು ಆಗಲೂ ಏನೂ ಮಾಡಲಾಗಲಿಲ್ಲ; ಈಗಲೂ ಏನೂ ಮಾಡಲಾರೆ&#8217; ಎಂದು ಸಂಗ್ ನೆನಪಿಸಿಕೊಳ್ಳುತ್ತಾಳೆ.</p>
<p style="text-align:justify;">ಆದರೆ ಕ್ರಮೇಣ ಕಿಮ್‌ಗೆ ರಿಮ್ ಮೇಲಣ ಪ್ರೀತಿ ಕಡಿಮೆಯಾಗತೊಡಗಿತು. ಬೇರೆ ಹೆಣ್ಣುಗಳ ಸಂಪರ್ಕವೂ ಬೆಳೆಯತೊಡಗಿತು. ತಂದೆ ಹೇಳಿದಂತೆ ಕಿಮ್ ಯೂಂಗ್ ಸೂಕ್ ಎಂಬುವಳನ್ನು ಕಿಮ್ ಮದುವೆಯಾದ. ಅವಳನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂಬುದೂ ಇತಿಹಾಸದ ಸತ್ಯ. ಯಾಕೆಂದರೆ ಆಮೇಲೆ ಕಿಮ್‌ನ ಕಾಮುಕ ಕಣ್ಣು ಜಪಾನೀ ಜನ್ಯ ಕೊರಿಯನ್ ನರ್ತಕಿ ಕೋ ಯೂಂಗ್ ಹೀ ಎಂಬುವಳ ಮೇಲೆ ಬಿತ್ತು.</p>
<p style="text-align:justify;">ಇಷ್ಟಾಗಿಯೂ ತನ್ನ ಮೊದಲ ಮಗ ಜೊಂಗ್ ನಾಮ್‌ನನ್ನು ಕಿಮ್ ತುಂಬಾ ಪ್ರೀತಿಯಿಂದ ನೋಡಿಕೊಂಡ ಎಂದು ಸಂಗ್ ಹೇಳುತ್ತಾಳೆ. ಆದರೆ ಹೊರಗೆ ಹೋಗಲೇ ಬಿಡುತ್ತಿರಲಿಲ್ಲ. ಎಷ್ಟೋ ಸಲ ಇದಕ್ಕಾಗಿ ನಾಮ್ ತುಂಬಾ ರಗಳೆ ಮಾಡುತ್ತಿದ್ದನಂತೆ.</p>
<p style="text-align:justify;">ಕಿಮ್‌ನ ಇನ್ನೊಂದು ಸ್ವಭಾವ &#8211; ಸುಳ್ಳುಗಳನ್ನು ಆತ ಸಹಿಸುವುದಿಲ್ಲವಂತೆ! (ಇಡೀ ದೇಶದ ಬಗ್ಗೆ ಆತ ಸುಳ್ಳು ಪ್ರಚಾರ ಮಾಡಿ ಜಗತ್ತನ್ನು ಈಗಲೂ ನಂಬಿಸುತ್ತಿದ್ದಾನೆ ಎಂಬ ಮಾತು ಬೇರೆ!). ಒಮ್ಮೆ ಸಂಗ್ ಹೆಲ್ಸೆಂಕಿಗೆ ಹೋಗಿ ಶಾಪಿಂಗ್ ಮಾಡಿದಳಂತೆ. ಈ ವಿದೇಶ ಪ್ರವಾಸಕ್ಕೆ ಕಿಮ್‌ನ ಅನುಮತಿಯನ್ನು ಪಡೆದಿರಲಿಲ್ಲವಂತೆ. ಹಾಗೆ ನೋಡಿದರೆ ಇದು ಭಾರೀ ಪ್ರಮಾದ. ಸರಿ, ತಾನೂ ಕಾರ್ಮಿಕ ಶಿಬಿರಕ್ಕೆ ಹೋಗಬೇಕು ಎಂದು ಸಂಗ್ ಮಾನಸಿಕವಾಗಿ ಸಿದ್ಧಳಾಗಿದ್ದಳಂತೆ. ಆದರೆ ಕಿಮ್ ಎಲ್ಲ ಗೊತ್ತಿದ್ದೂ ಅವಳನ್ನು`ಎಲ್ಲಿಗೆ ಹೋಗಿದ್ದೆ?&#8217; ಎಂದು ಕೇಳಿದಾಗ ಸಂಗ್ ನಿಜವನ್ನೇ ಹೇಳಿದಳಂತೆ. ಕಿಮ್ ದಯಾಳು ಮನಸ್ಸಿನಿಂದ (ಆಕೆ ನಿಜ ಹೇಳಿದ್ದರಿಂದ) ಅವಳನ್ನು ಕ್ಷಮಿಸಿದನಂತೆ.</p>
<p style="text-align:justify;">ವರ್ಷಗಟ್ಟಳೆ ಕಿಮ್ ಜೊತೆ ಬದುಕಿಯೂ, ಮಗನನ್ನು ಪಡೆದು ಸಂಸಾರ ನಡೆಸಿಯೂ ಕಿಮ್ ತನ್ನನ್ನು ನೋಡಿಕೊಳ್ಳುತ್ತಿರುವ ರೀತಿಗೆ ರೋಸಿಹೋದ ರಿಮ್ ಕೊನೆಗೆ ಮಾಸ್ಕೋದಲ್ಲಿ ಸತ್ತಳು. ಸಂಗ್‌ನ ಮಗ ೧೯೮೨ರಲ್ಲಿ ದಕ್ಷಿಣ ಕೊರಿಯಾಗೆ ಪರಾರಿಯಾದ. ಮಗಳು ೧೯೯೨ರಲ್ಲಿ ಪರಾರಿಯಾದಳು. ಕೊನೆಗೆ ೧೯೯೬ರಲ್ಲಿ ಸಂಗ್ ಕೂಡಾ ಜಿನೀವಾಗೆ ಬಂದಾಗ ತಪ್ಪಿಸಿಕೊಂಡು ಐರೋಪ್ಯ ಸಮುದಾಯದಲ್ಲಿ ಆಶ್ರಯ ಪಡೆದಳು. ಆಕೆ ಹೀಗೆ ಪರಾರಿಯಾದ ಒಂದೇ ವರ್ಷದಲ್ಲಿ ಅವಳ ಮಗನನ್ನು ಅನಾಮಿಕ ದುಷ್ಕರ್ಮಿಗಳು ಸಿಯೋಲ್‌ನ ಬೀದಿಯಲ್ಲಿ ಹಾಡುಹಗಲೇ ಗುಂಡು ಹೊಡೆದು ಕೊಂದರು.</p>
<p style="text-align:justify;">ರಿಮ್‌ಳ ಮಗ, ನಾಮ್ ಬಗ್ಗೆಯೂ ಸಂಗ್‌ಗೆ ಈಗಲೂ ಪ್ರೀತಿ ಇದೆ. ಈತ ೨೦೦೧ರಲ್ಲಿ ನಕಲಿ ದಾಖಲೆ ಬಳಸಿದ್ದಕ್ಕೆ ಜಪಾನಿನಿಂದ ಉಚ್ಚಾಟನೆಗೊಂಡಿದ್ದನ್ನು ನೋಡಿ ಆಕೆಗೆ ತೀರಾ ಬೇಜಾರಾಯಿತಂತೆ. ಈಗ ನಾಮ್‌ನನ್ನು ಉತ್ತರಾಧಿಕಾರಿ ಎಂದು ಒಪ್ಪಲು ಕಿಮ್ ಮುಂದಾಗಿಲ್ಲ.</p>
<p style="text-align:justify;"><strong>ನಾಮ್ ಎಲ್ಲಿದ್ದಾನೆ?</strong></p>
<p style="text-align:justify;">ಹೀಗೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದ ಜೊಂಗ್ ನಾಮ್ ಈಗ ಚೀನಾದ ಕುಖ್ಯಾತ ಜೂಜುಕೇಂದ್ರ ಮಕಾವ್‌ನಲ್ಲಿ ದಿನ ಕಳೆಯುತ್ತಿದ್ದಾನೆ. ೨೦೦೧ರಲ್ಲಿ ಜಪಾನಿನಿಂದ ಉಚ್ಚಾಟನೆಯಾದಾಗಿನಿಂದಲೂ ಅಪ್ಪನ ಸಿಟ್ಟಿಗೆ ಸಿಕ್ಕಿದ ನಾಮ್‌ಗೆ ಮಕಾವ್ ಬಿಟ್ಟರೆ ಬೇರೆ ಜಾಗ ಸಿಗಲಿಲ್ಲ. ಅಪ್ಪ ಕಳಿಸುವ ವಾರ್ಷಿಕ ಐದು ಲಕ್ಷ ಡಾಲರ್‌ಗಳ ಭತ್ಯೆಯನ್ನು ಆತ ಜೂಜಿಗೆ, ಮದಿರೆಗೆ ಹಾಕಿ ದಿನ ನೂಕುತ್ತಿದ್ದಾನೆ. ಮದುವೆಯಾಗಿ ಇಬ್ಬರು (ಗಂಡು, ಹೆಣ್ಣು) ಮಕ್ಕಳಿದ್ದಾರೆ. ಬೀಜಿಂಗ್‌ನಲ್ಲೂ ಮನೆ ಹೊಂದಿರುವ ನಾಮ್ ಆಗಾಗ ವಿಯೆನ್ನಾ, ಬ್ಯಾಂಗ್‌ಕಾಕ್, ಮಾಸ್ಕೋ &#8211; ಹೀಗೆ ಪ್ರವಾಸ ಮಾಡುತ್ತಾನೆ. ಯಾವುದೇ ಭದ್ರತೆಯಿಲ್ಲದೇ ಪ್ರವಾಸ ಮಾಡುವ ನಾಮ್ ಕೆಲವೊಮ್ಮೆ ಸಿಟಿ ಬಸ್ ಹತ್ತುವುದೂ ಉಂಟಂತೆ.</p>
<p style="text-align:justify;">ಉತ್ತರ ಕೊರಿಯಾದ ಜನರ ಬೆನ್ನು ಮತ್ತು ಹೊಟ್ಟೆ &#8211; ಎರಡೂ ಒಂದಕ್ಕೊಂದು  ಅಂಟಿಕೊಂಡಿರುವಾಗ ಆ ದೇಶದ ಕಮ್ಯುನಿಸ್ಟ್  ರಾಜಮನೆತನದ ಈ ಕಥೆ ತುಂಬಾ ಮಹತ್ವದ್ದು.</p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1624/"><img alt="" border="0" src="http://feeds.wordpress.com/1.0/comments/beluru.wordpress.com/1624/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1624/"><img alt="" border="0" src="http://feeds.wordpress.com/1.0/delicious/beluru.wordpress.com/1624/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1624/"><img alt="" border="0" src="http://feeds.wordpress.com/1.0/facebook/beluru.wordpress.com/1624/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1624/"><img alt="" border="0" src="http://feeds.wordpress.com/1.0/twitter/beluru.wordpress.com/1624/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1624/"><img alt="" border="0" src="http://feeds.wordpress.com/1.0/stumble/beluru.wordpress.com/1624/" /></a> <a rel="nofollow" href="http://feeds.wordpress.com/1.0/godigg/beluru.wordpress.com/1624/"><img alt="" border="0" src="http://feeds.wordpress.com/1.0/digg/beluru.wordpress.com/1624/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1624/"><img alt="" border="0" src="http://feeds.wordpress.com/1.0/reddit/beluru.wordpress.com/1624/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1624&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/10/26/%e0%b2%89%e0%b2%a4%e0%b3%8d%e0%b2%a4%e0%b2%b0-%e0%b2%95%e0%b3%8a%e0%b2%b0%e0%b2%bf%e0%b2%af%e0%b2%be-%e0%b2%b8%e0%b2%82%e0%b2%97%e0%b3%8d-%e0%b2%95%e0%b2%82%e0%b2%a1-%e0%b2%89%e0%b2%a4%e0%b3%8d/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>

		<media:content url="http://mitramaadhyama.co.in/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>
	</item>
		<item>
		<title>ನಾಗೇಶ ಹೆಗಡೆ: ಗೋಹತ್ಯೆ ಗೋಜಲು! ಒಂದಿಷ್ಟು ವಾಸ್ತವ, ಒಂದಿಷ್ಟು ವಿಜ್ಞಾನ, ಒಂದಿಷ್ಟು ವಿವೇಕ</title>
		<link>http://beluru.wordpress.com/2010/10/25/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%97%e0%b3%8b%e0%b2%b9%e0%b2%a4%e0%b3%8d%e0%b2%af%e0%b3%86-%e0%b2%97%e0%b3%8b%e0%b2%9c%e0%b2%b2/</link>
		<comments>http://beluru.wordpress.com/2010/10/25/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%97%e0%b3%8b%e0%b2%b9%e0%b2%a4%e0%b3%8d%e0%b2%af%e0%b3%86-%e0%b2%97%e0%b3%8b%e0%b2%9c%e0%b2%b2/#comments</comments>
		<pubDate>Mon, 25 Oct 2010 17:22:21 +0000</pubDate>
		<dc:creator>beluru</dc:creator>
				<category><![CDATA[ನಾಗೇಶ ಹೆಗಡೆ ಕಾಲಂ]]></category>
		<category><![CDATA[mitramaadhyama]]></category>
		<category><![CDATA[nagesh hegde]]></category>

		<guid isPermaLink="false">http://beluru.wordpress.com/?p=1620</guid>
		<description><![CDATA[ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಸರಕಾರ ನಿರ್ಧರಿಸಿರುವಾಗ ಅದನ್ನು ಏಕೆ ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ? ರೈತರ ಹೆಸರಿನಲ್ಲೇ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು &#8216;ರೈತಪರ&#8217; ಸರಕಾರ ಎಂದು ಹೇಳಿಕೊಳ್ಳುವವರು ರೈತರ ಹಿತಾಸಕ್ತಿಗೆ ಧಕ್ಕೆ ತರುವಂಥ ಕೆಲಸವನ್ನು ಎಂದಾದರೂ ಮಾಡುತ್ತಾರೆಯೆ? ಮೊದಲನೆಯದಾಗಿ ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು&#8217;ಧನ&#8217; ಎನ್ನಿಸಿತ್ತು. ರೈತ [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1620&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:justify;"><strong>ಕರ್ನಾಟಕದಲ್ಲಿ </strong><strong>ಗೋಹತ್ಯೆಯನ್ನು </strong><strong>ನಿಷೇಧಿಸಬೇಕೆಂದು </strong><strong>ಬಿಜೆಪಿ </strong><strong>ಸರಕಾರ </strong><strong>ನಿರ್ಧರಿಸಿರುವಾಗ </strong><strong>ಅದನ್ನು </strong><strong>ಏಕೆ </strong><strong>ವಿಚಾರವಾದಿಗಳು </strong><strong>ವಿರೋಧಿಸುತ್ತಿದ್ದಾರೆ? </strong><strong>ರೈತರ </strong><strong>ಹೆಸರಿನಲ್ಲೇ </strong><strong>ಪ್ರಮಾಣ </strong><strong>ಮಾಡಿ </strong><strong>ಅಧಿಕಾರಕ್ಕೆ </strong><strong>ಬಂದು &#8216;</strong><strong>ರೈತಪರ&#8217; </strong><strong>ಸರಕಾರ </strong><strong>ಎಂದು </strong><strong>ಹೇಳಿಕೊಳ್ಳುವವರು </strong><strong>ರೈತರ </strong><strong>ಹಿತಾಸಕ್ತಿಗೆ </strong><strong>ಧಕ್ಕೆ </strong><strong>ತರುವಂಥ </strong><strong>ಕೆಲಸವನ್ನು </strong><strong>ಎಂದಾದರೂ </strong><strong>ಮಾಡುತ್ತಾರೆಯೆ? </strong></p>
<p style="text-align:justify;">ಮೊದಲನೆಯದಾಗಿ ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು&#8217;ಧನ&#8217; ಎನ್ನಿಸಿತ್ತು. ರೈತ ಸಮುದಾಯಕ್ಕೆ ಜಮೀನು-ಮನೆ ಇವು ಶಾಶ್ವತ ಆಸ್ತಿ ಆಗಿದ್ದಂತೆ, ಗಿಡಮರ ಮತ್ತು ಸಾಕುಪ್ರಾಣಿಗಳು ಚರಾಸ್ಥಿ (ಲಿಕ್ವಿಡ್ ಅಸೆಟ್) ಎನಿಸಿದ್ದವು. ಕಷ್ಟ ಬಂದಾಗ, ಇವನ್ನು ಮಾರಿ ನಂತರ ಕಷ್ಟಗಳೆಲ್ಲ ನೀಗಿದ ಮೇಲೆ ಮತ್ತೆ ಅವನ್ನು ಗಳಿಸಿ, ಬೆಳೆಸಿಕೊಳ್ಳುವ ಒಂದು ಸುಭದ್ರ ವ್ಯವಸ್ಥೆ ಇದಾಗಿತ್ತು. ತಾನು ಬೆಳೆಸಿದ ಮರಗಳ ಬಗ್ಗೆ ಅಥವಾ ಹಸು-ಹೋರಿಗಳ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಅನಿವಾರ್ಯ ಪ್ರಸಂಗಗಳಲ್ಲಿ ಅವುಗಳಿಗೆ ವಿದಾಯ ಹೇಳುವ ಒಂದು ಸುಸ್ಥಿರ ವ್ಯವಸ್ಥೆಯನ್ನು ರೈತ ಸಮುದಾಯ ರೂಢಿಸಿಕೊಂಡಿತ್ತು. ದಯೆ, ಪ್ರೀತಿ, ಮಮಕಾರದ ಬಂಧನಗಳ ನಡುವೆಯೇ ವಾಸ್ತವದ ಅರಿವೂ ಅವರಿಗಿತ್ತು. ಕಾಯಿಲೆ ಬಿದ್ದ ಪತ್ನಿಯನ್ನು ಉಳಿಸಿಕೊಳ್ಳುವುದು ಮುಖ್ಯವೊ ಅಥವಾ ಕೊಟ್ಟಿಗೆಯ ಪ್ರೀತಿಯ ದನ ಮುಖ್ಯವೊ ಎಂಬ ಪ್ರಶ್ನೆ ಎದುರಾದಾಗ ದನವನ್ನು ಮಾರಿ ಪತ್ನಿಗೆ ಚಿಕಿತ್ಸೆ ಕೊಡುವ ಸ್ವಾತಂತ್ರ್ಯ ರೈತನಿಗಿತ್ತು. ಈಗಿನ ಸರಕಾರ ಅವನ ಆ ಮೂಲಭೂತ ಸ್ವಾತಂತ್ರ್ಯವನ್ನೇ ಪರೋಕ್ಷವಾಗಿ ಕಿತ್ತುಕೊಳ್ಳುತ್ತಿದೆ.<span id="more-1620"></span></p>
<p style="text-align:justify;"><strong>ಹಾಗೇನಿಲ್ಲವಲ್ಲ? </strong><strong>ಹಸು </strong><strong>ಅಥವಾ </strong><strong>ಎತ್ತನ್ನು </strong><strong>ಈಗಲೂ </strong><strong>ಮಾರಬಹುದು. </strong><strong>ಆದರೆ </strong><strong>ಕಟುಕರಿಗೆ </strong><strong>ಮಾರಬಾರದು&#8230;.</strong></p>
<p style="text-align:justify;">ಐದನೇ ಸೂಲು ಮುಗಿದ ಹಸುವನ್ನು ಬೇರೆ ಯಾರು ಯಾಕೆ ಕೊಳ್ಳುತ್ತಾರೆ? ರೈತನ ಕೊಟ್ಟಿಗೆಯಲ್ಲೇ ಅದು ಮುದಿಯಾಗಬೇಕು. ಹಾಲು ಕೊಡದಿದ್ದರೂ ಬದುಕಿದ್ದಷ್ಟು ದಿನವೂ ಅದಕ್ಕೆ ಮೇವು ಹಾಕಬೇಕು. ಕಾಯಿಲೆ ಬಿದ್ದರೆ ಪಶುವೈದ್ಯರನ್ನು ಕರೆಸಬೇಕು. ದಿನವೂ ಅದರ ಸೆಗಣಿ ಗಂಜಳ ಬಾಚಬೇಕು. ಮೈ ತೊಳೆಸಬೇಕು. ಬಿಸಿಲಲ್ಲಿ ಓಡಾಡಿಸಬೇಕು. ಪ್ರತಿ ತಿಂಗಳು ಕನಿಷ್ಠ ಸಾವಿರ ರೂಪಾಯಿಗಳನ್ನು ಅದಕ್ಕೆಂದು ವೆಚ್ಚ ಮಾಡಬೇಕು.</p>
<p style="text-align:justify;"><strong>ಸೆಗಣಿ-</strong><strong>ಗಂಜಳ </strong><strong>ಗೊಬ್ಬರವನ್ನು </strong><strong>ಮಾರಿದರೆ </strong><strong>ಹಣ </strong><strong>ಬರುತ್ತದಲ್ಲ?  </strong></p>
<p style="text-align:justify;">ಹಿಂದೆಲ್ಲ ಅದು ಸಾಧ್ಯವಿತ್ತು. ಹಗಲೆಲ್ಲ ಅದು ತನ್ನ ಪಾಡಿಗೆ ಗುಡ್ಡಬೆಟ್ಟ ಮೇಯ್ದು ಬಂದು ರಾತ್ರಿ ತಂಗಿದರೂ ತುಸುಮಟ್ಟಿಗೆ ಲಾಭದಾಯಕವೇ ಆಗಿತ್ತು. ಆದರೆ ಈಗ ಮೇಯಲು ಏನಿದೆ? ಗೋಮಾಳ ಎಲ್ಲಿ ಉಳಿದಿವೆ? ಇತ್ತ ಹೋದರೆ ಅಕೇಶಿಯಾ, ಅತ್ತ ಹೋದರೆ ನೀಲಗಿರಿ. ಹಾಗಾಗಿ ಕಟ್ಟಿಯೇ ಮೇವು ಸಾಕಬೇಕು. ಹಣಕೊಟ್ಟು ಖರೀದಿಸಿದ ಮೇವು ಹಾಕಬೇಕು. ಒಂದು ದಿನ ಆ ಹಸು ಸತ್ತು ಹೋಗುತ್ತದೆ. ಏನು ಮಾಡುವುದು? ಅದನ್ನು ಎಳೆದು ದೂರ ಬಿಸಾಕಲು ಹಳ್ಳಿಯಲ್ಲಿ ನಾಲ್ಕು ಜನ ಸಹಾಯಕರು ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಹೆಣವನ್ನು ರಣಹದ್ದುಗಳು, ನರಿ-ಕಿರುಬಗಳು ಎರಡೇ ದಿನದಲ್ಲಿ ಖಾಲಿ ಮಾಡುತ್ತಿದ್ದವು. ಈಗ ಅವು ಯಾವವೂ ಇಲ್ಲ. ಕೊಳೆತ ಭಾಗಗಳು ನಾರುವುದಲ್ಲದೇ ರೋಗಗಳನ್ನು ಹಬ್ಬಿಸುತ್ತವೆ. ಅಂಥ್ರಾಕ್ಸ್ ವಿಷಾಣುಗಳು ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡುತ್ತವೆ. ಊರ ನಾಯಿಗಳು ರೋಗಗ್ರಸ್ತ  ಕೊಳೆತ ಬಿಡಿಭಾಗಗಳನ್ನು ಎಳೆದಾಡಿ, ಊರಿನೊಳಕ್ಕೂ ತಂದು ರಗಳೆ ಆಗುತ್ತದೆ. ಇವೆಲ್ಲವನ್ನು ಅನುಭವಿಸಿದಿ ಊರಿನ ಜನರು ಸತ್ತ ದನವನ್ನು ಸಮೀಪವೆಲ್ಲೂ ಬಿಸಾಕಲು ಬಿಡುವುದಿಲ್ಲ. ಹತ್ತಿರದಲ್ಲೇ ಎಲ್ಲಾದರೂ ಗುಂಡಿ ತೋಡಿ ಹೂಣಬೇಕೆಂದರೆ ಆರಡಿ ಉದ್ದದ, ನಾಲ್ಕಡಿ ಆಳದ ಗುಂಡಿ ತೋಡಲು ಜನರು ಸಿಗುವುದಿಲ್ಲ. &#8216;ಜೆಸಿಬಿ ತರಿಸಿ&#8217; ಎನ್ನುತ್ತಾರೆ. ಅವರಿವರನ್ನು ಬೇಡಿಕೊಂಡು ಜೆಸಿಬಿ ತರಿಸಿದರೆ ಕನಿಷ್ಠ ಅದು ಬೇಸಿಗೆಯ ಕಾಲವಾಗಿದ್ದರೆ ಎರಡು ಸಾವಿರ ರೂಪಾಯಿ ತೆರಬೇಕು. ಸೆಗಣಿ ಗಂಜಳದಿಂದ ಗಳಿಸಿದ ಹಣವೆಲ್ಲ ಅದರ ಸಂಸ್ಕಾರಕ್ಕೇ ಹೋಗುತ್ತದೆ. ಅಂತೂ ಒಂದು ಮುದಿ ದನ ಮನೆಯಲ್ಲಿದ್ದರೂ ಕಷ್ಟ, ಸತ್ತರೆ ಇನ್ನೂ ಕಷ್ಟ ಎಂಬ ಸ್ಥಿತಿ ಬರುತ್ತದೆ.</p>
<p style="text-align:justify;"><strong>ಸತ್ತ </strong><strong>ದನವನ್ನು </strong><strong>ಮಾರಬಹುದಲ್ಲ? </strong><strong>ಅದಕ್ಕೆ </strong><strong>ಹೊಸ </strong><strong>ಕಾನೂನಿನಲ್ಲಿ </strong><strong>ಅವಕಾಶ </strong><strong>ಇದ್ದೇ </strong><strong>ಇರುತ್ತದೆ.</strong></p>
<p style="text-align:justify;">ಮಾರುವುದು ಸುಲಭವೆ? ದನವೊಂದು ಸತ್ತ ತಕ್ಷಣ ಪಶುವೈದ್ಯರನ್ನು ಕರೆಸಿ, (ಅವರು ತುರ್ತಾಗಿ ಬಂದರೆ) ದನ ಸತ್ತಿದೆ ಎಂದು ಪ್ರಮಾಣಪತ್ರವನ್ನು ಅವರಿಂದ ಬರೆಸಿಕೊಂಡು ಅದರ ದ್ವಿಪ್ರತಿ ಮಾಡಿಸಿ, ಕಳೇವರವನ್ನು ಖರೀದಿಸುವವರಿಗೆ ಒಂದು ಪ್ರತಿಯನ್ನು ಕೊಡಬೇಕು. ಇನ್ನೊಂದು ಪ್ರತಿಯನ್ನು ತಾನು ಕಾದಿರಿಸಬೇಕು. ಹೆಣ ದುರ್ವಾಸನೆ ಸೂಸುವ ಮುನ್ನ ಅವೆಲ್ಲ ಆಗಿಬಿಡಬೇಕು. ಅಷ್ಟೆಲ್ಲ ಮಾಡಿದರೂ ಸತ್ತ ದನವನ್ನು ಖರೀದಿ ಮಾಡಲು ಯಾರೂ ಬರದೇ ಇರಬಹುದು. ಏಕೆಂದರೆ ದನ ತಾನಾಗಿ ಸತ್ತಿದ್ದರೂ, ಪ್ರಮಾಣ ಪತ್ರದ ಪ್ರತಿ ತನ್ನ ಬಳಿ ಇದ್ದರೂ ಪೊಲೀಸರ ತನಿಖೆ, ದಬ್ಬಾಳಿಕೆ ಎಲ್ಲ ಇದ್ದೇ ಇರುತ್ತದೆ. ರಗಳೆ ಯಾರಿಗೆ ಬೇಕು ಎಂದೆಲ್ಲ ಹಿಂದಿನ ಕಹಿ ಅನುಭವಗಳು ನೆನಪಾಗಿ, ಆತ ಖರೀದಿಗೆ ಬರಲು ನಿರಾಕರಿಸಬಹುದು. ಪಶುವೈದ್ಯರು ಸಮಯಕ್ಕೆ ಸರಿಯಾಗಿ ಬರದೇ ಇದ್ದರಂತೂ ಮೂಗು ಮುಚ್ಚಿಕೊಂಡು ಎಲ್ಲವನ್ನೂ ಸಹಿಸಿಕೊಳ್ಳಬೇಕು.</p>
<p style="text-align:justify;">ದನ ಸಾಯುವ ದಿನ ಮನೆಯಲ್ಲಿ ಯುವಕರು ಯಾರೂ ಇಲ್ಲದಿದ್ದರೆ (ಈಗಂತೂ ಬಹಳಷ್ಟು ಹಳ್ಳಿಗಳಲ್ಲಿ ಯುವಕರೆಲ್ಲ ಪಟ್ಟಣ ಸೇರಿದ್ದಾರೆ) ವಯಸ್ಸಾದ ಹಿರಿಯರಿಗೆ ದೊಡ್ಡ ಸಂಕಟವೇ ಎದುರಾಗುತ್ತದೆ. ಮೈಯಲ್ಲಿ ತಾಕತ್ತಿಲ್ಲದಿದ್ದರೂ ಆತ ಜೀವಂತ ಇದ್ದಷ್ಟು ದಿನ ಮುದಿ ಹಸುವನ್ನು ಹೇಗೋ ಸಾಕಿಕೊಂಡಾನು ಆದರೆ ಅದು ಸತ್ತರೆ ಅವನ ಕಷ್ಟಗಳು ಬೆಟ್ಟದಷ್ಟಾಗುತ್ತವೆ.</p>
<p style="text-align:justify;"><strong>ಅಲ್ಲಲ್ಲಿ </strong><strong>ಗೋಶಾಲೆಗಳನ್ನು </strong><strong>ತೆರೆದು, </strong><strong>ಮುದಿ </strong><strong>ದನಗಳನ್ನು </strong><strong>ಸರಕಾರವೇ </strong><strong>ಸಾಕಿಕೊಳ್ಳುತ್ತದಂತಲ್ಲ? </strong></p>
<p style="text-align:justify;">ಸರಕಾರ? ಅದು ನಡೆಸುವ ವೃದ್ಧಾಶ್ರಮಗಳ ಸ್ಥಿತಿಗತಿ ನೋಡಿದ್ದೀರಾ? ಅಲ್ಲಿ ಅನಿವಾರ್ಯ ವಾಸಿಸುವ ಹಿರಿಯರ ನೋವು-ಸಂಕಟಗಳಿಗೆ ಸ್ಪಂದಿಸುವುದು ಹಾಗಿರಲಿ, ಅವರ ಪಾಲಿನ ಗಂಜಿಯನ್ನೂ ಕೊಳ್ಳೆ ಹೊಡೆದು ಮುಕ್ಕುವ ಅದೆಷ್ಟು ಉದಾಹರಣೆಗಳು ನಿಮಗೆ ಬೇಕು? ಇನ್ನು ಮೂಕಪ್ರಾಣಿಗಳನ್ನು ಒಂದೆಡೆ ಸಾಕುವುದೆಂದರೆ ಸುಲಭದ ಮಾತೆ? ಸಹೃದಯೀ ದಾನಿಗಳು ನಡೆಸುವ &#8216;ಗೋಶಾಲೆ&#8217;ಗಳಲ್ಲೇ ಮೇವು ನೀರಿಗೆ ತತ್ವಾರ ಇರುತ್ತದೆ. ಶುಚಿತ್ವದ ಅಭಾವ, ತುರ್ತು ಔಷಧಗಳ ಅಭಾವ, ವೈದ್ಯರ ಕಾಳಜಿಯ ಅಭಾವ ಇರುತ್ತದೆ. ಹಾಗಿರುವಾಗ ಇನ್ನು ಸರಕಾರಿ ಇಲಾಖೆಗಳು ಗೋಶಾಲೆಗಳನ್ನು ನಡೆಸುತ್ತವೆಂದರೆ ಮೇಲ್ವಿಚಾರಣೆ ಸುಲಭವೆ?</p>
<p style="text-align:justify;"><strong>ಮೇಲ್ವಿಚಾರಣೆಗೆ </strong><strong>ಮಠಾಧೀಶರು, </strong><strong>ಧರ್ಮಾಧಿಕಾರಿಗಳು, </strong><strong>ಹಿಂದೂ </strong><strong>ಸ್ವಯಂಸೇವಕರು </strong><strong>ಇರುತ್ತಾರಲ್ಲ? </strong><strong>ಗೊಡ್ಡು </strong><strong>ಗೋವುಗಳನ್ನು </strong><strong>ಜೋಪಾನವಾಗಿ </strong><strong>ರಕ್ಷಿಸುತ್ತೇವೆಂದು </strong><strong>ಮಠಗಳು </strong><strong>ಹೇಳುತ್ತಿವೆಯಲ್ಲ?</strong></p>
<p style="text-align:justify;">ಇಂದಿನ ಬಹುಪಾಲು ಮಠಗಳು ಗೊಡ್ಡು ಸಂಪ್ರದಾಯಗಳನ್ನಷ್ಟೇ ಜೋಪಾನವಾಗಿ ಕಾಪಾಡಿಕೊಂಡಿವೆ. ಅವು ಹಿಂದಿನ ಕಾಲದ ನೀತಿ, ನ್ಯಾಯ, ಧರ್ಮಗಳನ್ನಾಗಲೀ ಪರಂಪರೆಯನ್ನಾಗಲೀ ಪಾವಿತ್ರ್ಯವನ್ನಾಗಲೀ ಉಳಿಸಿಕೊಂಡಿಲ್ಲ. ಹಿಂದಿನ ಮೌಲ್ಯಗಳನ್ನಂತೂ ಉಳಿಸಿಕೊಂಡಿಲ್ಲ, ಇಂದಿನ ವೈಜ್ಞಾನಿಕ ದೃಷ್ಟಿಕೋನವನ್ನೂ ಬೆಳೆಸಿಕೊಂಡಿಲ್ಲ.</p>
<p style="text-align:justify;"><strong>ಗೋರಕ್ಷಣೆ </strong><strong>ಎಂಬುದು </strong><strong>ಹಿಂದಿನ </strong><strong>ಕಾಲದ </strong><strong>ಮೌಲ್ಯವೇ </strong><strong>ಆಗಿತ್ತಲ್ಲವೆ? </strong><strong>ಅಂಥ </strong><strong>ಸಭ್ಯ </strong><strong>ಪ್ರಾಣಿಗಳನ್ನು </strong><strong>ಹಿಂಸಿಸುವುದಾಗಲೀ </strong><strong>ಕೊಲ್ಲುವುದಾಗಲೀ </strong><strong>ಹಿಂದೂ </strong><strong>ಸಂಪ್ರದಾಯಕ್ಕೆ </strong><strong>ವಿರುದ್ಧವಲ್ಲವೆ?</strong></p>
<p style="text-align:justify;">ಇಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಹಿಂದಿನವರು ಗೋವುಗಳನ್ನು ಸಾಕುತ್ತಿದ್ದರು ನಿಜ. ಹಾಲು ಹೈನಕ್ಕಾಗಿಯೂ ಸಾಕುತ್ತಿದ್ದರು. ಮಾಂಸಕ್ಕಾಗಿಯೂ ಸಾಕುತ್ತಿದ್ದರು. ವೇದಕಾಲದಲ್ಲಿ ಔತಣಕೂಟಗಳಲ್ಲಷ್ಟೇ ಅಲ್ಲ, ಯಾಗ-ಯಜ್ಞಗಳಂಥ ಪವಿತ್ರ ಕಾರ್ಯಗಳಲ್ಲೂ ಗೋವಧೆ, ಗೋಮಾಂಸ ನೈವೇದ್ಯ ಮತ್ತು ಭಕ್ಷಣೆಯಲ್ಲಿ ಋತ್ವಿಜರೂ ಪಾಲ್ಗೊಳ್ಳುತ್ತಿದ್ದರು. ಗೋಮಾಂಸವನ್ನು ಬೇಯಿಸುವಾಗಿನ ಪರಿಮಳ ಅದೆಷ್ಟು ದೂರ ಪಸರಿಸುತ್ತಿತ್ತು ಎಂಬುದರ ಬಗ್ಗೆ ವೇದಗಳಲ್ಲೇ ವಿವರ ವರ್ಣನೆಗಳಿವೆ. ಅಷ್ಟೇಕೆ, ಕಾಳಿದಾಸನ ಮೇಘದೂತದಲ್ಲಿ ರಂತಿದೇವನ ಸಾಮ್ರಾಜ್ಯದ ವರ್ಣನೆ ಬರುತ್ತದೆ. ರಾಜ ಆಗಾಗ ಏರ್ಪಡಿಸುತ್ತಿದ್ದ ಮೋಜಿನ ಕೂಟದಲ್ಲಿ ದನಗಳ ಮಾಂಸ ತೆಗೆದ ನಂತರ ಉಳಿಯುವ ಚರ್ಮವನ್ನು ನದಿಗಳಲ್ಲಿ ತೇಲಬಿಡುತ್ತಿದ್ದರಂತೆ. ಹಾಸುಹಾಸು ಚರ್ಮಗಳು ತೇಲಾಡುವ &#8216;ಚರ್ಮಣ್ವತೀ&#8217; ನದಿಯನ್ನು ಎತ್ತರದಿಂದಲೇ ಗುರುತಿಸಬಹುದು ಎಂದು ಅದರಲ್ಲಿ ವಿವರಗಳಿವೆ. ಕಾಲ ಬದಲಾದಂತೆ ಕ್ರಮೇಣ ಕೆಲವು ವರ್ಗದ ಜನರು ಮಾಂಸಭಕ್ಷಣೆಯನ್ನು ತ್ಯಜಿಸಿದರು. ಅವಕ್ಕೆ ಕಾರಣಗಳು ಅನೇಕ ಇರಬಹುದು. ಚಿಕ್ಕ ಸಮುದಾಯಗಳಲ್ಲಿ ಗೋವಧೆ ಮಾಡಿದರೆ ತಿಂದು ಮುಗಿಸುವುದು ಕಷ್ಟ. ಜಾಸ್ತಿ ತಿಂದರೂ ಕಷ್ಟ; ಎರಡು ಮೂರು ದಿನಗಳವರೆಗೆ ಅದನ್ನೇ ತಿನ್ನುತ್ತಿದರೆ ಇನ್ನೂ ಕಷ್ಟ. ಅದರಿಂದುಂಟಾಗುವ  ರೋಗರುಜಿನೆಗಳ ಭಯ ಇರಬಹುದು. ಅಥವಾ ಶ್ರೇಷ್ಠತೆಯ ವ್ಯಸನವೂ ಇರಬಹುದು. ತಾನು ಇತರರಿಗಿಂತ ಶ್ರೇಷ್ಠನೆಂದು ತೋರಿಸಿಕೊಳ್ಳುವವರು ಕೆಲವು ನಿತ್ಯಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಕಟ್ಟಳೆಗಳನ್ನು ಕಟ್ಟಿಕೊಂಡು ಕ್ರಮೇಣ ಅದೇ ಒಂದು ಸಂಪ್ರದಾಯವಾಗಿ ಬೆಳೆದು ಬಂದಿರಬಹುದು. ಅದೇನೇ ಇರಲಿ, ಅವರ ಪಾಡಿಗೆ ಅವರಿರಲಿ. ಚಿಂತಕ ಜಿ. ರಾಮಕೃಷ್ಟ ಹೇಳುವ ಹಾಗೆ, &#8216;ತಾನೇ ಶ್ರೇಷ್ಠ, ತನಗೆ ವರ್ಜ್ಯವಾದುದನ್ನು ಇತರರೂ ವರ್ಜಿಸಬೇಕು&#8217; ಎನ್ನುವುದು ಸರಿಯಲ್ಲ. ಗೋಮಾಂಸವನ್ನು ತ್ಯಜಿಸಿದವರು ತಮ್ಮ ಬಳಿ ಬಂದರೆ ಮೇಲ್ಜಾತಿಯ &#8216;ದೀಕ್ಷೆ ಕೊಡಿಸುತ್ತೇನೆ&#8217; ಎಂದು ಮಠಾಧೀಶರೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ಅವರಿಗೂ ಅದೇ ಮಾತನ್ನು ಅನ್ವಯಿಸಬಹುದಲ್ಲ; &#8216;ಸ್ವಾಮೀಜಿ, ನೀವು ಮಾಂಸ ತಿನ್ನಲು ಆರಂಭಿಸಿದರೆ, ಬನ್ನಿ ನಾವೇ ನಿಮಗೆ ದೀಕ್ಷೆ ಕೊಟ್ಟು ದಲಿತ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇವೆ&#8217; ಎನ್ನಬಹುದಲ್ಲ? ತಮ್ಮ ಕಟ್ಟಳೆಗಳನ್ನೇ ಇತರರ ಮೇಲೂ ಹೇರಬೇಕು, ಅದೂ ಕಾನೂನಿನ ಮೂಲಕ ಹೇರಬೇಕು ಎನ್ನುವುದು ಸರಿಯಲ್ಲ.</p>
<p style="text-align:justify;"><strong>ಅದೇನೇ </strong><strong>ಇರಲಿ, </strong><strong>ಮಠಾಧೀಶರೆನ್ನಿಸಿಕೊಂಡವರು </strong><strong>ಹಿಂದೂ </strong><strong>ಧರ್ಮದ </strong><strong>ಮೂಲತತ್ವಗಳನ್ನು </strong><strong>ಕಾಪಾಡಿಕೊಂಡು </strong><strong>ಬರಬೇಕಲ್ಲವೆ? </strong><strong>ಅವರದ್ದು </strong><strong>ತಪ್ಪೆಂದು </strong><strong>ಹೇಗೆ </strong><strong>ಹೇಳುತ್ತೀರಿ?</strong></p>
<p style="text-align:justify;">ಬೇರೆಯವರ ಊಟವನ್ನು ಕಸಿಯುವುದು ಎಂದಿಗೂ ಯಾವ ಧರ್ಮದ್ದೂ ಮೂಲತತ್ವ ಆಗಿರಲು ಸಾಧ್ಯವಿಲ್ಲ. ಹಿಂದೂ ಧರ್ಮದ್ದಂತೂ ಅಲ್ಲವೇ ಅಲ್ಲ. ಮೇಲಾಗಿ ಹಿಂದೂ ಧರ್ಮದಲ್ಲೂ ವೈವಿಧ್ಯಮಯ ಆಹಾರ ಸೇವನೆ ಇದೆ. ಕೆಲವರು ಮಾತ್ರ ಮಾಂಸ ಭಕ್ಷಣೆ ಮಾಡುವುದಿಲ್ಲ; ಕೆಲವರು ಕುರಿ-ಕೋಳಿ ತಿನ್ನುತ್ತಾರೆ; ಕೆಲವರು ಹಂದಿಮಾಂಸ ಭಕ್ಷಣೆ ಮಾಡುತ್ತಾರೆ. ಇನ್ನು ಕೆಲವರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಅವರೆಲ್ಲರನ್ನೊಳಗೊಂಡ ಧರ್ಮ ಇದು. </p>
<p style="text-align:justify;"><strong>ಆದರೂ </strong><strong>ಬುದ್ಧ-</strong><strong>ಗಾಂಧೀಜಿಯವರಂಥ </strong><strong>ಅಹಿಂಸಾವಾದಿಗಳ </strong><strong>ನಾಡಿನಲ್ಲಿ </strong><strong>ಗೋವಧೆ </strong><strong>ಸರಿಯಲ್ಲ </strong><strong>ತಾನೆ?</strong></p>
<p style="text-align:justify;">ಎಲ್ಲಿದ್ದೀರಿ? ಬುದ್ಧನ ಅನುಯಾಯಿಗಳು ಬಿಡುಬೀಸಾಗಿ ಗೋಮಾಂಸ ಭಕ್ಷಣೆ ಮಾಡುತ್ತಾರೆ! ಥಾಯ್ಲೆಂಡ್, ಜಪಾನ್, ಕೊರಿಯಾಗಳಲ್ಲಷ್ಟೇ ಅಲ್ಲ, ನಮ್ಮ ನಾಡಿನಲ್ಲೇ ಇರುವ ಟಿಬೆಟನ್ ಜನರು ನಿತ್ಯ ಊಟದಲ್ಲಿ ಗೋಮಾಂಸ ಬಳಸುತ್ತಾರೆ. ಅವರು ಗೋವುಗಳನ್ನು ಪ್ರೀತಿಯಿಂದಲೇ ಸಾಕುತ್ತಾರೆ ಕೂಡ. ಮಹಾತ್ಮಾ ಗಾಂಧಿಯವರು ಮಾಂಸಾಹಾರ ಸೇವನೆ ಮಾಡುತ್ತಿರಲಿಲ್ಲ. ಆದರೆ ಎಂದೂ ಅವರು ಇತರ ಧರ್ಮೀಯರ ಮೇಲೆ ತಮ್ಮ ಕಟ್ಟುಪಾಡುಗಳನ್ನು ಹೇರುತ್ತಿರಲಿಲ್ಲ.</p>
<p style="text-align:justify;">ಇನ್ನು ಹಿಂಸೆಯ ಪ್ರಶ್ನೆ ಬಂದಾಗ, ನಾವು ತುಸು ಕಣ್ತೆರೆದು ವಾಸ್ತವದ, ಅಂದರೆ ನೈಸರ್ಗಿಕ ಜಗತ್ತನ್ನು ನೋಡಬೇಕಾಗುತ್ತದೆ. ಒಂದು ಜೀವಿ ಇನ್ನೊಂದಕ್ಕೆ ಆಹಾರವಾಗಿರುವುದೇ ನಿಸರ್ಗದ ಮೂಲಧರ್ಮ. ಅಲ್ಲಿ ಹಿಂಸೆ ಅಥವಾ ಅಹಿಂಸೆ ಎಂಬ ಪದಗಳೇ ಇಲ್ಲ. ಹಲ್ಲು, ಉಗುರು, ವಿಷ, ಉರುಳು ಎಲ್ಲವೂ ಅಲ್ಲಿವೆ. ಊಜಿನೊಣವೊಂದು ರೇಷ್ಮೆಹುಳದ ಬೆನ್ನಮೇಲೆ ರಂಧ್ರ ಮಾಡಿ ಮೊಟ್ಟೆ ಇಟ್ಟು ಹೋಗುತ್ತದೆ. ಊಜಿಮೊಟ್ಟೆಯಿಂದ ಹೊರಬಿದ್ದ ಲಾರ್ವಾ ಹುಳ ಮೆಲ್ಲಗೆ ರೇಷ್ಮೆಹುಳುವಿನ ಬೆನ್ನನ್ನು, ನಂತರ ಹೊಟ್ಟೆಯನ್ನು, ಭುಜವನ್ನು ಹಂತಹಂತವಾಗಿ ಮೂರು ದಿನಗಳವರೆಗೆ ತಿನ್ನುತ್ತ, ಅದುವರೆಗೂ ತನ್ನ ಬಲಿಯನ್ನು ಜೀವಂತ ಇಟ್ಟು ಕೊನೆಗೆ ತಿನ್ನಲು ಇನ್ನೇನೂ ಉಳಿದಿಲ್ಲ ಎನ್ನವಾಗ ರೇಷ್ಮೆಹುಳದ ಹೃದಯ, ಶ್ವಾಸಕೋಶ ಮತ್ತು ಮಿದುಳನ್ನು ತಿಂದು ಮುಗಿಸುತ್ತದೆ. ಅಲ್ಲಿ ಕರುಣೆ, ದಯೆ ಎಂಬ ಪದಗಳೂ ಇಲ್ಲ. ಇದ್ದಿದ್ದರೆ ಮೊದಲ ದಿನವೇ ಮಿದುಳನ್ನು ತಿಂದು, ರೇಷ್ಮೆ ಹುಳಕ್ಕೆ ನೋವೇ ಗೊತ್ತಾಗದಂತೆ ಅದನ್ನು ಪ್ರಜ್ಞಾಶೂನ್ಯ ಮಾಡಿ ನಂತರ ನಂತರವೇ ಊಜಿಲಾರ್ವಾ ತನ್ನ ಊಟವನ್ನು ಮುಂದುವರೆಸಬಹುದಿತ್ತು. &#8216;ಬೆಕ್ಕು ಇಲಿಯನ್ನು ಅತ್ತ ಇತ್ತ ತಿರುಗಿಸಿ ಗೋಳಾಡಿಸಿದಂತೆ ಅನ್ನಿಸಿದರೂ ಇಲಿಗೆ ನೋವಿನ ಅನುಭವ ಆಗುವುದಿಲ್ಲ&#8217; ಎಂದು ಹೆಸರಾಂತ ವೈದ್ಯ-ಚಿಂತಕ ಡಾ. ಲೀವಿಸ್ ಥಾಮಸ್ ಹೇಳುತ್ತಾರೆ. ಅದಕ್ಕೆ ಕಾರಣವನ್ನು ಕೊಡುತ್ತಾರೆ: ನೋವಿನ ಅನುಭವ ಮಿದುಳಿಗೆ ಏಕೆ ರವಾನೆ ಆಗುತ್ತದೆಂದರೆ ಶರೀರವನ್ನು ಬಚಾವು ಮಾಡಲಿಕ್ಕೆ ಮಾತ್ರ. ಶರೀರಕ್ಕೆ ಪೆಟ್ಟು ಬಿದ್ದರೆ ಓಡಬೇಕು, ಇಲ್ಲವೆ ಎದುರಾಳಿಯ ಜತೆ ಹೋರಾಡಿ ಆತನನ್ನು ಓಡಿಸಬೇಕು. ಅಂತೂ ಬಚಾವಾಗಬೇಕು. ಓಟ ಇಲ್ಲವೆ ಹೋರಾಟ ಎರಡೂ ಸಾಧ್ಯವಿಲ್ಲ ಎಂಬಂಥ &#8216;ಶರಣಾಗತ&#8217; ಸ್ಥಿತಿಗೆ ತಲುಪಿದಾಗ ಇಲಿಯ ಮಿದುಳಿಗೆ ನೋವನ್ನು ರವಾನಿಸುವ ರಸಸಂಜ್ಞೆ ಸ್ವಿಚಾಫ್ ಆಗುತ್ತದೆ. ಏಕೆಂದರೆ ಚಿತ್ರಹಿಂಸೆ ಅನುಭವಿಸುವುದರಿಂದ ಜೀವಿಗೆ ಯಾವ ಲಾಭವೂ ಇಲ್ಲ, ಪುರುಷಾರ್ಥವೂ ಇಲ್ಲ. ಹಾಗಾಗಿ ಅಲ್ಲಿ ನೋವಿನ ಪ್ರಶ್ನೆ ಬರುವುದೇ ಇಲ್ಲ.</p>
<p style="text-align:justify;"><strong>ಆದರೆ </strong><strong>ಹಸುವನ್ನು </strong><strong>ಹಿಂಸಿಸಿದಾಗ </strong><strong>ನಮ್ಮ </strong><strong>ಮನಸ್ಸಿಗೇ </strong><strong>ನೋವಾಗುತ್ತದಲ್ಲ?</strong></p>
<p style="text-align:justify;">ಒಪ್ಪೋಣ. ಹಿಂಸೆ ಕೊಡಬಾರದು. ಸಾಕುಪ್ರಾಣಿಗಳಿಗೆ ಛಡಿ ಏಟು ಕೊಡುವುದು, ಬರೆ ಹಾಕುವುದು, ನೊಗ ಹೊತ್ತು ಹುಣ್ಣಾದ ಹೆಗಲಿಗೇ ಮತ್ತೆ ನೊಗ ಹೇರುವುದು&#8230; ಹೀಗೆ ನಿಸರ್ಗದಲ್ಲಿ ಇಲ್ಲದಂಥ ಚಿತ್ರಹಿಂಸೆಗಳನ್ನು ನಾವು ಕೊಡುತ್ತೇವೆ. ಮನುಷ್ಯಪ್ರಾಣಿಯನ್ನು ಯಾರಾದರೂ ಕಟ್ಟಿ ಹಾಕಿ ಈ ರೀತಿ ಹಿಂಸೆ ಕೊಟ್ಟರೆ ಆತ, &#8216;ನನ್ನನ್ನು ಕೊಂದುಬಿಡ್ರಪ್ಪಾ&#8217; ಎಂದು ಬೇಡಿಕೊಳ್ಳಬಹುದು. ರಾಸುಗಳಿಗೆ ನಾವು ಅಂಥ ಮುಕ್ತಿಯನ್ನೂ ಕೊಡುವುದಿಲ್ಲ. ಇನ್ನು ಕರುವಿಗೆ ಹಾಲೂಡಿಸುತ್ತಿರುವಾಗ ತಾಯಿಯಿಂದ ಕರುವನ್ನು ಹಿಂದಕ್ಕೆಳೆದು ಗೂಟಕ್ಕೆ ಕಟ್ಟಿ, ನಮ್ಮ ಸ್ವಾರ್ಥಕ್ಕಾಗಿ ನಾವು ಹಾಲು ಹಿಂಡಲುತೊಡಗಿದರೆ ಅದೂ ಮಾನಸಿಕ ಹಿಂಸೆಯ ಕೃತ್ಯವೇ ಆಗುತ್ತದೆ. ಹೋರಿಕರು ಹುಟ್ಟಿದರೆ ಅದನ್ನೂ ಎಳೆಗರುವಾಗಿದ್ದಾಗಲೇ ತಾಯಿಯಿಂದ ಶಾಶ್ವತವಾಗಿ ಬೇರ್ಪಡಿಸಿ ದೂರ ಸಾಗಿಸುವುದೂ ಕ್ರೌರ್ಯವೇ ಆಗುತ್ತದೆ. ಅಷ್ಟೇಕೆ, ಕೆಲವು ಗೋಪ್ರೇಮಿಗಳು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಪ್ರೀತಿಯಿಂದಲೇ ಅವಕ್ಕೆ ತುಪ್ಪದಲ್ಲಿ ತಯಾರಿಸಿ ಲಡ್ಡೂ, ಒಬ್ಬಟ್ಟು ತಿನ್ನಿಸಿ ಅವು ಗ್ಯಾಸ್‌ಟ್ರಬಲ್, ಹೊಟ್ಟೆನೋವಿನಿಂದ ಸಂಕಟ ಪಟ್ಟು ಒದ್ದಾಡುವ, ಸಾಯುವ ಉದಾಹರಣೆಗಳೂ ಇವೆ. ಆದರೆ ನಾವು ಅವನ್ನೆಲ್ಲ ಒಪ್ಪಿಕೊಂಡಿದ್ದೇವೆ. ಹೀಗೆ, &#8216;ಬದುಕಿರುವಾಗ ಹಿಂಸೆ ಕೊಟ್ಟು ಕೊಟ್ಟು ಜೀವಂತ ಇಟ್ಟಿರುವುದು ಸರಿ, ಆದರೆ ಸಾವಿನ ಮುಂಚಿನ ಕ್ಷಣಗಳಲ್ಲಿ ಹಿಂಸೆ ಮಾತ್ರ ಬೇಡ&#8217; ಎನ್ನುವುದು ಅದೆಷ್ಟು ಸರಿ? ಅಥವಾ, &#8216;ಆಡು-ಕುರಿ-ಹಂದಿ- ಕೋಳಿಗಳನ್ನು ಕೊಂದರೆ ಸರಿ, ದನಗಳನ್ನು ಮಾತ್ರ ಕೊಲ್ಲವುದು ಸಲ್ಲ&#8217; ಎಂದು ವಾದಿಸುವುದೂ ಅದೆಷ್ಟು ತಾರ್ಕಿಕ? ಗೋವಿನ ಶರೀರದಲ್ಲಿ ೩೩ ಕೋಟಿ ದೇವತೆಗಳಿರುವುದೇ ನಿಜವಾದರೆ ಮೇಕೆಯ ಶರೀರದಲ್ಲಿ ೨೨ ಕೋಟಿಯಾದರೂ ಇರಬಹುದಲ್ಲ? ದೊಡ್ಡ ಜೀವಿಗಳಿಗೆ ಮಾತ್ರ ನೋವಿನ ಸಂವೇದನೆ ಇರುತ್ತದೆ ಎಂದು ಹೇಳಲು ಯಾವ ಆಧಾರ ಇದೆ? ಇಷ್ಟಕ್ಕೂ ಆಧುನಿಕ ಕಸಾಯಿಖಾನೆಗಳಲ್ಲಿ ದನದ ಕೆನ್ನೆಗಳಿಗೆ ವಿದ್ಯುತ್ ದಂಡವನ್ನು ಒತ್ತಿ ಆಘಾತ ಕೊಟ್ಟು ಪ್ರಜ್ಞೆ ತಪ್ಪಿಸಿ ಕೊಲ್ಲುವ ವ್ಯವಸ್ಥೆ ಇದೆ. ಧಾರ್ಮಿಕ ನಂಬುಗೆಗಳಿಗೆ ಅಡ್ಡಗಾಲು ಹಾಕದಂತೆ ನೋಡಿಕೊಂಡು, ಸಾಧ್ಯವಿದ್ದಲ್ಲೆಲ್ಲ ಹಿಂಸೆಯನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಬಲ್ಲ ವ್ಯವಸ್ಥೆ ಎಲ್ಲೆಡೆ ಜಾರಿಗೆ ಬರಲೆಂದು ಒತ್ತಾಯಿಸೋಣ. ಸುಧಾರಿತ ದೇಶಗಳಲ್ಲಿ ದೃಶ್ಯಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದು ನಮ್ಮಲ್ಲೂ ಜಾರಿಗೆ ಬರಬೇಕೆಂದು ಒತ್ತಾಯಿಸೋಣ. ಬೀದಿಯ ಕೊಳಕು ಸಂದುಗೊಂದುಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಾಣಿವಧೆ ಮಾಡಕೂಡದು. ಕತ್ತರಿಸಿದ ರುಂಡ- ಮುಂಡ ಕಾಲು ಗೊರಸುಗಳನ್ನು (ಅದು ಕುರಿ-ಮೇಕೆಗಳದ್ದಾದರೂ) ಬೀದಿಬದಿಯಲ್ಲಿ ಇಲ್ಲವೆ ಅಂಗಡಿ ಮುಂಗಟ್ಟುಗಳಲ್ಲಿ ಪ್ರದರ್ಶಿಸಬಾರದು ಎಂದು ಒತ್ತಾಯಿಸೋಣ. ಕಂತೆಕಂತೆ ತರಕಾರಿಯ ಹಾಗೆ ಕೋಳಿಗಳನ್ನು ತಲೆಕೆಳಗಾಗಿ ತೂಗಾಡಿಸುತ್ತ ದ್ವಿಚಕ್ರ ವಾಹನಗಳಲ್ಲಿ ಬಹಿರಂಗವಾಗಿ ಸಾಗಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸೋಣ. ಅಂಥ ಅನಾಗರಿಕ ಕೃತ್ಯಗಳು ನಡೆಯಕೂಡದು.</p>
<p style="text-align:justify;"><strong>ತಥಾಕಥಿತ </strong><strong>ಸುಧಾರಿತ </strong><strong>ದೇಶಗಳಲ್ಲಿ </strong><strong>ಬಹುಪಾಲು </strong><strong>ಧಾನ್ಯವೆಲ್ಲ </strong><strong>ಪಶು </strong><strong>ಆಹಾರಕ್ಕೆಂದೇ </strong><strong>ಬಳಕೆಯಾಗುತ್ತದೆ. </strong><strong>ಜನರು </strong><strong>ಕಾಳುಕಡಿ </strong><strong>ತಿನ್ನುವ </strong><strong>ಬದಲು </strong><strong>ಮಾಂಸವನ್ನೇ </strong><strong>ತಿನ್ನುತ್ತಾರೆ. </strong><strong>ಒಂದು </strong><strong>ಕಿಲೊ </strong><strong>ಮಾಂಸ </strong><strong>ಬೆಳೆಸಲು </strong><strong>೧೫೦ </strong><strong>ಕಿಲೊ </strong><strong>ಧಾನ್ಯವನ್ನು </strong><strong>ವ್ಯಯಿಸಬೇಕಾಗುತ್ತದೆ. </strong><strong>ನಮ್ಮಲ್ಲೂ </strong><strong>ಅದೇ </strong><strong>ಸಂಸ್ಕೃತಿ </strong><strong>ರೂಢಿಗೆ </strong><strong>ಬಂದರೆ </strong><strong>ಧಾನ್ಯದ </strong><strong>ಅಭಾವ </strong><strong>ತಲೆದೋರೀತಲ್ಲವೆ? </strong><strong>ಭಾರತದ </strong><strong>ಕೃಷಿಭೂಮಿಗೆ </strong><strong>ಅಷ್ಟೊಂದು </strong><strong>ಧಾರಣ </strong><strong>ಸಾಮರ್ಥ್ಯ </strong><strong>ಇದೆಯೆ?</strong></p>
<p style="text-align:justify;">ನಮ್ಮ ಚರ್ಚೆ ಈಗ ಆರ್ಥಿಕ ರಂಗದತ್ತ ತಿರುಗುತ್ತಿದೆ. ಔದ್ಯಮಿಕ ಮಾದರಿಯ ಪಶುಸಂಗೋಪನೆ ಎಂಬುದು ಇಡೀ ಭೂಮಿಗೆ ಅತಿ ದೊಡ್ಡ ಹೊರೆಯಾಗುತ್ತಿದೆ, ನಿಜ. ಜಗತ್ತಿನ ಒಟ್ಟು ಕೃಷಿಭೂಮಿಯ ಶೇಕಡಾ ೭೦ ಭಾಗ ಬರೀ ಪಶುಗಳ ಆಹಾರ ಬೆಳೆಯುವ ಉದ್ದೇಶಕ್ಕೇ ಮೀಸಲಾಗಿದೆ. ಪ್ರತಿವರ್ಷ ಸರಾಸರಿ ೫೦ ಲಕ್ಷ ಅರಣ್ಯಪ್ರದೇಶ ಹೊಸದಾಗಿ ಪಶುಸಂಗೋಪನೆಗೆಂದು ಬಲಿಯಾಗುತ್ತಿದೆ. ಅಂದಾಜು ೮೪ ಕೋಟಿ ಟನ್ ಆಹಾರಧಾನ್ಯ ಅವುಗಳಿಗೆಂದೇ ಧ್ವಂಸವಾಗುತ್ತಿದೆ. ಸೋಯಾ ಅವರೆಯದ್ದಂತೂ ಇನ್ನೂ ದೊಡ್ಡ ಕತೆ. ಅದರ ಜಾಗತಿಕ ಉತ್ಪಾದನೆ ೨೪ ಕೋಟಿ ಟನ್ ಇದ್ದು ಅದರ ಶೇಕಡಾ ೯೫ ಭಾಗ ಪಶುಆಹಾರಕ್ಕೆಂದೇ ಹೋಗುತ್ತಿದೆ. ಇನ್ನು ನೀರು? ಪ್ರಪಂಚದ ಪ್ರತಿವ್ಯಕ್ತಿ ದಿನಕ್ಕೆ ಎಂಟು ಬಾರಿ ಸ್ನಾನ ಮಾಡಿದರೆ ಬೇಕಾಗುವಷ್ಟು ನೀರು (ಪ್ರತಿ ಸೆಕೆಂಡ್‌ಗೆ ೨೮ ಲಕ್ಷ ಲೀಟರ್) ಪಶುಸಂಗೋಪನೆಗೆ ವ್ಯಯವಾಗುತ್ತಿದೆ ಎಂದು ಅಂಕಿಸಂಖ್ಯೆಗಳು ಹೇಳುತ್ತಿವೆ. ಒಂದು ಲೀಟರ್ ಹಾಲಿನ ಉತ್ಪಾದನೆಗೆ ಸರಾಸರಿ ೯೦೦ ಲೀಟರ್ ನೀರು ವ್ಯಯವಾಗುತ್ತಿದೆ.</p>
<p style="text-align:justify;">ನಮ್ಮ ದೇಶದ ಪಶುಸಂಗೋಪನೆಯ ಚಿತ್ರ ತುಸು ಭಿನ್ನವಾಗಿದೆ. ಇಲ್ಲಿ ಮಾಂಸಕ್ಕೆಂದು ದನಗಳನ್ನು ಬೆಳೆಸುವುದಿಲ್ಲ. ಆದರೆ ಹೈನು ಉದ್ಯಮವೇ ದೇಶಕ್ಕೆ ಬಹುದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಕರ್ನಾಟಕವಂತೂ ಇಡೀ ದೇಶದಲ್ಲೇ ಹೈನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸರಕಾರ ಹೈನುಕ್ರಾಂತಿಗೆ ಅಷ್ಟೆಲ್ಲ ಒತ್ತುಕೊಟ್ಟಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಡೇರಿ ಉದ್ಯಮ ವಿಕಾಸವಾಗಿದೆ. ಐದು ವರ್ಷಗಳ ಹಿಂದೆ ಬ್ರಿಟನ್ನಿನ ಹೆಸರಾಂತ &#8216;ನ್ಯೂ ಸೈಂಟಿಸ್ಟ್&#8217; ಪತ್ರಿಕೆಯ ವರದಿಗಾರ ಫ್ರೆಡ್ ಪಿಯರ್ಸ್ ಎಂಬಾತ ಗುಜರಾತಿಗೆ ಭೇಟಿಕೊಟ್ಟಿದ್ದ. ಅಮುಲ್ ಡೇರಿ ಇರುವ ಆನಂದ್ ಪಟ್ಟಣದ ಸುತ್ತಮುತ್ತ ಅಡ್ಡಾಡಿ &#8216;ಇಲ್ಲಿ ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ಎರಡು ಸಾವಿರ ಲೀಟರ್ ನೀರನ್ನು ಬಳಸುತ್ತಾರೆ&#8217; ಎಂದು ಖಚಿತ ಲೆಕ್ಕಾಚಾರಗಳ ಮೂಲಕ ವರದಿ ಮಾಡಿದ್ದ. ನೀರು ಅವಿನಾಶಿ ನಿಜ. ಆದರೆ ಪ್ರತಿ ಬಾರಿ ಕೊಳವೆ ಬಾವಿಯಿಂದ ನೀರನ್ನು ಎತ್ತಿ ಬಳಸಿದಾಗಲೂ ಒಂದಿಷ್ಟು ನೀರು ಆವಿಯಾಗಿ ಆಕಾಶಕ್ಕೆ ಹೋಗುತ್ತದೆ. ನಾವು ಅಗಾಧ ಪ್ರಮಾಣದಲ್ಲಿ ಹಾಲಿಗಾಗಿ ನೀರನ್ನು ಎತ್ತಿ ಬಳಸುತ್ತ ಋತುಮಾನದ ಅಸಮತೋಲಕ್ಕೆ ಕಾರಣರಾಗುತ್ತಿದ್ದೇವೆ. </p>
<p style="text-align:justify;">ಹೈನುಗಾರಿಕೆಗೆ ಅತಿ ಆದ್ಯತೆ ಕೊಟ್ಟಿದ್ದರಿಂದ ಇನ್ನೂ ಅನೇಕ ಬಗೆಯ ಅಸಮತೋಲನ ಕಾಣಿಸಿಕೊಳ್ಳುತ್ತಿದೆ. ಹಿಂದೆಲ್ಲ ಪಶುಸಂಗೋಪನೆ ಎಂಬುದು ಒಟ್ಟಾರೆ ಗ್ರಾಮೀಣ ಬದುಕಿನ ಭಾಗವಾಗಿತ್ತು. ಸ್ಥಳೀಯ ತಳಿಗಳಿದ್ದವು. ಗೋಮಾಳವಿತ್ತು. ಕೆರೆಗಳಿದ್ದವು. ಹೊಲದಲ್ಲಿ, ಬೆಟ್ಟದಲ್ಲಿ ಮೇವಿರುತಿತ್ತು. ಹೋರಿಗಳಿಗೆ ಹೊಲದಲ್ಲಿ ಕೆಲಸವಿರುತ್ತಿತ್ತು. ಈಗ ಎಲ್ಲವೂ ಏರುಪೇರಾಗಿವೆ. ಸ್ಥಳೀಯ ಗೋ-ತಳಿಗಳು ಕಣ್ಮರೆಯಾಗುತ್ತಿವೆ. ಹೊಲಗಳಿಗೆ ಟ್ರ್ಯಾಕ್ಟರ್, ಟಿಲ್ಲರ್‌ಗಳು ಬಂದಿವೆ. ಜರ್ಸಿ ಅಥವಾ ಎಚ್‌ಎಫ್ ಹಸುಗಳಿಗೆ ಹೋರಿಕರು ಹುಟ್ಟಿದರೆ ಅದನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಚಕ್ಕಡಿಗೆ ಕಟ್ಟುವಂತಿಲ್ಲ, ನೇಗಿಲಿಗೆ ಹಚ್ಚುವಂತಿಲ್ಲ. ಇನ್ನು ಇತ್ತ ಗೋಮಾಳವೂ ಇಲ್ಲ. ಬೆಟ್ಟಗಳಲ್ಲಿ ಅಕೇಶಿಯಾ, ಲಂಟಾನಾ ತುಂಬಿದೆ. ಇಂಥ ಸ್ಥಿತಿಯಲ್ಲಿ ಹೈನುಗಾರಿಕೆಗೆ ನಾವು ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಅವುಗಳಿಗೆ ನೀಡುವ ಮೇವು ಎಂಥದ್ದು? ಹೊಲದ ಭತ್ತ-ರಾಗಿಯ ಹುಲ್ಲಿನಲ್ಲಿ ಯೂರಿಯಾ, ಡಿಎಪಿ ಮತ್ತು ಪೀಡೆನಾಶಕ ವಿಷ ಸಂಚಯವಾಗಿರುತ್ತದೆ. ಸರಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕಾಳುಕಡಿಗೆ ಕಸಾಯಿಖಾನೆಯ ತ್ಯಾಜ್ಯಗಳನ್ನು ಸೇರಿಸಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಪಶು ಆಹಾರವನ್ನು ಹಸುಗಳಿಗೆ ತಿನ್ನಿಸಿ, ಆಗಾಗ ಹಾರ್ಮೋನ್ ಚುಚ್ಚುಮದ್ದು ಕೊಟ್ಟು, ಕೃತಕ ಗರ್ಭಧಾರಣೆ ಮಾಡಿಸಿ ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಹಾಲನ್ನು ತಾಜಾ ಇಡಲೆಂದು ಹೈಡ್ರೊಜನ್ ಪೆರಾಕ್ಸೈಡ್ ಸೇರಿಸಿ, ಯೂರಿಯಾ ಬೆರೆಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ&#8230;.  ಅಂಥ ಅನೈಸರ್ಗಿಕ ಹಾಲು ಹೈನು ಸೇವಿಸಿ ನಗರವಾಸಿಗಳ ಯಾರ ಆರೋಗ್ಯ ಎಷ್ಟು ಸುಧಾರಿಸಿತೊ ಗೊತ್ತಿಲ್ಲ. ಆದರೆ ಗ್ರಾಮೀಣ ಜನರಿಗೂ ಈಗ ದಪ್ಪ ಹೊಟ್ಟೆ, ಬಿಪಿ, ಡಯಾಬಿಟೀಸ್, ಹೃದ್ರೋಗ, ಲಕ್ವ, ಕಿಡ್ನಿ ವೈಫಲ್ಯ, ಎಲ್ಲ ಕಾಯಿಲೆಗಳೂ ಅಮರಿಕೊಳ್ಳುತ್ತಿವೆ.</p>
<p style="text-align:justify;">ಲಯತಪ್ಪಿದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ವಿದೇಶೀ ದನಗಳಿಗೆ, ಅದರಲ್ಲೂ ಹಸುಗಳಿಗೆ ಮಾತ್ರ ಅತಿಯಾದ ಆದ್ಯತೆ ನೀಡಿದ್ದರಿಂದ ಹಳ್ಳಿಯ ಸಮಗ್ರ ಬದುಕಿನ ಸಮತೋಲವೇ ಏರುಪೇರಾಗಿದೆ. ಇಂಥ ಅಸಮತೋಲ ಸ್ಥಿತಿಯಲ್ಲಿ ನಿರುಪಯುಕ್ತ ದನಗಳ ಸಂಖ್ಯೆಯನ್ನು ಕಡಿಮೆ ಮಾಡುವುದೇ ಸೂಕ್ತವೆಂದು ದೇಶದ ಹೆಸರಾಂತ ಅರ್ಥತಜ್ಞ ವಿ.ಎಮ್. ದಾಂಡೇಕರ್ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇದ್ದುದರಲ್ಲಿ ಒಂದು ನೆಮ್ಮದಿಯ ಸಂಗತಿ ಏನಿತ್ತೆಂದರೆ ಯಾರಿಗೂ ಬೇಡವಾದ ಹೋರಿಗಳ ಮತ್ತು ಕರಾವು ಮುಗಿದಿರುವ ಹಸುಗಳ ವಿಲೆವಾರಿ ತಂತಾನೆ ನಡೆದು ಹೋಗುತ್ತಿತ್ತು. ಅವು ಮಾಂಸಾಹಾರಿಗಳ ಹೊಟ್ಟೆಗೆ ಹೋಗುತ್ತಿದ್ದವು. &#8216;ನಮ್ಮ ದೇಶದಲ್ಲಿ ಮಾರಾಟಕ್ಕೆ ಲಭಿಸುವ ಮಾಂಸದಲ್ಲಿ ಶೇಕಡಾ ೬೦ಕ್ಕೂ ಹೆಚ್ಚು ಪಾಲು ರಾಸುಗಳಿಂದಲೇ (ಅಂದರೆ ಎತ್ತು, ಆಕಳು, ಎಮ್ಮೆ, ಕೋಣ) ಬರುತ್ತಿದೆ&#8217; ಎಂದು ಐಸೆಕ್‌ನ ಇಕಾಲಜಿ ಅರ್ಥತಜ್ಞ ಡಾ. ಸಯ್ಯದ್ ಪಾಷಾ ಹೇಳುತ್ತಾರೆ. ನಾವು ವಿದೇಶಗಳಿಗೆ ರಫ್ತು ಮಾಡುವ ಒಟ್ಟೂ ಕೃಷಿ ಉತ್ಪನ್ನಗಳಲ್ಲಿ ರಾಸುಮಾಂಸದ ಪ್ರಮಾಣ ಶೇಕಡಾ ೨೦ರಷ್ಟಿದೆ. ಇದು ತುಂಬ ಮಹತ್ವದ ಸಂಗತಿ. ಗೋಹತ್ಯೆಯನ್ನು ನಿಷೇಧಿಸಿದರೆ, ಇಷ್ಟು ದೊಡ್ಡ ಪ್ರಮಾಣದ ಆಹಾರಮೂಲವನ್ನು, ಡಾಲರ್ ಗಳಿಸುವ ಸಂಪನ್ಮೂಲವನ್ನು ನಾವು ವ್ಯರ್ಥವಾಗಿ ಹೂಳಬೇಕಾಗುತ್ತದೆ. ಅದೂ ಸುಲಭದ ಕೆಲಸವಲ್ಲ. ರಾಸುಗಳು ನಿರುಪಯುಕ್ತವಾಗಿ ಬದುಕಿರುವಷ್ಟು ವರ್ಷವೂ ಅವಕ್ಕೆ ಮೇವು ನೀರು ಒದಗಿಸುತ್ತಿರಬೇಕಾಗುತ್ತದೆ. (ಅವುಗಳನ್ನು ಹಾಗೇ ಸುತ್ತಾಡಲು ಬಿಟ್ಟರೆ &#8216;ಊರೂರಲ್ಲಿ ಬೀದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ಬಡಕಲು ದನಗಳೇ ಕಾಣುತ್ತವೆ ಕಣ್ರೀ&#8217; ಎಂದು ತೇಜಸ್ವಿ ಒಮ್ಮೆ ಹೇಳಿದ್ದರು) ಹಾಗೆ ವ್ಯರ್ಥ ವ್ಯಯವಾಗುವ ರಾಸುಮಾಂಸಕ್ಕೆ ಬದಲಿಯಾಗಿ, ಅಷ್ಟೇ ದೊಡ್ಡ ಪ್ರಮಾಣದ ಮಾಂಸವನ್ನು ಬೇರೆ ಮೂಲಗಳಿಂದ ಒದಗಿಸಬೇಕಾಗುತ್ತದೆ. ಬೇರೆ ಮೂಲ ಎಂದರೆ ಮತ್ತೇನಲ್ಲ, ಆಡು-ಕುರಿಗಳನ್ನು ಬೆಳೆಸುವುದು.</p>
<p style="text-align:justify;">ದನದ ಮಾಂಸಕ್ಕೆ ಬದಲಿಯಾಗಿ ಆಡು-ಕುರಿಗಳ ಮಾಂಸವನ್ನು ದೇಶಕ್ಕೆಲ್ಲ ಒದಗಿಸಬೇಕೆಂದರೆ ನಿಸರ್ಗ ಸಮತೋಲ ಇನ್ನಷ್ಟು ಹದಗೆಡುತ್ತದೆ. ಏಕೆಂದರೆ ಅವುಗಳನ್ನು ಕಟ್ಟಿ ಬೆಳೆಸುವ ಪರಿಪಾಠ ನಮ್ಮಲ್ಲಿಲ್ಲ. ಗುಡ್ಡಬೆಟ್ಟಗಳಲ್ಲಿ ಆಡು-ಮೇಕೆಗಳು ಲಂಗು ಲಗಾಮಿಲ್ಲದೆ ಓಡಾಡುವುದರಿಂದಲೇ ನಮ್ಮ ಬಹುಪಾಲು ಸಸ್ಯಸಂಪತ್ತು ಹೇಳಹೆಸರಿಲ್ಲದೆ ನಾಶವಾಗಿದೆ. ಅವು ಚಲಿಸಿದಲ್ಲೆಲ್ಲ ಮಣ್ಣು ಸವಕಳಿಯಾಗಿ, ಕೆಂದೂಳೆದ್ದು ಬರಸದೃಶ ಪ್ರದೇಶ ನಿರ್ಮಾಣಗೊಳ್ಳುತ್ತದೆ. ಇನ್ನು ಗೋಹತ್ಯೆ ನಿಲ್ಲಿಸಿದರೆ ಆ ಪ್ರಮಾಣದ ಮಾಂಸಕ್ಕಾಗಿ ಇವುಗಳನ್ನು ಬೆಳೆಸಬೇಕೆಂದರೆ ಈಗಿಗಿಂತ ಆರು ಪಟ್ಟು ಹೆಚ್ಚು ಕುರಿಮೇಕೆಗಳಿಗೆ ಬೇಡಿಕೆ ಬರುತ್ತದೆ. ಆಗ ದೇಶದ ಇದ್ದಬದ್ದ ಧಾರಣ ಸಾಮರ್ಥ್ಯವೂ ಕುಸಿಯುತ್ತದೆ. ಹಸಿರುಕವಚದ ಸ್ಥಿತಿ ಏನಾದೀತೆಂದು ಯಾರೂ ಊಹಿಸಬಹುದು. ಇದು ಜೀವಜಾಲದ (ಇಕಾಲಜಿ) ಪ್ರಶ್ನೆಯಾದರೆ, ಇದರೊಟ್ಟಿಗೆ ಅರ್ಥವ್ಯವಸ್ಥೆ (ಇಕಾನಮಿ) ಕೂಡ ಬಿಗಡಾಯಿಸುತ್ತದೆ. ದನ-ಎಮ್ಮೆಗಳ ಮಾಂಸದ ಬೆಲೆಗೆ ಹೋಲಿಸಿದರೆ ಈಗ ಆಡುಕುರಿಗಳ ಮಾಂಸದ ಬೆಲೆ ಐದು ಪಟ್ಟು ಹೆಚ್ಚಿಗೆ ಇದೆ. ಅದು ಸಾಮಾನ್ಯರಿಗೆ ಎಟಕುವಂಥದ್ದಲ್ಲ. ಮಾಂಸಾಹಾರಿಗಳಿಗೆಲ್ಲ ಕಡ್ಡಾಯವಾಗಿ ದುಬಾರಿಯ ಕುರಿಕೋಳಿಗಳನ್ನು ತಿನ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗುತ್ತದೆ. ಇದರ ಪರಿಣಾಮ ಏನೆಂದರೆ ವನ್ಯಜೀವಿಗಳ ಮೇಲೆ ಇನ್ನಷ್ಟು ಒತ್ತಡ ಬೀಳುತ್ತದೆ. ದೇಶದ ಮೃಗಾಲಯಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳಿಗೆ ಇಷ್ಟು ದಿನ ದನದ ಮಾಂಸವನ್ನೇ ಕೊಡಲಾಗುತ್ತಿತ್ತು -ಅದು ಅಗ್ಗದ್ದೆಂಬ ಕಾರಣದಿಂದ. ಆದರೆ ಇನ್ನುಮೇಲೆ ಅಲ್ಲಿಗೂ ಹಂದಿ ಮಾಂಸವನ್ನೋ, ಆಡುಕುರಿಗಳ ಮಾಂಸವನ್ನೋ ನೀಡಲು ಹೊರಟರೆ ಅದರ ವೆಚ್ಚವೂ ನಾಲ್ಕಾರು ಪಟ್ಟು ಹೆಚ್ಚಾಗುತ್ತದೆ.</p>
<p style="text-align:justify;"><strong>ಅಂಥದ್ದೇನೂ </strong><strong>ಆಗುವುದಿಲ್ಲ; </strong><strong>ದನಕರುಗಳು </strong><strong>ಶಾಶ್ವತವೇನಲ್ಲವಲ್ಲ! </strong><strong>ಅವು </strong><strong>ಸಹಜವಾಗಿ </strong><strong>ಸಾಯುತ್ತಿರುತ್ತವೆ. </strong><strong>ಈಗಿನಷ್ಟೇ </strong><strong>ಸಂಖ್ಯೆಯಲ್ಲಿ </strong><strong>ಆಗಲೂ </strong><strong>ಸಾಯುತ್ತಿರುತ್ತವೆ. </strong><strong>ಅವುಗಳ </strong><strong>ಮಾಂಸ </strong><strong>ತೆಗೆದು </strong><strong>ಮಾರಲು </strong><strong>ಅಥವಾ </strong><strong>ಮೃಗಾಲಯಕ್ಕೆ </strong><strong>ಸಾಗಿಸಲು </strong><strong>ಅನುಮತಿ </strong><strong>ಸಿಕ್ಕೇ </strong><strong>ಸಿಗುತ್ತದೆ. </strong><strong>ನೀವು </strong><strong>ಉತ್ಪ್ರೇಕ್ಷೆ </strong><strong>ಮಾಡಬೇಡಿ.</strong></p>
<p style="text-align:justify;">ಉತ್ಪ್ರೇಕ್ಷೆ ಅಲ್ಲ. ಈಗಿನ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಕೇಂದ್ರೀಕೃತ ಕಸಾಯಿಖಾನೆಗಳಲ್ಲಿ ದಿನವೂ ಇಷ್ಟಿಷ್ಟೆಂಬಂತೆ ಮಾಂಸ ಲಭಿಸುತ್ತಿದೆ. ಎಲ್ಲೆಲ್ಲಿ ಎಂದೆಂದು ಎಷ್ಟೆಷ್ಟು ಡಿಮಾಂಡ್ ಇದೆಯೊ ಅಂದಂದು ಅಷ್ಟಷ್ಟು ಪೂರೈಕೆ ಆಗುತ್ತಿದೆ. ಗೋಹತ್ಯೆ ನಿಷೇಧಿಸಿದರೆ ಈ ಸಪ್ಲೈ ಚೇನ್‌ನಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಏಕೆಂದರೆ ಎಲ್ಲಿ, ಯಾವ ದಿನ ಎಷ್ಟು ದನಕರುಗಳು ಸಾಯಲಿವೆ ಎಂಬುದು ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ದನಗಳ ಕಳೇವರದ ಸಾಗಾಣಿಕೆಗೆ ಸಂಬಂಧಿಸಿದಂತೆ ಪೊಲೀಸ್ ಕಿರುಕುಳ ಹೆಚ್ಚುವುದರಿಂದ, ಇಂಥ ರಗಳೆಯೇ ಬೇಡವೆಂದು ರೈತರು ತಮ್ಮ ದನ ಸತ್ತಾಗ ಯಾರಿಗೂ ತಿಳಿಸದೇ ಮಣ್ಣು ಮಾಡುವ ಸಾಧ್ಯತೆ ಹೆಚ್ಚುತ್ತದೆ.  ಹೀಗಾದರೆ ಚರ್ಮೋದ್ಯಮವೂ ತತ್ತರಿಸಬಹುದು. ಪಶು ಆಹಾರ, ಔಷಧ ಉತ್ಪಾದನೆ ಮತ್ತು ಔದ್ಯಮಿಕ ಕಚ್ಚಾಪದಾರ್ಥ, ಸೌಂದರ್ಯ ವರ್ಧಕ ರಸವಸ್ತುಗಳ ತಯಾರಿಕೆ ಹೀಗೆ ಎಲ್ಲಕ್ಕೂ ನಾವು ವಿದೇಶೀ ಆಮದನ್ನೇ ಅವಲಂಬಿಸಬೇಕಾಗುತ್ತದೆ. ನಾಡಿನುದ್ದಕ್ಕೂ ಹಳ್ಳಿಗಳಲ್ಲಿ ಅಲ್ಲಲ್ಲಿ ಆಗಾಗ ಒಂದೋ ಎರಡೋ ರಾಸುಗಳು ಸತ್ತಿದ್ದು ಗೊತ್ತಾದರೂ ಅದರ ಮಾಂಸವನ್ನು ಸಾಗಿಸಿ ತಂದು ಆಹಾರವಾಗಿ ವಿಲೆವಾರಿ ಮಾಡುವುದಾದರೆ ಗುಣಮಟ್ಟ ಕೆಟ್ಟು ರೋಗರುಜಿನೆ ಹಬ್ಬಲು ಕಾರಣವಾಗಬಹುದು. ಬನ್ನೇರು ಘಟ್ಟದಲ್ಲಿ ಐದು ಹುಲಿಗಳು &#8216;ಸಾಲ್ಮೊನೆಲ್ಲಾ&#8217; ವಿಷಾಣು ಸೇರಿದ್ದ ರೋಗಗ್ರಸ್ತ ಮಾಂಸವನ್ನು ತಿಂದೇ ಸತ್ತಿವೆ.</p>
<p style="text-align:justify;"><strong>ಔಷಧ </strong><strong>ಮತ್ತು </strong><strong>ರಸವಸ್ತುಗಳ </strong><strong>ಉತ್ಪಾದನೆಗೆ </strong><strong>ಗೋಹತ್ಯೆ </strong><strong>ನಿಷೇಧದಿಂದ </strong><strong>ಹೇಗೆ </strong><strong>ಧಕ್ಕೆ </strong><strong>ಬರಲು </strong><strong>ಸಾಧ್ಯ? </strong><strong>ವೈದ್ಯಕೀಯಕ್ಕೂ </strong><strong>ದನಕರುಗಳಿಗೂ </strong><strong>ಅದೆಂಥ </strong><strong>ಸಂಬಂಧ?</strong></p>
<p style="text-align:justify;">ವೈದ್ಯಕೀಯ ರಂಗಕ್ಕಷ್ಟೇ ಅಲ್ಲ, ಉದ್ಯಮರಂಗಕ್ಕೆ ಮತ್ತು ನಮ್ಮ ದಿನಬಳಕೆಯ ಸಾವಿರಾರು ವಸ್ತುಗಳಿಗೆ ಬೇಕಾದ ಕಚ್ಚಾ ಪದಾರ್ಥಗಳು ಕಸಾಯಿಖಾನೆಗಳಿಂದಲೇ ಲಭಿಸುತ್ತವೆ. ಅದರ ವ್ಯಾಪ್ತಿ ಜನಸಾಮಾನ್ಯರ ಊಹೆಗೂ ಮೀರಿದ್ದಾಗಿದೆ. ಅದನ್ನು ತುಸು ವಿವರವಾಗಿ ನೋಡೋಣ:</p>
<p style="text-align:justify;">ಒಂದು ಹಸು, ಎತ್ತು ಅಥವಾ ಎಮ್ಮೆ ಸತ್ತರೆ ಅದರ ಚರ್ಮವನ್ನು ಸುಲಿದು ಯಾರೋ ಪಾದರಕ್ಷೆ, ಬೆಲ್ಟ್ ಇತ್ಯಾದಿ ಮಾಡಲೆಂದು ಒಯ್ಯುತ್ತಾರೆ. ಮಾಂಸದ ಆಯ್ದ ಭಾಗಗಳನ್ನು ಕೆಲವರು ಆಹಾರಕ್ಕೆ ಬಳಸುತ್ತಾರೆ. ದನಗಳ ಗೊರಸು, ಕೋಡುಗಳಿಂದಲೇ &#8216;ಜೆಲ್ಲಿ&#8217; ಎಂಬ ಅಂಟು ಪದಾರ್ಥವನ್ನು ತಯಾರಿಸುತ್ತಾರೆ ಅನ್ನೋದು ಗೊತ್ತಿತ್ತು. ಪುಡಿ ಮಾಡಿದ ಮೂಳೆಗಳನ್ನು ಸಕ್ಕರೆಯನ್ನು ಬಿಳಿ ಮಾಡಲೆಂದು ಮೂಳೆಪುಡಿಯನ್ನು ಬಳಸುತ್ತಾರೆ. ರಸಗೊಬ್ಬರಕ್ಕೆ ಬೇಕಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು &#8216;ಬೋನ್‌ಮೀಲ್&#8217; ಫ್ಯಾಕ್ಟರಿಗಳಿಂದಲೇ ಪೂರೈಸಲಾಗುತ್ತದೆ. ಇದರಾಚಿನ ಗೋಪುರಾಣ ಹೀಗಿದೆ:</p>
<p style="text-align:justify;">ಉದಾಹರಣೆಗೆ, ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳ ಪೊರೆಯಿಂದ ಹೆಪಾರಿನ್ ಎಂಬ ಔಷಧವನ್ನು ತಯಾರಿಸುತ್ತಾರೆ. ಮನುಷ್ಯರ ಸರ್ಜರಿ ಮಾಡುತವಾಗ ರಕ್ತ ಗರಣೆಗಟ್ಟದ ಹಾಗೆ ತಡೆಯಲು, ವಿಶೇಷವಾಗಿ ಗ್ಯಾಂಗ್ರೀನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಅಡ್ರಿನಾಲಿನ್ ಗ್ರಂಥಿಗಳಿಂದ ಸ್ಟಿರಾಯಿಡ್‌ಗಳನ್ನು ತೀವ್ರ ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಾರೆ. ಇದೇ ಗ್ರಂಥಿಗಳಿಂದ ಎಪಿನೆಫ್ರಿನ್ ಎಂಬ ಔಷಧವನ್ನು ಉತ್ಪಾದಿಸಿ ಅದನ್ನು ರಕ್ತದ ಒತ್ತಡವನ್ನು ಹೆಚ್ಚಿಸಲು ಬಳಸುತ್ತಾರೆ. ಹೃದ್ರೋಗ ಚಿಕಿತ್ಸೆಗಂತೂ ಇದು ಬೇಕೇ ಬೇಕು. ದನದ ಯಕೃತ್ತಿನಿಂದ ಬಿ-೧೨, ಲಿವರ್ ಎಕ್ಸ್‌ಟ್ರ್ಯಾಕ್ಟ್ ಔಷಧಗಳು ತಯಾರಾಗುತ್ತವೆ. ಹಾಗೆಯೇ ಮಧುಮೇಹಿಗಳಿಗೆ ಬೇಕಾದ ಇನ್ಸೂಲಿನ್ನನ್ನು ದನಗಳ ಮೇಧೋಜೀರಕ ಗ್ರಂಥಿಗಳಿಂದ ಪಡೆಯಲಾಗುತ್ತದೆ. ಇನ್ನು ಕೀಲುನೋವು, ಸಂಧಿವಾತದಿಂದ ಬಳಲುವವರಿಗೆ  ಕೊಡುವ ಕೊಂಡ್ರಾಯಿಟಿನ್ ಸಲ್ಫೇಟ್ ಎಂಬ ಔಷಧವನ್ನು ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದಲೇ ತಯಾರಿಸುತ್ತಾರೆ. ದನದ ಮಿದುಳಿನ ದಟ್ಟ ನಾರಿನಂಥ ಹೊರಗವಚವನ್ನು (ಡ್ಯುರಾ ಮೇಟರ್) ಮನುಷ್ಯರ ಮಿದುಳಿನ ಶಸ್ತ್ರಚಿಕಿತ್ಸೆ ಮಾಡುವಾಗ ತಲೆಬುರುಡೆಯ ಖಾಲಿ ಜಾಗವನ್ನು ತುಂಬಲು ಬಳಸಲಾಗುತ್ತದೆ.</p>
<p style="text-align:justify;">ದನದ ಕರುಳನ್ನು ಉಪ್ಪಿನಲ್ಲಿ ಒಣಗಿಸಿ ಕೊಳವೆಯಂತೆ ಕತ್ತರಿಸಿ ಅದರಲ್ಲಿ ಮಸಾಲೆ ಮಾಂಸ ತುಂಬಿ ಕರಿದು &#8216;ಸಾಸೇಜ್&#8217; ಎಂಬ ತಿಂಡಿಯನ್ನು ತಯಾರಿಸಲಾಗುತ್ತದೆ. ಕರುಳನ್ನು ದಾರದಂತೆ ಸೀಳಿ, ಗಾಯಕ್ಕೆ ಹೊಲಿಗೆ ಹಾಕುವ ದಾರವನ್ನಾಗಿ ಬಳಸಲಾಗುತ್ತದೆ.</p>
<p style="text-align:justify;">ದನಗಳ ಪಿತ್ತಕೋಶದ ಕಲ್ಲುಗಳನ್ನು ಪಾಲಿಶ್ ಮಾಡಿ ಆಭರಣ ತಯಾರಕರು ಹರಳುಗಳಂತೆ ಕೂರಿಸುತ್ತಾರೆ. ಪ್ಲೈವುಡ್‌ನಲ್ಲಿ ಕಟ್ಟಿಗೆಯ ತೆಳು ಹಾಳೆಗಳನ್ನು ಅಂಟಿಸಲು ದನಗಳ ರಕ್ತವನ್ನು ಗೋಂದಿನಂತೆ ಸಾಂದ್ರೀಕರಿಸಿ ಬಳಸುತ್ತಾರೆ. ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಉಪಯೋಗಿಸುವ ಅಗ್ನಿಶಾಮಕ ನೊರೆಯನ್ನೂ ದನಗಳ ರಕ್ತದ ಪುಡಿಯಿಂದಲೇ ತಯಾರಿಸಲಾಗುತ್ತದೆ. ಮಿಕ್ಕಿದ ರಕ್ತಪುಡಿ ರಸಗೊಬ್ಬರದ ಉತ್ಪಾದನೆಗೆ ಹೋಗುತ್ತದೆ. ಕೃಷಿ ಕೆಲಸದಲ್ಲಿ ದುಡಿಯುವ ಮಹಿಳೆ ತೀರ ದುರ್ಬಲಳಾಗಿದ್ದರೆ ಅನೀಮಿಯಾ ಕಾಯಿಲೆ ಇದೆಯೆಂದು ಡಾಕ್ಟರು ಬರೆದುಕೊಡುವ ಐರನ್ ಟ್ಯಾಬ್ಲೆಟ್‌ಗೂ ದನದ ರಕ್ತವೇ ಮೂಲದ್ರವ್ಯ. ಇಡೀ ದೇಶದ ಗ್ರಾಮೀಣ ಗರ್ಭಿಣಿಯರಿಗೆ ಇಂದು ವಿತರಣೆಯಾಗುವ ಐರನ್ ಟ್ಯಾಬ್ಲೆಟ್‌ಗಳಿಗೆ ಇದೇ ಮೂಲವಸ್ತು.</p>
<p style="text-align:justify;">ದನಗಳ ಎಲುಬಿನ ಪುಡಿಯಿಂದಲೇ ಸಕ್ಕರೆಗೆ ಅಚ್ಚ ಬಿಳಿಬಣ್ಣ ಬರುತ್ತದೆ. ಪಿಂಗಾಣಿ ವಸ್ತುಗಳ ತಯಾರಿಕೆಯಲ್ಲೂ ಇದು ಬೇಕೇ ಬೇಕು. ಅತ್ಯಚ್ಚ ಗುಣಮಟ್ಟದ ವಿಶೇಷ ಉಕ್ಕಿನ ತಯಾರಿಕೆಗೆ ಮೂಳೆಪುಡಿಯನ್ನು ಸೇರಿಸಬೇಕಾಗುತ್ತದೆ. ಎಲುಬಿನಿಂದ ತಯಾರಿಸಲಾದ ಬಟನ್‌ಗಳಿಗೆ ಈ ಪ್ಲಾಸ್ಟಿಕ್ ಯುಗದಲ್ಲೂ ಬೇಡಿಕೆ ಇದೆ.</p>
<p style="text-align:justify;">ದನಗಳ ಎಲುಬು ಮತ್ತು ಕೊಬ್ಬು ಎರಡರಿಂದಲೂ &#8216;ಟ್ಯಾಲೊ&#8217; ಎಂಬ ವಿಶೇಷ ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ. ಭಕ್ಷಣೆಗೆ ಯೋಗ್ಯವಲ್ಲದ ಟ್ಯಾಲೊ ಎಣ್ಣೆಯನ್ನು ಬ್ರೇಕ್ ದ್ರವ ಮತ್ತು ಜೆಟ್ ವಿಮಾನಗಳ ಕೀಲೆಣ್ಣೆಯನ್ನು ಉತ್ಪಾದನೆಗೆ ಕಚ್ಚಾ ಪದಾರ್ಥವಾಗಿ ಬಳಸುತ್ತಾರೆ. ಬಸ್ಸು, ಲಾರಿ, ಕಾರುಗಳ ಹೈಡ್ರಾಲಿಕ್ ಬ್ರೇಕ್‌ಗಳಿಗೆ ದನದ ಎಣ್ಣೆ ಬಳಕೆಯಾಗುತ್ತದೆ. ಬಸ್ ನಿಂತಾಗ ಅಟೊಮೆಟಿಕ್ ಬಾಗಿಲು ತೆರೆಯಲಿಕ್ಕೂ ಇದೇ ದ್ರವ ಬೇಕು. ಮೋಂಬತ್ತಿಗೆ ಇದೇ ಮೂಲವಸ್ತು. ನಟನಟಿಯರು ಕೃತಕ ಕಣ್ಣೀರು ಹರಿಸಲೆಂದು ಬಳಿದುಕೊಳ್ಳುವ ಗ್ಲಿಸರೀನ್ ಕೂಡ ಇದೇ ಟ್ಯಾಲೊದಿಂದಲೇ ಬರುತ್ತದೆ. ಇದರಿಂದ ಸಾಬೂನು, ಡಿಟರ್ಜಂಟ್‌ಗಳೂ ತಯಾರಾಗುತ್ತವೆ. ವಿವಿಧ ಬಗೆಯ ಕಿವಿಗೆ ಹಾಕುವ ಹನಿಗಳು, ಕಣ್ಣಿಗೆ ಹಾಕುವ ಹನಿಗಳು, ಕೆಮ್ಮಿನ ಔಷಧಗಳು, ಹೇರ್ ಕಂಡೀಶನರ್‌ಗಳು, ಶಾಂಪೂಗಳು ಎಲ್ಲವಕ್ಕೂ ಗ್ಲಿಸರೀನೇ ಮೂಲದ್ರವ್ಯ. ಇದರಿಂದಲೇ ಬಣ್ಣ ಬಣ್ಣದ ಇಂಕು, ಕಾರುಗಳ ಪೇಂಟ್ ಮೇಲೆ ಹಚ್ಚುವ ಪಾಲಿಶ್‌ಗಳು, ಕಾರಿನ ಇಂಧನ ಚಳಿಯಲ್ಲೂ ಹೆಪ್ಪುಗಟ್ಟದಂತೆ ನೋಡಿಕೊಳ್ಳುವ ಆಂಟಿಫ್ರೀಝ್ ಮಿಶ್ರಣಗಳು ಎಲ್ಲವಕ್ಕೂ ಗ್ಲಿಸರೀನ್ ಬೇಕು.</p>
<p style="text-align:justify;">ಸೂರಿನಿಂದ ಮಳೆನೀರು ಸೋರುವುದನ್ನು ತಡೆಗಟ್ಟಬಲ್ಲ &#8216;ವಾಟರ್ ಪ್ರೂಫಿಂಗ್&#8217; ಅಂಟುಗಳ ತಯಾರಿಕೆಗೂ ಕಚ್ಚಾ ಟ್ಯಾಲೊ ಬಳಕೆಯಾಗುತ್ತದೆ. ಆಹಾರವಸ್ತುಗಳನ್ನು ಪ್ಯಾಕಿಂಗ್ ಮಾಡಲು ಬೇಕಾದ ವಿಶೇಷ ಬಗೆಯ ಎಣ್ಣೆಕಾಗದವೂ ಇದರಿಂದಲೇ ತಯಾರಾಗುತ್ತದೆ. ನಾನಾ ಬಗೆಯ ಆಂಟಿಬಯಾಟಿಕ್ ಔಷಧಗಳೂ ಕೂಡ.</p>
<p style="text-align:justify;">ಇನ್ನು ಮೂಳೆ, ಗೊರಸು ಮತ್ತು ಕೊಂಬುಗಳನ್ನು ಕಾಯಿಸಿದಾಗ ಭಕ್ಷ್ಯಯೋಗ್ಯ ಟ್ಯಾಲೊ ಎಣ್ಣೆ ದೊರಕುತ್ತದೆ. ಇದು ಚ್ಯೂಯಿಂಗ್ ಗಮ್, ಬೇಕರಿ ಖಾದ್ಯಗಳಲ್ಲಿ ಬಳಕೆಯಾಗುತ್ತದೆ.</p>
<p style="text-align:justify;">ದನಗಳ ಅಂಗಾಂಶಗಳನ್ನು ಜೋಡಿಸುವ &#8216;ಕೊಲಾಜೆನ್&#8217; ಎಂಬ ದ್ರವ್ಯಕ್ಕೆ ಭಾರೀ ಬೇಡಿಕೆ ಇದೆ. ಚರ್ಮವನ್ನು ಹಿಂಡಿದಾಗಲೂ ಕೊಲಾಜೆನ್ ಸಿಗುತ್ತದೆ. ಇದರ ವೈದ್ಯಕೀಯ ಉಪಯೋಗದ ಪಟ್ಟಿಯೇ ಸಾಕಷ್ಟು ದೀರ್ಘವಿದೆ. ಹಿರಿಯ ನಾಗರಿಕರಿಗೆ ಮೂತ್ರ ವಿಸರ್ಜನೆ ಅನಿಯಂತ್ರಿತವಾದಾಗ ಇದನ್ನೇ ಚುಚ್ಚುಮದ್ದಿನ ಔಷಧವಾಗಿ ಕೊಡುತ್ತಾರೆ. ಗಾಯಗಳಿಗೆ ಸುತ್ತಲೆಂದು ನಂಜುನಿರೋಧಕ ಬ್ಯಾಂಡೇಜ್‌ಗಳ ತಯಾರಿಕೆಗೆ ಇದೇ ಬೇಕು. ಗಾಯ ಒಣಗಿದ ನಂತರ ಆಳವಾದ ಗೀರು ಬಿದ್ದಿದ್ದರೆ, ಸುರೂಪ ಚಿಕಿತ್ಸಕರು ಅದನ್ನು ಮರೆಮಾಚಲೆಂದು ಕೊಲಾಜೆನ್ ತುಂಬುತ್ತಾರೆ. ಕಣ್ಣಿನ ಪೊರೆ ನಿವಾರಣೆಗೆ ಪಾಪೆ ಕವಚವಾಗಿ ಕೂಡ ಇದು ನೆರವಿಗೆ ಬರುತ್ತದೆ. ಇನ್ನು ಖಾದ್ಯ ಉದ್ಯಮದಲ್ಲಂತೂ ಇದೇ ಕೊಲಾಜೆನ್ ಪಾತ್ರವನ್ನು ಹೇಳುವುದೇ ಬೇಡ. ಜಿಲೆಟಿನ್ ಪುಡಿ ಇದರಿಂದಲೇ ತಯಾರಾಗುತ್ತದೆ. ಜೆಲ್ಲಿ, ಜಾಮ್‌ಗಳಿಗೆ ಇದಿಲ್ಲದಿದ್ದರೆ ಆಗುವುದಿಲ್ಲ. ಬಹಳಷ್ಟು ಸೌಂದರ್ಯ ವರ್ಧಕ ದ್ರವ್ಯಗಳಲ್ಲಿ ಕೊಲಾಜೆನ್ ಕ್ರೀಮ್ ಇದ್ದೇ ಇರುತ್ತದೆ. ಜತೆಗೆ ತರಾವರಿ ಮುಲಾಮು, ನೋವು ನಿವಾರಕ ಎಣ್ಣೆಗೆಲ್ಲ ಇದೇ ಬೇಕು. ಫೊಟೊಗ್ರಫಿ, ಸಿನಿಮಾ ಫಿಲ್ಮ್ ತಯಾರಿಕೆಗೂ ಇದು ಕಚ್ಚಾವಸ್ತುವಾಗಿ ಬಳಕೆಯಾಗುತ್ತದೆ. ಸಿನೆಮಾ ನಟ ನಟಿಯರ ಮುಖದಲ್ಲಿ ಸುಕ್ಕುಗಳು ಕಾಣಿಸದಂತೆ ಬಳಸುವ ವೃದ್ಧಾಪ್ಯನಿರೋಧಕ ಕ್ರೀಮ್ ಕೂಡ ಇದರಿಂದಲೇ ತಯಾರಾಗುತವೆ.</p>
<p style="text-align:justify;">ಮಲಿನ ಗಾಳಿಯನ್ನು ಸೋಸಲು ಇಂದು ಬಳಕೆಯಾಗುತ್ತಿರುವ ವಿಧವಿಧದ ಫಿಲ್ಟರ್‌ಗಳನ್ನು ದನಗಳ ಕೂದಲಿನಿಂದ ತಯಾರಿಸಲಾಗುತ್ತದೆ. ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಔದ್ಯಮಿಕ ಅಧಿಪತಿಗಳು ಬಳಸುವ ಅತಿ ದುಬಾರಿ ಸೋಫಾ ಮತ್ತು ಕಾರಿನ ಕುಶನ್‌ಗಳಿಗೆ ವಿಶೇಷವಾಗಿ ಸಂಸ್ಕರಿಸಿದ ದನದ ಚರ್ಮವೇ ಬಳಕೆಯಾಗುತ್ತದೆ&#8230;.</p>
<p style="text-align:justify;"><strong>ಸಾಕು, </strong><strong>ಸಾಕು </strong><strong>ಈ </strong><strong>ಗೋಪುರಾಣ! </strong><strong>ದನಗಳು </strong><strong>ತಾವಾಗಿ </strong><strong>ಸಾವಪ್ಪಿದ </strong><strong>ನಂತರವೂ </strong><strong>ಅವುಗಳ </strong><strong>ದೇಹದಿಂದ </strong><strong>ಇವೆಲ್ಲ </strong><strong>ಉಪಯುಕ್ತ </strong><strong>ವಸ್ತುಗಳನ್ನು </strong><strong>ಪಡೆಯಲು </strong><strong>ಸಾಧ್ಯವಿದೆ, </strong><strong>ಏನಂತೀರಿ?</strong></p>
<p style="text-align:justify;">ಅಲ್ಲೊಂದು ಇಲ್ಲೊಂದು ದನ ಸತ್ತರೆ ಈ ಯಾವ ಉತ್ಪಾದನೆಗೂ ಅವಕಾಶವಿಲ್ಲ. ಹಿಂದೆ ಹೇಳಿದಂತೆ, ಇವನ್ನೆಲ್ಲ ಕಸಾಯಿಖಾನೆಗಳಲ್ಲಿ ಸಂಸ್ಕರಣೆ ಮಾಡಿದರಷ್ಟೇ ಉದ್ಯಮಗಳಿಗೆ ಬೇಕಾದ ಪ್ರಮಾಣದಲ್ಲಿ ಅವು ಲಭ್ಯವಾಗುತ್ತವೆ. ಗೋಹತ್ಯೆ ನಿಷೇಧಿಸಿದರೆ ಮನುಷ್ಯರ ಕಾಯಿಲೆಗಳ ಚಿಕಿತ್ಸೆಗೆ ಬೇಕಾದ ಔಷಧಗಳನ್ನೆಲ್ಲ ವಿದೇಶಗಳಿಂದಲೇ ತರಿಸಬೇಕಾಗುತ್ತದೆ. ವೆಚ್ಚ ಅತಿಯಾಗುತ್ತದೆ. ಅಷ್ಟೇ ಅಲ್ಲ, ದನಗಳ ಕಾಯಿಲೆಗಳಿಗೂ ಔಷಧ ವೆಚ್ಚ ಹೆಚ್ಚುತ್ತದೆ!</p>
<p style="text-align:justify;"><strong>ಹಾಗಿದ್ದರೆ, </strong><strong>ಪಶುಸಂಗೋಪನೆ </strong><strong>ಈಗಿನ </strong><strong>ಸ್ಥಿತಿಯಲ್ಲೇ </strong><strong>ಮುಂದುವರೆಯಬೇಕೆನ್ನುತ್ತೀರಾ? </strong><strong>ಸಭ್ಯ </strong><strong>ಪ್ರಾಣಿ </strong><strong>ಗೋವಿನ </strong><strong>ಬಗ್ಗೆ </strong><strong>ದಯೆ, </strong><strong>ಪ್ರೀತಿಯನ್ನೆಲ್ಲ </strong><strong>ಕಳೆದುಕೊಂಡ </strong><strong>ನಾವು </strong><strong>ಮನುಷ್ಯತ್ವವನ್ನೇ </strong><strong>ಕಳೆದುಕೊಂಡಂತೆ </strong><strong>ಅಲ್ಲವೆ?</strong></p>
<p style="text-align:justify;">ಅದು ಹಾಗಲ್ಲ. ಗೋವುಗಳ ಸ್ಥಿತಿ ಈಗಿಗಿಂತ ಉತ್ತಮವಾಗಬೇಕೆಂದು ನಾವು ವಾದಿಸುತ್ತೇವೆ. ವ್ಯವಸ್ಥಿತ, ವೈಜ್ಞಾನಿಕ ಪಶುಸಂಗೋಪನೆ ಮತ್ತು ಸಂಸ್ಕರಣೆ ನಡೆಯಬೇಕು. ಗೋ-ಕುಲವನ್ನು ಕೇಂದ್ರವಾಗಿಟ್ಟುಕೊಂಡು ಇಡೀ ಜೀವಜಾಲ ಮತ್ತೆ ಸಮತೋಲ ಸ್ಥಿತಿಗೆ ಬರಬೇಕು. ನಮ್ಮದು ಸಮೃದ್ಧ, ಸುಸಂಸ್ಕೃತ ದೇಶ ಎಂಬುದು ಬಿಂಬಿತವಾಗಬೇಕು. ಹಾಗಾಗಬೇಕಾದರೆ ಗೋಹತ್ಯೆ ನಿಷೇಧವೆಂಬ ಬುಡುಬುಡಿಕೆ ಬಾರಿಸುವ ಬದಲು ಈ ಮುಂದೆ ಹೇಳಿದ ಕ್ರಮಗಳನ್ನು ಕೈಗೊಂಡು ನಮ್ಮ ಮಾನವೀಯ ಕಳಕಳಿಯನ್ನು ಮೆರೆಯಬೇಕು.</p>
<ul style="text-align:justify;">
<li>ಗೋವುಗಳಿಗೆ ಸಾಕಷ್ಟು ಸಾವಯವ ಆಹಾರ, ಶುದ್ಧ ಮೇವು, ಶುದ್ಧ ನೀರು ಸಿಗುವಂತಾಗಬೇಕು. ಈಗಂತೂ ಕೆಮಿಕಲ್ ಮೇವು ತಿಂದು, ನೈಟ್ರೇಟ್ ಲವಣಗಳಿರುವ ಬೋರ್‌ವೆಲ್ ನೀರು ಕುಡಿದು ಇಡೀ ಹೈನು ಉದ್ಯಮ ಇಂದು ಕಾಯಿಲೆಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಅದನ್ನು ತಪ್ಪಿಸಬೇಕೆಂದರೆ ಸಾಧ್ಯವಿದ್ದಷ್ಟೂ ಗೋಮಾಳಗಳ ಸಂವರ್ಧನೆ ಆಗಬೇಕು. ಗುಡ್ಡಬೆಟ್ಟಗಳಲ್ಲಿ ಲಂಟಾನಾ, ಪಾರ್ಥೇನಿಯಂ, ಯುಪಟೋರಿಯಂ ಬದಲಿಗೆ ನಮ್ಮ ನಾಡಿಗೆ ಸಹಜವೆನಿಸಿದ ಹುಲ್ಲುಮೇವು ಬೆಳೆಯುವಂತಾಗಬೇಕು. ಕೃಷಿಭೂಮಿಯಿಂದ ಸಿಗುವ ಬೇಹುಲ್ಲಿನ ವಿಷ ರಸಗಳ ಪತ್ತೆಗೆ ಸರಳ ಸಾಧನಗಳು ಹೈನುಗಾರರಿಗೆ ಲಭಿಸಬೇಕು. ಹಾಲಿನಲ್ಲಿರುವ ಕೆಮಿಕಲ್ ವಸ್ತುಗಳ ಪತ್ತೆಗೆ ಉಪಕರಣಗಳು ಸಿಗಬೇಕು (ನಮ್ಮ ಈಗಿನ ಮೇವಿನಲ್ಲಿ ಎಂಡೊಸಲ್ಪಾನ್ ವಿಷದ ಪ್ರಮಾಣ ತೀರ ಜಾಸ್ತಿ ಇರುವುದರಿಂದ, ವಿದೇಶಗಳಿಗೆ ಹೈನು ಉತ್ಪನ್ನಗಳನ್ನು ರಫ್ತು ಮಾಡುವ &#8216;ಡೈನಾಮಿಕ್ಸ್&#8217; ನಂಥ ಕಂಪನಿಗಳು ಕರ್ನಾಟಕದ ಹಾಲನ್ನು ಖರೀದಿಸುತ್ತಿಲ್ಲ. ನಮ್ಮ ಕಾಮಧೇನುವಿನ ವಿಷವನ್ನು ನಾವೇ ಸೇವನೆ ಮಾಡಬೇಕಾಗಿದೆ). ಈ ಕ್ರಮಗಳನ್ನು ಕೈಗೊಂಡರೆ ನಮ್ಮ ಗುಡ್ಡಬೆಟ್ಟ ಕೆರೆಕಟ್ಟೆಗಳ ಜೀವಸಮೃದ್ಧಿಯೂ ಹೆಚ್ಚುತ್ತದೆ. ಪರಿಸರವೂ ಶುದ್ಧವಾಗುತ್ತದೆ. ಇಂಥ ಪರಿಶುದ್ಧ ಸ್ಥಿತಿಯಲ್ಲಿ ಸಿದ್ಧವಾಗುವ ಸಾವಯವ ಹೈನು ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ ಗ್ರಾಮೀಣ ಜನರ ಆರ್ಥಿಕ ಬಲದ್ದೂ ಸಂವರ್ಧನೆಯಾಗುತ್ತದೆ.</li>
<li>ಪಶುಸಂಗೋಪನೆಯಲ್ಲಿ ಅಸಮತೋಲ ನಿವಾರಣೆಯಾಗಬೇಕು. ಅಂದರೆ, ಹೋರಿ, ಎತ್ತು, ಎಮ್ಮೆ, ಕೋಣಗಳನ್ನೂ ಬೆಳೆಸಬೇಕು. ಅವನ್ನು ಪುಷ್ಟಿಗೊಳಿಸಲು ಬೇಕಾದ ಅಗಸೆ, ಹಾಲಿವಾಣ, ಸುಬಾಬುಲ್, ವೆಲ್ವೆಟ್ ಅವರೆ, ಕಾಡು ಅಲಸಂದೆ ಮುಂತಾದವುಗಳಿಗೆ ವಿಶೇಷ ಆದ್ಯತೆ ನೀಡಿ ಹೊಲದ ಬದುಗಳಲ್ಲಿ, ಬರಡುಭೂಮಿಯಲ್ಲಿ ಬೆಳೆಸಿದರೆ, ಅವೇ ಹಣದ ಬೆಳೆಯಾಗುತ್ತವೆ. ಅಷ್ಟೇ ಅಲ್ಲ, ಅಂತರ್ಜಲವನ್ನು ಹೆಚ್ಚಿಸುತ್ತವೆ. ಮಣ್ಣಿನ ಸವಕಳಿ ತಡೆಗಟ್ಟುತ್ತವೆ. ಕೆರೆಗಳಲ್ಲಿ ಹೂಳು ಶೇಖರವಾಗದಂತೆ ತಡೆಯುತ್ತವೆ. ಕೆರೆಕೊಳ್ಳ ಮತ್ತು ಸುತ್ತಲಿನ ಇಡೀ ಪರಿಸರ ಸಮೃದ್ಧ ಜೀವವೈವಿಧ್ಯದ ನೆಲೆದಾಣವಾಗುತ್ತದೆ. ಸಾಕುಪ್ರಾಣಿಗಳ ಬದುಕಿನ ಗುಣಮಟ್ಟವನ್ನು ಹೆಚಿಸ್ಚುವತ್ತ ಗಮನವಿರಬೇಕೇ ವಿನಾ ಕೃಶವಾಗಿದ್ದರೂ ಸರಿ &#8216;ಸಹಜ ಸಾವೇ ಬರಲಿ&#8217; ಎಂದು ವಾದಿಸುವುದು  ಸರಿಯಲ್ಲ. ಸಹಜ ಪರಿಸರದಲ್ಲಿ ಓಡಾಡುತ್ತ, ಉತ್ತಮ ಪೋಷಕಾಂಶ ಸೇವಿಸುತ್ತ ಅವು ನೆಮ್ಮದಿಯಿಂದ ಗರಿಷ್ಠ ಬೆಳೆವಣಿಗೆಯ ಹಂತ ತಲುಪಲು ಅವಕಾಶ ಕೊಟ್ಟು ನಂತರ ಪ್ರೀತಿಯಿಂದಲೇ ಅವನ್ನು ಕಸಾಯಿಖಾನೆಗೆ ಕಳಿಸಿಕೊಡಲು ಸಾಧ್ಯವಿದೆ. ನಿಸರ್ಗದಲ್ಲಿ ಹುಲಿ, ಸಿಂಹ, ಮೊಸಳೆಗಳ ಬಾಯಿಗೆ ಸಿಕ್ಕು ಸಾವಪ್ಪುತ್ತವೆ ತಾನೆ? ಅದು ಪ್ರಕೃತಿ ನಿಯಮಕ್ಕೆ ಅತಿ ಹತ್ತಿರದ ಪಶುಸಂಖ್ಯಾ ನಿಯಂತ್ರಣ ಕ್ರಮವೂ ಹೌದು.   </li>
<li>ಸರಕಾರಿ ನೆರವು ಪಡೆಯುವ ಹೈನುಗಾರಿಕೆಯಲ್ಲಿ ಗೋಬರ್ ಅನಿಲ ಉತ್ಪಾದನೆಯನ್ನು ಕಡ್ಡಾಯಗೊಳಿಸಬೇಕು. ಈಗಿನ ವ್ಯವಸ್ಥೆಯಲ್ಲಿ ಸೆಗಣಿಯ ರಾಶಿಯಿಂದ ಹೊರಬೀಳುವ ಮೀಥೇನ್ ಅನಿಲ ನಿರುಪಯುಕ್ತವಾಗಿ ಹೋಗುತ್ತಿದೆ ಅಷ್ಟೆ ಅಲ್ಲ, ವಾತಾವರಣಕ್ಕೆ ಸೇರಿ ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತಿದೆ. ಸುಧಾರಿತ ದೇಶಗಳು ನಮ್ಮ ಪಶುಸಂಪತ್ತಿನ ದುರ್ವ್ಯಯದ ಬಗ್ಗೆ ಟೀಕೆ ಮಾಡಲು ಅವಕಾಶವಿರಕೂಡದು. ಸೆಗಣಿ ಅನಿಲದ ಬಾಟಲೀಕರಣ ಸಾಧ್ಯವಾದರೆ ಅದರಿಂದ ಟ್ರ್ಯಾಕ್ಟರ್ ಟಿಲ್ಲರ್ ಓಡಿಸಬಹುದು. ನೀರೆತ್ತುವ ಪಂಪ್‌ಗಳಿಗೆ ಶಕ್ತಿ ಸಿಗುತ್ತದೆ. ಆಗ ಪಶುಸಂಗೋಪನೆ ಮತ್ತೆ ಸಮತೋಲಕ್ಕೆ ಬರುತ್ತದೆ; ಮತ್ತೊಮ್ಮೆ ನಿಜವಾದ ಅರ್ಥದಲ್ಲಿ ಕೃಷಿ ಎಂಬುದು ಪಶುಕೇಂದ್ರಿತವಾಗಿ ಗ್ರಾಮವಾಸಿಗಳ ಆರ್ಥಿಕಬಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.</li>
<li>ಕಸಾಯಿಖಾನೆಗಳ ಆಧುನೀಕರಣವಾಗಬೇಕು. ಧಾರ್ಮಿಕ ವಿಧಿಗಳಿಗೆ ಚ್ಯುತಿ ಬಾರದ ಹಾಗೆ ಸಾಧ್ಯವಾದಷ್ಟೂ ನೋವಿಲ್ಲದ ಸ್ಟನ್ನಿಂಗ್ ವಿಧಾನದಲ್ಲೇ ಪಶುವಧೆ ನಡೆಯಬೇಕು. ನಂತರದ ಸಂಸ್ಕರಣೆಯ ಪ್ರತಿ ಹಂತದಲ್ಲೂ ಕಟ್ಟುನಿಟ್ಟಾಗಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.</li>
<li>ಗಲ್ಲಿ ಮೊಹಲ್ಲಾಗಳ ಸಂದುಗೊಂದಿನಲ್ಲಿ ಪಶುವಧೆಗೆ ಅವಕಾಶ ಕೊಡಬಾರದು. ಈಗಿನ ಸ್ಥಿತಿಯಲ್ಲಿ ಅದಕ್ಕೆ ನಿರ್ಬಂಧ ಹೇರುವುದು ಕಷ್ಟಸಾಧ್ಯ; ಏಕೆಂದರೆ ಕಸಾಯಿಖಾನೆಗಳು ತೀರಾ ದೂರದಲ್ಲಿವೆ. ಅಚ್ಚುಕಟ್ಟಾದ, ಮಾಲಿನ್ಯದ ಲವಲೇಶವೂ ಇಲ್ಲದ ಚಿಕ್ಕ ಚಿಕ್ಕ ಕಸಾಯಿಖಾನೆಗಳನ್ನು ಸ್ಥಾಪಿಸಲು ಸಾಧ್ಯವಿದೆ. ಅಂಥವು ಸೂಕ್ತ ಸ್ಥಳಗಳಲ್ಲಿ ಸ್ಥಳಗಳಲ್ಲಿ ಸ್ಥಾಪಿಸಬೇಕು. ಅಲ್ಲಿಂದ ಹೊರಬರುವ ಶೇಷದ್ರವ್ಯಗಳು ಚರಂಡಿಗೆ ಸೇರದಂತೆ ಪ್ರತ್ಯೇಕ ಸಾಗಿಸಬೇಕು. ಅಲ್ಲೆಲ್ಲ ಶಿಸ್ತಿನ ಮೇಲ್ವಿಚಾರಣೆ ನಡೆಯುತ್ತಿರಬೇಕು.</li>
<li>ಬೀದಿಬದಿಗಳಲ್ಲಿ, ತೆರೆದ ಅಂಗಡಿಗಳಲ್ಲಿ ಮಾಂಸದ ಪ್ರಾಣಿಗಳ ವಿವಿಧ ಅಂಗಗಳ ಪ್ರದರ್ಶನವನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಯಾವ ಸಂದರ್ಭದಲ್ಲೂ ಸೈಕಲ್‌ಗಳ ಮೇಲೆ, ದ್ವಿಚಕ್ರ ವಾಹನಗಳ ಮೇಲೆ ಮೂಕಪ್ರಾಣಿ-ಪಕ್ಷಿಗಳ ಸಾಗಾಟಕ್ಕೆ ಅವಕಾಶ ಕೊಡಬಾರದು.</li>
</ul>
<p style="text-align:justify;"><strong>ಇಂಥ ವ್ಯವಸ್ಥೆಯಲ್ಲಿ ಸಾಮಾಜಿಕ ನೆಮ್ಮದಿ ನೆಲೆಸುತ್ತದೆ. ವಾಸ್ತವದ ನೆಲೆಗಟ್ಟಿನಲ್ಲೇ ಈಗಿರುವ ಲೋಪಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಗೋವುಗಳೂ ಸೇರಿದಂತೆ ಎಲ್ಲ ಜೀವಿಗಳ ಮೇಲೆ ನಮಗಿರುವ ಮಾನವೀಯ ಅನುಕಂಪ, ಅಂತಃಕರಣ ಹಾಗೂ ಸಂವೇದನೆಗಳಿಗೆ ಭಂಗ ಬರುವುದಿಲ್ಲ.</strong></p>
<p style="text-align:justify;">ಇದಕ್ಕೆ ವ್ಯತಿರಿಕ್ತವಾಗಿ, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿದ್ದೇ ಆದರೆ ಕೆಲವು ಗಂಭೀರ ಪ್ರಶ್ನೆಗಳು ಏಳುತ್ತವೆ. ಯಾವುದೇ ಕಾನೂನು ನಮ್ಮಲ್ಲಿ ಜಾರಿಗೆ ಬಂದರೂ ಈಗಿನ ಚಟುವಟಿಕೆಗಳು ಹೆಚ್ಚೆಂದರೆ ಭೂಗತವಾಗುತ್ತವೆ, ಕಾನೂನುಬಾಹಿರ ಕೃತ್ಯದ ಸಾಮಾಜಿಕ ವೆಚ್ಚ ಹೆಚ್ಚುತ್ತದೆ. ಗೋವಧೆ ಆಗದಂತೆ ಊರೂರಲ್ಲಿ ನಿಗಾ ಇಡಬೇಕಾದವರು ಯಾರು? ಪೊಲೀಸರಿಗೆ ಈಗಾಗಲೇ ಹೊರೆಯಷ್ಟು ಕೆಲಸಗಳಿವೆ. ಕೊಲೆ, ದರೋಡೆ, ಕಳ್ಳಸಾಗಣೆಯಂಥ ಕುಕೃತ್ಯಗಳ ಮೇಲೆ ನಿಗಾ ಇಡವ ಬದಲು ಅವರು ಅರೆಹೊಟ್ಟೆಯ ಗೋವುಗಳ ಸಂರಕ್ಷಣೆಗೆ ಹೊರಡಬೇಕೆ? ಅವರಿಂದ ಅದು ಸಾಧ್ಯವಿಲ್ಲವೆಂದು ಸಂಘ ಪರಿವಾರದ ಉತ್ಸಾಹಿಗಳಿಗೆ ಅಥವಾ ಖಾಸಗಿ ಜನರಿಗೆ ಇಂಥ ಅಧಿಕಾರವನ್ನು ಕೊಟ್ಟರೆ ಅದು ಇನ್ನಷ್ಟು ಕ್ಷೆಭೆಗೆ ಕಾರಣವಾಗಬಹುದು. ಬಿಹಾರ, ಝಾರ್‌ಖಂಡ್‌ಗಳಲ್ಲಿ ಸರಕಾರವೇ ಹಳ್ಳಿಯವರಿಗೆ ಬಂದೂಕು ಕೊಟ್ಟು &#8216;ಸಲ್ವಾ ಝುಡೂಮ್&#8217; ಹೆಸರಿನಲ್ಲಿ ಅರಾಜಕತೆ ಉಂಟು ಮಾಡಿದಾಗಿನ ಪರಿಸ್ಥಿತಿಯೇ ಇಲ್ಲಿ ತಲೆದೋರಬಹುದು. ದ್ವೇಷ, ಸೇಡು, ಅಸೂಯೆ, ಕ್ರೌರ್ಯಗಳ ರಕ್ತಬೀಜಾಸುರ ಸಂತಾನವನ್ನೇ ನಾವು ಸೃಷ್ಟಿ ಮಾಡಿದಂತಾಗುತ್ತದೆ. ರಾಸುಗಳನ್ನು ರಸ್ತೆಯಲ್ಲಿ ಒಯ್ಯುವುದೇ ಹಿಂಸಾಕೃತ್ಯಗಳಿಗೆ, ಕೋಮುಗಲಭೆಗಳಿಗೆ ಕಾರಣವಾಗಬಹುದು.</p>
<p style="text-align:justify;">ಇಂಥ ಸಂವಿಧಾನಬಾಹಿರ &#8216;ಜಂಗಲ್‌ರಾಜ್&#8217; ನಮಗೆ ಬೇಕೆ? ಅದರಿಂದಾಗಿ ತಲೆದೋರುವ ಸಾಂಕ್ರಾಮಿಕ ತ್ವೇಷಗಳು ಬೇಕೆ? ಅಥವಾ ಪ್ರೀತಿಯಿಂದ ಗೋವುಗಳನ್ನು ಸಾವಯವ ವಿಧಾನದಲ್ಲಿ ಪಾಲನೆ ಪೋಷಣೆ ಮಾಡುತ್ತಲೇ ಅದರ ಜತೆಜತೆಗೇ ನಿಸರ್ಗ ಸಂವರ್ಧನೆ, ಆರ್ಥಿಕ ಸುಧಾರಣೆ ಹಾಗೂ ಸಮುದಾಯದ ನೆಮ್ಮದಿ ಕಾಪಾಡುವ ಕ್ರಮಗಳು ಬೇಕೆ?</p>
<p style="text-align:justify;"><strong>ಆಯ್ಕೆ </strong><strong>ನಿಮ್ಮದು.</strong></p>
<p style="text-align:justify;"> &#8212;&#8212;&#8212;&#8212;&#8212;-</p>
<ul style="text-align:justify;">
<li>
<div><strong>ನಿರೂಪಣೆ ನಾಗೇಶ ಹೆಗಡೆ; ಪೂರಕ ಮಾಹಿತಿ: ಪ್ರೊ. ಜಿ. ರಾಮಕೃಷ್ಣ, ಪ್ರೊ. ಅಜ್ಮಲ್ ಪಾಶಾ.</strong></div>
</li>
<li>
<div><strong>ಈ ಲೇಖನದ ಪುಸ್ತಿಕೆಯನ್ನು ನವಕರ್ನಾಟಕ ಪ್ರಕಾಶನವು ಪ್ರಕಟಿಸಿದೆ. ಇದನ್ನು ಮುಕ್ತವಾಗಿ ಪ್ರಕಟಿಸಲು ಅನುಮತಿ ನೀಡಿದ ನವಕರ್ನಾಟಕ ಪ್ರಕಾಶನಕ್ಕೂ, ಲೇಖಕ ಶ್ರೀ ನಾಗೇಶ ಹೆಗಡೆಯವರಿಗೂ ನನ್ನ ವಂದನೆಗಳು &#8211; ಬೇಳೂರು ಸುದರ್ಶನ</strong></div>
</li>
</ul>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<p style="text-align:justify;"> </p>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1620/"><img alt="" border="0" src="http://feeds.wordpress.com/1.0/comments/beluru.wordpress.com/1620/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1620/"><img alt="" border="0" src="http://feeds.wordpress.com/1.0/delicious/beluru.wordpress.com/1620/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1620/"><img alt="" border="0" src="http://feeds.wordpress.com/1.0/facebook/beluru.wordpress.com/1620/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1620/"><img alt="" border="0" src="http://feeds.wordpress.com/1.0/twitter/beluru.wordpress.com/1620/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1620/"><img alt="" border="0" src="http://feeds.wordpress.com/1.0/stumble/beluru.wordpress.com/1620/" /></a> <a rel="nofollow" href="http://feeds.wordpress.com/1.0/godigg/beluru.wordpress.com/1620/"><img alt="" border="0" src="http://feeds.wordpress.com/1.0/digg/beluru.wordpress.com/1620/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1620/"><img alt="" border="0" src="http://feeds.wordpress.com/1.0/reddit/beluru.wordpress.com/1620/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1620&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/10/25/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86-%e0%b2%97%e0%b3%8b%e0%b2%b9%e0%b2%a4%e0%b3%8d%e0%b2%af%e0%b3%86-%e0%b2%97%e0%b3%8b%e0%b2%9c%e0%b2%b2/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>
	</item>
		<item>
		<title>ನಾಗೇಶ್‌ ಹೆಗಡೆ : ಅಟಕಾಮಾ ಮರುಭೂಮಿಯಲ್ಲಿ ಅಪೂರ್ವ ಓಯಸಿಸ್</title>
		<link>http://beluru.wordpress.com/2010/10/23/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%85%e0%b2%9f%e0%b2%95%e0%b2%be%e0%b2%ae%e0%b2%be-%e0%b2%ae%e0%b2%b0%e0%b3%81/</link>
		<comments>http://beluru.wordpress.com/2010/10/23/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%85%e0%b2%9f%e0%b2%95%e0%b2%be%e0%b2%ae%e0%b2%be-%e0%b2%ae%e0%b2%b0%e0%b3%81/#comments</comments>
		<pubDate>Sat, 23 Oct 2010 04:16:36 +0000</pubDate>
		<dc:creator>beluru</dc:creator>
				<category><![CDATA[ನಾಗೇಶ ಹೆಗಡೆ ಕಾಲಂ]]></category>
		<category><![CDATA[nagesh hegde]]></category>

		<guid isPermaLink="false">http://beluru.wordpress.com/?p=1617</guid>
		<description><![CDATA[ಅಕ್ಟೊಬರ್ 12-13ರಂದು ನಮ್ಮ ಸುದ್ದಿ ಮಾಧ್ಯಮಗಳು ಇಲ್ಲಿನ ರಾಜಕೀಯ ಗಬ್ಬು ಗದ್ದಲಗಳ ಕ್ಷಣಕ್ಷಣದ ವರದಿಗಾಗಿ ಪರದಾಡುತ್ತಿದ್ದಾಗ ಜಗತ್ತಿನ ಪ್ರಮುಖ ಸುದ್ದಿ ಕ್ಯಾಮರಾಗಳೆಲ್ಲ ಚಿಲಿ ದೇಶದ ಗಣಿ ಸುರಂಗವೊಂದಕ್ಕೆ ಮುಖ ಮಾಡಿ ನಿಂತಿದ್ದವು. ಅಲ್ಲಿ ಎರಡು ಸಾವಿರ ಅಡಿ ಆಳದ ಸುರಂಗದಲ್ಲಿ 69 ದಿನಗಳಿಂದ ಸಿಲುಕಿದ್ದ 33 ಕಾರ್ಮಿಕರು ಅಂದು ಗಂಟೆಗೊಬ್ಬೊಬ್ಬರಂತೆ ಮೇಲೆದ್ದು ಬರುವ ದೃಶ್ಯವನ್ನು ವಿಶ್ವಾದಾದ್ಯಂತ ಸಾವಿರಾರು ಟಿವಿ ಚಾನೆಲ್‌ಗಳು ನೇರ ಬಿತ್ತರಣೆ ಮಾಡುತ್ತಿದ್ದವು. ಜೀವಂತ ಸಮಾಧಿ ಆಗಬಹುದಾಗಿದ್ದ ಅಷ್ಟೊಂದು ಜನರನ್ನು ಅಷ್ಟೊಂದು ದೀರ್ಘ ಯತ್ನದಿಂದ ಹೊರಕ್ಕೆ [...]<img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1617&amp;subd=beluru&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:justify;">ಅಕ್ಟೊಬರ್ 12-13ರಂದು ನಮ್ಮ ಸುದ್ದಿ ಮಾಧ್ಯಮಗಳು ಇಲ್ಲಿನ ರಾಜಕೀಯ ಗಬ್ಬು ಗದ್ದಲಗಳ ಕ್ಷಣಕ್ಷಣದ ವರದಿಗಾಗಿ ಪರದಾಡುತ್ತಿದ್ದಾಗ ಜಗತ್ತಿನ ಪ್ರಮುಖ ಸುದ್ದಿ ಕ್ಯಾಮರಾಗಳೆಲ್ಲ ಚಿಲಿ ದೇಶದ ಗಣಿ ಸುರಂಗವೊಂದಕ್ಕೆ ಮುಖ ಮಾಡಿ ನಿಂತಿದ್ದವು. ಅಲ್ಲಿ ಎರಡು ಸಾವಿರ ಅಡಿ ಆಳದ ಸುರಂಗದಲ್ಲಿ 69 ದಿನಗಳಿಂದ ಸಿಲುಕಿದ್ದ 33 ಕಾರ್ಮಿಕರು ಅಂದು ಗಂಟೆಗೊಬ್ಬೊಬ್ಬರಂತೆ ಮೇಲೆದ್ದು ಬರುವ ದೃಶ್ಯವನ್ನು ವಿಶ್ವಾದಾದ್ಯಂತ ಸಾವಿರಾರು ಟಿವಿ ಚಾನೆಲ್‌ಗಳು ನೇರ ಬಿತ್ತರಣೆ ಮಾಡುತ್ತಿದ್ದವು.<img title="More..." src="http://mitramaadhyama.co.in/wp-includes/js/tinymce/plugins/wordpress/img/trans.gif" alt="" /><span id="more-1617"></span></p>
<p style="text-align:justify;"><img class="alignleft" title="NH-column-artwork" src="http://mitramaadhyama.co.in/wp-content/uploads/2009/09/NH-column-artwork.jpg" alt="" width="189" height="183" /></p>
<p style="text-align:justify;">ಜೀವಂತ ಸಮಾಧಿ ಆಗಬಹುದಾಗಿದ್ದ ಅಷ್ಟೊಂದು ಜನರನ್ನು ಅಷ್ಟೊಂದು ದೀರ್ಘ ಯತ್ನದಿಂದ ಹೊರಕ್ಕೆ ಕರೆತಂದಿದ್ದು ಮಾನವ ಇತಿಹಾಸದ ಮಹಾಘಟನೆ ಎನಿಸಿತು. ಗಣಿಯಲ್ಲಿ ಸಿಕ್ಕಿಬಿದ್ದವರನ್ನು ಪತ್ತೆ ಹಚ್ಚಲು ಬಳಸಿದ ತಾಂತ್ರಿಕ ಕೌಶಲ, ಸಂಪರ್ಕ ತಂತ್ರಜ್ಞಾನ, ಅವರನ್ನು ಜೀವಂತ ಉಳಿಸಲು ಬಳಸಿದ ಮನೋವೈಜ್ಞಾನಿಕ ವಿಧಾನ, ಅವರ ಆರೋಗ್ಯ ತಪಾಸಣೆ ಮಾಡಿ, ಆಹಾರ- ಔಷಧ ರವಾನಿಸಿದ ಟೆಲಿಮೆಡಿಕಲ್ ಸಾಹಸ, ಅವರನ್ನು ಕೊಳವೆಯ ಮೂಲಕ ಹೊರತರಲು ಬಳಸಿದ ಡ್ರಿಲ್ಲಿಂಗ್ ತಂತ್ರಜ್ಞಾನ, ಅವೆಲ್ಲವುಗಳ ಹಿಂದಿನ ಬಹುರಾಷ್ಟ್ರೀಯ ಸಂಘಟನಾ ಕೌಶಲ ಈ ಒಂದೊಂದೂ ಅವಿಸ್ಮರಣೀಯ ಗಾಥೆಯೇ ಆಯಿತು.</p>
<p style="text-align:justify;">ದಕ್ಷಿಣ ಅಮೆರಿಕದ ಚಿಲಿ ದೇಶದ ಅಟಕಾಮಾ ಮರುಭೂಮಿ ಎಂದರೆ ಜಗತ್ತಿನ ಅತ್ಯಂತ ಶುಷ್ಕ ಪ್ರದೇಶವಷ್ಟೇ ಅಲ್ಲ, ತರಾವರಿ ಖನಿಜಗಳ ಖಜಾನೆಯೂ ಹೌದು. ಅಲ್ಲಿನ ಸ್ಯಾನ್ ಯೋಸೆ ಗಣಿಯಿಂದ ಚಿನ್ನ ಮತ್ತು ತಾಮ್ರದ ಅದಿರನ್ನು ಹೊರತೆಗೆಯುವ ಕೆಲಸ 12 ವರ್ಷಗಳಿಂದ ನಡೆಯುತ್ತಿದೆ. ಆಗಸ್ಟ್ 5ರಂದು ಇಳಿಜಾರಿನ ಸುರಂಗದ ಸುಮಾರು ಒಂದೂವರೆ ಸಾವಿರ ಅಡಿಯಷ್ಟು ಆಳದಲ್ಲಿ ಮೇಲ್ಛಾವಣಿ ಕುಸಿಯಿತು. ಅಲ್ಲಿಂದ ಇನ್ನೂ ಕೆಳಕ್ಕೆ 2200 ಅಡಿ ಆಳದಲ್ಲಿ ಅದಿರು ತೆಗೆಯುತ್ತಿದ್ದ 33 ಕಾರ್ಮಿಕರಿಗೆ ಹೊರ ಬರುವ ಏಕೈಕ ದಾರಿ ಅದಾಗಿತ್ತು. ಅದು ಮುಚ್ಚಿಕೊಂಡಿತು.</p>
<p style="text-align:justify;">ಸುರಂಗ ಕುಸಿದರೆ ದೂಳು ಚದುರುವುದು ತೀರ ನಿಧಾನ. ಕುಸಿದ ಸಾಮಗ್ರಿಯನ್ನು ತೆರವು ಮಾಡಲೆಂದು ಜೆಸಿಬಿಯಂಥ ಯಂತ್ರಗಳು ಇಳಿದು ಹೋಗಲಾರವು. ಸಿಡಿಮದ್ದು ಹಾಕುವಂತಿಲ್ಲ. ಮತ್ತೆಲ್ಲೋ ಕುಸಿಯಬಹುದು. ಹಾರೆ ಹಾಕಲು ಹೋದರೆ ಕಾರ್ಮಿಕನ ಜೀವಕ್ಕೇ ಅಪಾಯ ಬರಬಹುದು. ಅಂತೂ ಎರಡು ದಿನಗಳ ನಂತರ ಹಾರೆ ಹಿಡಿದು, ಮುಖವಾಡ, ತಲೆದೀಪ ಧರಿಸಿ ಸುರಂಗದಲ್ಲಿ ಕೆಲವರು ಇಳಿಯುತ್ತಿದ್ದಂತೆ ಮತ್ತೊಂದು ಕುಸಿತ ಸಂಭವಿಸಿತು. ಈಗಂತೂ ಬೇರೆ ಉಪಾಯ ಉಳಿಯಲಿಲ್ಲ. ನೆಲದ ಮೇಲಿಂದ ಇನ್ನೊಂದು ಸುರಂಗವನ್ನೇ ಕೊರೆಯಬೇಕು. ಅದು ಇನ್ನೂ ಕಷ್ಟ. ಸಿಡಿಮದ್ದು ಬಳಸದೆ 2000 ಅಡಿ ಆಳದವರೆಗೆ ಗಟ್ಟಿ ಬಂಡೆಯನ್ನು ಕೊರೆಯುವುದಾದರೆ ವರ್ಷಗಟ್ಟಲೆ ಬೇಕಾಗುತ್ತದೆ. ಇಷ್ಟಕ್ಕೂ ಗಣಿ ಕಾರ್ಮಿಕರಿದ್ದ ತಾಣವನ್ನು ಈ ಹೊಸ ಸುರಂಗ ತಲುಪುತ್ತದೆಂಬ ಭರವಸೆಯೂ ಇಲ್ಲ. ಅವರ ಸಾವು ಬದುಕಿನ ಸುದ್ದಿಯೂ ಇಲ್ಲ.</p>
<p style="text-align:justify;">ಸಂಬಂಧಿಕರು, ಸಂಬಂಧವಿಲ್ಲದವರು ಆಗಲೇ ಗಣಿದ್ವಾರದ ಸುತ್ತ ಜಮಾಯಿಸತೊಡಗಿದ್ದರು. ಅದೇ ತಾನೆ ಚುನಾವಣೆ ಗೆದ್ದು ಚಿಲಿಯ ರಾಷ್ಟ್ರಪತಿ ಪದವಿಗೇರಿದ್ದ ಶತಕೋಟ್ಯಧೀಶ ಸೆಬಾಸ್ಟಿಯನ್ ಪಿನ್ಯೇರಾ ತುರ್ತಾಗಿ ಅಮೆರಿಕ, ಪೆರು, ಕೆನಡಾ, ಆಸ್ಟ್ರೇಲಿಯಾಗಳ ತಾಂತ್ರಿಕ ನೆರವನ್ನು ಕೋರಿದರು. ಹೊಸ ಸುರಂಗ ಕೊರೆತವಂತೂ ಸಾಧ್ಯವಿಲ್ಲ. ಆದರೆ ತ್ವರಿತ ರಂಧ್ರ ಕೊರೆಯಬಲ್ಲ ಡ್ರಿಲ್ಲಿಂಗ್ ಯಂತ್ರಗಳು ನಾನಾ ದೇಶಗಳಿಂದ ಬಂದವು. ಒಂದಂತೂ 40 ಟ್ರಕ್‌ಗಳ ಮೇಲೆ ಉದ್ದ ಮಲಗಿ ಸವಾರಿ ಮಾಡಿ ಬಂತು. ಹದಿಮೂರು ದೇಶಗಳ ಡ್ರಿಲ್ಲಿಂಗ್ ತಜ್ಞರ ನೆರವಿನಿಂದ ಏಕಕಾಲಕ್ಕೆ ಮೂರು ಕಡೆಗಳಲ್ಲಿ ಐದಿಂಚು ಅಗಲದ ರಂಧ್ರ ಕೊರೆಯುವ ಕೆಲಸ ಆರಂಭವಾಯಿತು. ಅವು ಗುರಿ ತಲುಪುತ್ತವೆಂಬ ನಂಬಿಕೆಯೂ ಇರಲಿಲ್ಲ. ಏಕೆಂದರೆ ಗಣಿಯ ನಕ್ಷೆ ಸರಿ ಇರಲಿಲ್ಲ. ಕತ್ತಲಲ್ಲಿ ಕಣ್ಣು ಕಟ್ಟಿಕೊಂಡು ಒಂದು ಮೈಲು ತಳಕ್ಕಿರುವ ಹಾವಿನತ್ತ ಬಾಣ ಬಿಟ್ಟಂತೆ. ಪಕ್ಕಾ ಗೆರೆ ಹೊಡೆದಂತೆ ಗುರಿ ಇಟ್ಟು ರಂಧ್ರ ಕೊರೆಯಲೆಂದು ನಿಷ್ಣಾತ ಟೊಪೊಗ್ರಾಫರ್ ಯುವತಿ ಮಸರಾಡೊ ವಾಲ್ಡೆಸ್ ನಿಯುಕ್ತಿಗೊಂಡಳು.</p>
<p style="text-align:justify;">ಕಂಪ್ಯೂಟರ್ ಲೆಕ್ಕಾಚಾರ, ಲೇಸರ್ ಕಿರಣ ಶಲಾಕೆಯ ನೆರವಿನಿಂದ ಆಕೆ ಇಟ್ಟ ಗುರಿ ಹುಸಿಯಾಗಲಿಲ್ಲ. ಡ್ರಿಲ್ಲಿಂಗ್ ಆರಂಭಿಸಿ ಅಂತೂ ಹದಿನೈದು ದಿನಗಳ ನಂತರ ಮೂರರಲ್ಲಿ ಒಂದು ರಂಧ್ರ ಜನರಿದ್ದ ಸುರಂಗವನ್ನು ತಲುಪಿತು. ರಂಧ್ರದಲ್ಲಿ ತೂರಿಸಿದ ದಾರದ ಮೂಲಕ  ‘ನಾವು ಎಲ್ಲ 33 ಜನರೂ ಬದುಕಿದ್ದೇವೆ’ ಎಂಬ  ‘ತಂತಿ ಸಂದೇಶ’ ಕೆಳಗಿನಿಂದ ಬಂತು. ನಿರಾಸೆಯನ್ನೇ ನಿರೀಕ್ಷಿಸಿದವರಿಗೆ ಸಂಭ್ರಮದ ಕೋಲ್ಮಿಂಚು.</p>
<p style="text-align:justify;">ಅತ್ತ ಆಳದಲ್ಲಿ ಸಿಲುಕಿದವರು ಅತ್ಯಂತ ತಾಳ್ಮೆ ಮತ್ತು ಶಿಸ್ತಿನಿಂದ ಜೀವ ಹಿಡಿದುಕೊಂಡಿದ್ದರು. ಆ ಎಲ್ಲರ ಫೋರ್ಮನ್  (ಮೇಲ್ವಿಚಾರಕ) ಲೂಯಿಸ್ ಊರ್ಜ್ವಾನ ನಿರ್ದೇಶನದಂತೆ ಉದ್ದನ್ನ ಸುರಂಗದ ಅಂಚಿನಲ್ಲಿರುವ 30 ಬೈ 40 ಅಡಿ ಚೌಕಿಯಲ್ಲಿ ಎಲ್ಲರೂ ಸೇರಿದ್ದರು. ಎರಡು ದಿನಗಳಿಗೆ ಸಾಲುವಷ್ಟೇ ಆಹಾರ ಇತ್ತಾದರೂ ಇವರು ನೀರು, ಊಟ ಮತ್ತು ಬೆಳಕನ್ನು ಮಿತವಾಗಿ ಬಳಸುತ್ತ ಹೊರಜಗತ್ತಿನ ಒಂದು ಪುಟ್ಟ ಸಂದೇಶಕ್ಕಾಗಿ ಹದಿನಾರು ದಿನಗಳ ಕಾಲ ಕಾದು ಕೂತಿದ್ದರು. ಎಂಥ ಶಿಸ್ತು ಕೂಡ ಮೂರು ನಾಲ್ಕನೆಯ ದಿನಗಳಲ್ಲೇ ಭಗ್ನವಾಗಿ ಅಲ್ಲಿ ನಿರಾಸೆ, ಮಂಕು, ಬಡಿದಾಟ, ಕೊಲೆ, ಮತಿಭ್ರಮಣೆ, ನರಭಕ್ಷಣೆ ಏನೂ ಆಗುವ ಸಂಭವ ಇರುತ್ತದೆ. ಆದರೆ ಇವರು ಅದೆಷ್ಟು ಸಂಯಮ ಪಾಲಿಸಿದ್ದರೆಂದರೆ, ಹದಿನೇಳನೆಯ ದಿನ ತಂತಿಯ ಮೂಲಕ ಮೊದಲ ಧ್ವನಿಗ್ರಹಣ ವ್ಯವಸ್ಥೆ ಬಂದಾಕ್ಷಣ ಎಲ್ಲರೂ ಒಟ್ಟಾಗಿ ಚಿಲಿಯ ರಾಷ್ಟ್ರಗೀತೆ ಹಾಡಿದರು.</p>
<p style="text-align:justify;">ಅಷ್ಟೆ, ಇಡೀ ರಾಷ್ಟ್ರ ಅವರ ಕ್ಷೇಮಕ್ಕಾಗಿ ಕಟಿಬದ್ಧವಾಯಿತು. ಆ ಐದಿಂಚು ಅಗಲದ ರಂಧ್ರದ ಮೂಲಕ ಅವರೆಲ್ಲರನ್ನೂ ಬದುಕಿಸಿಕೊಳ್ಳಬೇಕು. ನೀರು, ಆಹಾರ, ಔಷಧ, ಪತ್ರಗಳ ಬಟವಾಡೆ ನಡೆಯಿತು. ನಂತರ ಹೊಸ ಹೊಸ ಉಪಾಯಗಳ ಮೂಲಕ ಕ್ಯಾಮರಾ, ಟಿವಿ, ಬ್ಯಾಟರಿ, ಬಟ್ಟೆಬರೆ, ಫ್ಯಾನು, ವೈದ್ಯಕೀಯ ಸಲಕರಣೆ, ಅಷ್ಟೇಕೆ  ಅಸ್ತಮಾ ರೋಗಿಯೊಬ್ಬನಿಗೆ ಬೆಚ್ಚನ್ನ ಮಂಚವನ್ನೂ ರವಾನಿಸಲಾಯಿತು. ವಿಡಿಯೊ ಕ್ಯಾಮರಾ ಕಳಿಸಿ ಅಲ್ಲಿದ್ದವರ ಸ್ಥಿತಿಗತಿ ರೆಕಾರ್ಡ್ ಮಾಡಿ ತರಿಸಲಾಯಿತು. ವಿಜ್ಞಾನದ ನೆರವೊಂದೇ ಸಾಲದೆಂದು ಕೆಳಗಿದ್ದ ಎಲ್ಲರಿಗೂ ಒಂದೊಂದು ಬೈಬಲ್ಲನ್ನೂ ತಲುಪಿಸಿದ್ದಾಯಿತು!</p>
<p style="text-align:justify;">ಆದರೆ ಆ ಚಿಕ್ಕ ರಂಧ್ರದ ಮೂಲಕ ಅವರನ್ನು ಮೇಲೆತ್ತುವುದಂತೂ ಸಾಧ್ಯವಿಲ್ಲ. ಅತಿ ಕ್ಷಿಪ್ರ ಅವಧಿಯಲ್ಲಿ ಅತಿ ದೊಡ್ಡ ರಂಧ್ರವನ್ನು ಮಾಡಿ ಅತಿ ಚಿಕ್ಕ ತೊಟ್ಟಿಲಲ್ಲಿ ಒಬ್ಬೊಬ್ಬರನ್ನು ಮೇಲಕ್ಕೆ ತರಬೇಕು. ಇಡೀ ಜಗತ್ತಿಗೆ ಸಂದೇಶ ಹೋಯಿತು.</p>
<p style="text-align:justify;">ನೌಕಾಪಡೆಯ ತಜ್ಞರು ಬಂದರು. ಸಮುದ್ರ ತಳದಲ್ಲಿರುವ ಜಲಾಂತರ್ಗಾಮಿ ನೌಕೆಗಳಿಗೆ ತುರ್ತು ನೆರವನ್ನು ಸಾಗಿಸುವಂಥ ಕೊಳವೆಯ ವಿನ್ಯಾಸವನ್ನು ತಂದರು. ಅಮೆರಿಕದ ನಾಸಾ ಎಂಜಿನಿಯರ್‌ಗಳು ಬಂದರು. ಎರಡು ಅಡಿ ಅಗಲದ 14 ಅಡಿ ಉದ್ದದ ಕ್ಷಿಪಣಿ ಮಾದರಿಯ ಕೊಳವೆಯ (ಲಿಫ್ಟ್) ನೀಲನಕ್ಷೆ ಸಿದ್ಧವಾಯಿತು. ಎರಡೂವರೆ ಅಡಿ ಅಗಲದ ಬಾವಿಯನ್ನು ಕೊರೆಯಬೇಕು. ಮೂರು ಡ್ರಿಲ್ಲಿಂಗ್ ಯಂತ್ರಗಳು ಏಕಕಾಲಕ್ಕೆ ಒಂದೇ ಜಾಗದಲ್ಲಿ, ಲಂಬಕ್ಕೆ 11 ಡಿಗ್ರಿ ಓರೆಯಾಗಿ ರಂಧ್ರ ಮಾಡಬೇಕು. ವಜ್ರದ ಮೂತಿಯುಳ್ಳ ವಿಶೇಷ ಯಂತ್ರವೊಂದು ಪೆನ್ಸಿಲ್ವೇನಿಯಾದಿಂದ ಬಂತು. ನಿಗದಿತ ದಿಶೆಗಿಂತ ಒಂದೇಒಂದು ಡಿಗ್ರಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಡ್ರಿಲ್ಲಿಂಗ್ ಮೂತಿಗಳಿಗೆ ಲೇಸರ್ ಗೈಡರ್ ಬಂತು. ಕೊರೆದು ತೆಗೆದ ಚೂರ್ಣಗಳನ್ನು ಪುಡಿಮಾಡಿ ಮೇಲೆತ್ತಲು ಹೀರು ಕೊಳವೆ ಬಂತು. ರಂಧ್ರದ ಮೂಲಕ ಲಿಫ್ಟ್ ಸಲೀಸಾಗಿ ಚಲಿಸುವಂತೆ ರಂಧ್ರದ ಭಿತ್ತಿಗೆ ಕೇಸಿಂಗ್ ಹಾಕಬೇಕು. ಲಿಫ್ಟ್‌ಗೆ ಗಾಲಿಗಳನ್ನೂ ಜೋಡಿಸಬೇಕು. ಜಪಾನ್ ನೆರವಿಗೆ ಬಂತು.</p>
<p style="text-align:justify;">ಇತ್ತ ಗಣಿಯ ಸುತ್ತ ಮೂರು ಸಾವಿರ ಜನರ ಟೆಂಟ್ ಪಟ್ಟಣವೇ ತಲೆಯೆತ್ತಿತು. ಸಂಬಂಧಿಕರನ್ನು ದೂರ ಓಡಿಸುವ ಬದಲು ಸರ್ಕಾರ ಆ ಮರುಭೂಮಿಯಲ್ಲಿ ನೀರು, ಸರಂಜಾಮು, ಶೌಚ, ಆಸ್ಪತ್ರೆ, ಪ್ರಾರ್ಥನಾ ಮಂದಿರ, ಸಂಪರ್ಕ ಸಾಧನ ಎಲ್ಲ ಒದಗಿಸಿತು. ತೀರ ಉದ್ವಿಗ್ನರಾದವರಿಗೆ ಸಾಂತ್ವನ ಹೇಳಲು ಖ್ಯಾತ ಮನೋವಿಜ್ಞಾನಿಗಳನ್ನು ಕರೆಸಿತು. ಸಂಬಂಧಿಕರು ಕೆಳಗಿದ್ದವರಿಗೆ ರವಾನಿಸುವ ಪತ್ರ- ಚಿತ್ರಗಳಲ್ಲಿ ನಿರಾಶೆಯ, ಖಿನ್ನತೆಯ ಲವಲೇಶವೂ ಇರಕೂಡದೆಂಬ ಸೆನ್ಸಾರ್ ಜಾರಿಗೆ ಬಂತು (ಉದಾ: ‘ನೀನು ಸುರಕ್ಷಿತ ಬದುಕಿ ಬರುತ್ತೀಯೆಂದು ಹಾರೈಸುತ್ತೇನೆ’ ಎಂಬ ವಾಕ್ಯದ ಬದಲು,  ‘ನೀನು ಮೇಲಕ್ಕೆ ಬಂದಾಗ ತಬ್ಬಿಕೊಳ್ಳಲು ನಾನಿದ್ದೇನೆ’ ಎಂದು ಬರೆಯಬೇಕು&#8230;.). ರಂಧ್ರ ತೋಡುವ ಕೆಲಸದಲ್ಲಿ ತಾಂತ್ರಿಕ ಅಡಚಣೆ ಬಂದಾಗ, ಇಲ್ಲವೆ  ‘ಕ್ರಿಸ್‌ಮಸ್ ವೇಳೆಗೆ ಎಲ್ಲರೂ ಹೊರಕ್ಕೆ’ ಎಂದು ರಾಷ್ಟ್ರಪತಿ ಹೇಳಿದಾಗ ಬಂಧುಗಳ ಆಕ್ರೋಶ, ಪ್ರತಿಭಟನೆಯನ್ನು ಶಾಂತವಾಗಿ ನಿಭಾಯಿಸಲು ಸ್ವಯಂಸೇವಕರು ಕಟಿಬದ್ಧರಾದರು. </p>
<p style="text-align:justify;">ಕೆಳಗೆ ಸಿಕ್ಕಿಹಾಕಿಕೊಂಡವರ ಮೇಲೆ ನಿಗಾ ಇಡಲೆಂದು ನಾಸಾ ತಜ್ಞರ ಇನ್ನೊಂದು ತಂಡ ಬಂತು. ಬಾಹ್ಯಾಕಾಶ ನೌಕೆಯ ಇಕ್ಕಟ್ಟಿನಲ್ಲಿ,  ಇಲ್ಲವೆ ಯುದ್ಧರಂಗದ ಬಂಕರ್‌ಗಳಲ್ಲಿ ಸಿಕ್ಕಿಬಿದ್ದವರಿಗೆ ಮನ ಸಮತೋಲಕ್ಕೆಂದು ರೂಪಿತವಾಗಿದ್ದ ವಿವಿಧ ಪಾಠಗಳು ಕೆಳಕ್ಕೆ ರವಾನೆಯಾದವು. ಸತತ ಕೃತಕ ಮಂದ ಬೆಳಕಿನಿಂದಾಗಿ ನಿದ್ರೆ ಮತ್ತು ಎಚ್ಚರದ ಅವಧಿಗಳೆಲ್ಲ ಏರುಪೇರಾಗಿದ್ದರಿಂದ ಅವರ ಜೈವಿಕ ಗಡಿಯಾರವನ್ನು ಸರಿಪಡಿಸಲೆಂದು ನಿಗದಿತ ವೇಳೆಗೆ ಅವರನ್ನು ಮಲಗಿಸುವ, ಎಬ್ಬಿಸುವ ಉಪಕ್ರಮಗಳು ಜಾರಿಗೆ ಬಂದವು. ಮೇಲಕ್ಕೆ ಬಂದಾಕ್ಷಣ ಹುಚ್ಚೆದ್ದು ಕುಣಿಯದಂತೆ ಅಥವಾ ಹೊಸ ಬೆಳಕಿಗೆ ಬೆಚ್ಚಿ ಕುಸಿಯದಂತೆ ಉನ್ಮಾದ ನಿಯಂತ್ರಣ ತಂತ್ರಗಳನ್ನು ಅವರಿಗೆ ಕಲಿಸಲಾಯಿತು. ರಂಧ್ರ ಸಿದ್ಧವಾಗಿ ಕ್ಷಿಪಣಿಯಂಥ ಲಿಫ್ಟ್ ಕೆಳಕ್ಕೆ ಪ್ರತ್ಯಕ್ಷವಾದಾಗ ನೂಕು ನುಗ್ಗಲು ಆಗದಂತೆ, ಯಾರು ಯಾವ ಕ್ರಮದಲ್ಲಿ ಹೊರಡಬೇಕೆಂದು ತಾಲೀಮು ನೀಡಲಾಯಿತು (ಅದೇ ವೇಳೆಗೆ ನಮ್ಮಲ್ಲಿ ರೆಸಾರ್ಟ್‌ಗಳಲ್ಲಿ ಬಂದಿಯಾಗಿದ್ದ ಶಾಸಕರಿಗೂ ತಾಲೀಮು ಸಿಗತೊಡಗಿತ್ತು. ಶಿಸ್ತಾಗಿ ಬಸ್ ಏರಿ, ಕಾಯಿಲೆಯವರನ್ನೂ ಮೆಲ್ಲಗೆ ಮೇಲಕ್ಕೆ ಹತ್ತಿಸಿ, ವಿಧಾನ ಸೌಧವನ್ನು ಪ್ರವೇಶಿಸಿ ಅಲ್ಲಿ ಕುಸಿತದ ಭೀತಿಯಲ್ಲಿದ್ದ ಸರ್ಕಾರವನ್ನು ಮೇಲೆತ್ತುವ ಇಲ್ಲವೆ ಬೀಳಿಸುವ ತಾಲೀಮು).</p>
<p style="text-align:justify;">ಡ್ರಿಲ್ಲಿಂಗ್ ಕೊಟ್ಟಕೊನೆಯ ಹಂತಕ್ಕೆ ಬಂದಿತ್ತು. ರಂಧ್ರದ ಭಿತ್ತಿಗಳು ಕುಸಿಯದಂತೆ ಕೇಸಿಂಗ್ ಕೊಳವೆ ಹಾಕಿ ರಂಧ್ರದ ಬಲವರ್ಧನೆ ಮಾಡಲಾಯಿತು. ಕ್ಷಿಪಣಿ ಮಾದರಿಯ ಲಿಫ್ಟ್‌ಗೆ ಉಕ್ಕಿನ ಹಗ್ಗ, ಸಿಗ್ನಲ್ ಕೇಬಲ್ ಹಾಗೂ ಗಡಗಡೆ ಜೋಡಣೆಯಾದವು. ನೌಕಾಪಡೆಯ ಮುಳುಗುವೀರನೊಬ್ಬ ಹೊಸ ಲಿಫ್ಟ್‌ನಲ್ಲಿ ನಿಂತು ಎರಡು ಬಾರಿ ಕೆಳಕ್ಕೆ- ಮೇಲಕ್ಕೆ ಚಲಿಸಿದ. ಕಾರ್ಮಿಕರು ಮೇಲಕ್ಕೆ ಬರುವ ದೃಶ್ಯದ ವರದಿಗೆಂದು ನಾನಾ ದೇಶಗಳಿಂದ 1300ಕ್ಕೂ ಹೆಚ್ಚು ವರದಿಗಾರರು ಬಂದರು. ಚಿಲಿ ಮತ್ತು ಬೊಲಿವಿಯಾ ದೇಶಗಳ ಅಧ್ಯಕ್ಷರ ಸಮ್ಮುಖದಲ್ಲಿ ಮೊದಲ ಕಾರ್ಮಿಕ ಮೇಲಕ್ಕೆ ಬಂದಿದ್ದೇ ತಡ, ಪಾತಾಳದಿಂದ ಹರ್ಷ ಆಕಾಶಕ್ಕೆ ಚಿಮ್ಮಿತು.</p>
<p style="text-align:justify;">ಮುಂದಿನ 24 ಗಂಟೆಗಳಲ್ಲಿ ಭೂಮಿ ತನ್ನ ಅಕ್ಷದ ಸುತ್ತ ಡಿಗ್ರಿಡಿಗ್ರಿಯಾಗಿ ಸುತ್ತುತ್ತಿದ್ದ ಹಾಗೆ ಚಿಲಿಗಣಿಯ ಉದರದಿಂದ ಒಬ್ಬೊಬ್ಬನಾಗಿ ಏರುತ್ತ, ಕೊನೆಯವನಾಗಿ ಊರ್ಜ್ವಾ ಮೇಲಕ್ಕೆ ಬರುವವರೆಗೆ ನಾನಾ ದೇಶಗಳಿಂದ ಅಭಿನಂದನೆಗಳು, ಪ್ರಶಂಸೆಗಳು, ಪ್ರಶಸ್ತಿಗಳು, ಬಹುಮಾನಗಳು ಸಾಲುಗಟ್ಟಿ ಬಂದವು. ಡ್ರಿಲ್ಲಿಂಗ್‌ನಿಂದಾದ ದುರಂತವನ್ನು ಡ್ರಿಲ್ಲಿಂಗ್‌ನಿಂದಲೇ ಸುಖಾಂತಗೊಳಿಸಿದ ತಂತ್ರಯುಗದ ಚರಿತ್ರೆಗೆ ಹೊಸ ಸಾಲುಗಳನ್ನು ಸೇರಿಸಿದವು.</p>
<p style="text-align:justify;">Copyright : <a href="http://www.prajavani.net/Content/Oct212010/nagesh20101020209454.asp">http://www.prajavani.net/Content/Oct212010/nagesh20101020209454.asp</a></p>
<br />  <a rel="nofollow" href="http://feeds.wordpress.com/1.0/gocomments/beluru.wordpress.com/1617/"><img alt="" border="0" src="http://feeds.wordpress.com/1.0/comments/beluru.wordpress.com/1617/" /></a> <a rel="nofollow" href="http://feeds.wordpress.com/1.0/godelicious/beluru.wordpress.com/1617/"><img alt="" border="0" src="http://feeds.wordpress.com/1.0/delicious/beluru.wordpress.com/1617/" /></a> <a rel="nofollow" href="http://feeds.wordpress.com/1.0/gofacebook/beluru.wordpress.com/1617/"><img alt="" border="0" src="http://feeds.wordpress.com/1.0/facebook/beluru.wordpress.com/1617/" /></a> <a rel="nofollow" href="http://feeds.wordpress.com/1.0/gotwitter/beluru.wordpress.com/1617/"><img alt="" border="0" src="http://feeds.wordpress.com/1.0/twitter/beluru.wordpress.com/1617/" /></a> <a rel="nofollow" href="http://feeds.wordpress.com/1.0/gostumble/beluru.wordpress.com/1617/"><img alt="" border="0" src="http://feeds.wordpress.com/1.0/stumble/beluru.wordpress.com/1617/" /></a> <a rel="nofollow" href="http://feeds.wordpress.com/1.0/godigg/beluru.wordpress.com/1617/"><img alt="" border="0" src="http://feeds.wordpress.com/1.0/digg/beluru.wordpress.com/1617/" /></a> <a rel="nofollow" href="http://feeds.wordpress.com/1.0/goreddit/beluru.wordpress.com/1617/"><img alt="" border="0" src="http://feeds.wordpress.com/1.0/reddit/beluru.wordpress.com/1617/" /></a> <img alt="" border="0" src="http://stats.wordpress.com/b.gif?host=beluru.wordpress.com&amp;blog=8478583&amp;post=1617&amp;subd=beluru&amp;ref=&amp;feed=1" width="1" height="1" />]]></content:encoded>
			<wfw:commentRss>http://beluru.wordpress.com/2010/10/23/%e0%b2%a8%e0%b2%be%e0%b2%97%e0%b3%87%e0%b2%b6%e0%b3%8d%e2%80%8c-%e0%b2%b9%e0%b3%86%e0%b2%97%e0%b2%a1%e0%b3%86-%e0%b2%85%e0%b2%9f%e0%b2%95%e0%b2%be%e0%b2%ae%e0%b2%be-%e0%b2%ae%e0%b2%b0%e0%b3%81/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/b7cc6bef0a839476e0251cc9802e6736?s=96&#38;d=identicon&#38;r=G" medium="image">
			<media:title type="html">beluru</media:title>
		</media:content>

		<media:content url="http://mitramaadhyama.co.in/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>

		<media:content url="http://mitramaadhyama.co.in/wp-content/uploads/2009/09/NH-column-artwork.jpg" medium="image">
			<media:title type="html">NH-column-artwork</media:title>
		</media:content>
	</item>
	</channel>
</rss>
